H.S.R.Raghavendra Rao ರವರ ಬ್ಲಾಗ್
ಡಾ|| ಶಿವರುದ್ರಪ್ಪನವರ ಕಾವ್ಯ ಒಂದು ಪರಿಚಯ
January 5, 2007 - 9:31am — H.S.R.Raghavend...qÁ|| f.J¸ï.²ªÀgÀÄzÀæ¥Àà£ÀªÀgÀ PÁªÀå ಮುಂದೆ ಓದಿ »

(ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ
December 29, 2006 - 5:30pm — H.S.R.Raghavend...ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.
ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನಿರೀಕ್ಷಿಸಿದ್ದೆ.
ನನ್ನ ಅನುಮಾನ ಇರುವುದು, ಭಾವನೆ ಮತ್ತು ಅನುಭವಗಳನ್ನು ಅವುಗಳ ಶುದ್ಧ ಸ್ಠಿತಿಯಲ್ಲಿ ಪಡೆಯಲು, ಆ ಕ್ಷಣದಲ್ಲಿ ಅವುಗಳ ಬಗ್ಗೆ ಯೋಚಿಸುತ್ತಿರುವುದೇ ಅಡ್ಡಿಯಾಗುವುದೇ ಎಂದು. ಏಕೆಂದರೆ, ಏಕೆಂದರೆ ಅನುಭವಿಸುವ ವ್ಯಕ್ತಿಗೂ ಅನುಭವಕ್ಕೂ ಇರುವ ದೂರವೇ `ತಲ್ಲೀನತೆ'ಯನ್ನು ಅಳಿಸಿಬಿಡುವುದೇನೋ. ಇದನ್ನೇ ಕುವೆಂಪು ಅವರು
ನಾ ಮನುಜನು ನನ್ನೆದೆಯಲಿ ಅರಿವೆನ್ನುವ ಬಾವು
ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು
ಎಂದು ವಿವರಿಸಿದ್ದಾರೆ. ಇರವು ಮತ್ತು ಅರಿವುಗಳ ನಡುವಿನ ಈ ದ್ವಂದ್ವವು ಮನುಷ್ಯನಿಗೆ ಅನಿವಾರ್ಯವೇನೋ. ಇಲ್ಲವಾದರೆ, ಅವನು ಪ್ರಾಣಿಸಹಜವಾದ ಸ್ಠಿತಿಗಾಗಿ ಅಥವಾ ಶಿಶುಸಹಜವಾದ ಅಸ್ತಿತ್ವಕ್ಕಾಗಿ ಹಂಬಲಿಸಬೇಕಾಗುತ್ತದೆ.
ಭಾಷೆಯು ನಮ್ಮ ವಿಧಿಯೆಂಬ ಮಾತನ್ನು ಹಲವರು ಹೇಳಿದರೂ ಅದು ಸರ್ವಸಮ್ಮತವಲ್ಲ. ಅಲ್ಲಮನು ಹೇಳಿದಂತೆ `ಪದ' ಬೇರೆ `ಪದಾರ್ಥ' ಬೇರೆ. ಉದಾಹರಣೆಗೆ `ನೀಲಿ' ಬಣ್ಣವನ್ನು ಹೇಳುವ ಪದಗಳು ಕನ್ನಡದಲ್ಲಿ ಹತ್ತು ಇರಬಹುದು. ಆದರೆ ನೀಲಿಯ ವರ್ಣಛಾಯೆಗಳು ಅನೇಕವೆನ್ನುವುದು ನಮಗೆಲ್ಲರಿಗೂ ಗೊತ್ತು. ಭಾಷಾಲೋಕವು ಅಸಮರ್ಥವೋ ಅಥವಾ ಅದು ನಮ್ಮ ಅನುಭಲೋಕಕ್ಕೆ ಹಾಕಿದ ಅನುಲ್ಲಂಘನೀಯವಾದ ಚೌಕಟ್ಟೋ?
ಈ ಪ್ರಶ್ನೆಗೆ ಉತ್ತರವು ಸರಳವಲ್ಲ. `ಯಥಾ ವಾಚಾ ನಿವರ್ತಂತೇ ಅಪ್ರಾಪ್ಯ ಮನಸಾ ಸಹಾ' ಎಂಬ ಮಾತನ್ನು ದೇವರನ್ನು ಕುರಿತು ಹೇಳಿದಂತೆಯೇ ಲೋಕವನ್ನು ಕುರಿತೂ ಹೇಳಿರಬಹುದು.

ಅನುಭವ - ಆಲೋಚನ-ಭಾಷೆ
December 23, 2006 - 4:45pm — H.S.R.Raghavend...ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ಎನ್ನುವುದು ನನ್ನನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಆಲೋಚನೆಯ ಬದಲು ಅನುಭವ ಎಂಬ ಪದವನ್ನೂ ಸೇರಿಸಬಹುದು. ಆಲೋಚನೆಯಲ್ಲಿ ನಿರತವಾದಾಗ ಉಳಿದ ಎರಡೂ ಆಗದೆ ಇರಬಹುದೇ? ಇದು ಕೇವಲ ಸಾಹಿತ್ಯವನ್ನು ರಚಿಸುವವರ ಸಮಸ್ಯೆಯಲ್ಲ. ನಮ್ಮ ಸ್ವಂತ ಬದುಕಿನಲ್ಲೂ ಈ ಸವಾಲು ಹುಟ್ಟುತ್ತದೆ. ಕೇವಲ ಇಂದ್ರಿಯಗಳ ನೆಲೆಯಲ್ಲಿ ಭಾಷೆಯ ಹಂಗೂ ಇಲ್ಲದೆ ಅನುಭವಿಸುತ್ತೇವಲ್ಲ ಅದು ಮಾತ್ರ ನಿಜವೇ? ಸರಿಯಾದ ಉತ್ತರ ನನಗೂ ತಿಳಿಯದು. ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ? ಓದುಗರ ಪ್ರತಿಕ್ರಿಯೆಗಳು ಈ ಚಚೆಯನ್ನು ಬೆಳೆಸಬಹುದು.






RSS: