ಅನುಭವ - ಆಲೋಚನ-ಭಾಷೆ
ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ಎನ್ನುವುದು ನನ್ನನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಆಲೋಚನೆಯ ಬದಲು ಅನುಭವ ಎಂಬ ಪದವನ್ನೂ ಸೇರಿಸಬಹುದು. ಆಲೋಚನೆಯಲ್ಲಿ ನಿರತವಾದಾಗ ಉಳಿದ ಎರಡೂ ಆಗದೆ ಇರಬಹುದೇ? ಇದು ಕೇವಲ ಸಾಹಿತ್ಯವನ್ನು ರಚಿಸುವವರ ಸಮಸ್ಯೆಯಲ್ಲ. ನಮ್ಮ ಸ್ವಂತ ಬದುಕಿನಲ್ಲೂ ಈ ಸವಾಲು ಹುಟ್ಟುತ್ತದೆ. ಕೇವಲ ಇಂದ್ರಿಯಗಳ ನೆಲೆಯಲ್ಲಿ ಭಾಷೆಯ ಹಂಗೂ ಇಲ್ಲದೆ ಅನುಭವಿಸುತ್ತೇವಲ್ಲ ಅದು ಮಾತ್ರ ನಿಜವೇ? ಸರಿಯಾದ ಉತ್ತರ ನನಗೂ ತಿಳಿಯದು. ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ? ಓದುಗರ ಪ್ರತಿಕ್ರಿಯೆಗಳು ಈ ಚಚೆಯನ್ನು ಬೆಳೆಸಬಹುದು.

- H.S.R.Raghavendra Rao ರವರ ಬ್ಲಾಗ್
- Login or register to post comments
- 589 hits
- Email this blog





RSS:
ಪ್ರತಿಕ್ರಿಯೆಗಳು
Re: ಅನುಭವ - ಆಲೋಚನ-ಭಾಷೆ
H.S.R ಅವ್ರೆ,
ನಾನು ಇವತ್ತು ನಿಮ್ಮ ಒಂದು ಪ್ರಶ್ಣೆ ಮಾತ್ರ ಉತ್ತರಿಸೋಕೆ ಪ್ರಯತ್ನ ಪಡ್ತಿನಿ.
ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ?
ನನ್ನ ಉತ್ತರ "ಹೌದು". ಆಲೋಚನೆ ಮತ್ತು ಭಾವನೆ ಇವೆರ್ಡೂ ಯಾವಾಗ್ಲೂ ಒಟ್ಟಿಗೆ ಇರುತ್ತೆ. ನಮ್ಮ ಮೆದುಳು ಯಾವುದೇ ವಿಷಯನ Store ಮಾಡ್ಬೇಕಾದ್ರೆ, ಆ ವಿಷಯದ ಜೊತೆಗಿರೋ ಭಾವನೆನೂ Store ಮಾಡುತ್ತೆ. ಇದನ್ನ ಎಲ್ಲೋ ಓದಿದ್ದೆ. ಉದಹರಣೆ : ನಾವು OOTYಗೆ ಹೋಗಿರ್ತೀವಿ, ಅಲ್ಲಿ ಏನೋ ದುರಂತ ನೆಡೆದಿರುತ್ತೆ. ಮತ್ತೆ ನಾವು OOTY ಆಲೋಚಿಸಿದಾಗ, ಅದೇ ದುಃಖದ ಬಾವನೆ ಬರುತ್ತೆ.
Re: ಅನುಭವ - ಆಲೋಚನ-ಭಾಷೆ
ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ?
ಯೋಚಿಸಿ ನೋಡಿ; ಇವೆಲ್ಲವೂ ವಾಸ್ತವದ ಪ್ರತಿಬಿಂಬ ಹೇಗಾಗುವವು? ವಾಸ್ತವವು ಮಾತು, ಭಾಷೆ, ಅಥವಾ ಸಾಹಿತ್ಯದಿಂದ ಹೊರಗಿಲ್ಲವೆ? ಮಾತಿನಿಂದ ನಾವು ಯಾವುದೇ ಘಟನೆಯಾಗಲಿ, ಸಂಗತಿಯಾಗಲಿ, ಅವುಗಳಿಗೆ ನಮ್ಮದೇ ಆದ ಸ್ವಂತ ನಂಬಿಕೆ/ದೃಷ್ಟಿಯಿಂದ ವಿವರಣೆ ಕೊಡುವುದಿಲ್ಲವೆ? ಆದ್ದರಿಂದ, ಮಾತು ನಮ್ಮ ಸೃಷ್ಟಿ--ವಾಸ್ತವವಲ್ಲ!
ವಾಸ್ತವವೆಂದರೆ ಭಾಷೆಯೇ ಅಲ್ಲವೇ!
ಸಂಪದ ಬಳಗಕ್ಕೆ ಎಚ್.ಎಸ್.ಆರ್. ಅವರಿಗೆ ಸ್ವಾಗತ. ನಿಮ್ಮ ಬರಹದಿಂದ ಸಂಪದದ ಆಳ, ಘನತೆ ಹೆಚ್ಚುತ್ತದೆ.
ನೀವು ಎತ್ತಿರುವ ಪ್ರಶ್ನೆ ಬಲು ದೊಡ್ಡದು. ಹೀಗೂ ಆಗಬಹುದಲ್ಲವೆ? ಭಾಷೆಯ ಹಂಗಿಲ್ಲದೆ ವಾಸ್ತವ ಕೂಡ ಇಲ್ಲ. ನಾವು ಯಾವುದನ್ನು ವಾಸ್ತವ ಅನ್ನುತ್ತೇವೋ ಅದು ಭಾಷೆಯಲ್ಲಿ ನಾವು ಕಟ್ಟಿಕೊಂಡದ್ದೇ ಅಲ್ಲವೇ? ತೆಂಗಿನ ಮರಕ್ಕೆ ತಾನು ತೆಂಗಿನ ಮರ ಅಂತ ಗೊತ್ತೇ ಇಲ್ಲ. ಮನುಷ್ಯರು, ಕನ್ನಡ ಮಾತಾಡುವ ಮನುಷ್ಯರು, ಅದಕ್ಕೆ ತಮ್ಮ ಭಾಷೆಯಲ್ಲಿ ತೆಂಗಿನ ಮರ ಎಂದು ಹೆಸರಿಟ್ಟು ತಮ್ಮ ವಾಸ್ತವದ ಭಾಗ ಮಾಡಿಕೊಂಡಿದ್ದಾರೆ. ವಾಸ್ತವ ಅನ್ನುವುದು ಸಂಪೂರ್ಣವಾಗಿ ಭಾಷೆಯದೇ ಸೃಷ್ಟಿ. ಭಾಷೆಯ ಹಂಗಿಲ್ಲದೆ ನೋಡಲು ಅನುಭವಿಸಲು ಸಾಧ್ಯವೇ ಅನ್ನುವುದು ಮನುಷ್ಯನ ದೀರ್ಘ ಕಾಲದ ಹುಡುಕಾಟ. ಹಾಗಾದರೆ ವಾಸ್ತವವೇ ಭಾಷೆಯ ಪ್ರತಿಬಿಂಬ, ವಾಸ್ತವವೇ ಕಲ್ಪನೆ! ಅಲ್ಲವೆ!?
ವಾಸ್ತವವೇ ಕಲ್ಪನೆ!
ಹೌದು! ಈ ಮೇಲಿನ ಉದಾಹರಣೆಯಲ್ಲಿ ನಾವು ಯಾವುದನ್ನು ವಾಸ್ತವವೆನ್ನುತ್ತಿದ್ದೇವೊ ಅದು ನಮ್ಮ ಕಲ್ಪನೆ, ನಮ್ಮ ಸೃಷ್ಟಿ; ತೆಂಗಿನ ಮರವನ್ನು "ತೆಂಗಿನ ಮರ" ಎಂದು ಕರೆಯುವುದರ ಮೂಲಕ ನಮ್ಮ-ನಿಮ್ಮ ವ್ಯವಹಾರದಲ್ಲಿ ಬಳಸಿಕೊಳ್ಳುತ್ತಿದ್ದೇವೆಯಷ್ಟೆ; ವ್ಯವಹಾರಕ್ಕೆ ಸಂಬಂಧಪಟ್ಟಂತೆ, "ತೆಂಗಿನ ಮರ" ಎಂಬ ಪದವೂ ಮತ್ತು ತೆಂಗಿನ ಮರವೂ ಎರಡೂ ಒಂದೆ, ಆದರೆ, "ತೆಂಗಿನ ಮರ" ಎಂಬ ಪದವು ನಿಜವಾದ ವಸ್ತುವಲ್ಲ--ನಿಜವಾದ ವಸ್ತುವು ಈ ಪದ ಬಳಕೆಗಳಿಂದ ಹೊರತಿದೆಯಲ್ಲವೆ?
ಆದ್ದರಿಂದ, "ವಾಸ್ತವವು ಭಾಷೆಯ ಪ್ರತಿಬಿಂಬ (ಅಥವಾ ಭಾಷೆಯೇ) ಆದೀತು--ಭಾಷೆಯು ನಿಜ ವಸ್ತು ಸಂಗತಿಯ ಪ್ರತಿಬಿಂಬವಲ್ಲ!"
ಓ. ಎಲ್. ಎನ್ ಹೇಳಿದಂತೆ, ಇದು ಗಹನವಾದ ವಿಷಯ; ಬಹುಷ:, ಇದನ್ನು ಭಾಷೆಯ ಮೂಲಕ ಚರ್ಚಿಸುವುದಾಗಲಿ--ಅರ್ಥೈಸುವುದಾಗಲಿ--ಸಾಧ್ಯವಿಲ್ಲವೇನೊ!
Re: ವಾಸ್ತವವೇ ಕಲ್ಪನೆ!
ಭಾವನೆ ಹೃದಯಕ್ಕೆ ಸ೦ಬ೦ಧ ಪಟ್ಟದ್ದು, ಆಲೋಚನೆ ಮನಸ್ಸಿಗೆ ಅ೦ದರೆ
ತಲೆಗೆ ಸ೦ಭ೦ದ ಪಟ್ಟದ್ದು. ನಿಮ್ಮಗೆ ಯಾವಾಗಾದರೂ ತು೦ಬಾ
ದು:ಖವಾದಾಗ ಯಾವುದೆ ಯೋಚನೆ ಮಾಡದೆ ಅಳುತ್ತೀರಾ ತಾನೇ,
ಅವಾಗ ನಿಮ್ಮ ದು:ಖ ಸ್ವಲ್ಪ ಕಡಿಮೆಯಾಗುತ್ತೆ.
ಅದೇ ನೀವು ಆಲೋಚನೆ ಮಾಡ್ತೀರಾ ಅ೦ದ್ಕೋಳಿ, ಅವಾಗ ನೀವು ದು:ಖಕ್ಕೆ
ಅ೦ಟಿಕೊ೦ಡಿರುತ್ತೀರಿ.
ಆದರಿ೦ದ ಆಲೋಚನೆಯಿ೦ದ ದು:ಖ.
ಆಲೋಚನೆಯಿಲ್ಲದೆ ಪೂರ್ಣ ಭಾವನೆಯನ್ನು (ಯಾವುದೇ ಆಗಲಿ)
ಸ್ವೀಕರಿಸಿದಾಗ ಸು:ಖವಗಲಿ ದು:ಖವಗಲಿ ಮನಸ್ಸು ಮಾತ್ರ ಚೈತನ್ಯವಾಗಿರುತ್ತದೆ.
ಬಹುಶ: ಮನುಷ್ಯ ಭಾಷೆಯನ್ನು ಕಲಿತ ನ೦ತರ ಅವನ ಭಾವಿಸುವ ಶಕ್ತಿ
ಕಡಿಮೆ ಯಾಗಿದೆ ಅನ್ನ ಬಹುದು.
ಈಗ ತ೦ತ್ರ ಗಿ೦ತ್ರ ಬ೦ದು ಭಾವನೆ ಪೂರ್ಣ ಶೂನ್ಯ.
ನಮ್ಮ ಕೆಲವು ನೆ೦ಟರು ಸತ್ತು ಹೋದರು, ಆಗ ಎಲ್ಲರೂ
ದು:ಖದ ಬಾವನೆಯನ್ನು ವ್ಯಕ್ತ ಪಡಿಸುವ ಶಕ್ತಿಯನ್ನು ಕಳೆದುಕೊ೦ಡಿದ್ದರು.
ಅದೇ ೧೦ ವರ್ಷದ ಹಿ೦ದೆ ನಮ್ಮ ತಾತ ಸತ್ತಾಗ ಎಲ್ಲರೂ ಪೂರ್ಣವಾಗಿ
ದು:ಖ ಪಟ್ಟು ತಾತನನ್ನು ಮರೆತರು.
Re: ಅನುಭವ - ಆಲೋಚನ-ಭಾಷೆ
ನಮ್ಮ ಊರಿಗೆ ಇತ್ತೀಚೆಗೆ ಕೆಲ ಮಹಾತ್ಮರು ಬಂದಿದ್ದರು, ಅದರಲ್ಲೊಬ್ಬರು ನಿಜಗುಣ ಶಿವಯೋಗಿಗಳ ಕೆಲ ಬರೆಹಗಳನ್ನು ಹೇಳುತ್ತಿದ್ದರು,
ಅದರಂತೆ,
ನಮ್ಮ ಮನಸ್ಸಿಗೆ ಮೂರು ಸ್ತಿತಿಗಳಿವೆ,
೧) ಎಚ್ಚರ
೨) ಸುಪ್ತಿ
೩) ಸುಸುಪ್ತಿ.
ದೇವತೆಗಳು ಯಾವಾಗಲೂ ಎಚ್ಚರದ ಸ್ತಿತಿಯಲ್ಲಿರುತ್ತಾರೆ, ಪ್ರಾಣಿ, ಹಕ್ಕಿಗಳು ಸುಪ್ತಿಯಲ್ಲಿರುತ್ತವೆ, ಕಲ್ಲು,ಮರ ಮುಂತಾದವು ಸುಸುಪ್ತಿಯಲ್ಲಿ
ಇರುತ್ತವೆ.
ಮನುಷ್ಯರು ಎಚ್ಚರ, ನಿದ್ದೆಯಲ್ಲಿ ಕನಸು ಕಾಣುವಾಗ ಸುಪ್ತಿ ಮತ್ತು ಗಾಢ ನಿದ್ದೆಯಲ್ಲಿ ಸುಸುಪ್ತಿಯ ಸ್ತಿತಿಯಲ್ಲಿರುತ್ತಾರೆ.
ಹಾಗಾಗಿ ನಾವು ಮನುಷ್ಯನಾಗಿ ಹುಟ್ಟುವದು ನಮ್ಮ ಹಿಂದಿನ ಜನ್ಮದ ಪುಣ್ಯದಿಂದಾಗಿ.