ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › H.S.R.Raghavendra Rao ರವರ ಬ್ಲಾಗ್

(ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ

December 29, 2006 - 5:30pm — H.S.R.Raghavend...

ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.
ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನಿರೀಕ್ಷಿಸಿದ್ದೆ.
ನನ್ನ ಅನುಮಾನ ಇರುವುದು, ಭಾವನೆ ಮತ್ತು ಅನುಭವಗಳನ್ನು ಅವುಗಳ ಶುದ್ಧ ಸ್ಠಿತಿಯಲ್ಲಿ ಪಡೆಯಲು, ಆ ಕ್ಷಣದಲ್ಲಿ ಅವುಗಳ ಬಗ್ಗೆ ಯೋಚಿಸುತ್ತಿರುವುದೇ ಅಡ್ಡಿಯಾಗುವುದೇ ಎಂದು. ಏಕೆಂದರೆ, ಏಕೆಂದರೆ ಅನುಭವಿಸುವ ವ್ಯಕ್ತಿಗೂ ಅನುಭವಕ್ಕೂ ಇರುವ ದೂರವೇ `ತಲ್ಲೀನತೆ'ಯನ್ನು ಅಳಿಸಿಬಿಡುವುದೇನೋ. ಇದನ್ನೇ ಕುವೆಂಪು ಅವರು
ನಾ ಮನುಜನು ನನ್ನೆದೆಯಲಿ ಅರಿವೆನ್ನುವ ಬಾವು
ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು
ಎಂದು ವಿವರಿಸಿದ್ದಾರೆ. ಇರವು ಮತ್ತು ಅರಿವುಗಳ ನಡುವಿನ ಈ ದ್ವಂದ್ವವು ಮನುಷ್ಯನಿಗೆ ಅನಿವಾರ್ಯವೇನೋ. ಇಲ್ಲವಾದರೆ, ಅವನು ಪ್ರಾಣಿಸಹಜವಾದ ಸ್ಠಿತಿಗಾಗಿ ಅಥವಾ ಶಿಶುಸಹಜವಾದ ಅಸ್ತಿತ್ವಕ್ಕಾಗಿ ಹಂಬಲಿಸಬೇಕಾಗುತ್ತದೆ.
ಭಾಷೆಯು ನಮ್ಮ ವಿಧಿಯೆಂಬ ಮಾತನ್ನು ಹಲವರು ಹೇಳಿದರೂ ಅದು ಸರ್ವಸಮ್ಮತವಲ್ಲ. ಅಲ್ಲಮನು ಹೇಳಿದಂತೆ `ಪದ' ಬೇರೆ `ಪದಾರ್ಥ' ಬೇರೆ. ಉದಾಹರಣೆಗೆ `ನೀಲಿ' ಬಣ್ಣವನ್ನು ಹೇಳುವ ಪದಗಳು ಕನ್ನಡದಲ್ಲಿ ಹತ್ತು ಇರಬಹುದು. ಆದರೆ ನೀಲಿಯ ವರ್ಣಛಾಯೆಗಳು ಅನೇಕವೆನ್ನುವುದು ನಮಗೆಲ್ಲರಿಗೂ ಗೊತ್ತು. ಭಾಷಾಲೋಕವು ಅಸಮರ್ಥವೋ ಅಥವಾ ಅದು ನಮ್ಮ ಅನುಭಲೋಕಕ್ಕೆ ಹಾಕಿದ ಅನುಲ್ಲಂಘನೀಯವಾದ ಚೌಕಟ್ಟೋ?
ಈ ಪ್ರಶ್ನೆಗೆ ಉತ್ತರವು ಸರಳವಲ್ಲ. `ಯಥಾ ವಾಚಾ ನಿವರ್ತಂತೇ ಅಪ್ರಾಪ್ಯ ಮನಸಾ ಸಹಾ' ಎಂಬ ಮಾತನ್ನು ದೇವರನ್ನು ಕುರಿತು ಹೇಳಿದಂತೆಯೇ ಲೋಕವನ್ನು ಕುರಿತೂ ಹೇಳಿರಬಹುದು.

~.~
  • H.S.R.Raghavendra Rao ರವರ ಬ್ಲಾಗ್
  • Login or register to post comments
  • 476 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 30, 2006 - 1:42pm — olnswamy

ಎಲ್ಲವನ್ನೂ ಹೇಳಲು ಯಾಕೆ ಆಗಬೇಕು?

olnswamy's picture

ಭಾಷೆಯನ್ನು ಎಷ್ಟೇ ಸೂಕ್ಷ್ಮವೆಂದರೂ ಅದು ನಿಜವಾಗಿ ಸ್ಥೂಲವೇ! ಆಗುವ ಅನುಭವಗಳನ್ನೆಲ್ಲ ಹೇಳಬೇಕೆನ್ನುವುದಾದರೂ ಯಾಕೆ? ಅದೊಂದು ಥರ ದುರಾಸೆ ಮನುಷ್ಯನ ಮನಸ್ಸಿಗೆ. ಕೊನೆಗೂ ಹೇಳಲಾಗದೆ ಉಳಿದದ್ದೇ ಅತಿ ಮುಖ್ಯವಾಗಿರುತ್ತದೆ, ಅಲ್ಲವೇ? ಹಾಗೆ ಹೇಳದೆ ಬಿಟ್ಟದ್ದನ್ನು ಅರಿಯುವ ಮನಸ್ಸು ಒಂದಾದರೂ ಸಿಕ್ಕೀತೆ ಅನ್ನುವುದು ಹುಡುಕಾಟ. ಅಡಿಗರ "ಚಿಂತಾಮಣಿಯಲ್ಲಿ ಕಂಡ ಮುಖ" ಅಂಥ ಅಪೇಕ್ಷೆಯನ್ನೇ ಕುರಿತ ಕವನ.
ದೇವರು ಅನ್ನುವ ಪದ ಬೇರೆ, ದೇವರ ಅನುಭವವೂ ಬೇರೆ. ಯಾವುದಕ್ಕೆ ನಮ್ಮ ಭಾಷೆಯಲ್ಲಿ ಹೆಸರಿಡಲು ಆಗುವುದಿಲ್ಲವೋ ಅದೆಲ್ಲವೂ ದೇವರೇ! ಭಾಷೆಯ ಹಂಗಿರದೆ ಆದ ಅನುಭವವೆಲ್ಲ ದೇವರ ಅನುಭವವೇ! ಆದರೆ ಉಂಟು, ಇಲ್ಲದಿದ್ದರೆ ಇಲ್ಲ. ಹೇಳಲು ಸಾಧ್ಯವಿಲ್ಲ. ಹೇಳಲು ಆಗುವ ಒಂದಿಷ್ಟರ ಮೂಲಕ ಹೇಳಲು ಸಾಧ್ಯವೇ ಇಲ್ಲದ್ದು ಕೂಡ ಅರಿವಿಗೆ ಬರುವಂತೆ ಭಾಷೆ ಬಳಸುವವರು ನಿಜವಾಗಿ ದೊಡ್ಡ ಮನಸ್ಸು, ಪ್ರಬುದ್ಧ ಮನಸ್ಸು ಉಳ್ಳವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 30, 2006 - 1:53pm — H.S.R.Raghavend...

Re: ಎಲ್ಲವನ್ನೂ ಹೇಳಲು ಯಾಕೆ ಆಗಬೇಕು?

H.S.R.Raghavendra Rao's picture

ಇದು ಬಹಳ ಸರಿ. ಭಾಷೆಗೆ ಎಲ್ಲ ಅನುಭವವನ್ನು ಹಿಡಿಯಲು ಸಾಧ್ಯವಿಲ್ಲ. ಅಂಥ ಅಪೇಕ್ಷೆ, ಅಹಂಕಾರಗಳು ಸರಿಯೂ ಅಲ್ಲ. ಆದ್ದರಿಂದಲೇ ಭಾಷೆಯು ನಮ್ಮ ಒಟ್ಟು ಅನುಭವಲೋಕದ ಗಡಿಗೆರೆಗಳನ್ನು ನಿರ್ಧರಿಸುವುದಿಲ್ಲ. ನಮ್ಮ ಲೋಕವು ಕೇವಲ ಭಾಷೆಯ ಸೃಷ್ಟಿಯೂ ಅಲ್ಲ. ಅದರಾಚೆಗಿನದನ್ನು ಹೇಳುವ ಪ್ರಯತ್ನಗಳು ಕೇವಲ ಆಂಶಿಕ. ಹಾಗೆ ನೋಡಿದರೆ, ಸಂಗೀತ ಮತ್ತು ಚಿತ್ರಗಳೂ ಇದೇ ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತವೆ.

H.S.Raghavendra Rao

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 30, 2006 - 2:13pm — Shyam Kishore

Re: ಎಲ್ಲವನ್ನೂ ಹೇಳಲು ಯಾಕೆ ಆಗಬೇಕು?

Shyam Kishore's picture

ಶ್ರೀಯುತರೇ,

ನನ್ನ ಅನಿಸಿಕೆಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ.

ಈ ಸಮಸ್ಯೆ (ಅನುಭವ, ಭಾವನೆಗಳನ್ನು ಭಾಷೆಯ ಮಿತಿಯಲ್ಲಿ ವಿವರಿಸುವುದು) ಅನುಭಾವಿಗಳನ್ನೂ ಕೂಡಾ ಇನ್ನಿಲ್ಲದಂತೆ ಕಾಡಿದೆ ಅಲ್ಲವೇ? ಈ ನಿಟ್ಟಿನಲ್ಲಿ ರಾಮಕೃಷ್ಣ ಪರಮಹಂಸರ ವಿಚಾರ ನೆನಪಿಗೆ ಬರುತ್ತಿದೆ. ಅವರು ಸಮಾಧಿಯ ಅನುಭವವನ್ನೇ ಆಗಲಿ, ಅಥವಾ ದೇವರೊಡನೆ ಮುಖಾಮುಖಿಯಾದ ಅನುಭವವನ್ನಾಗಲೀ ವಿವರಿಸಿ ಹೇಳಲು ನಿರಾಕರಿಸುತ್ತಿದ್ದರಂತೆ! ಉಪ್ಪಿನ ಗೊಂಬೆ ಸಮುದ್ರವನ್ನು ಹೊಕ್ಕಂತೆ ಈ ವಿಚಾರ ಎನ್ನುವುದು ಅವರ ಸಿದ್ಧಾಂತವಾಗಿತ್ತು. ನಾವೂ ಕೂಡಾ ಅನುಭವವನ್ನು ಹೊಂದುವಾಗ ಅದನ್ನು ಇನ್ನೊಬ್ಬರಿಗೆ ವಿವರಿಸುವ ಅಪೇಕ್ಷೆಯನ್ನೇ ಹೊಂದದೆ ಹೋದರೆ, ಪೂರ್ಣಾನುಭವ ದಕ್ಕಬಹುದು ಅಲ್ಲವೇ?

ಉದಾಹರಣೆಗೆ, ಪ್ರಾಕೃತಿಕ ಸೌಂದರ್ಯವನ್ನು ಸವಿಯುವಾಗ ಅದನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ಆಲೋಚನೆ ಬಂದ ತಕ್ಷಣ ಅಲ್ಲಿ ಆಲೋಚನಾ ಸರಪಳಿಯೇ ಶುರುವಾಗುತ್ತದೆ! ನಾನು ತೆಗೆದ ಫೋಟೋ ಚೆನ್ನಾಗಿ ಬರುತ್ತದೋ ಇಲ್ಲವೋ, ಅದನ್ನು ಇನ್ನೊಬ್ಬರಿಗೆ ತೋರಿಸಿದಾಗ ಅವರದನ್ನು ಮೆಚ್ಚುವರೋ ಇಲ್ಲವೋ...ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ಆ ಕ್ಷಣದಲ್ಲಿ ಅನುಭವವನ್ನು ನಾವು ಪೂರ್ಣ ಸವಿಯಲು ಸಾಧ್ಯವಾಗಿರುವುದಿಲ್ಲ ತಾನೇ? ಅದೇ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ಆಲೋಚನೆಯೇ ಇಲ್ಲವಾದಲ್ಲಿ ನಮ್ಮ ಕಣ್ತುಂಬಾ ಆ ದೃಶ್ಯವನ್ನು ತುಂಬಿಕೊಂಡು ಪೂರ್ಣ ಅನುಭವ ಹೊಂದಬಹುದಲ್ಲವೇ? ಇದು ಬಹಳ ರೂಕ್ಷ ಉದಾಹರಣೆ ಆಯಿತೇನೋ.

ಓ.ಎಲ್.ಎನ್. ಅವರು ಹೇಳಿದಂತೆ ಎಲ್ಲವನ್ನೂ ವಿವರಿಸುವ ಹಂಗಿಲ್ಲದೇ ಹೋದರೆ ಅನುಭಾವಿಗಳಾಗಬಹುದೇನೋ? ಭಾಷೆ ಎಷ್ಟೇ ಆದರೂ ನಮ್ಮ ಬುದ್ಧಿಯ ಮಟ್ಟದಲ್ಲಿ ಪ್ರಕಟಗೊಳ್ಳುವುದು. ಹಾಗಾಗಿ ಬುದ್ಧಿಗೆ ಮೀರಿದ್ದನ್ನು ವಿವರಿಸಲು ಭಾಷೆ ಸಹಜವಾಗಿಯೇ ಅಸಮರ್ಥ ಅಲ್ಲವೇ? ಆದರೆ ಅನುಭವಿಸಿದ್ದನ್ನು ಹಂಚಿಕೊಳ್ಳದೇ ಹೋದರೆ ಇತರರಿಗೆ ನಾವನುಭವಿಸಿದ್ದು ಹೇಗೆ ತಿಳಿದೀತು? ಪ್ರಾಯಶಃ ನಮ್ಮ ಅಹಂ ಸುಪ್ತವಾಗಿ ನಮ್ಮೆಲ್ಲ ಕ್ರಿಯೆಗಳನ್ನು ನಿರ್ದೇಶಿಸುವುದೇ ಇವಕ್ಕೆಲ್ಲ ಕಾರಣವೇ?

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮಲ್ಲಿಲ್ಲದ ’ನಮ್ಮದು’
  • ಭಾಷೆ ಮತ್ತು ಧರ್ಮಗಳ ಸಂಬಂಧ
  • ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
  • ಕಾವೇರಿ ತೀರ್ಪಿನ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ
  • ಹೀಗೇ ಎಂದು ಬರಿ
Syndicate content

ಲೇಖಕರು

H.S.R.Raghavendra Rao's picture

ಪರಿಚಯ

I am a college professor, teaching Kannada literature. Literary Criticism, transltion Studies and Culture studies are areas of mu special interest. Crcket, detective fiction and travel are my hobbies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 66 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator