ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಕೆಲದಿನಗಳ ಹಿಂದೆ ಪುರಂದರದಾಸರ ಸುಲಭವಲ್ಲವೋ ಎನ್ನುವ ಕೃತಿಯ ಬಗ್ಗೆ ಬರೆದಿದ್ದೆ. ಸುನಿಲ್ ಅವರು ಅದಕ್ಕೆ ಚೆನ್ನಾಗೆ ವ್ಯಾಖ್ಯಾನ ಕೂಡ ಮಾಡಿದ್ದರು. ಇವತ್ತು ಪುರಂದರ ದಾಸರದ್ದೇ ಇನ್ನೊಂದು ದೇವರನಾಮ. ಸುಲಭವಲ್ಲವೋ ಮಹದಾನಂದ ಎನ್ನುವ ರಚನೆ ನನಗೆ ಸ್ವಲ್ಪವಾದರೂ ಅರ್ಥವಾಗಿತ್ತು. ಆದರೆ, ಇದು ಪೂರ್ತಿ ಒಗಟಾಗಿದೆ!
ಈ ರಚನೆ ಇಲ್ಲಿದೆ. ಇದರ ಅರ್ಥ ಹೇಳಬಲ್ಲವರು ಖಂಡಿತ ಬರೆಯಿರಿ.
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ
೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦: ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧: ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ
೧೨: ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!
ಇದನ್ನು ವಿದ್ಯಾಭೂಷಣರವರ ಧ್ವನಿಯಲ್ಲಿ ಈ ತಾವಿನಲ್ಲಿ ನೀವು ಕೇಳಬಹುದು
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 621 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಸಂತ ಏಕನಾಥರೋ ಅಥವಾ ನಾಮದೇವರೋ ಬರೆದಿರುವ ಮರಾಠೀಕೃತಿಯೊಂದರ ಅನುವಾದವಿದ್ದರೂ ಇರಬಹುದೀಕೃತಿ, ಪುರಂದರದಾಸರು ಬರೆದಿರಲಿಕ್ಕಿಲ್ಲ ಎಂದು ಹಾವನೂರು ಶ್ರೀನಿವಾಸರು ಬರೆದಿದ್ದನ್ನು ಎಲ್ಲೋ ಓದಿದ ನೆನಪು.
ಎನಗಿಂತ ಕಿರಿಯರಿಲ್ಲ
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಹೌದೇ? ಈ ವಿಷಯ ನಾನು ಓದಿಲ್ಲ. ಆದರೂ, ಶೈಲಿಯನ್ನು ನೋಡಿದರೆ, ಪುರಂದರ ದಾಸರು ಬರೆದಿದ್ದರೂ ಆಶ್ಚರ್ಯವಿಲ್ಲ ಅನ್ನಿಸುತ್ತೆ. ಅಲ್ಲದೆ, ಸಾಧಾರಣವಾಗಿ, ಪುರಂದರರ ರಚನೆಗಳ ಮುದ್ರಿತ ಪ್ರತಿಗಳಲ್ಲೆಲ್ಲ ಇದು ಕಂಡುಬರುತ್ತದೆ.
ಒಂದು ವೇಳೆ, ಇದರ ವಿಷಯ ಹೆಚ್ಚಾಗಿ ತಿಳಿದುಬಂದರೆ ಬರೆಯಿರಿ.
-ಹಂಸಾನಂದಿ
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಹಂಸಾನಂದಿಯವರೆ, ಈ ಪದ್ಯ ಎಷ್ಟು ಅರ್ಥವಾಯಿತೋ ಬಿಟ್ಟಿತೋ ಆದರೆ ಕೆಲವು ಹೊಸಪದಗಳನ್ನು ತಿಳಿದುಕೊಳ್ಳುವಂತಾಯಿತು. ಮಹಾತ್ಮರು ಊ-ಕಾಲಘಟ್ಟದಲ್ಲಿ, ಊ-ಉತ್ಸಾಹದಲ್ಲಿ ಇದನ್ನು ಬರೆದಿದ್ದರೋ ತಿಳಿಯುವುದು ಕಷ್ಟ. ನಮ್ಮ ಮಿಶ್ರಿಕೋಟಿಗಳು ಆಗಾಗ ಹೇಳುತ್ತಿರುತ್ತಾರೆ ಎಲ್ಲದಕ್ಕೂ ಅರ್ಥ ಹುಡುಕುವುದಕ್ಕೆ ಹೋಗಬಾರದು, ಕೆಲವೊಮ್ಮೆ ಬರೆದವರಿಗೇ ತಿಳಿದಿರುವುದಿಲ್ಲ ಅಂತ
ಇರಲಿ ಪದ್ಯದ ಅರ್ಥಕ್ಕೆ ಮುಂಚೆ, ಈ ಪದಗಳನ್ನು ನೋಡಿ.
೧. ಚೊಂಚ - ಡೊಂಕು ಕೈಯುಳ್ಳವ, ಮೊಂಡ ಕೈಯವ (ಕಸ್ತೂರೀ ಕೋಶದಿಂದ), ಕೈಯಿಲ್ಲದವನು.
೨. ಟೊಣಪ - ನಾ. ಕಾಡುಮನುಷ್ಯ, ಅಡಮುಟ್ಟ, ಮಂದಮತಿ, ದಡಿಯ, ದಾಂಡಿಗ.
೩. ಟೊಣಪೆ - ನಾ. ದೊಣ್ಣೆ, ದಪ್ಪವಾದ ಬಡಿಗೆ. ೨ ಮತ್ತು ೩ ರ ಬೇರೆತನ ಗಮನಿಸಿ.
೪. ಟೊಣೆ - ಧಾ. ನುಂಗು, ಉಗುಳು, ಪೆಟ್ಟು, ಹಾಕು, ಸೀಳು, ಮೋಸ ಮಾಡು, ವಂಚಿಸು, ಅಗೆಯು, ತಪ್ಪಿಸಿಕೊಳ್ಳು,
ಪ್ರ. ಕ್ಷಣ ಹದುಳವಿರದೆ ಬಾಯ ಟೊಣೆದೇ ಹೋಯಿತ್ತೆನ್ನ ಭಕ್ತಿ(ಬ.ವ.)
ಎಲ್ಲವೂ ಕಸ್ತೂರೀ ಕೋಶದಿಂದ. ನಾವು ಚಿಕ್ಕವರಿದ್ದಾಗ ತುಂಬಾ ದಪ್ಪಗಿರುವವರನ್ನು ಅದೇನ್ "ಟೊಣೆಯ ಅಪ್ಪ ಅವನು" ಅಂತ ಹೇಳುತ್ತಿದ್ದೆವು.
೫. ತೊಣೆ ಎಂಬ ಬಳಕೆಗಳೂ ಇದೆ. ಬೇರೆ ದ್ರಾವಿಡ ಭಾಷೆಗಳ ಹೋಲಿಕೆಯಿಂದ ತೊಣೆಪೆ ಅಂದರೆ ಹೂಮಾಲೆ, ಹೂಗೊಂಚಲು, ಹಣ್ಣುಗೊಂಚಲು ಎಂದು ಅರ್ಥೈಸಬಹುದು.
೬. ಕನ್ನಡದಲ್ಲಿ ತೊಣೆ - ಧಾ.ಸೇರು, ಹೋಲಿಕೆ, ಎಣೆ, ಸರಿ, ಸಮೀಪಿಸು, ನಾ.ಸರಿಸಮಾನತೆ, ಹೋಲಿಕೆ, ಜೋಡು, ಒರೆ, ದೊರೆ, ತೂಗಾಡು. ಅಂದ ಹಾಗೆ ನಾನು ಇದೇ ಹಾಡನ್ನು ಕನ್ನಡಆಡಿಯೋ.ಕಾಂನಿಂದ ಕೇಳಿದೆ. ನನಗೆ ಅದು ಕಣಪೆ ಅಂತ ಕೇಳಿಸುತ್ತಾ ಇತ್ತು. ಸರಿ ಏನಾದರೂ ಆಗಲಿ ಅಂತ ಅದನ್ನೂ ಹುಡುಕಿದಾಗ ಸಿಕ್ಕಿದ್ದು, ಕಣಪೆ = ಕಹಿಯಾದದ್ದು, ಔಷಧಿ ಅಂತ ತಿಳಿದು ಬಂತು. ಪದ್ಯದ ಅರ್ಥ ಅಥವಾ ವಿವರಣೆ ಎನ್ನುವುದಕ್ಕಿಂತ ಒಂದು ವಿಚಾರ ಹೊಳೆಯಿತು. ಈ "ಕಣಪೆ" ಎಂಬುದನ್ನು ಇಟ್ಟುಕೊಂಡು ಪದ್ಯದ ಅರ್ಥವನ್ನು ಹೀಗೆ ಹೇಳಬಹುದೇ ? ನೀವುಗಳು ಶಂಕರಾಚಾರ್ಯರ, "ಭಜ ಗೋವಿಂದಂ, ಭಜ ಗೋವಿಂದಂ, ಗೋವಿಂದಂ ಭಜ ಮೂಢಮತೇ, ಸಂಪ್ರಾಪ್ತೆ ಸನ್ನಿಹಿತೆ ಕಾಲೆ ನಹಿ ನಹಿ ರಕ್ಷತಿ ಡುಕ್ರುಂಕರಣೆ" ಕೇಳಿರಬಹುದು". ಇಲ್ಲಿ ಡುಕ್ರುಂಕರಣೆ ಎಂಬುದು ಸಂಸ್ಕೃತದಲ್ಲಿ ಒಂದು ವ್ಯಾಕರಣ ನಿಯಮ, "ಕಡೇಗಾಲ ಸಮೀಪಿಸುತ್ತಿದ್ದಾಗ ಮಂಕೆ, ಗೋವಿಂದನನ್ನು ಭಜಿಸು ಅದನ್ನು ಬಿಟ್ಟು ವ್ಯಾಕರಣ ನಿಯಮಗಳನ್ನು ಯಾಕೆ ಓದುತ್ತಾ ಇದ್ದೀಯಾ" ಅಂತ ಅರ್ಥ. ಶಂಕರಾಚಾರ್ಯರು ವೇದಾಂತಿಗಳು. ಭಕ್ತಿ ಮಾರ್ಗಕ್ಕೆ ಶಂಕರಾಚಾರ್ಯರ ಕೊಡುಗೆ ಕಮ್ಮಿ ಎಂದು ಕೆಲವರು ಹೇಳುತ್ತಾರೆ. ಶಿವಾನಂದಲಹರೀ ಕೂಡ ವೇದಾಂತಮಯ ಎಂಬ ಮಾತಿದೆ. ಆದರೆ ದಾಸರು ಭಕ್ತಿ ಪರಂಪರೆಯವರು. ಒಂದೇ ಸಾಲಿನ ವೇದಾಂತದ ಸಾರವನ್ನು, ಜನರ ಮನತಾಗುವಂತೆ, ದಾಸರ ಕಾಲದ ಸಮಾಜದ ರೀತಿರಿವಾಜುಗಳಿಗೆ(ಹೊನ್ನು, ಎಮ್ಮೆ ನೀಡುವುದು, ಊರುಗಳನ್ನು ನೀಡುವುದು) ಸರಿದೂಗುವಂತೆ ಸರಳ ನುಡಿಯಲ್ಲಿ, ಏನೇ ತೊಂದರೆಯಿದ್ದರೂ(ಒಡ್ಡರು, ಕುಂಟರು, ಕುರುಡರು, ಚೊಂಚರು, ಹಸಿವಿಲ್ಲದೆ ಬಳಲುತ್ತಿರುವವರು(ಇದು ಒಂದು ರೋಗ) ) ವಿಠಲರಾಯನಲ್ಲಿ ಮೊರೆಹೋಗಿ, ಅವನು ಸದ್ಗತಿಯನ್ನು ಈಯುತ್ತಾನೆ ಎಂದು ಹೇಳಲು ಜತುನಗೈದಿರಬಹುದೇ? ತುಂಬಾ ತುಂಬಾ ಕಷ್ಟ ಕಣ್ರೀ. "ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡಲೆಯಿದ್ದವರಿಗೆ ಹಲ್ಲಿಲ್ಲ", ಸಮಾನತೆ ಬೇಕೆಂದರೆ ವಿಠಲರಾಯನಲ್ಲಿ ಮೊರೆಹೋಗಿ.
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಅಲಲಾ!! ಸುನಿಲ...
ಬೊಂಬಾಟಾಗಿ ಬರೆದಿದ್ದೀಯಿ!!!
ಚೆನ್ನಾಗಿದೆ ನಿನ್ನ ಬಿಡಿಸು!!
======================================
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರು ಈ ಪದ್ಯವನ್ನು ವ್ಯಾಖ್ಯಾನಿಸಿದ್ದಾರೆ. ಅದು ಕ್ಯಾಸೆಟ್ ಸಹ ಆಗಿದೆ.
ವೆಂ.
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಅರಳು ಮಲ್ಲಿಗೆ ಪಾರ್ಥಸಾರಥಿಯವರು ನೀಡಿರುವ ವ್ಯಾಖ್ಯಾನದ ಬಗ್ಗೆ ಕುತೂಹಲವಿದೆ. ಇದರ ಬಗ್ಗೆ ಇನ್ನಷ್ಟು ವಿವರ ನೀಡಲು ಸಾಧ್ಯವೇ ?
೧. ಇಲ್ಲೊಬ್ಬರು ಇದರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆದಿದ್ದಾರೆ.
೨. ಈ ಹಾಡಿನ ಸುತ್ತ ಅಲೆಯುತ್ತಿದ್ದಾಗ, ಕನ್ನಡಆಡಿಯೋ.ಕಾಂನಲ್ಲಿ ಘಮ ಘಮ ಎನ್ನುವ ಒಂದು ಕಲ್ಪು ಸಿಕ್ಕಿತು. ಆ ಕಲ್ಪಿನಲ್ಲಿ(=ಆಲ್ಬಮ್ಮಿನಲ್ಲಿ) ಈ ಹಾಡು ವಿಶಿಷ್ಟ ರೀತಿಯಲ್ಲಿದೆ. ವೆಸ್ಟರ್ನ್ ರಿದಮ್ ಜೊತಿಗಿರುವ ಈ ಪ್ರಯೋಗ ಮೊದಲ ಸಲಿಗೇ ನನಗೆ ತುಂಬಾ ಇಷ್ಟವಾಯಿತು. ಈಗಾಗಲೇ ಐದಾರು ಸಲ ಕೇಳಿ ಕೇಳಿ ಆನಂದಿಸಿರುವೆ. ಎಲ್ಲರಿಗೂ ಇಷ್ಟವಾಗಬಹುದು ಆ ಪ್ರಯೋಗ. ಅದರಲ್ಲಿ ಟೊಣ(ಣೆ)ಪೆ ಎಂಬ ಬಳಕೆಯಿದೆ. ಇದು ಅವರ ಹೋಮ್ಪೇಜ್ ಅನ್ನಿಸುತ್ತೆ.
ಇಂದೇ ಮನೆಗೆ ಹೋಗುವಾಗ ಆ ಘಮ ಘಮ ಸಿ.ಡಿ ಸಿಗುವುದೇ ವಿಚಾರಿಸಿಕೊಂಡು ಹೋಗುವೆ.
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ನಿಮಗೆ ನೆನಪಿದ್ದರೆ, ಅವರ ವ್ಯಾಖ್ಯಾನದ ಸಾರಾಂಶವನ್ನು ಬರೆಯುತ್ತೀರಾ?
-ಹಂಸಾನಂದಿ
ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಹಂಸಾನಂದಿಯವರೆ,
ಈ ದಿನ ನನಗೆ ಇನ್ನೊಂದು ವರ್ಶನ್ ಸಿಕ್ಕಿತು. ೧೯೬೩ರಲ್ಲಿ ಪ್ರಕಟವಾಗಿರುವ ಪುರಂದರದಾಸರ ಕೀರ್ತನೆಗಳು ಎಂಬ ಪುಸ್ತಕದಲ್ಲಿ ಈ ಪದವಿದೆ. ರಾಗ ಫರಜು, ಆದಿತಾಳ ಅಂತ ಇದೆ.
ಈ ಪದದಲ್ಲಿ ಮತ್ತಷ್ಟು "ಹೊಸಪದ"ಗಳಿವೆ. ಚೊಂಟ, ಹಂಜಕ್ಕಿ, ಚಾಲು. ಈ ಪದದ ಕೊನೆಯ ಸಾಲು ಹೀಗಿದೆ :- "ಇನ್ನು ಈ ಅರ್ಥಗಳೆಲ್ಲ ಪುರಂದರವಿಠರ ಬಲ್ಲ | ಅನ್ಯರ್ಯಾರೂ ತಿಳಿದವರಿಲ್ಲ". ಪದವನ್ನು ಓದಲು ಇಲ್ಲಿ ಎಡತಾಗಿ. ಮುಳ್ಳು ಮೊನೆ