ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಯಾ ಕುಂದೇಂದು ತುಷಾರಹಾರ ಧವಳಾ ...
ನೆನ್ನೆ ಮಹೇಶರು ಗಿಳಿಗೈಯೆ, ಶ್ರಿಂಗೇರಿ ಶಾರದೆಯ ಒಂದು ಸ್ತುತಿಯನ್ನು ಬಲು ಸೊಗಸಾಗಿ ಕನ್ನಡಯಿಸಿದ್ದರು.
ಅದರದ್ದೇ ಹುರುಪಿನಲ್ಲಿ, ನಾನು ಇನ್ನೊಂದು ಪ್ರಸಿದ್ಧ ಸರಸ್ವತಿಯ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದಿದ್ದೇನೆ - ಬಹಳ ಪ್ರಖ್ಯಾತ ಸ್ತುತಿ ಇದು. ಎಲ್ಲರಿಗೂ ಪರಿಚಿತವಾದ್ದು.
ಸಂಸ್ಕೃತ ಮೂಲ:

- hamsanandi ರವರ ಬ್ಲಾಗ್
- Login or register to post comments
- 467 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಮಹೇಶರೆ,
ಅನುವಾದ ಚೆನ್ನಾಗಿದೆ.
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ವೆಂಕಟೇಶ ಅಜ್ಜ,
ಇದನ್ನು ಹಂಸಾನಂದಿಯವರು ಕನ್ನಡಯಿಸಿದುದು.
ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಅನುವಾದಿಸುವದಕ್ಕೆ ಕನ್ನಡಯಿಸು ಅಂತಾ ಇದ್ದೀರಿ ; ಕನ್ನಡಿಸು ಎನ್ನುವದೇ ಹೆಚ್ಚು ಸರಿ , ಸಹಜ , ಈಗಾಗಲೇ ಬಳಕೆಯಲಿರುವದೂ ಅಲ್ಲವೇ ? ;
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಕನ್ನಡಿಸು/ಕಣ್ಣಡಿಸು ಅಂದರೆ to mirror to copy ಪ್ರತಿ ಮಾಡು ಅಂತ ಇದೆ. ಕನ್ನಡಿಕೆ/ಕಣ್ಣಡಿಕೆ duplication
Ka. kannaḍi, kanaḍi mirror, pane of glass, lens of spectacles, pair of spectacles; kanaḍaka pair of spectacles; kannaḍisu to mirror, appear.
http://dsal.uchicago.edu/cgi-bin/philologic/getobject.pl?c.0:1:1187.burr...
ಉವರು ಹೇಳಿದಂತೆ ಕಣ್ಣಡಿ, ಕಣ್ಣಡಕ( ಕಣ್ಣಿಗೆ ಅಡಕವಾದುದು) ಇವು ಸರಿಯಂತೆ.
ಅದಕ್ಕೆ ನಾನು ಕನ್ನಡಯಿಸು/ಕನ್ನಡೈಸು, ತಮಿಳಿಸು, ತೆಲುಗಿಸು, ಹಿಂದಿಸು, ಇಂಗಲೀಸಿಸು, ಅಂತ ಬಳಸಲು ತೊಡಗಿದ್ದೇನೆ. ಇದು ತಪ್ಪಲ್ಲ ಅಂತ ನಂನ ಅನಿಸಿಕೆ.
ಹಾರಯಿಸು, ಮೇಳಯಿಸು ಈ ಒರೆಗಳು ಹೀಗೆ ಅಲ್ಲವೇ!!
ಇರಲಿ, ನಾನು ಕನ್ನಡಿಸು ಅಂನುವ ಒರೆಯನ್ನು ಸಂನಿವೇಸ/ಪಾಡಿಗೆ ತಕ್ಕಂತೆ ತಿಳಿದುಕೊಳ್ಳವೆನು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಹಂಸಾನಂದಿಯರೆ,
ಚನ್ನಾಗಿದೆ...
೧)ಬರಹದ ಹೆಸರು ಕನ್ನಡದಲ್ಲಿ ಇರಲಿ, ಇಲ್ಲಿ ’ಬಿಳಿಯಮ್ಮ, ಬಿಳಿಯೆ, ವೀಣೆಗೈಯ್ಯೆ,’ ಹೀಗೆ ಹೇಳಬೋದು.
೨) ಕಾಯ(ಸಂಸ್ಕೃತ), ಮತ್ತು ಕಾಯೆ, ಇಂತಹ ಹೋಲುವ ಬೇರೆ ನುಡಿಯ ಒರೆಗಳ ತಿಳಿಯಲು ಗೊಂದಲ. ಕಾಯದ ಮಾಱು/ಬದಲು ತನುವಿನಲಿ, ಮೈಗೆ, ಬಳಕೆ ಚನ್ನಾಗಿರುತ್ತದೆ.
೩)ಜಡತೆಯ ಮಾಱು ಅಲಪು, ಸೋಮಾರಿತ, ಅಲಸೆ ಇವನ್ನು ಬಳಸಬಹುದು.
ಬೊಮ್ಮಹರಿಶಿವರಿಂದಲೂ = ಹರಿಹರಬೊಮ್ಮರಿಂದಲೂ ( ಇದು ಚನ್ನಾಗಿರುತ್ತದೆ )
"ನೀ ಬೆಳ್ಪು ಮಂಜುಮಲ್ಲಿಗೆತಿಂಗಳನಿತು;" ಇದು ತುಂಬ ಚನ್ನಾಗಿದೆ..
ನನ್ನಿ! ಹೀಗೆ ಬರೆಯಿರಿ, ಒಳ್ಳೇದಾಗಲಿ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ರಾಗದಲ್ಲಿ ಹಾಡೋಕ್ಕೆ ಕಷ್ಟ. ರಾಗ ಹೊ೦ದಾಣಿಕೆ ಮಾಡೋದು ಇನ್ನೂ ಕಷ್ಟ.
:)
" ಅನ್ನುವ ಭಾವ ಬರುತ್ತೆ.
ಸುಮ್ಮನೇ ಪದದಿ೦ದ ಪದ ಅನುವಾದ ಮಾಡಿದರೆ ಪ್ರಯೋಜನವಿಲ್ಲಾ.
ಭಾವವನ್ನು ಗ್ರಹಿಸಿ ಜೀರ್ಣಿಸಿ ಅನುವಾದ ಮಾಡುವುದು ಒಳ್ಳೆಯದು.
"ಆಗುವುದು ಪೂಜೆ ನಿನಗೆ!" ಇದು ಓದಿದ ಮೇಲೆ ನಗು ಬರುತ್ತೆ .
ಕಾರಣ ಕನ್ನಡದಲ್ಲಿ "ಆಗುತ್ತೆ ಇರು ಪೂಜೆ ನಿ೦ಗೆ
ಅದರಿ೦ದ ನಮ್ಮ ಭಕ್ತಿ ಗೀತೆ ಹೊಸದಾಗಿ ಬರೆಯುವುದು ಲೇಸು - ಪುರ೦ದರ ದಾಸರನ್ನೇ ನೋಡಿ ಹಳೆ ಸ್ಲೋಕ ಗಳಿಗಿನ್ನಾ
ಶಕ್ತಿ ಹೆಚ್ಚಾಗಿರುವ ಹಾಡುಗಳನ್ನು ರಚಿಸಲಿಲ್ಲವೇ ?
ಆದರೂ ಪ್ರಯೋಗ ಮೆಚ್ಚುವ೦ತಹುದೇ.
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ರಾಗದಲ್ಲಿ ಹಾಡೋಕ್ಕೆ ಕಷ್ಟ. ರಾಗ ಹೊ೦ದಾಣಿಕೆ ಮಾಡೋದು ಇನ್ನೂ ಕಷ್ಟ.
:)
" ಅನ್ನುವ ಭಾವ ಬರುತ್ತೆ.
ಸುಮ್ಮನೇ ಪದದಿ೦ದ ಪದ ಅನುವಾದ ಮಾಡಿದರೆ ಪ್ರಯೋಜನವಿಲ್ಲಾ.
ಭಾವವನ್ನು ಗ್ರಹಿಸಿ ಜೀರ್ಣಿಸಿ ಅನುವಾದ ಮಾಡುವುದು ಒಳ್ಳೆಯದು.
"ಆಗುವುದು ಪೂಜೆ ನಿನಗೆ!" ಇದು ಓದಿದ ಮೇಲೆ ನಗು ಬರುತ್ತೆ .
ಕಾರಣ ಕನ್ನಡದಲ್ಲಿ "ಆಗುತ್ತೆ ಇರು ಪೂಜೆ ನಿ೦ಗೆ
ಅದರಿ೦ದ ನಮ್ಮ ಭಕ್ತಿ ಗೀತೆ ಹೊಸದಾಗಿ ಬರೆಯುವುದು ಲೇಸು - ಪುರ೦ದರ ದಾಸರನ್ನೇ ನೋಡಿ ಹಳೆ ಸ್ಲೋಕ ಗಳಿಗಿನ್ನಾ
ಶಕ್ತಿ ಹೆಚ್ಚಾಗಿರುವ ಹಾಡುಗಳನ್ನು ರಚಿಸಲಿಲ್ಲವೇ ?
ಆದರೂ ನೀವು ಮಾಡಿದ ಪ್ರಯೋಗ ಮೆಚ್ಚುವ೦ತದ್ದು.
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ, ಇದನ್ನು ನಮ್ಮ ಮನೆಗಳಲ್ಲಿ, "ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತಾ" ಅಂತ ಹೇಳ್ತಾರೆ. ಛಂದಸ್ಸಿಗೆ ಎರಡೂ ಹೊಂದುತ್ತದೆ.
ಹಂಸಾನಂದಿಯವರೇ, ಗಮ್ಮತ್ತಾಗಿದೆ
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಎಲ್ಲ ಪ್ರತಿಕ್ರಿಯೆಗಳಿಗೂ, ಸಲಹೆಗಳಿಗೂ ಧನ್ಯವಾದಗಳು
ಇಂತಹ ಅನುವಾದ ಬೇಕೇ ? ಎಂಬುದು ಪ್ರಶ್ನೆ ನಿಜ. ಆದರೆ, ತಪ್ಪಿಲ್ಲ ಎಂದು ನನ್ನ ಭಾವನೆ. ಭಾವಾನುವಾದಕ್ಕೆ ಒಂದು ಚಂದವಾದರೆ, (ಕೆಲವೆಡೆಗಳಲ್ಲಾದರೂ) ಪದಶಃ ಅನುವಾದಕ್ಕೆ ಸ್ವಲ್ಪವಾದರೂ ಸ್ಥಾನ ಇದೆ. ಎಸ್.ವಿ.ಪರಮೇಶ್ವರಭಟ್ಟರ ಕೆಲವು ಅನುವಾದಗಳನ್ನು ನೋಡಿದ ಮೇಲೆ ಇದು ನನ್ನ ಅನಿಸಿಕೆ. ( ಹಾಗಂತ ನನ್ನ ಅನುವಾದವನ್ನು ಅವರ ಅನುವಾದಕ್ಕೆ ಹೋಲಿಸುವುದಿಲ್ಲ ಮತ್ತೆ!)
ಆಗುವುದು ಪೂಜೆ ನಿನಗೆ -> ಎನ್ನುವುದರಲ್ಲಿ ನೀವೆಲ್ಲ ಕಂಡ ಹಾಸ್ಯ ಸ್ವಾರಸ್ಯವಾಗಿತ್ತು
- ಸಲ್ಲುವುದು ಎಂದರೆ ಸ್ವಲ್ಪ ವಾಸಿ.
ಮತ್ತೆ ಕಾಯೆ-ಕಾಯ ಇಂತಹ ಪ್ರಯೋಗವನ್ನು ಎರಡನೇ ಅಕ್ಷರಪ್ರಾಸವನ್ನು (ಬಲವಂತವಾಗಿ) ತರಲು ಮಾಡಬೇಕಾಯಿತು.
ಇನ್ನು ಇದನ್ನು ಹಾಡಲು ಸಾಧ್ಯವೇ ? ಎಂದು ಮುರಳಿಯವರು ಕೇಳಿದ್ದಾರೆ. ಸುಮ್ಮನೆ ಸಂಸ್ಕೃತ ಶ್ಲೋಕ ಹೇಳುವ ಧಾಟಿಯಲ್ಲಿ ಹೇಳಲು ನನ್ನ ಅನುವಾದಕ್ಕೆ ತಕ್ಕ ಛಂದೋಬದ್ದತೆ ಇಲ್ಲ. ಆದರೆ, ಶಾಸ್ತ್ರೀಯ ರಾಗವೊಂದನ್ನು ಹೊಂದಿಸಿ ಕಾವ್ಯವೊಂದನ್ನು ವಾಚಿಸುವ ರೀತಿಯಲ್ಲಿ ಹಾಡಲು ಯಾವ ತೊಡಕೂ ಇಲ್ಲ. ನನಗೆ ತಕ್ಕ ಮಟ್ಟಿಗೆ ಸಂಗೀತ ಬರುವುದರಿಂದ ಈ ಮಾತನ್ನು ಧೈರ್ಯವಾಗಿ ಹೇಳಬಲ್ಲೆ.
-ಹಂಸಾನಂದಿ
ಉ: ಯಾ ಕುಂದೇಂದು ತುಷಾರಹಾರ ಧವಳಾ ...
"...ಇಂತಹ ಅನುವಾದ ಬೇಕೇ ? ಎಂಬುದು ಪ್ರಶ್ನೆ ನಿಜ...."
ಈ ಶ್ಲೋಕಗಳನ್ನ ಏಟೋ ಸಕ್ಕದ ಗೊತ್ತಿಲ್ಡೆ ಇರೋ ಮಂದಿ(ನನ್ನ ತರ) ಕೂಡ ದಿನಾಲು ಹೇಳ್ತಾರೆ. ಈ ತರ ಕನ್ನಡಯಿಸಿದ್ದು ಸಿಕ್ಕರೆ ಕನ್ನಡದಲ್ಲೆ
ಹೇಳ್ಕಬೌದು. ಅರ್ತ ಗೊತ್ತಾಗದೇ, ತಪ್ಪುತಪ್ಪಾಗಿ ಸಕ್ದದದಲ್ಲಿ ಹೇಳುವ ಬದಲು ಕನ್ನಡದಲ್ಲೇ ಅರ್ತ ಮಾಡಿಕೊಂಡು ತಪ್ಪಿಲ್ಲದೇ ಹೇಳುವುದು ಸಲೀಸು.
ಉ: ಯಾ ಕುಂದೇಂದು ತುಷಾರಹಾರ ಧವಳಾ ...
ಚೆನ್ನಾಗಿದೆ ಹಂಸಾನಂದಿ.
ಈಟು ದಿನ ಸಕ್ಕದದಲ್ಲಿ ಹೇಳುತ್ತಿದ್ದ ಶ್ಲೋಕವನ್ನು ನಾನು ಇನ್ ಮೇಲೆ ಕನ್ನಡದಲ್ಲೇ ಹೇಳುತ್ತೇನೆ.