ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಶ್ರೀಹರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡಿದ್ದು ಹೇಗೆ?

October 3, 2007 - 12:13pm — hamsanandi

ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ಸೊಳ್ಳಾಯಣ ವನ್ನು ಮುಂದಿಟ್ಟಿದ್ದಾರೆ. ರಾಮ ಇದ್ದದ್ದು ನಿಜವೋ ಸುಳ್ಳೋ, ಆದರೆ ರಾಮಾಯಣ ಇರುವುದಂತೂ ನಿಜ. ರಾಮನನ್ನು ಕಂಡವರು ಈಗ ಯಾರೂ ಇಲ್ಲ. ಆದರೆ, ಸೊಳ್ಳೆಗಳನ್ನು ಕಾಣದವರುಂಟೇ? ಇದ್ದನೋ ಇಲ್ಲವೋ ತಿಳಿಯದ ಅಂತಹ ರಾಮನಂತಹ ರಾಮನಿಗೆ, ವಾಲ್ಮೀಕಿ ೨೪೦೦೦ ಶ್ಲೋಕಗಳ ರಾಮಾಯಣವನ್ನು ರಚಿಸಿದ ಮೇಲೆ, ಸರ್ವವ್ಯಾಪಿ ಸೊಳ್ಳೆಗಳ ಮೇಲೆ್ ಒಂದು ಮಹಾಕಾವ್ಯ ಇಲ್ಲದಿದ್ದರೆ, ಒಂದು ಕಾದಂಬರಿ ಇಲ್ಲದಿದ್ದರೆ, ಒಂದು ಅಂಕಣಬರಹವನ್ನಾದರೂ ಬರೆಯಬೇಕೆಂಬ ಬಯಕೆ ಅವರದಿರಬಹುದು.

ಅದೇನೇ ಇರಲಿ. ಅವರು ಅನ್ನಮಯ್ಯ ಒಂದು ಕೀರ್ತನೆಯಲ್ಲಿ ಬೆಳಗಾಗ ಹಾವಿನ ಹೆಡೆಯೇ ಸೊಳ್ಳೆಗಳಿಂದ ಕಾಯುವ ತೆರೆ (ಸೊಳ್ಳೆ ಪರದೆ ಎನ್ನಿ) ಆಗಿರುವ ಶ್ರೀಹರಿಗೆ ಹಾಲುಣಿಸುವುದನ್ನು ನೆನೆದಿದ್ದಾರೆ. ಇದು ನಿಜವಾಗಲೂ ಒಳ್ಳೆಯ ಶೋಧವೇ. ಬೇರೆ ದಾಸರ ಪದಗಳಲ್ಲಿ ಸೊಳ್ಳೆಯ ಉಲ್ಲೇಖ ಇರಬಹುದು - ಆದರೆ ಸೊಳ್ಳೆಯ ಪರದೆಯ ವಿಷಯ ನಾನೆಂದೂ ಕಂಡದ್ದು ನೆನಪಿಲ್ಲ. ಹಾಗಿದ್ದರೆ, ಸೊಳ್ಳೆಪರದೆ ಎಂಬುದು ತೆಲುಗರ ಅವಿಷ್ಕಾರವೇ? ಇದು ಖಂಡಿತ ಯಾರಾದರೂ ಡಾಕ್ಟರೇಟ್ ತೆಗೆದುಕೊಳ್ಳಲು ಮಾಡಬಹುದಾದ ಸಂಶೋಧನಾ ವಿಷಯದಂತೆ ತೋರುತ್ತಿದೆ ನನಗೆ! ಆದರೆ ಸದ್ಯಕ್ಕೆ ನನಗೆ ಅಂತಹ ಉದ್ದೇಶವಾಗಲೀ, ಅಥವಾ ಅದನ್ನು ಕೈಗೆತ್ತಿಕೊಳ್ಳಲು ಸಮಯವಾಗಲೀ ಇಲ್ಲ. ಆದ್ದರಿಂದ, ಇಲ್ಲಿಗೇ ಬಿಟ್ಟುಬಿಡುತ್ತೇನೆ.

ಅನ್ನಮಯ್ಯನ ಶ್ರೀಹರಿಯನ್ನು, ಭಕ್ತಕೋಟಿಯ ಕಷ್ಟಕೋಟಲೆಗಳನ್ನು ನಿವಾರಿಸಲು, ಸೊಳ್ಳೆಪರದೆಯಂತಿರುವ ಆದಿಶೇಷನ ಹೆಡೆಯನ್ನು ಸರಿಸಿ, ಹೊರಗೆ ಬಾ ಎನ್ನುವುದು ವಿಚಿತ್ರಾನ್ನದ ಭಟ್ಟರಿಗೆ ಸ್ವಲ್ಪ ಆಶ್ಚರ್ಯವಾಗಿ ಕಂಡಿದೆ ಎನಿಸುತ್ತೆ. ಆದರೆ, ನನಗೇನೋ ಅದಂತೂ ಬಹಳ ಸಹಜವೇ ಅನ್ನಿಸ್ತಾ ಇದೆ. ಯಾಕಂತೀರಾ? ನಿಜ ಹೇಳಬೇಕೆಂದರೆ, ಶ್ರೀಹರಿ ಕ್ಷೀರಸಾಗರಕ್ಕೆ ಹೋಗಿ ಹಾವಿನ ಹಾಸಿಗೆಯ ಮೇಲೆ ಮಲಗಿದ್ದೇ, ಹುಳುಹುಪ್ಪಟೆಗಳ ಕಾಟ ತಪ್ಪಿಸ್ಕೊಳ್ಳೋದಿಕ್ಕೆ. ಅದ್‍ಹೇಗೆ ಅಷ್ಟು ಖಾತ್ರಿಯಾಗಿ ಹೇಳ್ತೀಯಾ ಅಂತೀರಾ? ನನ್ನ ಹತ್ತಿರ ಪುರಾವೆ ಇದೆ ಸ್ವಾಮೀ!

ಇಲ್ಲಿ ನೋಡಿ ಒಂದು ಸಂಸ್ಕೃತ ಸುಭಾಷಿತ:

ಕಮಲೇ ಕಮಲಾ ಶೇತೇ

ಹರಃ ಶೇತೇ ಹಿಮಾಲಯೇ

ಕ್ಷೀರಾಬ್ದೌ ಚ ಹರಿಃ ಶೇತೇ

ಮನ್ಯೇ ಮತ್ಕುಣ ಶಂಕಯಾ!

ಅಂದರೆ,

ಕಮಲದಲೇ ಮಲಗುವಳು ಲಕುಮಿ

ಶಿವ ಮಲಗುವನು ಹಿಮಾಲಯದಲಿ

ಪಾಲ್ಹಡಲೇ ಪವಡಿಸುವನು ಹರಿ;

ಬಯಸಿರಬೇಕು, ಹುಳುಹುಪ್ಪಟೆಗಳಿಂ ಬಿಡುಗಡೆ!

ನೋಡಿದ್ರಲ್ಲ! ಹರಿ ಹಾಲ್ಗಡಲಿಗೆ ಹೋಗಿದ್ದೇ ಹುಳುಹುಪ್ಪಟೆ, ಕ್ರಿಮಿಕೀಟಗಳಿಗೆ ಹೆದರಿ; ಅವುಗಳಿಂದ ತಪ್ಪಿಸ್ಕೊಳೋದಿಕ್ಕೆ ಅಂತ. ಅಲ್ಲಿ ಹೋದಮೇಲೆ ಏನಾಯ್ತು? ಹದಿನಾಲ್ಕೂ ಲೋಕಗಳನ್ನು ವ್ಯಾಪಿಸಿರುವ ಸೊಳ್ಳೆರಾಯರು ಅಲ್ಲೂ ಪ್ರತ್ಯಕ್ಷರಾಗಿರಬೇಕು. ಮಲಗಿರುವ ಹಾವಿನ ಹೆಡೆಯನ್ನು ಬಿಟ್ಟು, ಪಾಪ, ಹರಿಗೆ ತಾನೇ ಇನ್ನೇನಿತ್ತು? ಲಕ್ಷ್ಮಿಯ ಸೀರೆ ಸೆರಗಿನಿಂದಾದರೂ, ಸ್ವಲ್ಪ ಗಾಳಿ ಬೀಸಿಕೊಂಡು ಸೊಳ್ಳೆ ಓಡಿಸೋಣ ಅಂದರೆ, ಆ ಮಹಾರಾಯ್ತಿ ಮೊದಲೇ ಕಮಲದೊಳಗೆ ಸೇರಿದ್ದಾಳೆ. ರಾತ್ರಿ ಹೊತ್ತು ಕಮಲ ಮುದುಡುವುದೂ ಗೊತ್ತಿರುವ ಸಂಗತಿಯೇ. ಇನ್ನು, ಅವಳ ಸೆರಗಿನ ವಿಷಯ ದೂರವೇ. ಅಲ್ಲವೇ? ಅದಕ್ಕೇ ಪಾಪ, ವಿಷ್ಣು ಹಾವಿನ ಹೆಡೆಯನ್ನೇ ಸೊಳ್ಳೆ ಪರದೆಯನ್ನಾಗಿಸಿಕೊಂಡರೆ, ಆದು ತೀರಾ ಸಹಜಾ ಅಂತೀನಿ ನಾನು.

ನೀವೇನಂತೀರಾ?

-ಹಂಸಾನಂದಿ

  • ಅನುವಾದ
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 263 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ರಾಜಕೀಯ
  • ಕನಸ್ಸು
  • ನಾನು ಯಾವ ಆತ್ಮ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator