ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಹಳತು - ಹೊಸತು
ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ.
ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ?
ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ:
पुराणमित्येव न साधु सर्वं न चापि काव्यं नवमित्यवद्यम् ।
सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥
ಹಳತಾದ ಮಾತ್ರದಲಿ ಸದಾ ಸೊಗಸಲ್ಲ; ಇದು ಹೊಸತು ಎಂದೆನಲು ತಪ್ಪಿಲ್ಲದೇನಿಲ್ಲ
ಕುಳಿತೋದಿ ಒರೆಯಿಡುವರರಿತವರು - ಕಂಡವರ ಮಾತಿನಲೆ ಗಳಹುವರು ಮೂಳರು!
(ಅನುವಾದ ನನ್ನದು)
ಕಾಳಿದಾಸ ಇದನ್ನು ಕಾವ್ಯದ ವಿಷಯವಾಗಿ, ಹೇಳಿದ್ದು ಕಡಿಮೆಯೆಂದರೆ ಹದಿನೈದು ಶತಮಾನಗಳ ಹಿಂದೆ. ಆದರೆ, ಅವತ್ತಿಗೂ, ಇವತ್ತಿಗೂ, ಯಾವತ್ತಿಗೂ, ಕಾವ್ಯವೊಂದೇ ಅಲ್ಲ, ಬದಲಿಗೆ ಎಲ್ಲ ಬಗೆಯ ಅರಿವಿಗೂ ಹೊಂದುವ ನಲ್ನುಡಿ ಎಂದು ನನಗನಿಸುತ್ತೆ. ನೀವೇನಂತೀರಿ?
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 191 hits
- Email this blog





RSS:
ಪ್ರತಿಕ್ರಿಯೆಗಳು
ಉ: ಹಳತು - ಹೊಸತು
ತೀರ ಸತ್ಯ ಹಂಸಾನಂದಿಯವರೆ,
ಯಾರೂ ಒಪ್ಪುವ ನುಡಿ. ಆದರೆ ಬದುಕು ಎನ್ನುವುದೇ ತಳಮಳ, ಸಂಘರ್ಷಕ್ಕ್ರಿರುವ ಮತ್ತೊಂದು ಹೆಸರು ತಾನೆ?. ಇಲ್ಲಿ ಸತ್ಯ ಯಾರಿಗೂ ಬಡಪೆಟ್ಟಿಗೆ ದಕ್ಕದು. ತಾನು ನಿರಂತರವಾಗಿರುವಂತೆ ಬದುಕೇ ರೂಢಿಸಿಕೊಂಡ ವ್ಯವಸ್ಥೆಯೇನೋ ಇದು (ಈ ತಳಮಳ ಸಂಘರ್ಷಗಳು) ಎಂದು ನನಗೆಷ್ಟೋ ಬಾರಿ ಅನ್ನಿಸಿದ್ದುಂಟು. ತನಗೆ ದಕ್ಕಿದ್ದೇ ಪರಮಸತ್ಯ ಎನ್ನುವವರ ಮತ್ತು ವಿರೋಧಿಗಳ ನಡುವೆ ನಿರಂತರ ತಿಕ್ಕಾಟ ಸಹಜ. ಹೊಸತಿಗಾಗಿ ಕಾತರಿಸುವವರು ಮತ್ತು ಹಳತಿಗೆ ನೇತುಬೀಳುವವರ ನಡುವೆ ನಡೆಯುವ ನಿತ್ಯ ಹೊಡೆದಾಟ ನೋಡಿ ಪ್ರಕೃತಿ ನಗುತ್ತದೆಯೇನೋ ಅನ್ನಿಸುತ್ತದೆ ನನಗೆ.
ಉ: ಹಳತು - ಹೊಸತು
ಸಕ್ಕತ್.. ಚನ್ನಾಗಿದೆ