ಈಗಿನಂತೆ 7 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅಂದಿನ ಆಂಧ್ರ
addoor's picture
ಅಡ್ಡೂರು ಕೃಷ್ಣ ರಾವ್
31
Oct
2011
ಲೇಖನ

ಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ,...

ಪ್ರತಿಕ್ರಿಯೆಗಳು: 8
ಹಿಟ್ಸ್ : 276
ಆಧ್ಯಾತ್ಮ ಸಾಧಕ ಶ್ರೀ ಮುಕುಂದೂರು ಸ್ವಾಮಿಗಳು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
21
Sep
2011
ಲೇಖನ

(ಇದು ಪುಸ್ತಕ ಪರಿಚಯದ ರೂಪದಲ್ಲಿರುವ ಲೇಖನ.

ಮೂಲ ಪುಸ್ತಕದ ಹೆಸರು : ಯೇಗ್ದಾಗೆಲ್ಲಾ ಐತೆ. ಲೇಖಕರು : ಶ್ರೀ...

ಪ್ರತಿಕ್ರಿಯೆಗಳು: 15
ಹಿಟ್ಸ್ : 231
ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
14
Sep
2006
ಬ್ಲಾಗ್ ಬರಹ
ಕಂಪ್ಯೂಟರ್ ಆಫ್ ಆಗಿರುವಾಗ ಅದು ನಿರ್ಜೀವ ಯಂತ್ರವಷ್ಟೇ . ಇಂಥ ಕಂಪ್ಯೂಟರ್ ನ CPU ಡಬ್ಬಿ , , ಪ್ರಿಂಟರ್ , ಮೋಡೆಮ್ , ಕೀಬೋರ್ಡ್ , ಪರದೆ(screen) ಒಳಗೊಂಡ ಮಾನಿಟರ್ ಇತ್ಯಾದಿ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,799
ಶಹಬ್ಬಾಶ್ ಮುಂಬೈಕಾರ್!
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
13
Jul
2006
ಬ್ಲಾಗ್ ಬರಹ
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು...
ಪ್ರತಿಕ್ರಿಯೆಗಳು: 8
ಹಿಟ್ಸ್ : 3,097
ಮೌನವೆಂಬ ಮಹಾನಿಧಿ
ramaswamy's picture
ಡಿ.ಎಸ್.ರಾಮಸ್ವಾಮಿ
16
Oct
2010
ಪುಟ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,085
ತಾಳಗುಪ್ಪ ರೈಲು ಒಂದು ನೆನಪು:
devaru.rbhat's picture
ದೇವರು ಆರ್ ಭಟ್
19
May
2011
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 1
ಹಿಟ್ಸ್ : 661
ಮತದಾನ .
supreethjburji's picture
26
Jun
2006
ಬ್ಲಾಗ್ ಬರಹ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,321
೨೦೧೧...ಹೀಗಿತ್ತು
abdul's picture
ಅಬ್ದುಲ್ ಲತೀಫ್ ಸಯ್ಯದ್
26
Dec
2011
ಲೇಖನ

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್...

ಪ್ರತಿಕ್ರಿಯೆಗಳು: 6
ಹಿಟ್ಸ್ : 170
ಕನ್ನಡ ಮತ್ತೆ ಸಂಸ್ಕೃತದ ನಡುವಿನ ಸಂಬಂಧವೇನು?
hamsanandi's picture
ಹಂಸಾನಂದಿ
21
Jan
2011
ಬ್ಲಾಗ್ ಬರಹ

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:

"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು...

ಪ್ರತಿಕ್ರಿಯೆಗಳು: 42
ಹಿಟ್ಸ್ : 1,323
ಭಾಷೆ ಮತ್ತು ಸಾಮಾಜಿಕ ವಾಸ್ತವ
ismail's picture
ismail
14
Aug
2006
ಪುಟ

ಭಾಷೆ ಚಲನಶೀಲವಾಗಿದ್ದರಷ್ಟೇ ಉಳಿದುಕೊಳ್ಳುತ್ತದೆ. ಕನ್ನಡ ಉಳಿದು ಬೆಳೆಯಬೇಕಾದರೆ ಅದು ಚಲನಶೀಲವಾಗಿರಲೇ ಬೇಕಾಗುತ್ತದೆ. ಎಲ್ಲ ಜೀವಂತ ಭಾಷೆಗಳೂ ಹೀಗೆ ಸದಾ ಬದಲಾಗುತ್ತಿರುತ್ತವೆ....

ಪ್ರತಿಕ್ರಿಯೆಗಳು: 14
ಹಿಟ್ಸ್ : 3,750

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಹವಾಸ ದೋಷ

ಸಹವಾಸ ದೋಷ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!

ಸಂಸ್ಕೃತ ಮೂಲ:


ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||


-ಹಂಸಾನಂದಿ

ಕೊಸರು: ಸ್ವಾತಿ ಮಳೆ ಬೀಳುವಾಗ, ನೀರಹನಿ ನೇರವಾಗಿ ಕಪ್ಪೆಚಿಪ್ಪಿನಲ್ಲಿ ಬಿದ್ದರೆ, ಅದು ಮಾತ್ರ ಮುತ್ತಾಗುತ್ತದೆ ಅನ್ನುವುದು ಹಿಂದೆ ನಂಬಿದ್ದ ಒಂದು ಕವಿಸಮಯ.

Average: 4.8 (4 votes)
1036 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
P.Ashwini's picture
05
May
2010
10:55

ಉ: ಸಹವಾಸ ದೋಷ

ಹಂಸಾನಂದಿ ಯವರೇ,
ತುಂಬಾ ಚೆನ್ನಾಗಿದೆರೀ
-ಅಶ್ವಿನಿ

thesalimath's picture
05
May
2010
7:31

ಉ: ಸಹವಾಸ ದೋಷ

ಏಳನೆಯ ಕ್ಲಾಸಿನಲ್ಲಿ ಒಂದು "ಏಕ್ ಬೂಂದ್ " ಎಂಬ ಪದ್ಯವಿತ್ತು!
ನೆನಪಾಯಿತು!

shivaram_shastri's picture
05
May
2010
10:26

ಉ: ಸಹವಾಸ ದೋಷ

ಹಂಸಾನಂದಿ ಅವರೇ,
ಎಂದಿನಂತೆ ತಮ್ಮ ಅನುವಾದ ಸುಂದರವಾಗಿದೆ.
ಅಂದ ಹಾಗೆ, ನಾನೊಮ್ಮೆ ಇಂಥಹುದೇ ಅರ್ಥದ ಮಾತೊಂದನ್ನು ಹಿಂದಿಯಲ್ಲಿ ಹೇಳುವಾಗ ಸಹವಾಸ ದೋಷ ಎಂದು ಹಿಂದಿಯಲ್ಲೂ ಬಳಸಿ ಪೇಚಿಗೆ ಸಿಕ್ಕಿದ್ದೆ. ಹಿಂದಿಯಲ್ಲಿ ಸಹವಾಸ ಎಂಬುದಕ್ಕೆ ಬೇರೆಯದೇ ಅರ್ಥವಿದೆ ಎಂಬುದು ನನಗೆ ಗೊತ್ತಿರಲಿಲ್ಲ!

gvmt's picture
06
May
2010
1:21

ಉ: ಸಹವಾಸ ದೋಷ

ಪದ್ಯ ಮತ್ತು ಅನುವಾದಗಳೆರಡೂ ಚೆನ್ನಾಗಿವೆ, ಹಂಸಾನಂದಿಯವರೆ. ಈ ಪದ್ಯದ ಸ್ವಾರಸ್ಯ - ನಾ ಕಂಡ ಹಾಗೆ - ಏನೆಂದರೆ ನೀರ ಹನಿ ಮುತ್ತಾಗುವುದನ್ನು ಅಧಮದಶೆ ಎನ್ನುವುದು; ಅದಲ್ಲದೆ ಕಾದ ಹೆಂಚಿನಮೇಲೆ ಬಿದ್ದು ಹೆಸರಿಲ್ಲದಂತಾಗುವದನ್ನು ಉತ್ತಮದಶೆ ಎನ್ನವುದು. ಇದನ್ನು ಯಾರೋ ಮುಮುಕ್ಷುವು ಕಟ್ಟಿರಬೇಕು.

ಒಂದು ಸಣ್ಣ ವಿಚಾರ - ಕನ್ನಡದ 'ದೆಸೆ'ಯೂ ಸಂಸ್ಕೃತದ 'ದಶಾ'ವೂ ಸಂವಾದಿಗಳಲ್ಲ. ದೆಸೆಯು 'ದಿಶಾ'ದ ತದ್ಭವ.

- ವೆಂ.

rameshbalaganchi's picture
06
May
2010
1:11

ಉ: ಸಹವಾಸ ದೋಷ

<<ಈ ಪದ್ಯದ ಸ್ವಾರಸ್ಯ - ನಾ ಕಂಡ ಹಾಗೆ - ಏನೆಂದರೆ ನೀರ ಹನಿ ಮುತ್ತಾಗುವುದನ್ನು ಅಧಮದಶೆ ಎನ್ನುವುದು; ಅದಲ್ಲದೆ ಕಾದ ಹೆಂಚಿನಮೇಲೆ ಬಿದ್ದು ಹೆಸರಿಲ್ಲದಂತಾಗುವದನ್ನು ಉತ್ತಮದಶೆ ಎನ್ನವುದು. ಇದನ್ನು ಯಾರೋ ಮುಮುಕ್ಷುವು ಕಟ್ಟಿರಬೇಕು>>

ಅದು ಹೇಗೋ, ನನಗೆ ತಿಳಿಯಲಿಲ್ಲ.

ಇಲ್ಲಿ ಪದಗಳ ಅನುಕ್ರಮವನ್ನು ಗಮನಿಸಿ

ನಾಮಾಪಿ ನ ಶ್ರೂಯತೇ- ಹೇಳಹೆಸರಿಲ್ಲದಂತಾಗುವುದು - ಮುಕ್ತಾಕಾರತಯಾ ದೃಶ್ಯತೇ- ಮುತ್ತಿನಂತೆ ಕಾಣುವುದು- ಮೌಕ್ತಿಕಂ ಜಾಯತೇ- ಮುತ್ತೇ ಆಗುವುದು.

ಅಧಮ - ಮಧ್ಯಮ- ಉತ್ತಮಗುಣಾ:

ಪದಗಳ ಅನುಕ್ರಮವನ್ನು ಗಮನಿಸಿದರೆ ನನಗೆ ನೀವು ತಿಳಿಸಿದ ವಿರುದ್ಧಾರ್ಥವೇ ಕಾಣುತ್ತದೆ. ನಿಮ್ಮ ಅನುಮಾನಕ್ಕೆ ಏನು ಆಧಾರವೋ ತಿಳಿಸುವಿರಾ?

gvmt's picture
07
May
2010
1:33

ಉ: ಸಹವಾಸ ದೋಷ

> ಪದಗಳ ಅನುಕ್ರಮವನ್ನು ಗಮನಿಸಿದರೆ ನನಗೆ ನೀವು ತಿಳಿಸಿದ ವಿರುದ್ಧಾರ್ಥವೇ ಕಾಣುತ್ತದೆ. ನಿಮ್ಮ ಅನುಮಾನಕ್ಕೆ ಏನು ಆಧಾರವೋ ತಿಳಿಸುವಿರಾ?

ಸಂಸಾರದಲ್ಲಿ ಹೇಗಿರಬೇಕು? ಅಂಟಿಯೂ ಅಂಟದಂತೆ, 'ಪದ್ಮಪತ್ರಮಿವಾಂಭಸಾ' ಇರಬೇಕು. ಸಂಸಾರದಲ್ಲಿ ಇರದಿದ್ದರೆಯೆ ಚೆನ್ನ. ಇರಲೇ ಬೇಕಾದಲ್ಲಿ ಅಂಟದಂತೆ ಇರೋಣ. ಶಾಶ್ವತವಾಗಿ ಇರುವಂತೆ ಆಗುವುದು ಬೇಡ. ಇದು ಮುಮುಕ್ಷುವಿನ ಚಿಂತನೆ.

ಪದ್ಯದಲ್ಲಿ ಕಾದ ಕಬ್ಬಿಣ, ತಾವರೆ ಎಲೆ, ಚಿಪ್ಪು, ಈ ಕ್ರಮದಲ್ಲಿ ಮೂರನ್ನು ಹೇಳಿ ನಂತರ ಉತ್ತಮ, ಮಧ್ಯಮ, ಅಧಮ ಎಂದಿದೆ. ಅವನ್ನು ಆ ಕ್ರಮದಲ್ಲಿಯೇ ಹೊಂದಿಸುವುದು ಕಾವ್ಯ ಪದ್ಧತಿ. ಅಂತಲೆ ಕಾದ ಕಬ್ಬಿಣ ಉತ್ತಮ ದಶೆಯಾಗುವುದು, ಚಿಪ್ಪು ಅಧಮದಶೆಯಾಗುವುದು.

ವೆಂ.

hamsanandi's picture
06
May
2010
6:12

ಉ: ಸಹವಾಸ ದೋಷ

ವೆಂಕಟೇಶಮೂರ್ತಿ ಅವರೆ,

ತಪ್ಪು ತಿದ್ದಿದ್ದಕ್ಕೆ ಬಹಳ ಧನ್ಯವಾದಗಳು. ತಿದ್ದುವೆ :)

savithru's picture
06
May
2010
11:11

ಉ: ಸಹವಾಸ ದೋಷ

ಕಾದ ಕಾವಲಿಯಲಿ ಹೇಳ ಹೆಸರಿಲ್ಲದಂತಳಿಪುದು
ಕಮಲದೆಲೆಯಲದುವೆ ಸ್ವಯಂ ರಾಜಿಪುದು
ಚಿಪ್ಪೋಳಗಿಳಿದ ಸ್ವಾತಿಹನಿ ಮುತ್ತಪ್ಪುದು
ಮೇಲು ಕೀಳೆಮ್ಬುತನಗಳನು ಗೆಳೆತನವೆ ತರುವುದು

savithru's picture
06
May
2010
4:06

ಉ: ಸಹವಾಸ ದೋಷ

ಕಾದ ಕಾವಲಿಯಲಿ ಹೇಳ ಹೆಸರಿಲ್ಲದಂತಳಿಪುದು
ಕಮಲದೆಲೆಯಲದುವೆ ಸ್ವಯಂ ರಾಜಿಪುದು
ಚಿಪ್ಪೋಳಗಿಳಿದ ಸ್ವಾತಿಹನಿ ಮುತ್ತಪ್ಪುದು

ಅತಿ ಮಿತಿಗಳೆಂಬ ಗತಿಗಳನು ಗೆಳೆತನವೆ ತರುವುದು

modmani's picture
06
May
2010
3:29

ಉ: ಸಹವಾಸ ದೋಷ

ಕಾದ ಕಬ್ಬಿಣದ ಮೇಲೆ
ಹೆಸರಿಲ್ಲದೆ ಮರೆಯಾಗುವ ಲೀಲೆ.
ಬಿದ್ದರದು ಕಮಲೆದೆಲೆ ಮೇಲೆ
ಹೊಳೆಯುವುದಲ್ಲಿ ಮುತ್ತಿನ ಮಾಲೆ.
ಸ್ವಾತಿ ಮಳೆಯ ನೀರಹನಿಯು
ತಾನೇ ಮುತ್ತಾಗುವುದು ಕಪ್ಪೆಚಿಪ್ಪಿನಲೆ
ಅಧಮ,ಮಧ್ಯಮನೋ ಮೇಣ್
ಉತ್ತಮನೋ , ಸಖರೊಡನಾಟವದೇ
ನಮ್ಮ ಸ್ಥಿತಿಗತಿಗೆ ಕಾರಣವು ತಾನೆ.

(ಸುಮ್ಮನೇ ಪ್ರಯತ್ನಿಸಿದ್ದು.. ತಪ್ಪುಗಳಿದ್ದರೆ ತೋರಿಸಿಕೊಡಿ.. ತಿದ್ದಿಕೊಳ್ಳಲು ಪ್ರಯತ್ನಿಸುವೆ.)

hamsanandi's picture
06
May
2010
9:12

ಉ: ಸಹವಾಸ ದೋಷ

ಮೆಚ್ಚುಗೆ ತೋರಿ ಒಳ್ಳೆಯ ಮಾತಾಡಿದವರಿಗೆಲ್ಲ ಧನ್ಯವಾದಗಳು.

ಸವಿತೃ ಮತ್ತು ಮೊದ್ಮಣಿ ಅವರೆ,

ನಿಮ್ಮಿಬ್ಬರ ಅನುವಾದಗಳೂ ಬಹಳ ಚೆನ್ನಾಗಿವೆ.

-ಹಂಸಾನಂದಿ

benaka's picture
08
May
2010
1:13

ಉ: ಸಹವಾಸ ದೋಷ

ಪ್ರಿಯ ಹಂಸಾನಂದಿ,

ಅನುವಾದ ಚೆನ್ನಾಗಿದೆ. ನಾನು ಕೇಳಿದ ಇನ್ನೊಂದು ಪಾಠ ಹೀಗಿದೆ:
...
...
...
ಪ್ರಾಯೇಣಾಧಮಮಧ್ಯಮೋತ್ತಮಗುಣಾಸ್ಸಂಸರ್ಗತೋ ಜಾಯತೇ||
- - - ,೦ ೦ - ,೦ - ೦ ,೦ ೦ - ,- - ೦ ,- - ೦, -

ಛಂದಸ್ಸು - ಮಾತ್ರಾಗಣಾದಿಗಳಲ್ಲಿ ಬದಲಿಲ್ಲವಾದರೂ, "ವೆಂ" ಹಾಗೂ ಬಲಗಂಚಿಯವರ ಅನಿಸಿಕೆಗೆ ಸಂಬಂಧಿಸಿದೆ.
ಇಲ್ಲಿ ಅಧಮ-ಮಧ್ಯಮ-ಉತ್ತಮ ಗುಣ ಎಂದಿರುವುದರಿಂದ ವಿರಕ್ತಿಪರವಾಗಿರದೆ, "ಮುತ್ತು" ಉತ್ತಮ ಎನ್ನುತ್ತಾ ಐಹಿಕಗುಣಪರ ಎನ್ನುವಂತಿದೆ.
ಬಹುಶಃ ಇದನ್ನೇ ರಮೇಶ್ ಬಲಗಂಚಿಯವರು ಹೇಳಿದ್ದು. ನೀವು ಅನುವಾದಿಸಿರುವ ಪಾಠ "ವೆಂ" ಅವರ ವಿರಕ್ತಿಪರ ವಾದಕ್ಕೆ ಸರಿಯಾಗಿದೆ.

ನಿಮ್ಮವ
ಬೆನಕ

hamsanandi's picture
13
May
2010
12:22

ಉ: ಸಹವಾಸ ದೋಷ

ಬೆನಕರೆ - ನಿಮ್ಮ ಹೆಚ್ಚುವರಿ ಟಿಪ್ಪಣಿಯಿಂದ ಬಹಳ ಉಪಕಾರವಾಯಿತು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ