ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಶುಕ್ರವಾರ, ಹದಿಮೂರನೇ ತೇದಿ...

June 13, 2008 - 11:02pm — hamsanandi

ಇವತ್ತು ಬೆಳಗ್ಗೆ ಕೆಲಸಕ್ಕೆ ಬರ್ತಾ ರೇಡಿಯೋ ಕೇಳೋ ತನಕ ನನಗೆ ಇದು ನೆನಪಾಗಿರಲಿಲ್ಲ. ಇವತ್ತು ಹದಿಮೂರನೇ ತಾರೀಕು, ಶುಕ್ರವಾರ! ಪಶ್ಚಿಮಾರ್ಧ ಗೋಳದಲ್ಲಿ ಶುಕ್ರವಾರ ಒಳ್ಳೆಯದಿನವಲ್ಲವೆಂದೂ (ಯೇಸುವನ್ನು ಶಿಲುಬೆಗೇರಿಸಿದ್ದು ಶುಕ್ರವಾರವೇ) ಮತ್ತು ಹದಿಮೂರು ಅನ್ನೋದು ಒಳ್ಳೇ ಸಂಖ್ಯೆ ಅಲ್ಲ ( ಯಾಕಂದ್ರೆ, ಯೇಸು ಕೊನೆಯ ಸಲ ಊಟ ಮಾಡ್ದಾಗ ಅವನ ಜೊತೆ ಹನ್ನೆರಡು ಜನ ಶಿಷ್ಯರಿದ್ದರು - ಅಂದ್ರೆ, ಊಟಕ್ಕೆ ಕೂತವರು ಹದಿಮೂರು ಮಂದಿ) ಅನ್ನೋ ನಂಬಿಕೆ ಇದೆ. ಇನ್ನು ಎರಡೂ ಒಟ್ಟಿಗೆ ಸೇರಿದ್ರೆ ಕೇಳ್ಬೇಕಾ? ಡಬಲ್ ಟ್ರಬಲ್ ಅಲ್ವೇ?

ಇವತ್ತು ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಇರುವ ಎ಼ಕ಼್ಪ್ಲೊರೆಟೋರಿಯಮ್ ನಲ್ಲಿ ಇದರ ಮೇಲೆ ಒಂದು ಹೊಸ ಎಕ್ಸಿಬಿಟ್ ಶುರುವಾಗ್ತಿದೆಯಂತೆ. ನೋಡಲು ಹೋದವರು ಅಲ್ಲಿ ಏಣಿ ಅಡಿಯಲ್ಲಿ ನಡೀಬೇಕಾಗ್ಬಹುದಂತೆ, ಕನ್ನಡಿ ಒಡೀಬಹುದಂತೆ - ಒಟ್ಟ್ಟಿನಲ್ಲ್ಲಿ ಕೆಟ್ಟ ಅದೃಷ್ಟ ತರತ್ತೆ ಅಂತ ನಂಬಿಕೆ ಇರೋ ಒಟ್ಟು ಹದಿಮೂರು (!)ಕೆಲಸಗಳನ್ನ ಅಲ್ಲಿ ಮಾಡ್ಬೋದಂತೆ. ಈ ನಂಬಿಕೆಗಳಿಗೆ ಸರಿಯಾದ ಕಾರಣಗಳು ಇಲ್ಲ ಅನ್ನೋದನ್ನ ಮನದಟ್ಟು ಮಾಡೋಕ್ಕೇ ಇದನ್ನ ಮಾಡಿದಾರಂತೆ. ಇನ್ನು ಅದರ ಶುಭಾರಂಭ Smiling ಮಾಡೋದಕ್ಕೆ, ಹದಿಮೂರನೇ ತಾರೀಖು, ಶುಕ್ರವಾರವನ್ನ ಆಯ್ಕೆ ಮಾಡ್ಕೊಂಡಿರೋದು ತಕ್ದಾಗೇ ಇದೆ ಅನ್ನಿಸ್ತು ನಂಗೆ.

ಸರಿಯಾಗಿ ಗಟ್ಟಿ ಕಾರಣಗಳನ್ನು ಹೇಳಲಾಗದ ಇಂತಹ ನಂಬಿಕೆ ಗಳನ್ನ ಕುರುಡು ನಂಬಿಕೆ ಅನ್ನೋದೇ ರೂಢಿ. ಈ ನಂಬಿಕೆಗಳಲ್ಲಿ ಮನಸ್ಸಿನ ವ್ಯಾಪಾರವೇ ಹೆಚ್ಚಿಗೆ ನಡೆಯತ್ತೆ. ಅದ್ರಿಂದ್ಲೇ ಹಲವು ಆಟಗಾರರು ಲಕಿ ಟೋಪಿ, ಸಂಗೀತಗಾರ್ತಿಯರ ಲಕಿ ಒಡವೆ ಅಂತೆಲ್ಲ ಇಟ್ಕೊಂಡಿರೋರು ಅಂತೆಲ್ಲ ವಿಶ್ಲೇಷಣೆ ಮಾಡ್ತಿದ್ರು ರೇಡಿಯೋದಲ್ಲಿ. ಅಂದ್ರೇನರ್ಥ? ಇವತ್ತು ಒಳ್ಳೇದಾಗತ್ತೆ ಅಂತ ನಾವು ಅಂದ್ಕೊಂಡ್ರೆ, ಅದಕ್ಕೆ ತಕ್ಕ ಪ್ರಯತ್ನ ಮಾಡ್ತೀವೆ. ಎಲ್ಲಾ ಚೆನ್ನಾಗೇ ನಡೆಯತ್ತೆ. ಇವತ್ತು ತೊಂದ್ರೆ ಆಗತ್ತೆ ಅಂತ ಅಂದ್ಕೋತಿದ್ರೆ, ಹೆಜ್ಜೆ ಹೆಜ್ಜೆಗೂ ಎಡವ್ತೀವೆ. ಮನಸ್ಸು ಎಲ್ಲೋ ಇದ್ರೆ, ಮಾಡ್ಬೇಕಾದ್ದರ ಮೇಲೆ ಎಲ್ಲಿರತ್ತೆ ಧ್ಯಾನ? ಅಂತಹ ಸಮಯದಲ್ಲಿ ಒಳ್ಳೇ ಫಲಿತಾಂಶ ಬರೋದು ಹೇಗೆ ಸಾಧ್ಯ? ಅಲ್ವಾ?

ಇದನ್ನೇ ಪುರಂದರದಾಸರು ತೀರಾ ನೇರವಾಗಿ, ಸುಲಭವಾಗಿ ಒಂದು ಉಗಾಭೋಗದಲ್ಲಿ ಹೇಳಿದಾರೆ:

ಇಂದಿನ ದಿನವೇ ಶುಭದಿನವು

ಇಂದಿನ ವಾರ ಶುಭವಾರ

ಇಂದಿನ ತಾರೆ ಶುಭತಾರೆ

ಇಂದಿನ ಯೋಗ ಶುಭಯೋಗ

ಇಂದಿನ ಕರಣ ಶುಭ ಕರಣ

ಇಂದು ಪುರಂದರ ವಿಟ್ಠಲ ರಾಯನ

ಸಂದರ್ಶನ ಫಲವೆಮಗಾಯಿತು!

 

ಅಂದ್ರೆ, ಗೊತ್ತಾಯ್ತಲ್ಲ? ನಮ್ಮ ಕೆಲಸ, ನಮ್ಮ ಪ್ರಯತ್ನ ಮಹತ್ವದ್ದು ಅಂತ?

-ಹಂಸಾನಂದಿ

 

 

 

  • ನಂಬಿಕೆಗಳು
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 186 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಏಕೆ ಹೀಗೆ ಮಾಡಿದೆ ನೀನು?
  • ಮೊದಲ ಅನುಭವ
  • ಬಾ ತಬ್ಬಿಕೋ :-)
  • ಓ ನನ್ನ ಜೀವವೇ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 100 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator