ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಾತಿನಲ್ಲಿ ಹುರುಳು

ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.

 

ಕಾಳಿದಾಸನ  ರಘುವಂಶದ ಮಂಗಳ ಶ್ಲೋಕ ಹೀಗಿದೆ:

 

वागर्थाविव सम्पृक्तौ वागर्थ प्रतिपत्तयॆ |

जगतः पितरौ वन्दे पार्वती परमेश्वरौ ॥

 

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

 

ಕನ್ನಡಕ್ಕೆ ನನ್ನ ಪ್ರಯತ್ನ:

 
ನಾ ತಲೆವಾಗುವೆ ಶಿವಶಿವೆಗೆ
ಈ ಜಗದಲೆಲ್ಲರ ಹೆತ್ತವರ 
ಬಿಡದೊಡಗೂಡಿಯೆ ಇರುವರಿಗೆ
ಮಾತಲಿ ಹುರುಳು ಬೆಸೆದಂತೆ
 
ಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ.
 
ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದು
ಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ ;)

 

-ಹಂಸಾನಂದಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಾತಿನಲ್ಲಿ ಹುರುಳು

mahesha's picture

ಬಿಡದೊಡಗೂಡಿಯ ಇದು ಬಿಡದೊಡಗೂಡಿ ಅಂತವೇ?

ಚಂನಾಗಿದೆ.

’ಮಾತಲಿ ಹುರುಳು’ ಇದನ್ನು”ಮಾತೊಳು ಹುರುಳು’ ಅಂದ್ರೆ ಚಂನಾಗಿರ್ತದೆ.

वागर्थाविव सम्पृक्तौ वागर्थ प्रतिपत्तयॆ |
जगतः पितरौ वन्दे पार्वती परमेश्वरौ ॥

ಇದನ್ನು ಹೀಗೆ

वागर्थाविव सम्पृक्तौ वागर्थप्रतिपत्तयॆ |
जगतः पितरौ वन्दे पार्वतीपरमेश्वरौ ॥

ಬೆರೆಬೇಕಲ್ವಾ?

ಇಲ್ಲಿ ಗಮನಿಸಿ”ಪಾರ್ವತೀಪರಮೇಶ್ವರೌ’ ಅನ್ನು
ಇದಂನು "ಪಾವರ್ತೀಪ ರಮೇಶ್ವರ" ಅಂತವೂ ಬಿಡಿಸಬವುದು.. ಆಗ

ತಲೆವಾಗುವೆನಾ ಹರಿಹರರಿಬ್ಬರಿಗೆ
ಜಗದಪ್ಪರಿವರು ಜಗವೆತ್ತ ತಂದೆಯರು
ಒಬ್ಬರೊಳೊಬ್ಬರೊಂದಿಕೆಯಲ್ಲಿಹರು
ಮಾತೊಳು ಹುದಿಗಿದ ಹುರುಳಿನಂತೆ

[ ಒಬ್ಬರೊಳೊಬ್ಬರು ಒಂದಿಕೆಯಲ್ಲಿ ಇಹರು. ]
ಒಂದಿಕೆ = ಒಂದು ಎಂನುವ ತನ; ಒಂತನ!

ಉ: ಮಾತಿನಲ್ಲಿ ಹುರುಳು

mahesha's picture

ಹುದಿಗಿದ ಇದು ಹುದುಗಿದ ಅಂತ ಇರಬೇಕಿತ್ತು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ