ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಮಾತಿನಲ್ಲಿ ಹುರುಳು
ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.
ಕಾಳಿದಾಸನ ರಘುವಂಶದ ಮಂಗಳ ಶ್ಲೋಕ ಹೀಗಿದೆ:
वागर्थाविव सम्पृक्तौ वागर्थ प्रतिपत्तयॆ |
जगतः पितरौ वन्दे पार्वती परमेश्वरौ ॥
ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||
ಕನ್ನಡಕ್ಕೆ ನನ್ನ ಪ್ರಯತ್ನ:
ನಾ ತಲೆವಾಗುವೆ ಶಿವಶಿವೆಗೆಈ ಜಗದಲೆಲ್ಲರ ಹೆತ್ತವರಬಿಡದೊಡಗೂಡಿಯೆ ಇರುವರಿಗೆಮಾತಲಿ ಹುರುಳು ಬೆಸೆದಂತೆಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ.ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದುಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 613 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಾತಿನಲ್ಲಿ ಹುರುಳು
ಬಿಡದೊಡಗೂಡಿಯ ಇದು ಬಿಡದೊಡಗೂಡಿ ಅಂತವೇ?
ಚಂನಾಗಿದೆ.
’ಮಾತಲಿ ಹುರುಳು’ ಇದನ್ನು”ಮಾತೊಳು ಹುರುಳು’ ಅಂದ್ರೆ ಚಂನಾಗಿರ್ತದೆ.
वागर्थाविव सम्पृक्तौ वागर्थ प्रतिपत्तयॆ |
जगतः पितरौ वन्दे पार्वती परमेश्वरौ ॥
ಇದನ್ನು ಹೀಗೆ
वागर्थाविव सम्पृक्तौ वागर्थप्रतिपत्तयॆ |
जगतः पितरौ वन्दे पार्वतीपरमेश्वरौ ॥
ಬೆರೆಬೇಕಲ್ವಾ?
ಇಲ್ಲಿ ಗಮನಿಸಿ”ಪಾರ್ವತೀಪರಮೇಶ್ವರೌ’ ಅನ್ನು
ಇದಂನು "ಪಾವರ್ತೀಪ ರಮೇಶ್ವರ" ಅಂತವೂ ಬಿಡಿಸಬವುದು.. ಆಗ
ತಲೆವಾಗುವೆನಾ ಹರಿಹರರಿಬ್ಬರಿಗೆ
ಜಗದಪ್ಪರಿವರು ಜಗವೆತ್ತ ತಂದೆಯರು
ಒಬ್ಬರೊಳೊಬ್ಬರೊಂದಿಕೆಯಲ್ಲಿಹರು
ಮಾತೊಳು ಹುದಿಗಿದ ಹುರುಳಿನಂತೆ
[ ಒಬ್ಬರೊಳೊಬ್ಬರು ಒಂದಿಕೆಯಲ್ಲಿ ಇಹರು. ]
ಒಂದಿಕೆ = ಒಂದು ಎಂನುವ ತನ; ಒಂತನ!
ಉ: ಮಾತಿನಲ್ಲಿ ಹುರುಳು
ಹುದಿಗಿದ ಇದು ಹುದುಗಿದ ಅಂತ ಇರಬೇಕಿತ್ತು.