ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ನವರಾತ್ರಿಯ ದಿನಗಳು

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ನವರಾತ್ರಿಯ ಹತ್ತನೇ ದಿನ

October 21, 2007 - 3:05am — hamsanandi

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.

ನೆನ್ನೆ ವಾಸುದೇವಾಚಾರ್ಯರ ಬಗ್ಗೆ ಹೇಳುವಾಗ, ಅವರ ಪ್ರಸಿದ್ಧ ಶಿಷ್ಯರೊಬ್ಬರನ್ನು ಹೆಸರಿಸಿದ್ದೆ. ಹೌದು, ಇವತ್ತು ಆ ಶಿಷ್ಯರ ರಚನೆಯನ್ನೇ ನಾನು ಕೇಳಿಸುವುದು. ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ ಆಗಿದ್ದರೆಂಬುದು ಹೆಚ್ಚಾಗಿ ಜನಕ್ಕೆ ತಿಳಿದಿಲ್ಲದಿರುವುದು ದೌರ್ಭಾಗ್ಯವೇ ಸರಿ.

ಜಯಚಾಮರಾಜೇಂದ್ರ ಒಡೆಯರು ಮೊದಲು ಕಲಿತದ್ದು ಪಾಶ್ಚಾತ್ಯ ಸಂಗೀತ. ಲಂಡನ್ನಿನ್ಸ್ ಟ್ರಿನಿಟಿ ಕಾಲೇಜಿನಲ್ಲಿ ಪಿಯಾನೋ ವಿದ್ಯಾರ್ಥಿಗಳಿಗೆ ದೊರೆಯಬಹುದದ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ಅವರು ಹೊರಬಂದರು. ಪಟ್ಟವೇರಿದ ಮೇಲೆ, ಸುಮಾರು ಆರು ವರ್ಷ ಕಾಲ ವಾಸುದೇವಾಚಾರ್ಯರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು. ೧೯೪೫ ರಿಂದ ೧೯೪೭ರ ವರೆಗೆ ಸುಮಾರು ಎರಡುವರ್ಷಗಳ ಅವಧಿಯಲ್ಲಿ ತೊಂಬತ್ತನಾಕು ಕೃತಿಗಳನ್ನು ರಚಿಸಿದ್ದಾರೆ ಒಡೆಯರು. ತಮ್ಮ ರಚನೆಗಳನ್ನು ಇವರು ಮೊದಲು ಪಿಯಾನೋದಲ್ಲೇ ನುಡಿಸಿ, ಅದನ್ನು ತಿದ್ದಿ ತೀಡಿ, ನಂತರ ತಮ್ಮ ಗುರುಗಳಿಗೂ, ಹಾಗೂ ಅರಮನೆಯ ಇತರ ವಿದ್ವಾಂಸರಿಗೂ ಕೇಳಿಸಿ, ಅವರ ಅಭಿಪ್ರಾಯವನ್ನು ಕೇಳಿ, ನಂತರ ತಮ್ಮ ಕೃತಿಗಳಿಗೆ ಪೂರ್ಣಸ್ವರೂಪವನ್ನು ಕೊಡುತ್ತಿದ್ದ ವಿಷಯವನ್ನು ಇವರನ್ನು ಹತ್ತಿರದಿಂದ ನೋಡಿದ ಸಂಗೀತವಿದ್ವಾಂಸರು ಹೇಳಿದ್ದಾರೆ.

ಇವರ ಕೃತಿಸಮೂಹದಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಒಂದು ರಾಗದಲ್ಲಿ ಕೇವಲ ಒಂದೇ ರಚನೆ ಮಾಡಿದ್ದಾರೆ. ಅಂದರೆ ೯೪ ರಚನೆಗಳಿಗೂ ಬೇರೆ ಬೇರೆ ರಾಗಗಳನ್ನೇ ಬಳಸಿದ್ದಾರೆ. ಇನ್ಯಾವ ವಾಗ್ಗೇಯಕಾರರೂ ಈ ಮೊದಲು ಹಾಗೆ ರಚಿಸಿರುವುದು ದಾಖಲಾಗಿಲ್ಲ.

ಒಡೆಯರ ರಚನೆಗಳನ್ನಾಧರಿಸಿದ ಆಕಾಶವಾಣಿ ಕಾರ್ಯಕ್ರಮದಿಂದ ಸ್ಬಲ್ಪ ವಿವರಣೆ ಇಲ್ಲಿ ಕೇಳಿ:

ಒಡೆಯರ ಬಗ್ಗೆ ವಿವರಣೆ - ಆಕಾಶವಾಣಿ ಕಾರ್ಯಕ್ರಮ
ಒಡೆಯರಾಳಿದ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ. ಒಡೆಯರು ಆಳಿದ್ದು ಕನ್ನಡ ನಾಡನ್ನು. ಇವೆರಡಕ್ಕೂ ಹೊಂದುವಂತೆ, ಇಂದು ನಾನು ಆಯ್ದಿರುವ ರಚನೆ ಜಯಚಾಮರಾಜ ಒಡೆಯರು ರಚಿಸಿರುವ ಕನ್ನಡ ರಾಗದ ಕೃತಿ - ಶ್ರೀ ಚಾಮುಂಡೇಶ್ವರಿ ದೇವಿ ಎಂಬುದು. ಹೌದು, ಕನ್ನಡ ಎಂಬುದೊಂದು ಮಾತ್ರವೇ, ಒಂದು ನಾಡು, ಒಂದು ನುಡಿ ಮತ್ತು ಒಂದು ರಾಗ ಈ ಎಲ್ಲಕ್ಕೂ ಸರಿಹೋಗಬಲ್ಲ ಹೆಸರು.
ಇದನ್ನು ನೀವು ಈ ಕೆಳಗಿನ ಕೊಂಡಿಗಳಲ್ಲಿ ಕೇಳಬಹುದು:
ಡಾ.ಆರ್.ಎನ್. ಶ್ರೀಲತಾ ಅವರ ಕಂಠದಲ್ಲಿ
ರುದ್ರಪಟ್ಟಣ ಸಹೋದರರು: ತಾಗರಾಜನ್ ಮತ್ತು ಡಾ.ತಾರಾನಾಥ್ ಅವರ ಕಂಠದಲ್ಲಿ
ಒಡೆಯರು ಶ್ರೀವಿದ್ಯಾ ಉಪಾಸಕರಾಗಿದ್ದು, ತಮ್ಮ ರಚನೆಗಳಲ್ಲಿ ಶ್ರೀವಿದ್ಯಾ ಎಂಬ ಅಂಕಿತವನ್ನು ಬಳಸಿದ್ದಾರೆ. ಅವರಿಗೆ ಶ್ರೀವಿದ್ಯೆಯ ದೀಕ್ಷೆ ದೊರೆತಾಗ ಅವರಿಗೆ ಚಿತ್ಪ್ರಭಾನಂದ ಎಂಬ ದೀಕ್ಷಾನಾಮವನ್ನು ಇಡಲಾಗಿತ್ತು. ಕೆಲವು ರಚನೆಗಳಲ್ಲಿ, ಚಿತ್ಪ್ರಭಾನಂದ ಎಂಬ ಮುದ್ರೆಯೂ ಕಂಡುಬರುತ್ತದೆ. ಜಯಚಾಮರಾಜ ಒಡೆಯರ ಎಲ್ಲ ರಚನೆಗಳೂ ಸಂಸ್ಕೃತ ಭಾಷೆಯಲ್ಲಿವೆ. ಮುತ್ತುಸ್ವಾಮಿ ದೀಕ್ಷಿತರ ಶೈಲಿಯನ್ನು ಹೋಲುವ, ಇವರ ಶೈಲಿ, ಅಷ್ಟು ಸರಳವಲ್ಲದಿದ್ದರೂ, ರಸಭರಿತವಾದದ್ದು.
ಮೈಸೂರಿನಲ್ಲಿ, ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ, ಒಡೆಯರು ರಚಿಸಿದ ಚಾಮುಂಡೇಶ್ವರಿಯ ಮೇಲಿನ ಕೃತಿ, ಈ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.
ಈ ಬರಹಗಳಿಗೆ ಪ್ರತ್ಯಕ್ಷವಾಗಿ, ಮತ್ತು ಪರೋಕ್ಷವಾಗಿ  ಕಾರಣರಾದ ರಸಿಕ ಫೋರಮ್ (www.rasikas.org) ಗೆಳೆಯರನ್ನು ನಾನು ಇಲ್ಲಿ ನೆನೆಯುತ್ತೇನೆ. ಹಾಗೇ ಇನ್ನು ಕೆಲವೆಡೆ ನಾನು ಉಪಯೋಗಿಸಿರುವ ಕೊಂಡಿಗಳಿರುವ ಸಂಗೀತಪ್ರಿಯ.ಆರ್ಗ್  (www.sangeethapriya.org) ಗೂ,  ಮ್ಯೂಸಿಕ್ ಇಂಡಿಯಾ ಆನ್‍ಲೈನ್ (www.musicindiaonline.com) ತಾಣಕ್ಕೂ ನನ್ನ ಧನ್ಯವಾದಗಳು ಸಲ್ಲುತ್ತವೆ.
ದೇವೀ ನವರಾತ್ರಿಯ ಸಮಯದಲ್ಲಿ, ಈ ಲೇಖನಗಳನ್ನು ಬರೆಯಲು ಸಾಧ್ಯವಾದದ್ದು ನನ್ನ ಭಾಗ್ಯವೇ ಎಂದು ನನ್ನ ಭಾವನೆ. ಶ್ರೀ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಕೇಳಿಕೊಳ್ಳುತ್ತಾ ಈ "ನವರಾತ್ರಿಯ ದಿನಗಳು" ಮಾಲಿಕೆಯನ್ನು ಮುಗಿಸುತ್ತಿದ್ದೇನೆ.
ಎಲ್ಲರಿಗೂ ನಮಸ್ಕಾರ.
-ಹಂಸಾನಂದಿ
‹ ನವರಾತ್ರಿಯ ಏಳನೇ ದಿನಮೇಲಿನ ಪುಟಕ್ಕೆ
  • ಒಡೆಯರು
  • ಕನ್ನಡ
  • ಜ್ಞಾನವಾಹಿನಿ
  • ದಸರ
  • ಮೈಸೂರು
  • ಸಂಗೀತ
~.~
  • hamsanandi ರವರ ಬ್ಲಾಗ್
  • Printer-friendly version
  • Login or register to post comments
  • 674 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 22, 2007 - 11:14am — poornimas

ಉ: ನವರಾತ್ರಿಯ ಹತ್ತನೇ ದಿನ

poornimas's picture

ನಮಸ್ಕಾರ,

ನಿಮ್ಮ ಮಾಲಿಕೆ ಬಹಳ ಸೊಗಸಾಗಿತ್ತು. ನವರಾತ್ರಿ ಹಬ್ಬಕ್ಕೆ ಒಳ್ಳೆಯ ಕೊಡುಗೆ.

ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 22, 2007 - 11:53pm — hamsanandi

ಉ: ನವರಾತ್ರಿಯ ಹತ್ತನೇ ದಿನ

hamsanandi's picture

ನಿಮಗೆ ಸರಣಿ ಹಿಡಿಸಿದ್ದು ಬಹಳ ಸಂತೋಷ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 22, 2007 - 12:46pm — Sunil Jayaprakash

ಉ: ನವರಾತ್ರಿಯ ಹತ್ತನೇ ದಿನ

Sunil Jayaprakash's picture

ಕನ್ನಡ ರಾಗದ ಕೃತಿ - ಶ್ರೀ ಚಾಮುಂಡೇಶ್ವರಿ ದೇವಿ ಹಾಡನ್ನು ಇಲ್ಲಿಂದ ಆಸಕ್ತರು ಇಳಿಸಿಕೊಳ್ಳಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ಒಂಬತ್ತನೆಯ ದಿನ
  • *ಸ್ಪೂರ್ತಿಯ ಲೈಟು*
  • ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳು - ಶತಾವಧಾನಿ ಗಣೇಶ್ ಅವರಿಂದ
  • ಕವನ *ಪ್ರಿಯಗೆಳತಿಗೆ*
  • ಚಲುವೆ ಮಲ್ಲಿಗೆ ಹೂವೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator