ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಕೋಗಿಲೆ ಹಾಡಿದೆ ಕೇಳಿದೆಯಾ?

August 23, 2007 - 3:03am — hamsanandi

ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ್ಪತ್ತೈದು ವರ್ಷ ಇವರು ಕನ್ನಡ ಚಿತ್ರರಂಗದಲ್ಲಿ ಮೊದಲ ಸ್ಥಾನದಲ್ಲಿ ಮಿಂಚಿದ್ದನ್ನು ಯಾವ ಚಿತ್ರ ಪ್ರೇಮಿಗಳೂ ಮರೆಯಲಾರರು.

ಯಾವುದೇ ಹಾಡುಗಾರನಿಗೆ, ಇನ್ನೊಬ್ಬ ಹಾಡುಗಾರ/ಹಾಡುಗಾರ್ತಿಯ ಮೆಚ್ಚುಗೆಯಿಂದ ಸಿಗುವಷ್ಟು ಸಂತೋಷ ಇನ್ನು ಯಾವುದರಿಂದಲೂ ಸಿಗಲಾರದು ಎನ್ನುವುದು ನನ್ನ ಅನಿಸಿಕೆ. ಕೆಲವು ದಿನಗಳ ಹಿಂದೆ, ಪಿ.ಬಿ.ಶ್ರೀನಿವಾಸ್ ಅವರು ನಮ್ಮಲ್ಲಿ ಕಾರ್ಯಕ್ರಮವೊಂದನ್ನು ಕೊಟ್ಟಾಗ, ಅವರು ನುಡಿದ ಮಾತುಗಳನ್ನು ನೆನಸಿಕೊಂಡರೆ, ಎಸ್.ಜಾನಕಿ ಅವರು ಬಹಳ ಸಂತೋಷ ಪಡಲೇ ಬೇಕು. ತಮ್ಮ ಜೊತೆಯಲ್ಲಿ ಹಾಡಿದ ಎಲ್ಲ ಗಾಯಕಿಯರೂ ಉತ್ಕೃಷ್ಟ ಮಟ್ಟದವರು, ಅವರಲ್ಲಿ ಒಬ್ಬರಿಗೊಬ್ಬರನ್ನು ಹೋಲಿಸಲು ಸಾಧ್ಯವಾಗದು ಎಂದು ಅವರು ಹೇಳಿದರೂ, ಜಾನಕಿಯವರ ಜೊತೆ ಅವರು ಹಾಡಿದ ಹಾಡುಗಳನ್ನು, ಅವರ ಜೊತೆ ನಡೆಸಿದ ರಿಹರ್ಸಲ್ ಗಳನ್ನೂ, ಹೇಗೆ ಅವರು ಒಂದು ಹಾಡು ಪೂರ್ತಿ ಮನಸ್ಸಿಗೆ ಬೇಕಾಗುವಂತೆ ಬರುವವರೆಗೂ ಬಿಡದೆ ಹಾಡಿ, ನಂತರವೇ ರೆಕಾರ್ಡ್ ಮಾಡಲು ಮುಂದಾಗುತ್ತಿದ್ದುದ್ದನ್ನೂ ಪಿಬಿ ಅವರು ಹೆಚ್ಚಾಗಿ ನೆನೆದರು.

ಜಾನಕಿ ಅವರು ಆಂಧ್ರದಿಂದ ಬಂದರೂ, ನೆಲೆಸಿದ್ದು ಮದರಾಸಿನಲ್ಳಾದರೂ, ಅವರು ತಮಿಳು-ತೆಲುಗುಗಳಿಗಿಂತ ಕನ್ನಡದಲ್ಲೇ ಹೆಚ್ಚಿನ ಹಾಡುಗಳನ್ನು ಹಾಡಿದ್ದು. ಈ ಸಂದರ್ಭದಲ್ಲಿ ಅವರ ಕೆಲವುಹಾಡುಗಳನ್ನು ಮೆಲುಕು ಹಾಕಿದರೆ ತಪ್ಪಾಗಲಾರದು. ನನಗೆ ಸ್ವಲ್ಪ ಶಾಸ್ತ್ರೀಯ ಗೀತೆಗಳ ಮೇಲೆ ಪಕ್ಷಪಾತ ಇರುವುದರಿಂದ, ಅಂತಹ ಹಾಡುಗಳೇ ಈ ಪಟ್ಟಿಯಲ್ಲಿರುವುದರಲ್ಲಿ, ಆಶ್ಚರ್ಯವೇನಿಲ್ಲ!

ಅರವತ್ತರ ದಶಕದ ಮರೆಯದ ಹಾಡುಗಳು:
ನನ್ನ ಮಟ್ಟಿಗೆ ಹೇಳುವುದಾದರೆ, ಜಾನಕಿಯವರು ಅರವತ್ತರ ದಶಕದಲ್ಲಿ ತಮ್ಮ ಅತ್ಯುತ್ತಮ ಹಾಡುಗಳನ್ನು ಹಾಡಿದರು. ಆಗ ಪಿ.ಸುಶೀಲ, ಎಲ್.ಆರ್.ಈಶ್ವರಿ, ಪಿ.ಲೀಲಾ ಮೊದಲಾದ ಗಾಯಕಿಯರು ಹಾಡುತ್ತಿದ್ದ ಕಾಲ. ಅವರ ನಡುವೆಯೇ ಜಾನಕಿಯವರು ತಮ್ಮ ಛಾಪನ್ನು ಮೂಡಿಸಿದ್ದು ಅವರ ಪ್ರತಿಭೆಗೆ ಸಾಕ್ಷಿ. ಈ ಸಮಯದಲ್ಲಿ ಅವರು ಹಾಡಿದ ಹಾಡುಗಳಲ್ಲಿ ಹಲವು ನೆನೆಯಬೇಕಾದ ಹಾಡುಗಳಿವೆ.
ಮೊದಲಿಗೆ ನಾಂದಿ ಚಿತ್ರದ ಉಡುಗೊರೆಯೊಂದ ತಂದ ಎಂಬ ನಾಂದಿ ಚಿತ್ರದ ಹಾಡನ್ನು ಕೇಳೋಣ( ರಾಗ: ಮೋಹನ/ಪಹಾಡಿ). ಈ ಗೀತೆಯ ಹಿನ್ನಲೆ ಸಂಗೀತ ಸಂಯೋಜನೆ ಬಹಳ ಸರಳವಾಗಿದೆ. ಹಾಡೊಂದು ಮನಸೆಳೆಯಲು ಬಗೆಬಗೆಯ ವಾದ್ಯಗಳಿರಬೇಕೆಂಬ ಬಾವನೆಯನ್ನು ಸುಳ್ಳು ಮಾಡುತ್ತೆ ಈ ಹಾಡು. ಅದೂ ಅಲ್ಲದೆ, ಹಾಡಿನಲ್ಲಿ ನೈಜವಾಗಿ ನಗುವನ್ನು ತರುವುದೂ ಜಾನಕಿಯವರ ವಿಶೇಷಗಳಲ್ಲೊಂದು. ಅದಕ್ಕೆ ಉದಾಹರಣೆಯೂ ಇಲ್ಲಿ ಸಿಗುತ್ತೆ. ಇದೇ ಚಿತ್ರದ ಚಂದ್ರಮುಖಿ ಪ್ರಾಣಸಖಿ ಎಂಬ ಹಾಡು ಒಂದು ಬಹಳ ಉತ್ತಮ ಯುಗಳ ಗೀತೆ. ಸಾಮಾನ್ಯವಾಗಿ ಯುಗಳ ಗೀತೆಯೆಂದರೆ, ಒಂದು ಗಂಡು ಒಂದು ಹೆಣ್ಣು ಧ್ವನಿಯಿರುವ ಹಾಡುಗಳೇ ನಮ್ಮ ನೆನಪಿಗೆ ಬರುತ್ತವೆ. ಆದರೆ, ಎರಡೂ ಹೆಣ್ಣುಧ್ವನಿಗಳಿರುವ ಕೆಲವೇ ಗೀತೆಗಳಲ್ಲಿ ಈ ಹಾಡು ಒಂದು ಮರೆಯಲಾರದ ಹಾಡು. ಬೆಂಗಳೂರು ಲತಾ ಜಾನಕಿಯವರ ಜೊತೆ ಸರಿಸಮನಾಗಿ ಹಾಡಿದ್ದಾರೆ. ಆದರೆ, ಅವರಿಗೆ ನಂತರ ಅಂತಹ ಉತ್ತಮ ಅವಕಾಶಗಳು ದೊರಕದಿದ್ದದ್ದು ಮಾತ್ರ ಬೇಸರದ ವಿಷಯವೇ. ಈ ಹಾಡು ಹಿಂದೋಳ ರಾಗದಲ್ಲಿದೆ. ಹಿಂದೂಸ್ತಾನಿಯಲ್ಲಿ ಇದಕ್ಕೇ ಮಾಲ್‍ಕೌಂಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಹೆಣ್ಣಿನ ಹಿರಿತನ, ತಾಯ್ತನದ ಮಹತ್ವವನ್ನು ಸಾರುವ ಈ ಹಾಡಿನ ಸಾಹಿತ್ಯವೂ ಮೆಲುಕು ಹಾಕುವಂತಿದೆ.ಬರೀ ವೀಣೆ, ಸಿತಾರ, ತಬಲಗಳ ಹಿಮ್ಮೇಳ ಗೀತೆಯನ್ನು ಬಹಳ ಮೇಲ್ಮಟ್ಟಕ್ಕೆ ಏರಿಸುತ್ತವೆ.
ನಾಂದಿ ಚಿತ್ರವನ್ನು ನಿರ್ದೇಶಿಸಿದ ಎನ್.ಲಕ್ಷ್ಮೀನಾರಾಯಣ ಅವರು ಕೆಲವೇ ಸಿನೆಮಾಗಳ ಮೇಲೆ ಕೆಲಸ ಮಾಡಿದರೂ, ಅವೆಲ್ಲ ಉತ್ತಮ ಮಟ್ಟದವೇ. ಅವರ ಇನ್ನೊಂದು ಚಿತ್ರ ನವಜೀವನ ದಿಂದ ಆಯ್ದ ನಲಿವ ಮನ ಒಂದೇ ದಿನ ಎಂಬ ಹಾಡನ್ನು ಈಗ ಕೇಳೋಣ. ಕಲ್ಯಾಣಿ ರಾಗದಲ್ಲಿರುವ ಈ ಹಾಡು ಮನಸೆಳೆಯುವಂತಹದ್ದು. ಇಂದು ಕಲ್ಯಾಣಿ (ಅಥವಾ ಅದರ ಹಿಂದೂಸ್ತಾನಿ ಭಾಗವಾದ ಯಮನ್) ಬಹಳ ಪ್ರಖ್ಯಾತ ರಾಗ. ಹಾಗೇ ಚಿತ್ರಸಂಗೀತ ನಿರ್ದೇಶಕರಿಗೂ ಬಹಳ ಮೆಚ್ಚುಗೆಯಾಗಿರುವ ರಾಗ. ಆದರೆ, ಇದು ನಮ್ಮಲ್ಲಿಗೆ ಹೊರದೇಶದಿಂದ ಬಂದದ್ದು ಎಂದರೆ ನಂಬುತ್ತೀರಾ?
ಕಲ್ಯಾಣಿಯ ಬಗ್ಗೆ ಹೇಳುವಾಗ, ಹೆಸರಿಂದ ಮಾತ್ರ ಅದನ್ನು ಹೋಲುವ ಮತ್ತೊಂದು ರಾಗದ ಗೀತೆ ಈಗ ಕೇಳೋಣ. ಇದರ ರಾಗ ಪೂರ್ವಿ (ಪೂರ್ವ) ಕಲ್ಯಾಣಿ. ಈ ಹಾಡು ಇರುವ ಗೀತೆಯ ಜೀವಾಳವೇ ಈ ರಾಗ. ಯಾವುದು ಎಂದಿರಾ? ಅದೇ ರಾಜ್‍ಕುಮಾರ್ ಅವರು ನಟಿಸಿದ ಅ.ನ.ಕ್ಕೃಷ್ಣರಾಯರ ಸಂಧ್ಯಾರಾಗ. ಈ ಕಥೆಯಲ್ಲಿ ಈ ರಾಗ ಹಾಸುಹೊಕ್ಕಾಗಿದೆ. ಅದಕ್ಕೆಂದೇ ಈ ಗೀತೆಯೂ ಆ ಚಿತ್ರದಲ್ಲಿ ಮೂರುಬಾರಿ, ಮೂರು ಗಾಯಕರ ಕಂಠದಲ್ಲಿ ಕೇಳಿಬರುತ್ತೆ. ಮಹಾ ವಿದ್ವಾಂಸರಾದ ಎಮ್.ಬಾಲಮುರಳಿಕೃಷ್ಣ ಮತ್ತು ಭೀಮಸೇನ ಜೋಷಿಯವರು ಹಾಡಿದ್ದಾಗಲೂ, ಅದಕ್ಕೆ ಯಾವುದೇ ರೀತಿಯಲ್ಲಿ ಕಮ್ಮಿ ಎನಿಸದ ರೀತಿಯಲ್ಲಿ ಜಾನಕಿ ಅವರು . ಈಗ ಕೇಳಿ: ನಂಬಿದೆ ನಿನ್ನ ನಾದ ದೇವತೆಯೆ ಗೀತೆಯನ್ನು.
ಎನ್.ಲಕ್ಷ್ಮೀನಾರಾಯಣರ ನಾಂದಿ, ನಂದಾದೀಪಗಳನ್ನು ನೋಡಿ, ಅವರ ಇದೇ ದಶಕದ ಇನ್ನೊಂದು ಚಿತ್ರವನ್ನು ಬಿಡಲಾಗುತ್ತದೆಯೇ? ೧೯೬೪ರಲ್ಲಿ ಬಿಡುಗಡೆಯಾದ ನವಜೀವನ ಚಿತ್ರದಿಂದ ಮುಂದಿನ ಹಾಡು. ಕರೆಯೇ ಕೋಗಿಲೆ ಮಾಧವನ - ಕಾನಡ ರಾಗದ ಮೇಲೆ ಆಧಾರಿತವಾಗಿದೆ ಈ ಹಾಡು.
ಹೀಗೇ ನೆನೆಯುತ್ತ ಹೋದರೆ ಹೀಗೇ ಮತ್ತೆಮತ್ತೆ ಕೇಳಬೇಕೆನಿಸುವ ಹಲವಾರು ಗೀತೆಗಳನ್ನು ಎಸ್.ಜಾನಕಿಯವರು ಹಾಡಿದ್ದಾರೆ. ಈ ದಶಕದ ಮತ್ತೆ ಕೆಲವು ನೆನಪಿಸಿಕೊಳ್ಳಬೇಕಾದ ಗೀತೆಗಳು ಎಂದರೆ - ದೇವರು ಕೊಟ್ಟ ತಂಗಿ ಚಿತ್ರದಿಂದ ಲಾಲಿಸಿವಳು ಮಗನ ಎಂಬ ಪುರಂದರ ದಾಸರ ಒಂದು ರಚನೆ (ರಾಗ: ಜೈಜೈವಂತಿ?), ಸ್ವರ್ಣಗೌರಿ ಚಿತ್ರದಿಂದ ಜಯಗೌರಿ ಜಗದೀಶ್ವರಿ ಎಂಬ ಗೀತೆ (ರಾಗ: ದ್ವಿಜಾವಂತಿ), ಪುಟ್ಟಣ್ಣನವರ ಮರೆಯಲಾಗದ ಬೆಳ್ಳಿಮೋಡ ಚಿತ್ರದಿಂದ ಮೂಡಲ ಮನೆಯ ಮುತ್ತಿನ ನೀರಿನ (ರಾಗ: ಮಾಂಜ್ ಖಮಾಜ್ - ಪ್ರವೀಣ್ ಗೋಡ್ಖಿಂಡಿ ಅವರ ರೆಕಾರ್ಡಿಂಗ್ ಒಂದರ ಮೇಲೆ ಇದ್ದ ಪಟ್ಟಿಯ ಪ್ರಕಾರ) ಮೊದಲಾದವುಗಳು.
ಈ ಬರಹವನ್ನು ಮತ್ತೆ ಮೋಹನ ರಾಗದ ಒಂದು ಗೀತೆಯಿಂದಲೇ ಮುಗಿಸುತ್ತೇನೆ. ಈ ಮೊದಲು ಮೋಹನ ರಾಗದ ವಿಷಯ ಬರೆಯುವಾಗ ಈ ಗೀತೆಯ ಬಗ್ಗೆಯೂ ಬರೆದಿದ್ದೆ ಎನಿಸುತ್ತೆ. ಗೌರಿ ಚಿತ್ರದಲ್ಲಿ ಕುವೆಂಪು ಅವರ ರಚನೆ ಕೇಳಿ: ಯಾವ ಜನ್ಮದ ಮೈತ್ರಿ ಈ ಜನ್ಮದಲಿಬಂದು. ಆರಂಭದಲ್ಲಿ ಸಣ್ಣ ಆಲಾಪವವೂ ಇದೆ. ಜಿಕೆವೆಂಕಟೇಶ್ ಅವರ ಸರಳ, ಆದರೆ ಸುಶ್ರಾವ್ಯ ಸಂಗೀತ ಸಂಯೋಜನೆ ಈ ಹಾಡಿಗೆ ಮೆರುಗು ಕೊಡುವುದರಲ್ಲಿ ಯಶಸ್ವಿಯಾಗುತ್ತದೆ.
ಮುಂದೆ ಬರುವ ಎಪ್ಪತ್ತರ ದಶಕದ ಮರೆಯದ ಹಾಡುಗಳನ್ನು ಇನ್ನೊಂದು ದಿನ ಕೇಳೋಣ.
-ಹಂಸಾಸಂದಿ
  • ಎಸ್.ಜಾನಕಿ
  • ಚಲನಚಿತ್ರ
  • ಸಂಗೀತ
  • ಹಿನ್ನಲೆ ಗಾಯನ
~.~
  • hamsanandi ರವರ ಬ್ಲಾಗ್
  • Login or register to post comments
  • 749 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 23, 2007 - 8:29am — mahesha

ಉ: ಕೋಗಿಲೆ ಹಾಡಿದೆ ಕೇಳಿದೆಯಾ?

mahesha's picture

"ಪುಟ್ಟಣ್ಣನವರ ಮರೆಯಲಾಗದ ಗೆಜ್ಜೆ ಪೂಜೆ ಚಿತ್ರದಿಂದ ಮೂಡಲ ಮನೆಯ ಮುತ್ತಿನ ನೀರಿನ (ರಾಗ: ಮಾಂಜ್ ಖಮಾಜ್) ಮೊದಲಾದವುಗಳು.'

ಮೂಡಲ ಮನೆ ಹಾಡು ಬರೋದು, ಬೆಳ್ಳಿ ಮೋಡ ಸಿನಿಮದಾಗೆ ಅಲ್ವಾ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2007 - 8:43am — ವೈಭವ

ಉ: ಕೋಗಿಲೆ ಹಾಡಿದೆ ಕೇಳಿದೆಯಾ?

ವೈಭವ's picture

ಹೌದು ..ಮೂಡಲ ಮನೆ( ಬೇಂದ್ರೆಯವರ ಹಾಡು) ಬರುವುದು 'ಬೆಳ್ಳಿ ಮೋಡ' ದಲ್ಲೇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2007 - 9:54pm — hamsanandi

ಉ: ಕೋಗಿಲೆ ಹಾಡಿದೆ ಕೇಳಿದೆಯಾ?

hamsanandi's picture

ಕೈತಪ್ಪಿನಿಂದ ಬೆಳ್ಳಿಮೋಡಕ್ಕೆ ಬದಲಾಗಿ ಗೆಜ್ಜೆಪೂಜೆ ಎಂದು ಬರೆದುಬಿಟ್ಟಿದ್ದೆ!

ಈಗ ತಿದ್ದಿರುವೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2007 - 10:54am — muralihr

ಉ: ಕೋಗಿಲೆ ಹಾಡಿದೆ ಕೇಳಿದೆಯಾ?

muralihr's picture

ತು೦ಬಾ ಥ್ಯಾ೦ಕ್ಸು ..ದೇವರು ನಿಮ್ಗೇ ಚೆನ್ನಾಗಿಟ್ಟಿರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯ
  • *ಸ್ಪೂರ್ತಿಯ ಲೈಟು*
  • ಕವನ *ಪ್ರಿಯಗೆಳತಿಗೆ*
  • *ಆಹ್ವಾನ ಬರುವೆನೆಂದವಳಿಗೆ*
  • ಕನ್ನಡವೇ ಸತ್ಯ ಕನ್ನಡವೇ ನಿತ್ಯ !
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 91 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator