ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಅಂತೂ ಆವರಣವನ್ನು ಓದಿದ್ದಾಯಿತು!

March 24, 2007 - 5:13am — hamsanandi

ನಾಕುದಿನದ ಹಿಂದೆ ಆವರಣ ಬಂದು ಸೇರಿತು...

ಬೇರೊಂದು ಕಡೆ, ಟಿಪ್ಪಣಿ ಸೇರಿಸಿದ ನಂತರ, ಇಲ್ಲಿಯೂ ಅದನ್ನೇ ಹಾಕೋಣ ಎನ್ನಿಸಿತು. ಮೋಹನ ರಾಗದ ಮೂರನೆ ಭಾಗವನ್ನು ಬರೆಯದೇ ಹೋದದ್ದಕ್ಕೆ ಇದೂ ಒಂದು ಕಾರಣ ತಾನೇ, ಅದಕ್ಕೆ ಇಲ್ಲಿಯೂ ಇರಲಿ ಎಂದುಕೊಂಡೆ Smiling

ಆವರಣ ಬ್ಯಾನ್ ಆಗುವ ಮಾತೆಲ್ಲ ಬಂದಿರುವುದು, ಕಥೆಯಲ್ಲಿ ಲಕ್ಷ್ಮಿ ಬರೆಯುವ ಕಾದಂಬರಿಯನ್ನು ಪೋಲೀಸರು ಮುಟ್ಟುಗೋಲು ಹಾಕಿಕೊಳ್ಳುವ ಸಂದರ್ಭ ಬಂದಿರುವುದರಿಂದ ಎನಿಸುತ್ತದೆ. ನಿಜ ಹೇಳಬೇಕೆಂದರೆ, ತೀರಾ ಏನನ್ನೂ ಓದದಿದ್ದವರಿಗೆ ಕಥೆ ಆಘಾತಕಾರಿ ಎನಿಸಬಹುದಾದರೂ, ಸ್ವಲ್ಪ ಚರಿತ್ರೆಯ ಬಗ್ಗೆ ಕಾಮಾಲೆ ಕಣ್ಣಿಲ್ಲದೇ ಓದಿಕೊಂಡಿದ್ದವರಿಗೆ ಆವರಣ ತುಂಬಾ ಹೊಸ ವಿಷಯಗಳನ್ನೇನೂ ಹೇಳುವುದಿಲ್ಲ. ಹೇಳುವುದೇನಿದ್ದರೂ, ನಮ್ಮಲ್ಲಿ ನಡೆಯುತ್ತಿರುವ ಆವರಣ ಕ್ರಿಯೆಯನ್ನಷ್ಟೆ. ಬ್ಯಾನ್ ಮಾಡಬೇಕೆಂದಿರುವವರು, ಕಥೆಯನ್ನು ಓದಿದರೆ, ಆ ಆಲೋಚನೆಯನ್ನು ಖಂಡಿತಾ ಬಿಡಬೇಕಾಗುತ್ತದೆ Eye-wink Bibliography (ಪಠ್ಯ ಸೂಚಿ) ಯನ್ನು ಕಾದಂಬರಿಕಾರರು ಕಥೆಯ ಅಂಗವಾಗಿ ಜಾಣತನದಿಂದ ಹೆಣೆದಿದ್ದಾರೆ.

ಇದು ಬಿಟ್ಟರೆ, ಈ ಕಾದಂಬರಿ ನನಗೆ ಭೈರಪ್ಪನವರ ಸಾಮಾನ್ಯ ಕಾದಂಬರಿಗಳಲ್ಲಿ ಒಂದು ಎನಿಸುತ್ತದೆ. ವಂಶವೃಕ್ಷ, ಪರ್ವ, ಧರ್ಮಶ್ರೀ ಗೃಹಭಂಗ ಅಥವಾ ತಂತು, ಇಂತಹ ಕಾದಂಬರಿಗಳಲ್ಲಿ ಇರುವಂತಹ ಪಾತ್ರಪೋಷಣೆ ಆವರಣದಲ್ಲಿ ಕಾಣುತ್ತಿಲ್ಲ. ಎಲ್ಲೋ ಓದುತ್ತಿದ್ದಾಗ, ಮತ್ತೆ ಪುಟ ಹಿಂತಿರುಗಿಸಿ ಓದಬೇಕಾದಂತಹ ಒಂದು ಸಂದರ್ಭವೂ ನನಗೆ ಆಗಲಿಲ್ಲ. ಆ ಮಟ್ಟಿಗೆ, ಇದು ಇತರ ಕಾದಂಬರಿಗಳಿಗಿಂತ ಸರಳವಾಗಿದೆ ಎನ್ನಬಹುದು. ಆ ವಿಷಯದಲ್ಲಿ ಕಾದಂಬರಿಕಾರರು ಅವರೇ ಹೇಳಿರುವ ಉದ್ದೇಶದಲ್ಲಿ ಸಫಲವಾಗಿದ್ದಾರಾದರೂ, (ಸತ್ಯ ಮತ್ತು ಸೌಂದರ್ಯದಲ್ಲಿ, ಸತ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ಸೌಂದರ್ಯವನ್ನು ಗೌಣವನ್ನಾಗಿ ಮಾಡಿರುವುದು) ಎಲ್ಲಾ ಓದುಗರಿಗೆ ಅದು ಹತ್ತಿರವಾಗುವುದೆಂದು ಹೇಳಲಾರೆ.

ಒಮ್ಮೆ ಓದಿ ನೋಡಬೇಕಾದಂತಹ ಕಾದಂಬರಿ. ಆದರೆ, ಮೇಲೆ ನಾನು ಹೇಳಿದ ಕಾದಂಬರಿಗಳಂತೆ, ಆವರಣವನ್ನು ಮತ್ತೆ ಮತ್ತೆ ಓದಬೇಕೆಂದೆನಿಸದು.

ಕಾರಣಾಂತರಗಳಿಂದ ಭೈರಪ್ಪನವರಿಗೆ ಹೊಸ ಓದುಗರನ್ನು ತಂದುಕೊಟ್ಟಿರುವುದು ಇದರ ಹೆಚ್ಚಾಯ ಎನ್ನಬಹುದು Smiling

-ಹಂಸಾನಂದಿ

~.~
  • hamsanandi ರವರ ಬ್ಲಾಗ್
  • Login or register to post comments
  • 622 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2007 - 7:07am — ASHOKKUMAR

ಪ್ರತಿಕ್ರಿಯೆ:ಆವರಣದ ಹೆಚ್ಚಾಯ?

ASHOKKUMAR's picture

>>ಕಾರಣಾಂತರಗಳಿಂದ ಭೈರಪ್ಪನವರಿಗೆ ಹೊಸ ಓದುಗರನ್ನು ತಂದುಕೊಟ್ಟಿರುವುದು ಇದರ ಹೆಚ್ಚಾಯ ಎನ್ನಬಹುದು
ಹೆಚ್ಚಾಯ ಎನ್ನುವುದು ಹೊಸ ಪದವೇ?ನೀವೇ ಟಂಕಿಸಿದ್ದೀರಾ ಹೇಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2007 - 9:27am — hamsanandi

Re: ಪ್ರತಿಕ್ರಿಯೆ:ಆವರಣದ ಹೆಚ್ಚಾಯ?

hamsanandi's picture

ಇಲ್ಲ ಸ್ವಾಮೀ! ಅದು  ನಮ್ಮ ಕಡೆ ಹಿಂದಿನಿಂದಲೇ ಬಳಕೆಯಲ್ಲಿರುವ ಪದ - ಹೆಚ್ಚುಗಾರಿಕೆ ಎನ್ನುವ ಅರ್ಥದಲ್ಲಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 25, 2007 - 11:47pm — hpn

ಪ್ರತಿಕ್ರಿಯೆ:ಆವರಣದ 'ಹೆಚ್ಚಾಯ'?

hpn's picture

'ನಿಮ್ಮ ಕಡೆ' ಯಾವುದು? Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 26, 2007 - 10:33pm — hamsanandi

Re: ಪ್ರತಿಕ್ರಿಯೆ:ಆವರಣದ 'ಹೆಚ್ಚಾಯ'?

hamsanandi's picture

’ನಮ್ಮ ಕಡೆ’ ಎಂದು ನಾನು ಯಾವಾಗಲೂ ಹೇಳುವುದು, ಹಾಸನಕ್ಕೇ - ಊರನ್ನು ಬಿಟ್ಟು ಹದಿನೈದುವರ್ಷವಾಗಿದ್ದರೂ!

ನನ್ನ ಬಳಿ ನಿಘಂಟು ಇಲ್ಲ - ಹಾಗಾಗಿ ಈ ಪದದ ಹುಟ್ಟಿನ ಬಗ್ಗೆ ಹೇಳಲಾರೆ; ಆದರೆ, ಇದು ಅಂತಹ ಅಪರೂಪದ ಪದವೇನಲ್ಲ ಎಂದು ನನ್ನ ಭಾವನೆ.್

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2007 - 12:50am — hpn

ಪ್ರತಿಕ್ರಿಯೆ:ಆವರಣದ 'ಹೆಚ್ಚಾಯ'?

hpn's picture

ನಾನು ಕುತೂಹಲದಿಂದ ಪ್ರಶ್ನೆ ಕೇಳಿದ್ದಷ್ಟೆ. ಅದಕ್ಕೂ ನಿಮ್ಮ ಪದ ಬಳಕೆಗೂ ಸಂಬಂಧವಿಲ್ಲ.

ಹಾಸನ ಎಲ್ಲಿ ಕ್ಯಾಲಿಫೋರ್ನಿಯ ಎಲ್ಲಿ ;-)‌

ನೀವು ತಿಳಿಸದೇ ಹೋಗಿದ್ದರೆ ನಿಮ್ಮ ಕಡೆ - ಕ್ಯಾಲಿಫೋರ್ನಿಯಾದಲ್ಲಿ "ಹೆಚ್ಚಾಯ" ಎನ್ನುತ್ತಾರೆ ಅಂತ ಅಂದುಕೊಳ್ಳುತ್ತಿದ್ದೆವು.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
  • ಆವರಣಾಭಿಮಾನ
  • "ಆವರಣ" -ನನ್ನ ತತ್ ಸಮಯದ ಪ್ರತಿಕ್ರಿಯೆ
  • ಆವರಣ ಸಂವಾದ - ೧೮ ಮಾರ್ಚ್ ೨೦೦೭, ಭಾನುವಾರ
  • ಆವರಣ ಹೊಸ ದಾಖಲೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 6:08pm
  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 155 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator