ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಬ್ರೋಚೇವಾರೆವರುರಾ ನಿನುವಿನಾ?

May 28, 2008 - 1:03am — hamsanandi

ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.

ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ.

ವಾಸುದೇವಾಚಾರ್ಯರು ಸುಮಾರು ೨೦೦ಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವರ್ಣ,ಕೃತಿ,ಜಾವಳಿ, ರಾಗಮಾಲಿಕೆಗಳು, ತಿಲ್ಲಾನ ಮೊದಲಾದ ಎಲ್ಲ ಪ್ರಕಾರಗಳೂ ಸೇರಿವೆ. ಅವರ ಎಲ್ಲ ರಚನೆಗಳ ಪಟ್ಟಿಯನ್ನು ಇಲ್ಲಿ ಚಿಟಕಿಸಿ ನೋಡಬಹುದು. ಕರುಣಿಸೌ ತಾಯೇ ಎಂಬ ಸರಸ್ವತಿ ಮನೋಹರಿ ರಾಗದ ರಚನೆಯನ್ನುಳಿದು, ಇನ್ನೆಲ್ಲಕ್ಕೂ ಅವರು ತೆಲುಗು ಅಥವಾ ಸಂಸ್ಕೃತ ಭಾಷೆಯನ್ನು ಉಪಯೋಗಿಸಿದ್ದಾರೆ.

ಹೇಗೆ ತ್ಯಾಗರಾಜರು ತಮ್ಮ ಕಾಲದಲ್ಲಿ ಇನ್ನೂ ಹೆಚ್ಚು ಬಳಕೆಯಲ್ಲಿಲ್ಲದ ಖರಹರಪ್ರಿಯ, ಹರಿಕಾಂಭೋಜಿ, ವಾಗಧೀಶ್ವರಿ ಮೊದಲಾದ ಮೇಳಕರ್ತ ರಾಗಗಳಲ್ಲಿ ರಚನೆಗಳನ್ನು ಮಾಡಿ ಅವುಗಳನ್ನು ಪ್ರಚಲಿತಕ್ಕೆ ತಂದರೋ, ಹಾಗೆಯೇ ವಾಸುದೇವಾಚಾರ್ಯರು ತ್ಯಾಗರಾಜರು ಕೈಹಾಕದಿದ್ದ ಸಿಂಹೇಂದ್ರ ಮಧ್ಯಮ,ಧರ್ಮವತಿ, ನಾಟಕಪ್ರಿಯ, ರಿಷಭಪ್ರಿಯ ಮೊದಲಾದ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ, ಆ ರಾಗಗಳಿಗೆ ಒಳ್ಳೆ ಲಕ್ಷ್ಯವನ್ನು ಕಲ್ಪಿಸಿಕೊಟ್ಟರು.

ಅದೇ ರೀತಿ, ಹೇಗೆ ತ್ಯಾಗರಾಜರು ಜನ್ಯ ರಾಗಗಳಲ್ಲಿ ಹೊಸ ಸಾಧ್ಯತೆಗಳನ್ನು ಊಹಿಸಿಕೊಂಡು ಅದರಲ್ಲೆಲ್ಲ ರಚನೆಗಳನ್ನು ಮಾಡಿದರೋ, ಅದೇ ರೀತಿ ವಾಸುದೇವಾಚಾರ್ಯರೂ ಸುನಾದವಿನೋದಿನಿ ಎಂಬೊಂದು ಹೊಸರಾಗದಲ್ಲಿ ದೇವಾದಿದೇವ ಶ್ರೀವಾಸುದೇವ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರ ಅರ್ಥವನ್ನು ಡಾ.ಎಮ್.ಬಾಲಮುರಳಿಕೃಷ್ಣ ಅವರು ವಿವರಿಸುವುದನ್ನು ಇಲ್ಲಿ ನೋಡಬಹುದು.



 

ಹಾಗೇ ತಮ್ಮ ಗುರು ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರು ಕಲ್ಪಿಸಿದ ಕದನಕುತೂಹಲ ರಾಗದಲ್ಲೂ, ನೀವೇ ರಕ್ಷಕುಡನಿ ಎನ್ನುವ ವರ್ಣವನ್ನೂ, ನೀಕೇಲ ದಯರಾದು ಎನ್ನುವ ಕೃತಿಯನ್ನೂ ರಚಿಸಿದ್ದಾರೆ. ಈ ರಚನೆಯನ್ನು ನೀವು ಎಮ್.ಎಸ್.ಶೀಲಾ ಅವರ ಕಂಠದಲ್ಲಿ ಇಲ್ಲಿ ಚಿಟಕಿಸಿ ಕೇಳಬಹುದು. ಚಿತ್ತಾಕರ್ಷಕ ಚಿಟ್ಟೆಸ್ವರವನ್ನೂ, ಕಡೆಯಲ್ಲಿರುವ ವಾಸುದೇವ ಎನ್ನುವ ಅಂಕಿತವನ್ನೂ ಗಮನಿಸಿ.

ವಾಸುದೇವಾಚಾರ್ಯರು ಮೈಸೂರಿನ ಅರಮನೆಯಲ್ಲಿ ದೀರ್ಘಕಾಲ ಆಸ್ಥಾನ ವಿದ್ವಾಂಸರಾಗಿದ್ದವರು. ಕಡೆಯ ಅರಸರಾದ ಜಯಚಾಮರಾಜೇಂದ್ರ ಒಡೆಯರಿಗೆ ಸಂಗೀತಗುರುಗಳೂ ಆಗಿದ್ದರು. ನಂತರ, ಒಡೆಯರು ತಾವೇ ಸಂಗೀತರಚನೆಗಳನ್ನು ಮಾಡುವಾಗ,ಮೊದಲಿಗೆ ಅವರು ಅದನ್ನು ಕೇಳಿಸುತ್ತಿದ್ದುದ್ದೇ ವಾಸುದೇವಾಚಾರ್ಯರಿಗೆ. ನಂತರ,ಅವರ ಅಭಿಪ್ರಾಯವನ್ನು ಕೇಳಿ ಅಗತ್ಯವಿದ್ದರೆ ರಚನೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುತ್ತಿದ್ದರಂತೆ. ಮೈಸೂರು ಅರಮನೆಯಲ್ಲಿ, ಮತ್ತೆ ಬೇರೆಡೆಯಲ್ಲೆಲ್ಲ ಅವರು ಕಂಡ ಕಲಾವಿದರ ಬಗ್ಗೆ, "ನಾ ಕಂಡ ಕಲಾವಿದರು" ಎಂಬ ಪುಸ್ತಕವೊಂದನ್ನು ಕೂಡ ಬರೆದಿದ್ದರೆ. ಆಸಕ್ತರು ಇದನ್ನು ಓದಿ ಅನ್ನುವ ಶಿಫಾರಸ್ಸು ನನ್ನದು. ಇನ್ನು. ಕೃತಿಗಳ ಬಗ್ಗೆ ಬರೀ ಮಾತಾಡಿ, ಹೆಚ್ಚಿಗೆ ಕೇಳಿಸಲಿಲ್ಲ ಎನ್ನುವ ದೂರು ನಿಮ್ಮದಾಗಿದ್ದರೆ, ಈ ಕೆಳಗಿನ ಕೊಂಡಿಯನ್ನು ಚಿಟಕಿಸಿ.

ವಾಸುದೇವಾಚಾರ್ಯರ ಕೃತಿಗಳು - ನನ್ನ ಮೆಚ್ಚಿನ ಐದು ರಚನೆಗಳು.

-ಹಂಸಾನಂದಿ

  • ಮೈಸೂರು
  • ವಾಸುದೇವಾಚಾರ್ಯ
  • ಸಂಗೀತ
~.~
  • hamsanandi ರವರ ಬ್ಲಾಗ್
  • Login or register to post comments
  • 612 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 28, 2008 - 7:41am — rameshbalaganchi

ಉ: ಬ್ರೋಚೇವಾರೆವರುರಾ ನಿನುವಿನಾ?

rameshbalaganchi's picture

ಹಂಸಾನಂದಿಯವರೆ,

"ತಮ್ಮ ಗುರು ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರು ಕಲ್ಪಿಸಿದ ಕದನಕುತೂಹಲ ರಾಗದಲ್ಲೂ,"

ನಾನು ಇದನ್ನು "ಕಥನಕುತೂಹಲ" ಎಂಬ ಹೆಸರಿನಲ್ಲಿ ಕೇಳಿದ್ದೆನಲ್ಲ! ಇವೆರಡರಲ್ಲೆ ಯಾವುದು ಸರಿಯಾದ ಹೆಸರು?
"ಯೂ ಟ್ಯೂಬ್"ನಲ್ಲಿ ಮಾತಾಡಿರುವ ಶ್ರೀ ಬಾಲಮುರಳಿಕೃಷ್ಣ ಅವರು "ದೇವಾಧಿದೇವ ಶ್ರೀವಾಸುದೇವ.........ಕಾವುಮಯ್ಯ ನನ್ನು ಕರುಣಾಸಮುದ್ರ" ಎಂದಿದ್ದು ಕೇಳಿಸಿತು.
ನಾನು ಕೇಳಿದ ಹಾಡಿನಲ್ಲಿ . . . . . . . "ಕಾವುಮಯ್ಯ ನನ್ನು ಕರುಣಾಲವಾಲ" ಅಂತ ಇತ್ತು. ಈ ಪಾಠಾಂತರವೂ ಇದೆಯೆ?

ಬ್ರೋಚೇವಾರೆವರುರಾ ನನ್ನ ಮೆಚ್ಚಿನ ಹಾಡು. ನಿಮಗೆ ಗೊತ್ತಿಲ್ಲದೆ ಇರುವುದಿಲ್ಲ ಅಂದುಕೊಂಡಿದ್ದೀನಿ. Music India online ನವರು ಇತ್ತೀಚೆಗೆ ಪರೀಕ್ಷಾರ್ಥ ಬಿಡುಗಡೆ ಮಾಡಿದ (Beta version) Rhydhun ಎಂಬ playerನಲ್ಲಿ ಕರ್ನಾಟಕ ಮತ್ತು ದಕ್ಷಿಣಾದಿ ಶಾಸ್ತ್ರೀಯ ಸಂಗೀತದ ಸುಗ್ಗಿಯೇ ಇದೆ. ನನ್ನ ಬೆಳಗು ಮತ್ತು ಸಂಜೆಯ ಸ್ವಲ್ಪ ಸಮಯ ಇದರಲ್ಲಿ "ಬ್ರೋಚೇವಾರೆವರು ರಾ" ಮತ್ತು "ನಗುಮೋಮು"
ಕೇಳುವುದರಲ್ಲಿಯೇ ಕಳೆಯುತ್ತದೆ.
ಒಂದು ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 10:41am — hamsanandi

ಉ: ಬ್ರೋಚೇವಾರೆವರುರಾ ನಿನುವಿನಾ?

hamsanandi's picture

ರಮೇಶ ಅವರೆ,

ನೀವು ಹೇಳುವ ಹಾಗೆ, ಕಥನ ಕುತೂಹಲ ಎನ್ನುವ ಹೆಸರನ್ನೂ ನಾನು ಕೇಳಿದ್ದೇನೆ. ರಾಗಗಳ ಹೆಸರುಗಳಲ್ಲಿ ಹೀಗೆ ಸ್ವಲ್ಪ ಬದಲಾವಣೆ ದೇಶ-ಕಾಲಗಳಲ್ಲಿ ಆಗುವುದೂ ಸಹಜವೇ ( ಉದಾ: ಶಹನ- ಸಹಾನ, ದರ್ಬಾರು- ದರಬಾರು, ಕಾಂಭೋಜಿ- ಕಾಂಬೋದಿ-ಕಾಮೋದರಿ, ಝಂಝೂಟಿ- ಸೆಂಚುರುಟಿ ಇತ್ಯಾದಿ). ಕುತೂಹಲ ಎಂಬ ಮೊದಲೇ ಇದ್ದ ರಾಗದಿಂದ ಪ್ರೇರಿತರಾಗಿ ಕಥನ (ಅಥವಾ ಕದನ) ಕುತೂಹಲ ರಾಗವನ್ನು ಪಟ್ಟಣಂ ಅವರು ಕಲ್ಪಿಸಿಕೊಂಡಿದ್ದಾಗಿ ಹೇಳಲಾಗಿದೆ.

ಇನ್ನು ಕರುಣಾಲವಾಲ ಎಂಬ ಪಾಠವನ್ನೇ ನಾನೂ ಹೆಚ್ಚಾಗಿ ಕೇಳಿರುವುದು. ಪುಸ್ತಕಗಳಲ್ಲಿ ಹೇಗಿದೆಯೋ ನೋಡಬೇಕು. ಆದರೆ, ಕರುಣಾಲವಾಲ ಮತ್ತು ಕರುಣಾ ಸಮುದ್ರ ಇವುಗಳಲ್ಲಿ ಅರ್ಥ ವ್ಯತ್ಯಾಸ ಹೆಚ್ಚಿರುವಂತೆ ಕಾಣದು. ಆದರೂ, ವಾಗ್ಗೇಯಕಾರರು ಬರೆದಂತೆ ಹಾಡುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವಗಳಲ್ಲೊಂದು.

Rhydhun ವಿಷಯ ತಿಳಿಸಿದ್ದಕ್ಕೆ , ಮತ್ತೆ ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು Smiling ನಾನು ಕೊಟ್ಟಿರುವ ಇನ್ನೊಂದು ಬರಹದ ಕೊಂಡಿಯಲ್ಲಿ, ಬ್ರೋಚೇವಾರೆವರುರಾ ಕೃತಿಯನ್ನೂ ಇನ್ನೂ ನಾಲ್ಕು ಇತರ ರಚನೆಗಳ್ಳೊಂದಿಗೆ ಕೇಳಬಹುದು.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 4:17pm — srivathsajoshi

ಉ: ಬ್ರೋಚೇವಾರೆವರುರಾ ನಿನುವಿನಾ?

srivathsajoshi's picture

"ಇದನ್ನು ಕಥನಕುತೂಹಲ ಎಂಬ ಹೆಸರಿನಲ್ಲಿ ಕೇಳಿದ್ದೆನಲ್ಲ! ಇವೆರಡರಲ್ಲೆ ಯಾವುದು ಸರಿಯಾದ ಹೆಸರು?"

’ಕದನಕುತೂಹಲ’ ಸರಿ. ಈ ರಾಗವು ಎಷ್ಟೊಂದು dynamic ಎಂದರೆ ಯುದ್ಧಕ್ಕೆ ಹೊರಟಿರುವ ಸೈನಿಕರಲ್ಲಿರುವ ಉತ್ಸಾಹ (ಕೌತುಕ ಸಹ)ದಂತೆ.

ಕದನಕುತೂಹಲ, ರವಿಚಂದ್ರಿಕಾ ಮುಂತಾದುವು ಬಹುಶಃ fast pace ಲಯಕ್ಕೆ ಹೇಳಿಮಾಡಿಸಿದಂತಹ ರಾಗಗಳು. ’ರಘುವಂಶಸುಧಾಂಬುಧಿ...’, ’ನೀರವದಿಸುಖದ...’ ಮುಂತಾದ ಕೃತಿಗಳಿದ್ದರೆ ಕರ್ನಾಟಕಸಂಗೀತಕಚೇರಿ ಬಹಳ ಇಷ್ಟವಾಗುತ್ತದೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:14am — Prabhu Murthy

ಉ: ಬ್ರೋಚೇವಾರೆವರುರಾ ನಿನುವಿನಾ?

Prabhu Murthy's picture

ಸಕಾಲಿಕವಾದ ಲೇಖನ. ಧನ್ಯವಾದಗಳು.

ವಾಸುದೇವಾಚಾರ್ಯರ ಅನೇಕ ಕೃತಿಗಳ ಪಟ್ಟಿ ಇಲ್ಲಿದೆ:
http://www.medieval.org/music/world/carnatic/mysore-A.html

ಅವರು ಟೈಗರ್ ವರದಾಚಾರ್ ಬಗ್ಗೆ ಬರೆದಿರುವ ಲೇಖನದ ಇಂಗ್ಲಿಶ್ ತರ್ಜುಮೆ ಇಲ್ಲಿದೆ:
http://www.carnaticmusic.esmartmusic.com/carnaticgreats/srivaradacharya/...

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ಒಂಬತ್ತನೆಯ ದಿನ
  • ದೇಶ್ ರಾಗ್
  • ಗಾಳಿಪಟ
  • ಆಶ್ಡೆನ್ ಪ್ರಶಸ್ತಿ
  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 144 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator