ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಮರೆಯಲಾರದ ಸಣ್ಣ ಕಥೆಗಳು - ೩ : ರಂಗನಹಳ್ಳಿ ರಾಮ

April 28, 2008 - 10:57pm — hamsanandi

ಈ ಹಿಂದೆ ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿಗೆ ಬಂದ ಕಥೆ ಮಾಸ್ತಿ ವೆಂಕಟೇಶಯ್ಯಂಗಾರರ ’ರಂಗನಹಳ್ಳಿ ರಾಮ’.

ಈ ಕಥೆ ಬ್ರಿಟಿಷರ ಕಾಲದ್ದು. ಮೈಸೂರು ಪ್ರಾಂತ್ಯದಲ್ಲಿ ಒಂದೂರು ರಂಗನಹಳ್ಳಿ. ಅಲ್ಲಿನ ಹಬ್ಬಗಳಲ್ಲಿ ಕೋಲಾಟವಾಡುವ ರೂಢಿ ಇತ್ತು. ಇಂಥ ಸಮಯಗಳಲ್ಲಿ ಅವರು ಆಡುತ್ತಿದ್ದಿದ್ದು ’ಕಣ್ಣಾಮುಚ್ಚೇ ಕಾಡೇಗೂಡೇ ರಂಗನಹಳ್ಳಿ ರಾಮನಹಾಡೇ’ ಎನ್ನುವ ಹಾಡಿಗೆ. ಹಾಡಿನ ಪೂರ್ತಿ ಅರ್ಥ ಯಾರಿಗೂ ತಿಳಿದಿರಲಿಲ್ಲ. ಆದರೆ, ಅದು ತಮ್ಮೂರಿನ ಬಗ್ಗೆ ಬರೆದ ಹಾಡು ಎಂದು ಕಿವಿಮಾತಿನಿಂದರಿತಿದ್ದರು.

ಆದರೆ, ರಂಗನಹಳ್ಳಿಯಲ್ಲಿದ್ದಿದ್ದು ರಾಮನ ಗುಡಿಯಲ್ಲ. ಬದಲಿಗೆ ರಂಗನಾಥನ ಗುಡಿ. ಹಾಗಾಗಿ ಇದೊಂದು ಒಗಟಾಗಿಹೋಗಿತ್ತು.

ಆಗ ಆ ಸಮಯದಲ್ಲಿ, ಅಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ, ಈ ವಿಷಯದಲ್ಲಿ ಆಸಕ್ತಿ ವಹಿಸಿ, ಈ ಹಾಡಿನ ಒಗಟನ್ನು ಬಿಡಿಸಿದ್ದೇ ಈ ಕತೆಯ ತಿರುಳು. ಟಿಪ್ಪೂ ಸುಲ್ತಾನನ ಕಾಲದಲ್ಲಿ ದೇವಸ್ಥಾನಗಳ ಇರುವಿಕೆಗೇ ತೊಂದರೆ ಬಂದ ಸಂದರ್ಭಗಳಲ್ಲಿ, ದೇವರನ್ನು ರಂಗನಾಥ ಎಂದೋ, ನಂಜುಂಡೇಶ್ವರ ಎಂದೋ ಹೇಳಿ, ಅವುಗಳನ್ನು ಉಳಿಸಿಕೊಳ್ಳುತ್ತಿದ್ದ ಸಂದರ್ಭವಿತ್ತಂತೆ. ಅಂತಹ ಕಾಲದಲ್ಲಿ, ರಾಮನ ಮೂರ್ತಿಯನ್ನು ಮುಚ್ಚಿ, ರಾಮನ ಬೆನ್ನ ಹಿಂದೆ ರಂಗನನ್ನು ಸ್ಥಾಪಿಸಿ ದೇವಸ್ಥಾನವನ್ನು ಉಳಿಸಿದ್ದ ಗ್ರಾಮಸ್ಥರು, ಮುಂದಿನ ಪೀಳಿಗೆಯವರಿಗೆ ಅದನ್ನು ತಿಳಿಸಲು ಈ ಒಗಟಿನಂಥ ಕೋಲಾಟದ ಪದವನ್ನು ಕಟ್ಟಿದ್ದರು.

ಒಗಟನ್ನು ಬಿಡಿಸಿ, ರಾಮನ ಮೂರ್ತಿಯನ್ನುಹೊರತಂದಲ್ಲಿಗೆ ಕತೆ ಮುಗಿಯುತ್ತೆ.

ನನಗೆ ಆಸಕ್ತಿ ತಂದ ವಿಷಯವೆಂದರೆ, ಇದರ ತಿರುಳೂ, ಆರ್ಥರ್ ಕಾನನ್ ಡಾಯ್ಲ್ ರ The adventure of Musgrave Ritual ಅನ್ನುವ ಶೆರ್ಲಾಕ್ ಹೋಮ್ಸ್ ಕಥೆಯ ತಿರುಳೂ ಒಂದೇ ರೀತಿಯಾಗಿದೆ. ಮಾಸ್ತಿ ಅವರು ಈ ಕಥೆಯಿಂದ ಪ್ರಭಾವಿತರಾದರೇ? ನನಗೆ ತಿಳಿಯದು.

ಆದರೆ, Musgrave Ritual ಕಥೆಯೇ ಎಡ್ಗರ್ ಆಲ್ಲೆನ್ ಪೋ ನ The Gold Bug ಕತೆಯಿಂದ ಪ್ರಭಾವಿತವಾಗಿದೆ ಎಂದು ವಿಕಿಪಿಡಿಯಾ ಹೇಳುತ್ತದೆ!

ಅಂದಹಾಗೆ, Musgrave Ritual ಮತ್ತು The Gold Bug - ಈ ಎರಡೂ ಒಳ್ಳೆಯ ಕತೆಗಳು. ಮೂಲದಲ್ಲಿ ಸಿಕ್ಕರೆ ಓದಿ ಅನ್ನುವ ಶಿಫಾರಸು ನನ್ನದು Smiling ಅಲ್ಲದೆ, ಗೋಪಾಲಕೃಷ್ಣ ಅಡಿಗರು The Gold Bug ಕಥೆಯನ್ನು ’ಸುವರ್ಣಕೀಟ’ ಅನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅದೂ ಕೂಡ ಬಹಳ ಚೆನ್ನಾಗಿದೆ. ಈ ಅನುವಾದ ಹಿಂದೊಮ್ಮೆ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಪ್ರಕಟವಾಗಿತ್ತು.

ಜೊತೆಗೆ, ರಂಗನಹಳ್ಳಿ ರಾಮನನ್ನು ಓದಿ ಅಂತ ವಿಶೇಷವಾಗಿ ಹೇಳಬೇಕಿಲ್ಲ ಅಂದ್ಕೋತೀನಿ!

-ಹಂಸಾನಂದಿ

  • ಆರ್ಥರ್ ಕಾನನ್ ಡಾಯಲ್
  • ಕತೆ
  • ಮಾಸ್ತಿ ವೆಂಕಟೇಶ ಅಯ್ಯಂಗಾರ್
~.~
  • hamsanandi ರವರ ಬ್ಲಾಗ್
  • Login or register to post comments
  • 283 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 365 ದಿನಗಳು
  • ನವರಾತ್ರಿಯ ನಾಲ್ಕನೇ ದಿನ
  • ಸಂಪದ ಆರ್ಕೈವ್
  • iPod ಸೂಕ್ಷ್ಮೋ - ಇನ್ವಿಸಿಯೋ ?
  • ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator