ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › hemashree ರವರ ಬ್ಲಾಗ್

ದಿಟ್ಟ ಹೆಜ್ಜೆಗಳನ್ನು ಹಿಂಬಾಲಿಸುತ್ತಾ . . .

April 1, 2007 - 6:37pm — hemashree

ಕಳೆದ ಸುಮಾರು ಒಂದು ವರುಷದಲ್ಲಿ ನನ್ನ ಹತ್ತಿರದ ಸ್ನೇಹಿತರ ಪೈಕಿ ಹಲವರು ಮದುವೆ ಮಾಡಿಕೊಂಡರು.
ಅದರಲ್ಲಿ ವಿಶೇಷವಾಗಿ ನನಗೆ ಖುಷಿ ಅನ್ನಿಸಿದ ಎರಡು ಮದುವೆಗಳ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ.

ಒಂದು ಅಂತರ್ ಜಾತೀಯ ವಿವಾಹವಾದರೆ , ಇನ್ನೊಂದು ಅಂತರ್ ಧರ್ಮೀಯ ವಿವಾಹ .
ಒಂದು ಸರಳ ವಿವಾಹ ; ಇನ್ನೊಂದು ವಿಧಿವತ್ತಾಗಿ ನಡೆದ ವಿವಾಹ.
ಯಾವುದೇ ಧರ್ಮ - ಜಾತಿಯ ಕಟ್ಟುಪಾಡುಗಳನ್ನು ಅನುಸರಿಸದೆ ಸರಳವಾಗಿ ಹಾರ ಬದಲಾಯಿಸಿಕೊಂಡು ಸತಿ-ಪತಿಯಾದ ಒಂದು ಜೋಡಿ;
ಎರಡೂ ಧರ್ಮದ ಕುಟುಂಬ ಸಮೇತ ಆಶೀರ್ವಾದ, ಒಪ್ಪಿಗೆ ಪಡೆದು ಎರಡೂ ರೀತಿಯ ಧಾರ್ಮಿಕ ವಿಧಿಗಳ ಜತೆ ಮದುವೆಯಾದ ಇನ್ನೊಂದು ಜೋಡಿ.

ಎರಡೂ ವಿವಾಹಗಳು ಸಿದ್ಧಕ್ರಮವನ್ನು ಧಿಕ್ಕರಿಸಿ ತಮ್ಮದೇ ಹೊಸ ಹಾದಿಯಲ್ಲಿ ಸಾಗಿದ , ಈ ಹೊತ್ತಿನ ಸಂಘರ್ಷಕರ ಸಂದರ್ಭದಲ್ಲಿ ಇಟ್ಟ ದಿಟ್ಟ ಹೆಜ್ಜೆಗಳು.

ಧಾರ್ಮಿಕ , ಸಾಂಪ್ರದಾಯಿಕ ಬದ್ಧತೆ ಇಲ್ಲದೆ ಇರುವ ವಾತಾವರಣದಲ್ಲಿ ಬೆಳೆದವಳು ನಾನು.
ಆದ್ದರಿಂದ ಈ ರೀತಿಯ ಅನುಕರಣೀಯ ವಿಚಾರಗಳು ಹೆಚ್ಚು ಇಷ್ಟವಾಗಿಬಿಡುತ್ತವೆ.

ಎಷ್ಟೋ ಸಲ ಈ ರೀತಿಯ ಚಿಂತನೆಗಳ ಬಗ್ಗೆ ಎಷ್ಟೋ ಮಂದಿ ಆಕರ್ಷಿತರಾಗುವುದು ಸಹಜ. ಆದರೆ ತಮ್ಮ ವೈಯಕ್ತಿಕ ಬದುಕಲ್ಲಿ ಇಂತಹ ಚಿಂತನೆಗಳನ್ನು ಜಾರಿಗೆ ತರುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ.
ಸರಳ ವಿವಾಹ , ಅಂತರ್ ಜಾತೀಯ - ಅಂತರ್ ಧರ್ಮೀಯ ವಿವಾಹ, ವರದಕ್ಷಿಣೆ ವಿರೋಧ ನಿಲುವು, ಮಗು ದತ್ತು ತೆಗೆದುಕೊಳ್ಳುವ ಆಶಯ - ಹೀಗೆ ಹಲವು ವಿಷಯಗಳಲ್ಲಿ ನಮ್ಮ ನಿಲುವುಗಳನ್ನು ನಾವೇ ನಿರೂಪಿಸಿ, ನಮ್ಮ ಬದುಕನ್ನು ರೂಪಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಯೋಚಿಸುವಷ್ಟೇ ಸಹಜವಾಗಿ ಅದನ್ನು ಬದುಕಲ್ಲಿ ಜಾರಿಗೆ ತರುವಲ್ಲಿ ಕೆಲವರು ಹಿಂದೆ ಉಳಿಯುತ್ತೇವೆ.

ಕಾರಣ, ಪ್ರಗತಿಪರ ಧೋರಣೆಯುಳ್ಳವರು, ವಿಚಾರವಾದಿಗಳು , ಬುದ್ಧಿಜೀವಿಗಳು ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಆ ಸಾರ್ಥಕತೆಗೇ ಧನ್ಯರಾಗಿಬಿಡುವ ಮನೋಧರ್ಮ . ಅದು ಬಹಳ ಸುಲಭ.
ನಿಜವಾದ ಸಾರ್ಥಕತೆ , ನಮ್ಮ ನಿಲುವುಗಳನ್ನು ನಿಜ ಬದುಕಿಗೆ ಅನ್ವಯಿಸಿ, ಸಂಘರ್ಷ ನಡೆಸಿ ಬಾಳುವುದು.

ಪ್ರಗತಿ ಪರ, ವಿಚಾರವಂತ ಧೋರಣೆಗಳು ಯಶಸ್ಸು ಕಾಣಬೇಕಾದರೆ , ನಮ್ಮ ನೈತಿಕ ಸ್ಥೈರ್ಯ , ಆತ್ಮ ವಿಶ್ವಾಸದ ಜತೆಗೆ ಸಮಾಜವನ್ನು ಎದುರಿಸಿ , ಜನರ ನಡುವೆಯೇ ಬದುಕಿ ಬಾಳುವ ಪ್ರಾಮಾಣಿಕ ಪ್ರಯತ್ನ ಮತ್ತು ಈ ರೀತಿಯ ನಿರ್ಧಾರಗಳನ್ನು ಪ್ರಜ್ಞಾಪೂರ್ವಕವಾಗಿ ಬದುಕಲ್ಲಿ ಅನುಸರಿಸುವ ಸಂಕಲ್ಪ ಅಗತ್ಯ.

ಸಮಾಜವನ್ನು ಧಿಕ್ಕರಿಸಿ ಹೋಗುವ ಮಾರ್ಗ ವಿಫಲವಾಗಬಹುದು. ಒಪ್ಪಿಗೆಯಾಗದಿರಬಹುದು.
ಆದರೆ,
ಸಮಾಜವನ್ನು ನಿರ್ಮಾಣ ಮಾಡುವುದು ನಾವೇ ತಾನೇ ?.
ನಮ್ಮ ಕೈ ಅಳತೆಗೆ ಸಿಗುವ ಮಂದಿಗೆ ನಮ್ಮ ಚಿಂತನೆಯ ಬೀಜ ಬಿತ್ತುವಲ್ಲಿ ನಾವು ಸಫಲರಾದರೆ ಮುಂದೊಂದು ದಿನ ನಾವು ಕನಸು ಕಾಣುವ ಸಮಾಜ ನಮ್ಮಿಂದಲೇ ನಿರ್ಮಾಣವಾಗುವುದಿಲ್ಲವೇ?.

ಈ ರೀತಿಯ ದಿಟ್ಟ ನಿರ್ಧಾರವನ್ನು ಇಟ್ಟ ನನ್ನ ಸ್ನೇಹಿತರ ಬಗ್ಗೆ ಇನ್ನಷ್ಟು ಗೌರವ , ಪ್ರೀತಿ ಹೆಚ್ಚಾಯಿತು.
.....................................................................................................
ಪ್ರೀತಿ ಆದರ್ಶ . . .
ಬದುಕು ವಾಸ್ತವ !
ಆದರ್ಶ ಪ್ರೀತಿಗೆ ,ವಾಸ್ತವ ಬದುಕಲ್ಲಿ ಸೋಲುವ ಆತಂಕ .
ವಾಸ್ತವ ಬದುಕಿಗೆ ತಂದು ಗೆಲುವಿನ ಗುರಿ ತಲುಪಿಸುವ ತವಕ , ಪ್ರೀತಿಗೆ.
ಆದರ್ಶ . . . ಬದುಕು . . . ವಾಸ್ತವ . . . ಪ್ರೀತಿ . . .
ಎಲ್ಲದರ ಜತೆ . . . ಎಲ್ಲದರ ನಡುವೆ . . .
ಬದುಕನ್ನು ಪ್ರೀತಿಸುವ ಕಲೆ ಕಲಿಯಬೇಕು ನಾವೆಲ್ಲಾ.
...................................................................................................

~.~
  • hemashree ರವರ ಬ್ಲಾಗ್
  • Login or register to post comments
  • 386 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೀತಿಗೆ ಯಾವ ಇನ್ಸುರನ್ಸೂ ಇಲ್ಲಾರಿ!!
  • ಪ್ರೀತಿ..........?
  • ವಿವಾಹದ ವಯಸ್ಸು
  • ಸಂಸ್ಕಾರ ಮತ್ತು ವಂಶವೃಕ್ಷ
  • ಸಂತೋಷ ಆಹಾ.. ಆಹಾ..
Syndicate content

ಲೇಖಕರು

hemashree's picture

ಪೂರ್ಣ ಹೆಸರು
ಹೇಮಶ್ರೀ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 54 ಅತಿಥಿಗಳು ಆನ್ಲೈನ್ ಇರುವರು.


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator