~
ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
hpn ರವರ ಬ್ಲಾಗ್
'ಹರಿಣಿ' ಬರೆದುಕೊಟ್ಟ ಕ್ಯಾರಿಕೇಚರ್
January 5, 2009 - 8:22pm — hpn
ನಿನ್ನೆ ಮಂಗಳೂರಿನಲ್ಲಿ ನಡೆದ 'ನೀರ ನಿಶ್ಚಿಂತೆ' ಕಾರ್ಯಕ್ರಮಕ್ಕೆ 'ಹರಿಣಿ' ಕೂಡ ಬಂದಿದ್ದರು. ಅವರು ನನಗೆ ಬರೆದುಕೊಟ್ಟ ಕ್ಯಾರಿಕೇಚರ್ ಇದು.
ಲ್ಯಾಪ್ಟಾಪ್, ಸಂಪದ - ಇದೆಲ್ಲದರ ಒಗ್ಗರಣೆ ಅವರದ್ದೆ!
ಇದರಲ್ಲಿ ನನಗೆ ಬಹಳ ಇಷ್ಟವಾಗಿದ್ದು - ಅವರು ಬರೆದಿರುವ ಕನ್ನಡ ಅಕ್ಷರಗಳ ಶೈಲಿ.

- 27 ಪ್ರತಿಕ್ರಿಯೆಗಳು
- 356 hits
- ನಿರ್ವಾಹಕರ ಗಮನಕ್ಕೆ ತನ್ನಿ
ವಾರಾಂತ್ಯದ ಲಾಗ್
December 18, 2008 - 1:25am — hpnಕಳೆದ ವಾರಾಂತ್ಯ ತೀರ ಬಿಡುವಿಲ್ಲದಂತಾಗಿಬಿಟ್ಟಿತ್ತು. ಶನಿವಾರ ಬೆಳಗಾಗಿ ಫೋನ್ ಮಾಡಿದ ಅಕ್ಕ, "ಏ ಮನೆ ಕ್ಲೀನ್ ಇಟ್ಕೊಳೋ" ಎಂದೇ ಪ್ರಾರಂಭ ಮಾಡುತ್ತ "ಮನೆಗೆ ಬರುತ್ತಿದ್ದೇನೆ, ಒಂದೆರಡು ದಿನ ಇದ್ದು ಹೋಗುತ್ತೇನೆ" ಎಂದಾಗ ಸ್ವಲ್ಪ ಗಾಬರಿಯಾದದ್ದುಂಟು. ಬೆಳಗಾಗಿ ಅವಳ ಫೋನ್ ಕಾಲ್ ಕರ್ಟನ್ನುಗಳ ಧೂಳು ಹೊಡೆಯುತ್ತ, ಇಡಿಯ ಮನೆಯೆಲ್ಲ ವ್ಯಾಕ್ಯೂಮ್ ಮಾಡುತ್ತ ಸುಮಾರು ಹೊತ್ತು ಕಳೆಯುವಂತೆ ಮಾಡಿತು. ಮನೆ "ಕ್ಲೀನ್ ಆಗಿ ಇಲ್ಲ" ಎಂದರೆ ಅವಳಿಗೆ ಸುತಾರಾಂ ಇಷ್ಟವಾಗೋದಿಲ್ಲ. "ಏನೋ, ಮನೆ ಇಷ್ಟು ಗಲೀಜಾಗಿ ಇಟ್ಟುಕೊಂಡಿದ್ದೀಯ....", "ಏನೋ ಹರಿ, ಇಲ್ಲಿ ಇಷ್ಟೊಂದು ಧೂಳಿದೆ, ಕಂಪ್ಯೂಟರ್ ಮೇಲೆ ನೋಡೋ ಎಷ್ಟೊಂದು ಧೂಳಿದೆ." ಎಂದು ಒಂದೇ ಸಮನೆ ಶುರುಮಾಡಿಬಿಡುತ್ತಾಳೆ.
ಇನ್ನೇನು ಮನೆ ಧೂಳು ಹೊಡೆಯೋದು ಮುಗಿಸಿದ್ದೆ, ಮುರಳಿ ಬಂದ. ಅವನಿಗೆ ನಾನು ಕ್ಲೀನ್ ಮಾಡಿದ್ದು ಕಾಣಿಸಲಿಲ್ಲ ಅನ್ಸತ್ತೆ, "ಏನೋ ಇಷ್ಟೊಂದು ಹರಡ್ಕೊಂಡಿದೀಯ? ನೀಟಾಗಿ ಜೋಡಿಸಿ ಇಟ್ಕೋ ಮಾರಾಯ" ಅಂದ.
ಮುರಳಿ ಟೆಕ್ ಸಂಪದ ಕುರಿತು ಚರ್ಚೆ ಮಾಡೋಣ ಎಂದು ಬಂದಿದ್ದ. ಕೊನೆಗೂ ಕುಳಿತು ಟೆಕ್ ಸಂಪದದ ಚಹರೆ ಬದಲಿಸಿದೆವು. ಆದರೆ ಸಂದರ್ಶನಗಳ ಎಡಿಟಿಂಗ್ ಮುಗಿಸಲಾಗಲಿಲ್ಲ. ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 241 hits
- ನಿರ್ವಾಹಕರ ಗಮನಕ್ಕೆ ತನ್ನಿ
ಅಂತರ್ಜಾಲದಲ್ಲಿ ಅಡ್ವಾಣಿ
November 26, 2008 - 12:02pm — hpnಒಬಾಮಾ ಅಂತರ್ಜಾಲದಿಂದ ಪಡೆದುಕೊಂಡ ಯಶಸ್ಸು ಬಹುಶಃ ಭಾರತೀಯ ರಾಜಕಾರಣಿಗಳ ಗಮನಕ್ಕೂ ಬಂದಿರದೇ ಇರಲಿಕ್ಕಿಲ್ಲ. ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಕ್ಯಾಂಡಿಡೇಟ್ ಅಡ್ವಾಣಿಯವರಿಗೂ ಈಗ ಅಂತರ್ಜಾಲದಲ್ಲಿ 'homepage', ಈಗ ಅವರೂ ಅಂತರ್ಜಾಲಕ್ಕೆ ಕಾಲಿಟ್ಟಿದ್ದಾರೆ.
ನಿತ್ಯ ವೆಬ್ಸೈಟುಗಳ, ವೆಬ್ ಪ್ರೋಗ್ರಾಮಿಂಗ್ ಲೋಕದಲ್ಲೇ ಮುಳುಗಿರುವ ನನ್ನ ಗಮನಕ್ಕೆ ನೋಡಿದ ಕೂಡಲೆ ಬಂದದ್ದು ಇಷ್ಟು: ಸಿಕ್ಕಾಪಟ್ಟೆ ಮಾಹಿತಿ ತುರುಕಿ ಪುಟವನ್ನು ದೊಡ್ಡದಾಗಿಸಿದ್ದಾರೆಯೇ ವಿನಃ ಅದರಲ್ಲಿರುವ effectiveness ಸೊನ್ನೆ. ಇನ್ನು ಸ್ವಲ್ಪ ತಲೆಗೆ ಹೇರುವ ವಿಷಯಗಳಿರುವುದು ಬಿಡಿ. ಅಲ್ಲೊಂದು ಶೀರ್ಷಿಕೆ "ಅಡ್ವಾಣಿಯವರು ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಅಭಿನಂದನೆ ಕಳುಹಿಸಿದರು" ಎಂಬುದು. ಮತ್ತೊಂದು ಶೀರ್ಷಿಕೆ "ಪ್ರಧಾನ ಮಂತ್ರಿಯ ಕಾರ್ಯಕಾಲ ೧೦೦ ದಿನ ಉಳಿದಿದ್ದಾಗ ೧೦೦ ದಿನ ಪ್ರೋಗ್ರಾಮ್, ಉಗ್ರರನ್ನು ಹತ್ತಿಕ್ಕುವ ದಿಶೆಯಲ್ಲಿ - ಇದು ಇವರ ವಿಫಲತೆ ತೋರಿಸುತ್ತದೆ" ಎಂಬುದು. ಇದನ್ನೆಲ್ಲ ಓದುವವರಿಗೆ ಯಾರು ನಿಜವಾಗಲೂ ವಿಫಲರಾಗಿದ್ದಾರೆ ಎಂಬುದು ಖಚಿತವಾಗುತ್ತದೋ ಗೊತ್ತಿಲ್ಲ, ಆದರೆ ಖಂಡಿತ ಅಡ್ವಾಣಿಯವರ ಕ್ಯಾಂಪೇಯ್ನ್ ನಡೆಸುತ್ತಿರುವವರ ವಿಫಲತೆ ಮಾತ್ರ ನೇರ ಗೊತ್ತಾಗುತ್ತದೆ. ಮುಂದೆ ಓದಿ »

- ೧ ಪ್ರತಿಕ್ರಿಯೆ
- 283 hits
- ನಿರ್ವಾಹಕರ ಗಮನಕ್ಕೆ ತನ್ನಿ
ನವೆಂಬರ್ ೧೮
November 19, 2008 - 2:32pm — hpn
"ನಿತ್ಯ ಹುಟ್ಟಿ ಮುಳುಗುವ ರವಿ"
ಹುಟ್ಟುಹಬ್ಬ ನನಗೆಂದೂ ಯಾವ ಕಾರಣಕ್ಕೂ ವಿಶೇಷ ಎನಿಸಿದ್ದಿಲ್ಲ. ಒಂದೊಮ್ಮೆ ಮತ್ತೊಂದು ವರುಷ ಕಳೆದುಹೋಯಿತಲ್ಲ ಎಂಬ ಬೇಸರ ಮೂಡಿಸುತ್ತಿದ್ದುದಂತೂ ನಿಜ. ಆದರೆ ಅದೂ ಹೆಚ್ಚು ಹೊತ್ತು ಮನಸ್ಸಿನಲ್ಲುಳಿಯುತ್ತಿರಲಿಲ್ಲ. ಹುಟ್ಟುಹಬ್ಬದ ಕೇಕ್, ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ನೆರೆಯುವ ಜನ, ಆ ನಂತರದ ಘಳಿಗೆ, ನೆರೆದವರಿಂದ ಸಿಗಬಹುದಾದ ಉಡುಗೊರೆ - ಇವು ಯಾವೂ ನನಗೆಂದೂ ಆಸಕ್ತಿ ಹುಟ್ಟಿಸಿದ್ದಿಲ್ಲ. ಕಾಲೇಜಿನ ಕ್ಲಾಸ್ ರೂಮಿನಲ್ಲಿ ಯಾರದ್ದಾದರೂ 'ಬರ್ತ್ ಡೇ'ಗೆಂದು ಕ್ಲಾಸ್ ಮುಗಿಯುತ್ತಲೇ ಕೇಕ್ ಕಟ್ ಮಾಡಿಸಿದ ಸಮೂಹ ಕೇಕೆ ಹಾಕುತ್ತಿದ್ದರೆ ನನ್ನ ಮನಸ್ಸು ನನ್ನನ್ನು ಅದೆಲ್ಲದರಿಂದ ದೂರ ಓಡುವಂತೆ ಮಾಡುತ್ತಿತ್ತು. ಅದೇ ಆ 'ಬರ್ತ್ ಡೇ ಬೇಬಿ'ಯಿಂದ 'ಟ್ರೀಟ್' ಸಿಕ್ಕ ನಂತರ ಬರ್ತ್ ಡೇ ಯಾರದ್ದು ಎಂಬುದೂ ನೆನಪಿರದಂತೆ ಇರುತ್ತಿದ್ದ ದೃಶ್ಯ ಕೇಕ್ ಕಟ್ ಮಾಡಿಸಿದವರ ವಿಶ್ವಾಸ ಎಷ್ಟಿರಬಹುದು ಎಂಬುದರ ಬಗ್ಗೆ ಅಪಾರ ಆಲೋಚನೆಗಳು ಸುಳಿದು ಹೋಗುವಂತೆ ಮಾಡುತ್ತಿತ್ತು.
ಹುಟ್ಟುಹಬ್ಬ ಆಚರಣೆ ಅವರವರ ಭಾವನೆಗಳಿಗೆ, ಆದರ್ಶಗಳಿಗೆ, ಆಲೋಚನೆಯ ರೀತಿಗೆ ಬಿಟ್ಟದ್ದು ಎಂದು ನನಗನಿಸುತ್ತದೆ. ತಮಗೆ ನೆಮ್ಮದಿ ಸಿಗುವ, ತಮಗೆ ಸಂತೋಷ ಉಂಟುಮಾಡುವ ಯಾವುದೇ ಆಚರಣೆ ಅಂದಿನ 'ಹಬ್ಬ'ವಾಗಬಹುದು ಎಂದು ನನ್ನ ಅನಿಸಿಕೆ. ಅದು ತನಗಿಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳುವುದಿರಬಹುದು, ತನಗೆ ಇಷ್ಟವಾದೆಡೆ ಕುಳಿತು ಸಮಯ ಕಳೆಯುವುದಿರಬಹುದು. ಯಾವ ಆಚರಣೆಯನ್ನೂ ಕೀಳಾಗಿ ನೋಡಬೇಕಿಲ್ಲ, ಯಾವ ಆಚರಣೆಯನ್ನೂ ಆಡಂಬರದಿಂದ ಕಾಣಬೇಕಿಲ್ಲ. ಕೊನೆಗೆ ಆ 'ಹಬ್ಬ' ನಡೆಸಿದ ರೀತಿಗೊಂದು ನಾವು ಅರಿಯದ ಕಾರಣವೇ ಇದ್ದಿರುತ್ತದೆ. ಒಂದೊಮ್ಮೆ ಅರಿತರೂ ಅರಿಯದಂತಿರುತ್ತೇವೆ. ಅವರವರ ಇಷ್ಟದಂತೆ ಇರಬಹುದು ಆಚರಣೆ. ಅವರವರ ಸ್ವಂತದ ವಿಚಾರ. ಮುಂದೆ ಓದಿ »

- 31 ಪ್ರತಿಕ್ರಿಯೆಗಳು
- 592 hits
- ನಿರ್ವಾಹಕರ ಗಮನಕ್ಕೆ ತನ್ನಿ
ಕಲ್ಲೊಳಡಗಿದ ಜೀವ
October 28, 2008 - 12:26pm — hpnನಾನು ಆರ್ಕುಟ್ಟಿನಲ್ಲಿ ಈ ಫೋಟೋ ಹಾಕಿದ್ದೆ. ಸಾವನದುರ್ಗಕ್ಕೆ ಹೋದಾಗ ತೆಗೆದದ್ದು. ಇದಕ್ಕೆ ಸವಿತಾರವರು ನಿನ್ನೆ ಬರೆದ ಪ್ರತಿಕ್ರಿಯೆ ಈ ಚಿತ್ರಕ್ಕೆ ಒಂದು ಚೆಂದದ ಶೀರ್ಷಿಕೆ ಕೊಟ್ಟಿತು!
ಆ ಶೀರ್ಷಿಕೆಯೊಂದಿಗೆ ಚಿತ್ರ ಮತ್ತೆ ಹಾಕುತ್ತಿದ್ದೇನೆ ಇಲ್ಲಿ:


- 9 ಪ್ರತಿಕ್ರಿಯೆಗಳು
- 403 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: