ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

hpn ರವರ ಬ್ಲಾಗ್

ಮತ್ತೊಂದು ಅಂಕಿತ ಪುಸ್ತಕ

ನಿನ್ನೆ (ಭಾನುವಾರ ಸಾಯಂಕಾಲ) ನಯನ ಸಭಾಂಗಣದಲ್ಲಿ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥರ ಬಯಾಗ್ರಫಿ ಬಿಡುಗಡೆಯಾಯಿತು. ಪುಸ್ತಕದ ನಿರೂಪಣೆ ಸುಮಂಗಲಾರವರದ್ದು. ಒಂದೆರಡು ಚಿತ್ರಗಳು ಇಲ್ಲಿವೆ:

ಬಿ ಕೆ ಚಂದ್ರಶೇಖರ್, ಚಂದ್ರಶೇಖರ ಕಂಬಾರ, ರಾಜೀವ ತಾರಾನಾಥ.

 

ಅಭಿನಂದನೆ

 

ಸಭಾಂಗಣ ತುಂಬಿ ಹೋಗಿತ್ತು, ನಿಲ್ಲಲೂ ಕೂಡ ಜಾಗವಿರದಷ್ಟು. ನಡುವೆ ಒಂದಷ್ಟು ಹೊತ್ತು ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ಕೊಡೋಣ ಎಂದು ಹೊರಟದ್ದು. ಅಲ್ಲಿ 'ಸುಧನ್ವಾರ್ಜುನ-ಶನೀಶ್ವರ ಮಹಾತ್ಮೆ' ಯಕ್ಷಗಾನ ನಡೆಯುತ್ತಿತ್ತು. ಪೆರ್ಡೂರು ಮೇಳದವರು ನಡೆಸಿಕೊಡುತ್ತಿದ್ದರು. ಅಲ್ಲಿ ತೆಗೆದ ಮತ್ತೊಂದು ಚಿತ್ರ ಇಲ್ಲಿದೆ:

 ಮುಂದೆ ಓದಿ »

ಹೊಸ ಜೀವನ, ಜೊತೆಗೆ

ಮದುವೆ

ಭಾನುವಾರ ಮದುವೆಯಾಯ್ತು. ಎಲ್ಲ ಸ್ನೇಹಿತರಿಗೆ ತಿಳಿಸಲಾಗಲಿಲ್ಲ, ಕ್ಷಮೆಯಿರಲಿ. 

 

ಫೋಟೋ: ವಸಂತ ಕಜೆ

 ಮುಂದೆ ಓದಿ »

ಯಾರ ಚಿತ್ರ ಇದು?

ಗುರುತು ಹಿಡಿಯಿರಿ ನೋಡೋಣ?

ಇತ್ತೀಚೆಗೆ ಮ್ಯೂಸಿಯಂ ಒಂದರಲ್ಲಿ ಸಿಕ್ಕ ಫೋಟೋ ಇದು.

ಅಮ್ಮ

ಅಮ್ಮ

ಇನ್ನು ಹಳತಾಯ್ತು ಹರಿದೀತು
ಬಣ್ಣ ಬಂದು ಮಾಸಿದೆಯೆಂದು ತೆಗೆದಿಟ್ಟು
ನಿನಗೆ ಕೊಟ್ಟ ಹಣ
ತನಗಿಟ್ಟುಕೊಳ್ಳದೆ
ಅಪ್ಪನ ಹೊಸ ಪಂಚೆಗೆ ಖರ್ಚು ಮಾಡಿದೆಯಲ್ಲ ಅಮ್ಮ
ನೀನುಡುವ ಸೀರೆಯೂ
ನಿನ್ನ ಶ್ರಮದ ಬದುಕಿಗೆ
ಸೊರಗಿದೆ ಮಾಸಿದೆ
ನಿನಗೆ ಹೇಗೆ ಅದು ನೆನಪಾಗಲಿಲ್ಲ?

ಹೊಸ ಚಿಗುರು

ಹಳತಾದ ಎಲೆ ಕಳೆದು ಹೊಸತು ಚಿಗುರಲಿ,

ನವ ಋತುವಿನ ಸವಿ ಬೆಳಕಿನಲ್ಲಿ

ಹಸುರು ಹಸುರಾಗಿ ಎಂದಿಗೂ

ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ

ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು ಬದಲಾವಣೆಗಳು ಮೂಡಿಬರಲಿವೆ. ಇನ್ನೆರಡು ತಿಂಗಳಿಗೆ ಸಂಪದ ಐದು ವರ್ಷಗಳ ಹರೆಯ. ಆ ಸಮಯಕ್ಕೆ ಸಾಧ್ಯವಾದಷ್ಟು ಹೊಸತುಗಳನ್ನು ತರುವ ಆಶೆ. ಬಲವಾದ ಬೇರಿದ್ದರಾಯಿತು, ಕನ್ನಡದ ಸುಗಂಧ ಇರುವವರೆಗೂ ಮತ್ತೆ ಮತ್ತೆ ಚಿಗುರೊಡೆಯುತ್ತಲೇ ಇರುತ್ತದೆ. ಕನ್ನಡಿಗರ ವಿಶ್ವಾಸ, ಒಲವು ಇದರೊಡನೆ ಇರುವವರೆಗೂ ಬೆಳೆಯುತ್ತಲಿರುತ್ತದೆ.

ಚಿತ್ರ: ಹರಿ ಪ್ರಸಾದ್ ನಾಡಿಗ್,

(ಚಿತ್ರ ಬಳಸಿಕೊಂಡಲ್ಲಿ ಸೂಕ್ತ ಕ್ರೆಡಿಟ್ಸ್ ಕೊಡುವುದು ಮರೆಯದಿರಿ)

 ಮುಂದೆ ಓದಿ »

Syndicate content