ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

hpn ರವರ ಬ್ಲಾಗ್

ದುಂಬಿಯರಸಿದ ಹೂವು

ದುಂಬಿಯರಸಿದ ಹೂವು

ದುಂಬಿಯರಸಿದ ಹೂವು
ಸಹಜ ಪ್ರಕೃತಿ ಚೆಲುವು
ಸ್ವರ್ಣ ಪರ್ಣ ದಳ.
ನೇಸರನ ಹೊಳಪು
ಜ್ವಾಲೆಯ ಸೊಬಗು
ಸವಿನಗೆಯ ಕುಸುಮ.

 ಮುಂದೆ ಓದಿ »

ಒಂದಷ್ಟು ಚಿತ್ರಗಳು

ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾಕುತ್ತಿರೋಣ ಎಂದುಕೊಂಡಿದ್ದೆ. ಅದಕ್ಕೆ ಪೂರಕವಾಗಿ ನೆನಪಿನಲ್ಲಿ ಮಾಸಿಹೋಗಿದ್ದ ಹವ್ಯಾಸವನ್ನು ಇತ್ತೀಚೆಗೆ ಮತ್ತೆ ಪ್ರಾರಂಭಿಸಲು ಸಾಧ್ಯವಾಯಿತು. ಕೈಯಲ್ಲಿ ಲೆನ್ಸ್ ಹಿಡಿದಾಗ ಕೆಲವೊಮ್ಮೆ ಅಲ್ಲಿಲ್ಲಿ ಕೇಳಿಬಂದ ಪ್ರತಿಕ್ರಿಯೆಗಳು ಹೊಸ ಐಡಿಯಗಳಿಗೆ ಬಾಗಿಲು ತೆರೆಯವುದುಂಟು. ಹೀಗಾಗಿ ಇಲ್ಲಿವೆ ಚಿತ್ರಗಳು - ಹೇಗಿವೆ? ಇಷ್ಟ ಆಯ್ತ? ಇಷ್ಟ ಆಗಲಿಲ್ಲವ? ಇದೇ ಚಿತ್ರಗಳನ್ನು ತೆಗೆಯುವುದಿದ್ದರೆ ನಿಮ್ಮ ಐಡಿಯಗಳೇನು? ಬರೆದು ತಿಳಿಸುತ್ತೀರಲ್ವ?

ನನ್ನದೊಂದು ಕನ್ನಡಿ

 ಮುಂದೆ ಓದಿ »

ಅಂಕೋಲೆ ಗಿಡ

ಅಂಕೋಲೆ ಗಿಡ ಅಥವ Alangium decapetalum.

Alangium decapetalum, ಅಂಕೋಲೆ ಗಿಡ.

Alangium decapetalum, ಅಂಕೋಲೆ ಗಿಡ.

ಫೋಟೋ ಇವತ್ತು ಬೆಳಿಗ್ಗೆ ತೆಗೆದದ್ದು.


ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ

ರವೀಂದ್ರ ಕಲಾಕ್ಷೇತ್ರದ ಬಳಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ ನಡೆಯುತ್ತಿದೆ. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ.

Kannada Book Fair, Ravindra Kalakshethra
ನಿನ್ನೆ ಶನಿವಾರ ನಾವು ಇಲ್ಲಿಗೆ ಹೋಗಿದ್ದೆವು. ಮುಖ್ಯವಾಗಿ ಮೈಸೂರು ಪ್ರಸಾರಾಂಗ, ಹಂಪಿ ವಿಶ್ವವಿದ್ಯಾನಿಲಯದ ಸ್ಟಾಲುಗಳಿಗೆ ಭೇಟಿ ಕೊಡದೆ ಬರುವಂತಿಲ್ಲ. ಏಕೆಂದರೆ ಅಲ್ಲಿರುವ ಸುಮಾರು ಪುಸ್ತಕಗಳು ಚೆಂದ ಇರೋದಷ್ಟೇ ಅಲ್ಲ, ಬೆಲೆ ನೋಡಿದರೆ ಶಾಕ್ ಆಗುವುದು ಗ್ಯಾರಂಟಿ. ಐದು ರೂಪಾಯಿ, ನಾಲ್ಕು ರೂಪಾಯಿ, ಏಳು ರೂಪಾಯಿ... ಹೀಗೆ! ಅದೂ ಒಳ್ಳೆಯ ಪುಸ್ತಕಗಳು (ಮತ್ತೆಲ್ಲೂ ಸಿಗದ ಪುಸ್ತಕಗಳು ಕೂಡ).  ಮುಂದೆ ಓದಿ »

ವಿಜಯ ಕರ್ನಾಟಕಕ್ಕೆ ಬರೆದ ಸಾಲುಗಳು

(ಈ ಚುಟುಕು ಬರಹ ಭಾನುವಾರ ಡಿಸೆಂಬರ್ ೨೭ ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. "ಕನಸಿನ ಉದ್ಯೋಗ"ದ ಬಗ್ಗೆ ಬರೆಯಬೇಕೆಂದು ಕೇಳಿದ್ದರು. ನಾನು ಬರೆದದ್ದು ಇಗೋ ನಿಮ್ಮ ಮುಂದಿದೆ)

ನನ್ನ ಕನಸಿನ ಉದ್ಯೋಗ ಕನಸು ಕಾಣುವುದು. ಅರೆ, ಇದೇನು? ಎಂದನಿಸಬಹುದು ನಿಮಗೆ. ಹೊಸತನ್ನು ಕನಸು ಕಾಣುತ್ತ ಅದಕ್ಕೆ ರೂಪ ಕೊಡುವುದು ನನ್ನ ಉದ್ಯೋಗ. ಹಣ ಮಾಡಬೇಕು, ದೊಡ್ಡ ಮನುಷ್ಯನಾಗಬೇಕು ಎಂಬ ಕನಸುಗಳಲ್ಲ. ಬದಲಿಗೆ ಹೀಗೊಂದು ಹೊಸತು - ಅದನ್ನು ಬೇರಾರೂ ಮಾಡಿರಕೂಡದು, ಮುಖ್ಯವಾಗಿ ಎಲ್ಲರಿಗೂ ಅದರ ಉಪಯೋಗವಾಗಬೇಕು!  ಮುಂದೆ ಓದಿ »

Syndicate content