November 17, 2012 - 12:03pm
ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ.
ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ.
ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ.
ಬೆಳಕಿನ ಸ್ವರೂಪ ಕತ್ತಲೆಯಿಂದಲೇ.
ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ.
ಒಲವಿನ ಆಶ್ರಯದಲ್ಲಿ ಬೆಳಕು ಕತ್ತಲಾಗಬಹುದು,
ಕತ್ತಲು ಬೆಳಕಾಗಬಹುದು.
ಕತ್ತಲೆ, ಬೆಳಕು ಮತ್ತೆಲ್ಲವೂ ಇವೆರಡರ ನಡುವೆಯೇ.
(ಪೂರ್ಣ ಚಿತ್ರ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ) Read more about ಕತ್ತಲು ಮತ್ತು ಬೆಳಕು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
November 15, 2012 - 12:40pm
ಆಗ ಬಹುಶಃ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದೀಪಾವಳಿ ಹತ್ತಿರ ಬಂತೆಂದರೆ ಕ್ಲಾಸಿನ ಹುಡುಗರಲ್ಲೆಲ್ಲ ಪಟಾಕಿಯದೇ ಮಾತು. ಪಾಠ ನಡೆಯುತ್ತಿರುವ ಹೊತ್ತೂ ಗುಸುಗುಸು ಎಂದು ಅದನ್ನೇ ಮಾತನಾಡುತ್ತಿದ್ದರು. ಕಳೆದ ವರ್ಷ ಯಾವ ರೀತಿ ಪಟಾಕಿ ಹೊಡೆದಿದ್ದೆವು, ಈ ವರ್ಷ ಹೊಸ ರೀತಿಯ ಪಟಾಕಿ ಯಾವುದು ಬರಲಿದೆ ಎಂಬುದರ ಬಗ್ಗೆ ಆಳವಾದ ಚರ್ಚೆ ನಡೆಯುತ್ತಿತ್ತು. ದೀಪಾವಳಿ ಇನ್ನೂ ಹದಿನೈದು ದಿನಗಳಿರುವಂತೆಯೇ ಪ್ರಾರಂಭವಾಗುತ್ತಿದ್ದ ಈ ಚರ್ಚೆ ಪಟಾಕಿ ಬಗ್ಗೆ ಅಷ್ಟೇನೂ ಒಲವಿಲ್ಲದ ಹುಡುಗರಿಗೂ ದೀಪಾವಳಿಯ ದಿನ ಪಟಾಕಿ ಸಿಡಿಸುವ ಕಾತುರ ಮೂಡಿಸುತ್ತಿತ್ತು.
ಆ ವರುಷ ಅಪ್ಪನ ಆಫೀಸಿನಲ್ಲಿ ಎಲ್ಲರೂ ಸೇರಿ ಶಿವಕಾಸಿಯಿಂದ ಪಟಾಕಿ ತರಿಸುವುದೆಂದು ಚಂದಾ ವಸೂಲಿ ಮಾಡಿದ್ದರಂತೆ. ಪ್ರತಿ ವರ್ಷ ಹೀಗೆಯೇ ಹಣ ಒಟ್ಟುಗೂಡಿಸಿ ಪಟಾಕಿ ತರಿಸುತ್ತಿದ್ದರಂತೆ. ಆದರೆ ಅದು ಶಿವಕಾಸಿಯದ್ದೋ ಅಥವ ಇಲ್ಲೇ ಕೊಯಂಬತ್ತೂರಿನದ್ದೋ ಯಾರಿಗೂ ಗೊತ್ತಿರಲಿಲ್ಲ. ಗೊತ್ತಿದ್ದದ್ದು ಇಷ್ಟು - ಪಟಾಕಿ ಒಟ್ಟಾಗಿ ಕೊಂಡಲ್ಲಿ ಕಡಿಮೆ ಬೆಲೆಗೆ 'ಗಿಫ್ಟ್ ಪ್ಯಾಕ್' ರೂಪದಲ್ಲಿ ಸಿಗುತ್ತದೆಂಬುದು. ಅಪ್ಪನ ಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಎಲ್ಲ ಅಪ್ಪ ಅಮ್ಮಂದಿರು ಪಟಾಕಿ ಬೇಕು ಎಂಬ ಮಕ್ಕಳ ಹಠಕ್ಕೆ ಇದೊಂದು ಸುಲಭದ ದಾರಿ ಕಂಡುಕೊಂಡಿದ್ದರು. ಸುಮಾರು ಇನ್ನೂರು ರೂಪಾಯಿಗಳಿಗೆಲ್ಲ ಒಂದು ಬಾಕ್ಸ್ ತುಂಬ ಪಟಾಕಿ ಸಿಗುತ್ತಿತ್ತು. ಬಾಕ್ಸೊಂದರಲ್ಲಿ ಎಲ್ಲ ರೀತಿಯ ಪಟಾಕಿಗಳನ್ನೂ ಒಂದಿಷ್ಟು ತುಂಬಿ ಕಳುಹಿಸುತ್ತಿದ್ದರು. ಸುರ್ ಸುರ್ ಬತ್ತಿ, ಆನೆ ಪಟಾಕಿಯಿಂದ ಹಿಡಿದು ರಾಕೆಟ್, ಲಕ್ಷ್ಮಿಯ ಚಿತ್ರವಿರುವ ಲಕ್ಷ್ಮೀ ಪಟಾಕಿ, ಹಸಿರು ನಿಶಾನೆಯಿದ್ದು ವಿಪರೀತ ಸದ್ದು ಮಾಡುವ ಹೈಡ್ರೋಜನ್ ಬಾಂಬ್ ವರೆಗೂ ಎಲ್ಲ ಇರುತ್ತಿದ್ದವು. ಇಂಥದ್ದೊಂದು ಬಾಕ್ಸ್ ಚಂದಾ ಹಣ ಕಟ್ಟಿದ್ದ ಅಪ್ಪನಿಗೂ ಬಂದಿತ್ತು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
September 10, 2012 - 9:16am
ಸಂಜೆಯ ವೇಳೆ ವಾಕಿಂಗ್ ಮಾಡುವುದೆಂದರೆ ನಾವಿರುವಲ್ಲಿ (ಬೆಂಗಳೂರಿನ ಪಶ್ಚಿಮ ಭಾಗ) ಸೂರ್ಯಾಸ್ತದ ಚೆಂದದ ಫೋಟೋ ಸೆರೆಹಿಡಿಯಲು ಸಿಗುತ್ತದೆ. ಹೀಗಾಗಿ ವಾಕಿಂಗ್ ಎಂದು ಹೊರಡುವಾಗ ಕ್ಯಾಮೆರಾ ಹಿಡಿದುಕೊಂಡು ಹೋಗುವುದು ಕಷ್ಟವಾದರೂ ಮೊಬೈಲನ್ನಾದರೂ ಜೊತೆಗೆ ಹಿಡಿದುಕೊಂಡು ಹೋಗುವ ಹವ್ಯಾಸ.
ಆ ದಿನ ಎಂದಿನಂತೆ ಡಾಕ್ಟರರ ಸಲಹೆಯನ್ನು ಪಾಲಿಸುವ ಸಲುವಾಗಿ ಹಾಗೆಯೇ ಅಮ್ಮನ ಮನೆಯ ಕಡೆ ವಾಕ್ ಹೊರಟಿದ್ದೆ. ಅಮ್ಮನ ಮನೆ ಹತ್ತಿರ ತಲುಪುತ್ತಿರುವಂತೆ ನನ್ನನ್ನು ನೋಡಿ ಅಕ್ಕನ ಮಗಳು ಓಡೋಡಿ ಬಂದಳು. ಅವಳಿಗೆ ಯಾರೋ ಹೊಸ 'ಫ್ರೆಂಡು' ಸಿಕ್ಕಿದ್ದಳಂತೆ. ಅದನ್ನು ತಿಳಿಸಲು ರೋಡು ದಾಟಿ ಓಡಿಕೊಂಡು ಬಂದಳು. ಅವಳ "ಹೊಸ ಫ್ರೆಂಡ್" ಕಥೆ ನನಗೆ ಆಗ ಅಷ್ಟಾಗಿ ಅರ್ಥವಾಗದಿದ್ದರೂ ಅವಳು ಓಡಿಬಂದ ದಾರಿಯಲ್ಲಿಯೇ ಸಾಲಾಗಿ ಮರದ ಕೆಳಗೆ ಬಿದ್ದಿದ್ದ ಹೂವುಗಳು ನನ್ನ ಗಮನ ಸೆಳೆಯಿತು. ಅವು ಆಕಾಶ ಮಲ್ಲಿಗೆ ಮರದ ಹೂವುಗಳು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
December 24, 2011 - 2:36pm
ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು ದಿನ ಕಡಿದುಬಿದ್ದಿತ್ತು. ನಿತ್ಯದ ಕೆಲಸ ಮನಸ್ಸನ್ನು ಆವರಿಸಿ ಬಿಡುವಿಲ್ಲದಂತಿರುವಾಗ ಹತ್ತಿರವೂ ಸುಳಿಯದ ಆಲೋಚನೆಗಳು ಈ ಸಮಯದಲ್ಲಿ ತಲೆ ಹೊಕ್ಕವು. ಉಸಿರಾಡಲೂ ಕಷ್ಟವಾಗುವ ಸಮಯ ಬೇರೊಂದು ವಿಷಯದ ಕುರಿತು ಆಲೋಚನೆ ಕೂಡ ಮಾಡಲಾಗದು. ಹೀಗಿದ್ದೂ ಕೆಲವು ವಿಷಯಗಳು ಕೊರೆಯುವ ಚಳಿಯಂತೆ ಆವರಿಸಿದಾಗ ಬಿಸಿಲಿಗಾಗಿ, ಬೆಳಕಿಗಾಗಿ ಹುಡುಕುವುದು ಸಹಜ. ಅಥವ ಆಲೋಚನೆಗಳನ್ನು ಬದಿಗಿಡಲು ಮತ್ತೊಮ್ಮೆ ಕೆಲಸದ ಮೊರೆ ಹೋಗುವುದೂ ಆದೀತು, ಆದರೆ ಎಷ್ಟು ಹೊತ್ತು ತಾನೆ ಕೆಲಸವೂ ಮಾಡಲಾದೀತು? Read more about ಮನಸ್ಸು, ಆರೋಗ್ಯ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
July 30, 2011 - 12:35am
ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ ಮಾಡಿಸುತ್ತಾರೆ ಅನ್ನಿಸುತ್ತೆ. ಅದಕ್ಕೇ ಹಾಗೆ ಹೆಸರಿಟ್ಟಿರೋದು. ಅದೇ, ಅಲ್ಲಿ ಊಟ ಮಾಡಿದರೆ ನೇರ ಶ್ರೀರಾಮನ ದರ್ಶನವೇ..." ಎಂದು ಮೇಲಕ್ಕೆ ಕೈ ಮಾಡಿ ತೋರಿಸಿ ನಗಿಸುವ ಪ್ರಯತ್ನ ಮಾಡುತ್ತಿದ್ದ. ಇವತ್ತು ಈ ಹೋಟೆಲಿನ ಹೆಸರು ನೋಡಿದಾಗ ಅದೇ ನೆನಪಾಗಿ, ಗೆಳೆಯ ನಗಿಸಲೆಂದು ಹೇಳುತ್ತಿದ್ದ "ದೇವರ ದರ್ಶನ" ಈಗ ಅಲ್ಲಿಲ್ಲಿ ತಿಂದು ಆಗಬೇಕಿಲ್ಲ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲಿ ಬೇಕಾದರೂ ಆಗಬಹುದು ಅನ್ನಿಸಿತು! Read more about ಕಲಿಯುಗದ ಐರಾವತ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
Pages