ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಎಲ್ರಿಗೂ ವಿಶೇಷವಾಗಿ ಕಹಳೆ ಊದಬೇಕೆ?
ಇತ್ತೀಚೆಗೆ
"ಯೂನಿಕೋಡ್ ಎನೇಬಲ್ ಮಾಡೋದು ಹೇಗೆ ಸಾರ್?"
"ವಿಂಡೋಸ್ ಎಕ್ಸ್ ಪಿ ನಲ್ಲಿ ಕನ್ನಡ ಬರುತ್ತಲೇ ಇಲ್ವಲ್ಲ ಸಾರ್, ಒತ್ತಕ್ಷರಗಳು ಸರಿಯಾಗಿ ಬರುತ್ತಿಲ್ಲ"
"ನಿಮ್ಮ ಸೈಟನ್ನು ಕಂಗ್ಲಿಷಿನಲ್ಲಿ ಹಾಕಿಬಿಡಿ, ನಾವು ವಿಂಡೋಸ್ %$#% ಬಳಸೋದು, ಅದರಲ್ಲಿ ನಿಮ್ಮ ಯೂನಿಕೋಡ್ ಕಾಣೋದಿಲ್ಲ"
"ಮ + ಊ ಯಾಕೋ ಸರಿಯಾಗಿ ಬರುತ್ತಿಲ್ಲ, ಸಾರ್"
"ನಿಮ್ಮ ವೆಬ್ಸೈಟು ಸರಿಯಾಗಿಲ್ಲ, ನೋಡ್ರಿ. ಕನ್ನಡ ಒತ್ತಕ್ಷರಗಳೇ ಕಾಣೋದಿಲ್ಲ. ತಪ್ಪುತಪ್ಪಾಗಿ ಕನ್ನಡ ಉಪಯೋಗಿಸುತ್ತಿದ್ದೀರಿ. ಕನ್ನಡವನ್ನೇ ಹಾಳು ಮಾಡ್ತಾ ಇದ್ದೀರಿ"
ಎಂದೆಲ್ಲ ಸುಮಾರು ಇ-ಮೇಯ್ಲುಗಳು ಬಂದುಬೀಳುತ್ತಿವೆ.
ಇವರಿಗೆಲ್ಲ ಎಷ್ಟು ಬಾರಿ ಹೇಳೋದು? ಅಷ್ಟೊಂದು ಸಮಯ ವ್ಯಯ ಮಾಡಿ ಹೆಲ್ಪ್ ಡಾಕ್ಯುಮೆಂಟ್ ಒಂದು ಪೇರಿಸಿಟ್ಟರೆ
"ನನಗದನ್ನು ಓದಲಾಗದು. ನೀವೇ ಬಾಯ್ಬಿಟ್ಟು ಹೇಳಿ"
ಎಂದರೆ ಹೇಗೆ?
ಎಲ್ಲರಿಗೂ ವಿಶೇಷವಾಗಿ ಕಹಳೆ ಊದಬೇಕೆ?
ಪ್ರತಿಯೊಬ್ಬರಿಗೂ ಉದ್ದುದ್ದ ಇ-ಮೇಯ್ಲುಗಳನ್ನು ಕಳಿಸಿ ಕಳಿಸಿ ಬೇಸರವಾಗಿ ಹೋಗಿದೆ.
ಎಲ್ಲರಿಗೂ ಯೂನಿಕೋಡ್ ಬಗ್ಗೆ ತಿಳಿಯುವಂತೆ, ಪೆದ್ದು ಪೆದ್ದಾಗಿ "ಕನ್ನಡವನ್ನೇ ಹಾಳು ಮಾಡುತ್ತಿದ್ದೀರಿ" ಎಂದು ದೂರದಂತೆ ಮಾಡುವುದು ಹೇಗೆ? ಎಲ್ಲರಿಗೂ ಬರೆದಿರುವ ಡಾಕ್ಯುಮೆಂಟೇಶನ್ ಓದುವಂತೆ ಮಾಡುವುದು ಹೇಗೆ?
ಓದುಗರು ನಿಮ್ಮ ಅಭಿಪ್ರಾಯಗಳೊಂದಿಗೆ, ಸಲಹೆಗಳೊಂದಿಗೆ ಭಾಗವಹಿಸಿ ಸಹಾಯ ಮಾಡಿ. ಚರ್ಚೆ ನಡೆಯಲಿ.

- hpn ರವರ ಬ್ಲಾಗ್
- Login or register to post comments
- 782 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ತಪ್ಪು ಕಲ್ಪನೆಗಳು
ಇದಕ್ಕೆ ಪರಿಹಾರವೊಂದೇ. ತಪ್ಪು ಕಲ್ಪನೆಗಳನ್ನ ಹೋಗಲಾಡಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಇದ್ದವರಿಗೆ ಗಣಕಯಂತ್ರದಲ್ಲಿ ಕನ್ನಡ ಉಪಯೋಗಿಸಬಹುದು ಎಂದು ಪ್ರಚುರಪಡಿಸುವುದು. ಇಂಗ್ಲೀಷನ್ನು ಎಷ್ಟು ಸಲೀಸಾಗಿ ಟೈಪಿಸಬಹುದೋ ಹಾಗೆಯೇ ಕನ್ನಡವನ್ನೂ ಅಷ್ಚೇ ಸುಲಭವಾಗಿ ಉಪಯೋಗಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಯೂನಿಕೋಡ್ ಎನೇಬಲ್ಡ್ ಮೇಲ್ ಕ್ಲಯಂಟ್ನಿಂದ ಕನ್ನಡದ ಮೇಲ್ ಕಳುಹಿಸುವುದು.
ಕೇವಲ ಹಲೋ ಮೇಯ್ಲ್ ನಿಂದಲೇ ಕನ್ನಡದಲ್ಲಿ ಮೇಯ್ಲ್ ಕಳುಹಿಸಬಹುದು, ಚಾಟ್ ಮಾಡಬಹುದು ಎಂದು ಬಹಳ ಜನಗಳಿಗೆ ತಿಳಿ ಹೇಳಿದ್ದೇನೆ. ಆದರೂ ಏನು ಮಾಡುವುದು. ನಾವಿರೋದೇ ಹಾಗೆ, ಯಾರಾದರೂ ತಿಳಿಸಿಕೊಡಲಿ ಅಂತಲೇ ಕಾಯ್ತಿರ್ತೀವಿ. ಸುಲಭವಾಗಿ ಕಂಗ್ಲೀಷ್ ಟೈಪಿಸಿಬಿಡುತ್ತೇವೆ. ಅದರ ಜೊತೆಗೆ, ಕೆಟ್ಟ ಪತ್ರಿಕಾ ಲೇಖನಗಳೂ ಬೇರೆ.
ಉದಾ: ಇತ್ತೀಚಿನ ಪ್ರಜಾವಾಣಿಯ ಒಂದು ಲೇಖನ.
ಪವನಜರು ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದರು ಕೂಡ ಸರಿಯಾಗಿಯೇ ಇದೆ.. http://sampada.net/node/808
ಆ ಲೇಖನ ಪ್ರಕಟವಾದ ದಿನ ನಮ್ಮ ಮನೇಲೂ ಚರ್ಚೆ ನಡೀತು. ನಾನು ನಮ್ಮ ತಂದೆಗೆ ಇದು ಎಷ್ಟು ಸುಳ್ಳು ಎಂದು ತೋರಿಸಿಕೊಟ್ಟೆ.
ಯಾವಾಗ ಜನರಿಗೆ (ಇಲ್ಲಿ ಜನ ಎಂದರೆ ಎಲ್ಲರೂ, ಕೇವಲ ತಾಂತ್ರಿಕ ಮಂದಿಯಲ್ಲ) ಕನ್ನಡ ಟೈಪಿಸುವುದು ಸುಲಭ ಎಂದು ಮನವರಿಕೆ ಯಾಗುವುದೋ ಅಂದೇ ಅವರು ವಿಷಯ ತಿಳಿಯಲು ತವಕಪಡುತ್ತಾರೆ.
ಉದಾ: ಪವನಜರೇ ಅನೇಕ ಲೇಖನ ಬರೆದಿದ್ದಾರೆ. ಆದರೆ ಅದನ್ನು ಎಷ್ಟು ಮಂದಿ ಓದಿದ್ದಾರೋ ಕಾಣೆ. ಇದಕ್ಕೆ ಕಾರಣ, ಅನೇಕ ವೇಳೆ ಇಂತಹ ಲೇಖನಗಳು ವಾರದ ಪುರವಣೆಗಳಾಗುತ್ತವೆ. ಬಹಳ ಮಂದಿಗೆ ಮುಖ್ಯ ಸಮಾಚಾರಗಳು ಮಾತ್ರ ಬೇಕಿರುತ್ತವೆ. ಪುರವಣೆಗಳನ್ನು ಓದುವವರು ಕಡಿಮೆ. ನಮ್ಮ ಪತ್ರಿಕಾ ವಲಯಕ್ಕೆ ಈ ಸುದ್ದಿಗಳು ಪ್ರಮುಖವೆನಿಸುವುದಿಲ್ಲ. ಅವಕ್ಕೆ ಕೇವಲ ಜಗಳ, ಯುದ್ಧ, ಕೊಲೆ, ಪಕ್ಷಾಂತರ ಇಂತಹ ಸುದ್ದಿಗಳೇ ಬೇಕಿರುತ್ತವೆ.
ಏನು ಮಾಡುವುದು ...ದೊಡ್ಡ ?????
ಕನ್ನಡ ಬಳಕೆಯ ಬಗೆಗೆ ಆಸಕ್ತಿ
ವಾಸ್ತವದಲ್ಲಿ ಇದು ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಯ ಬಗೆಗೆ ಸಾರ್ವತ್ರಿಕ ಅನಾಸಕ್ತಿಯನ್ನು ಸಹ ತೋರುತ್ತದೆ. ಅದಕ್ಕಾಗಿಯೇ ಪವನಜ ಅವರ ಖಾರದ ಪ್ರತಿಕ್ರಿಯೆ ಸರಿಯಾಗಿಯೇ ಇದೆ. ನಾನು ಹಲವು ವಿಂಡೋ ಎಕ್ಸ್ ಪಿಗಳಲ್ಲಿ ಕನ್ನಡ ಎನೇಬಲ್ ಮಾಡಿದ್ದಾರೆಯೇ ಚೆಕ್ ಮಾಡಿದ್ದೇನೆ. ಯಾವುದರಲ್ಲಿಯೂ ಹಾಗೆ ಮಾಡಿರಲಿಲ್ಲ.(ಇದು ಯಾವ ಭಾರತೀಯ ಭಾಷೆಯನ್ನು ಬಳಸದಂತೆ ಮಾಡುತ್ತದೆ). ಒಮ್ಮೆ ಕಂಗ್ಲೀಷ್ ನಲ್ಲಿ ಟೈಪಿಸುವುದು ಅಭ್ಯಾಸವಾದ ನಂತರ ಇನ್ ಸ್ಕ್ರಿಪ್ಟ್ ಗೆ ಹೊರಳುವುದು ಕಷ್ಟವೆಂದೇ ಹಲವರು ಭಾವಿಸುತ್ತಾರೆ. ಆದರೆ ಇದು ಕನ್ನಡ ಟೈಪಿಸುವ ವೇಗವನ್ನು ಹೆಚ್ಚಿಸುತ್ತದೆ. ಕಷ್ಟವಾದಲ್ಲಿ ಕಂಗ್ಲೀಷ್ ನಲ್ಲೇ ಟೈಪಿಸಿ ಬರಹ ಕನ್ ವರ್ಟರ್ ಗಳನ್ನು ಬಳಸಿ, ಯುನಿಕೋಡ್ ಗೆ ಬದಲಾಯಿಸಿಕೊಳ್ಳಬಹುದು. ಆದರೆ ವಿಶಿಷ್ಟ ಕೀಲಿ ಮಣೆ ಬಳಸುವ ಆನಂದವೇ ಬೇರೆ.
ಮೂಲತಃ ಅಗತ್ಯವಿರುವುದು ಈ ಬಗೆಗೆ ಆಸಕ್ತಿ.
ಪ್ರದೀಪ್
ಮೊದಲ ಹಲ್ಲು
ಈಗಿನ ಪರಿಸ್ಥಿತಿ ಮೊದಲ ಹಲ್ಲು ಬರುವಾಗ ನವೆ ಇರುವ ಹಾಗೆ ಇದೆ. ಇಂತಹ ಅಂತರ್ಜಾಲ ತಾಣ ಮತ್ತೊಂದಿಲ್ಲದಿರುವುದರಿಂದ ಮತ್ತು ಎಲ್ಲರಿಗೂ ಉತ್ತರಿಸುವುದರಿಂದ ಬರ್ತಾರೆ, ಕೇಳ್ತಾರೆ. ನನಗೆ ಇದುವರೆವಿಗೂ ಯಾರೂ ಜಾಸ್ತಿಯಾಗಿ ಅಂಚೆ ಕಳುಹಿಸಿಲ್ಲ. ಆದ್ದರಿಂದ ನಿಮ್ಮಲ್ಲಿಗೆ ಬರುವ ಒಂದಷ್ಟು ಅಂಚೆಗಳನ್ನು ನನಗೆ ರವಾನಿಸಿ. ನನಗೂ ಸ್ವಲ್ಲ್ಪ ತಲೆಕೆಡಲಿ.
ಅಂತರ್ಜಾಲ ತಾಣದಲ್ಲಿ ಕನ್ನಡ ಬಳಕೆ ೧೦೦% ಆಗುವವರೆವಿಗೂ ನಾವು ತಾಳ್ಮೆ ತಳೆಯಬೇಕು. ನೀವೇ ನೋಡಿದ್ದೀರಲ್ಲ - ಬೇರೆ ತಾಣಗಳಲ್ಲಿ ಇನ್ನೂ ಕಂಗ್ಲೀಷಿನಿಂದ ಮುಂದಕ್ಕೆ ಹೋಗೇ ಇಲ್ಲ. ಜನರನ್ನು ಬದಲಿಸೋಕ್ಕಾಗೋಲ್ಲ. ನಾವೇ ಬದಲಾಗೋಣ.
ಅಂಚೆಗಳನ್ನು ನನಗೆ ಕಳುಹಿಸಿ - ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ಕೊಡಿ ಎಂದು ಕೋರುವೆ. ನಿಮ್ಮ ಆ ಕೆಲಸ ಬಹಳ ಮುಖ್ಯ. ಅದರ ಅರಿವು ಇಂದು ನಮಗಾಗದು - ಮುಂದೆ ಅದರ ಫಲ ಅನುಭವಿಸುವಾಗ ಆಗುವುದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net