Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಬೇಸಿಗೆ

May 5, 2006 - 2:27am — hpn

ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ!

ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬೇಸಿಗೆಯಲ್ಲಿ ಬೆಂದು ಹೋಗುವಷ್ಟು ಬಿಸಿಲು ಬೆಂಗಳೂರಿನಲ್ಲಿಯೂ ಇತ್ತು.
ಪಕ್ಕದ ಆಂಧ್ರದ ಕಡೆಗೆ ಇರುವ ಕೆಲವು ಬಡಾವಣೆಗಳು, ಏರ್ಪೋರ್ಟ್ ರೋಡು ಕಡೆ ಈಗಲೂ ಬಿಸಿಲು ಜೋರಾದರೆ ಕಾಲಿಡಲೂ ಕಷ್ಟವಾಗುವ ಹಾಗಿವೆ.
ಜಯನಗರ, ಜೆ ಪಿ ನಗರ ಕೊನೆಗೆ ಮಲ್ಲೇಶ್ವರದ ಕೆಲವು ಏರಿಯಾಗಳು ಹಾಗೆ ನೋಡಿದರೆ ಸಾಕಷ್ಟು ಕೂಲ್ ಆಗಿರುತ್ತವೆ. ಜಯನಗರದಲ್ಲಿ ಲಾಲ್ ಬಾಗ್ ಸುತ್ತ ಮುತ್ತ ಈ ಬೇಸಿಗೆಯಲ್ಲೂ ಸ್ವಲ್ಪ ತಂಪು ವಾತಾವರಣವಿರುತ್ತದೆ. ಇನ್ನು ಇರೋ ಕೆಲವು ಮರಗಳನ್ನು ಕಾಪಾಡಿಕೊಂಡು ಹೋದರೆ ಬೆಂಗಳೂರಿನ ಮರ್ಯಾದೆಯಾದರೂ ಉಳಿಯಬಹುದೆಂಬ hope ಒಂದೆಡೆಯಿದ್ದರೂ ಹೆಚ್ಚುತ್ತಿರುವ ಮಾಲಿನ್ಯ ಅದೆಷ್ಟು ಮರಗಳನ್ನು ಹಾಗೇ ಬಿಡುತ್ತವೋ ಕಾದು ನೋಡಬೇಕು.

*******

ಬೇಸಿಗೆ nostalgia

ಭದ್ರಾ ನದಿ ದಂಡೆಯ ಮೇಲಿರುವ ಹಳ್ಳಿ (ಈಗ ತಾಲೂಕಾಗಿರಬಹುದು) ಹೊಳೆಹೊನ್ನೂರಿನಲ್ಲಿ ನಮ್ಮ ಅಜ್ಜನ ಮನೆಯಿತ್ತು. ಅವರ ಮನೆಗೆ ನಾವು ಹೋಗುತ್ತಿದ್ದುದು ಆಗೊಮ್ಮೆ ಈಗೊಮ್ಮೆ - ಬೇಸಿಗೆ ರಜೆಯಲ್ಲಿಯೇ ಹೆಚ್ಚು. ಅಜ್ಜನ ಮನೆ ಸಂಪೂರ್ಣ ಮಣ್ಣಿನಲ್ಲಿ ಕಟ್ಟಿದ್ದು! ಫ್ಯಾನು ಇರಲಿಲ್ಲ,
"ತೆಗೀರೋ ಅತ್ಲಾಗೆ! ಅದೇನು ಫ್ಯಾನು ಫ್ಯಾನು ಅಂತ ಹೊಡ್ಕೋತೀರ? ಹೊರ್ಗಡೆ ತಣ್ಣಗ್ ಗಾಳಿ ಬೀಸ್ತಾ ಇದೆ. ಅಲ್ ಹೋಗ್ ಕೂತ್ಕಳಿ " ಅಂತ ಬೈಯುತ್ತಿದ್ದರು. ಅವರ ಊರು ಆಗ ಹಾಗೆಯೇ ಇತ್ತು, ಕೂಡ. ಹೊರಗೆ ತಂಪಾದ ಗಾಳಿ ಬೀಸುತ್ತಿತ್ತು. ಮಣ್ಣಿನ ಮನೆಯ ಮುಂದೆ ಜಗಲಿ ಇತ್ತು. ಅಲ್ಲಿ ಕುಳಿತರೆ ಪಕ್ಕದಲ್ಲಿ ಅಜ್ಜ ಕಟ್ಟಿಸಿದ್ದ ಚಿಕ್ಕ ದೇವಸ್ಥಾನವಿದ್ದರಿಂದ ಅಕ್ಕ ಪಕ್ಕ ಖಾಲಿ ಜಾಗ ಇದ್ದು ಗಾಳಿ ಹೆಚ್ಚು ಸೊಂಪಾಗಿ ಬೀಸುತ್ತಿತ್ತು.
ಭದ್ರಾ ನದಿ ಮಾತ್ರ ನಾನು ನೋಡಿದಂತೆ ಯಾವತ್ತೂ ಶುಭ್ರವಾಗಿರಲಿಲ್ಲ. ನಮ್ಮ ತಂದೆಯವರು ಸಣ್ಣವರಿದ್ದಾಗ ನದಿಯಲ್ಲಿ ಈಜುತ್ತಿದ್ದರಂತೆ - ಆಗ ನದಿ ಶುಭ್ರವಿತ್ತಂತೆ... ಈಗ ಮಾತ್ರ ಆ ಕಪ್ಪು ನೀರು ನೋಡಿದರೆ ಈಜುವುದಿರಲಿ ಹತ್ತಿರ ಸುಳಿಯೋದೂ ಕಷ್ಟ!

ಚಿತ್ರದುರ್ಗದಲ್ಲಿ ಯದ್ವಾತದ್ವಾ ಬಿಸಿಲು! ಬೇಸಿಗೆ, ಚಳಿಗಾಲ ಅನ್ನೋದೇ ಅಲ್ಲಿ ಇರಲಿಲ್ಲ ಅನ್ಸತ್ತೆ. ಒಣಕಲು ಹವಾಮಾನ, ನೀರಿನ ಪರದಾಟ (ಆಗ ೩ - ೪ ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು, ಮನೆಯಿಂದ ದೂರ ಒಂದು ನಲ್ಲಿಯಲ್ಲಿ ಮಾತ್ರ ಮುನ್ಸಿಪಾಲಿಟಿ ನೀರು ಬರುತ್ತಿತ್ತು. ಯಾರಾದರೂ ಕೊಡ ಹಿಡಿದುಕೊಂಡು ಹೋಗಿ ನೀರು ಹೊತ್ತು ತಂದರೆ ಮಾತ್ರ ಮನೆಗೆ ನೀರು!). ನಮ್ಮ ಡ್ಯಾಡಿ ನಾಲ್ಕು ಕಬ್ಬಿಣದ ಡ್ರಮ್ಮುಗಳನ್ನ ತಂದಿಟ್ಟಿದ್ದರು. ಮೂರು ನಾಲ್ಕು ದಿನಗಳಿಗೊಮ್ಮೆ ಎಲ್ಲರೂ ಕೊಡ ಹಿಡಿದು ಹೋಗಿ ನೀರು ತುಂಬಿಸಿಕೊಂಡು ಬಂದು ಹಾಕುತ್ತಿದ್ದುದು ನೆನೆಸಿಕೊಂಡರೆ ನಗು ಬರುತ್ತೆ! Smiling
ಚಿತ್ರದುರ್ಗಕ್ಕೆ ನಮ್ಮ ಅಜ್ಜ ಭೇಟಿ ಕೊಟ್ಟರೆ ಯಾವತ್ತೂ ಫ್ಯಾನ್ ಹಾಕಿಕೊಳ್ಳುತ್ತಿರಲಿಲ್ಲ. ಹೊರಗೆ ಖುರ್ಚಿ ಹಾಕಿಕೊಂಡು ತಣ್ಣನೆ ಗಾಳಿ ಬೀಸುವುದೆಂದು ಕುಳಿತುಕೊಳ್ಳುತ್ತಿದ್ದರು. ಗಾಳಿ ಮಾತ್ರ ಬೀಸುತ್ತಿರಲಿಲ್ಲ. ಬೀಸಿದರೂ ತಣ್ಣಗಿರುತ್ತಿರಲಿಲ್ಲ.

ಶಿವಮೊಗ್ಗದಲ್ಲಿ ಮಾತ್ರ ನೀರಿನ ಕೊರತೆಯಿರಲಿಲ್ಲ. ಸಿಹಿಯಾಗಿರೋ ತುಂಗಾ ನೀರು ದಿನಕ್ಕೊಂದು ಸಾರಿನೋ ಎರಡು ದಿನಕ್ಕೊಮ್ಮೆನೊ ಸೀದ ಕೆಳಗಿದ್ದ sumpಗೆ ಬರ್ತಾ ಇತ್ತು. ಆದರೆ ಮಲೆನಾಡಿಗೆ ಹತ್ತಿರವಾದರೂ, ಶಿವಮೊಗ್ಗೆಯ ಬಿಸಿಲಿನದ್ದು ಅತಿರೇಕದ ಝಳ. ಸ್ವಲ್ಪ ಹೊತ್ತು ಸೈಕಲ್ ಹೊರಗೆ ಒರಗಿಸಿಟ್ಟು ಬಂದಿದ್ದರೆ ಸಾಕು ಸೀಟುಗಳು ಚುರುಕ್ ಮುಟ್ಟಿಸುತ್ತಿದ್ದವು.

*******

AC ಬೇಕು

ಹಿಂದೊಮ್ಮೆ ಕೂಲರ್ ತಂದು ಮನೆಯೆಲ್ಲಾ 'ಕೂಲ್' ಮಾಡಬೇಕಿದ್ದ ಕೂಲರ್ ನಮ್ಮನ್ನೆಲ್ಲಾ ಫೂಲ್ ಮಾಡಿ ಫೌಲ್ ವಾಸನೆ ಹೊರಗೆಡವತೊಡಗಿದ್ದಾಗ ಅದನ್ನು ಯಾರಿಗೋ 'ದಾನ' ಮಾಡಿ ನಮ್ಮಣ್ಣ ಅದಕ್ಕೆ ಇತಿಶ್ರೀ ಹಾಡಿದ್ದ. ಮುಂದೆ ಕೊಂಡು ತಂದರೆ ಕೂಲರ್ ಬೇಡ, AC ನೇ ತರಬೇಕು ಎಂದೇ ನಿರ್ಧಾರವಾಗಿತ್ತು.
ನನ್ನ ಸ್ನೇಹಿತರೆಲ್ಲ ತಣ್ಣಗೆ AC ಇರುವ ಆಫೀಸಿನಲ್ಲಿ ಕುಳಿತು ಕೆಲಸ ಮಾಡುತ್ತಿರುವಾಗ ನಾನೇಕೆ ಶೆಕೆಯಲ್ಲಿ ಕುಳಿತು ಚರ್ಮ ಸುಟ್ಟುಕೊಳ್ಬೇಕು ಅಂತಂದ್ಕೊಂಡು ಏ ಸಿ ರೇಟು ವಿಚಾರಿಸಲು ಹೋದೆ. ಶೋ ರೂಮ್ ಗೆ ಕಾಲಿಟ್ಟು price ಕೇಳಿದಾಗ heavy ಶಾಕ್ ಆಗಿ ಮನೆಗೆ ವಾಪಸ್ ಓಡ್ದೆ. ಸದ್ಯ ಈ‌ ಸಲ ಬೇಗ ಮಳೆ ಬಂದ್ರೆ ಸಾಕು!

Ornamental seperator
  • hpn ರವರ ಬ್ಲಾಗ್
  • Login or register to post comments
  • 695 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2006 - 9:09am — ಮಹೇಶ ಭೋಗಾದಿ

ಹಾಸನದಲ್ಲಿ ಬೇಸಿಗೆ

ಮಹೇಶ ಭೋಗಾದಿ's picture

ಬೆಂಗಳೂರಿನಲ್ಲಿ ಸಾಲಿನಿಂದ ಸಾಲಿಗೆ ಶೆಕೆಹೆಚ್ಚುತ್ತಿರುವುದು ನಮೆಲ್ಲರ ಅನುಭವಕ್ಕೆ ಬರುತ್ತಾ ಇದೆ. ಆದರೆ ಬೆಂಗಳೂರು, ಇಂದಿಗು ನಮ್ಮೂರು ಮಂಡ್ಯದ ಶೆಕೆಗೆ ಹೋಲಿಸಿದರೆ ಎಷ್ಟೋ ವಾಸಿ.

ಆದರೆ ಹಾಸನದಲ್ಲಿ ಬೇಸಿಗೆ ಬಹಳ ಚೆನ್ನಾಗಿರುತ್ತದೆ. ನಾನು ಚಿಕ್ಕಂದಿನಲ್ಲಿ ಬೇಸಿಗೆರಜೆಕಳೆಯಲು ನಮ್ಮಜ್ಜಿಮನೆಗೆ ಹೋಗುತ್ತಿದ್ದೆ. ಅರೆಮಲೆನಾಡಾದ ಹಾಸನಕ್ಕೆ ಜನ "ಬಡವರ ಊಟಿ" ಎನ್ನುವುದು ನಿಜವಾಗಲು ಸೂಕ್ತವಾಗಿದೆ. ಹಾಸನ ಮೊದಲೆ, ಹಣ್ಣು ತರಕಾರಿಗಳಿಗೆ ಹೆಸರುವಾಸಿ. ಅದರಲ್ಲೂ ಹಾಸನದ ಸೌತೆಕಾಯಿ ಬಹಳ ಚೆನ್ನಾಗಿರುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 5, 2006 - 2:30pm — ರಘುನಂದನ

ವೆರೈಟಿ ಬಿಸಿಲು

ರಘುನಂದನ's picture

ಶಿವಮೊಗ್ಗೆಯ ಬಿಸಿಲೇ ಹೀಗಾದರೆ, ಬಳ್ಳಾರಿ, ರಾಯಚೂರು ಹೇಗೋ ಏನೋ ದೇವರೇ ಬಲ್ಲ. ಸೂರ್ಯನಿಗೂ ಛತ್ರಿ ಬೇಕಾದೀತು,... ಏಸಿಯೋ ಫ್ರಿಜ್ಜೋ ಬೇಕಾದೀತು. ನಿಜವಾಗಿಯೂ ಅಲ್ಲಿಯ ಜನ ಕಷ್ಟ ಸಹಿಷ್ಣುಗಳೇ ಸರಿ. ಬೀಚಿಯವರು ಹೇಳ್ತಿರ್ಲಿಲ್ವೇ? ಬಳ್ಳಾರಿಗೆ ಎರಡೇ ಕಾಲ. ಒಂದು ಬೇಸಿಗೆ ಕಾಲ ಇನ್ನೊಂದು ಬಿರುಬೇಸಿಗೆ ಕಾಲ ಅಂತ! ರಾಮಗುಂಡಂ ಅನ್ನುವ ಊರೊಂದಿದೆ ಆಂಧ್ರದಲ್ಲಿ, ಕಲ್ಲದ್ದಲಿನ ಗಣಿಗಾರಿಕೆಯ ಪ್ರದೇಶ, ಉಷ್ಣ ವಿದ್ಯುತ್ ಸ್ಥಾವರವಿರುವ ಊರದು. ಕಳೆದ ವರ್ಷ ಅಲ್ಲಿದ್ದ ಉಷ್ಣತೆ ೫೦ ಡಿಗ್ರೀ. ಇನ್ನೂ ಜಾಸ್ತಿಯಾಗಬಹುದಂತೆ, ನಾವೇ ವಾಸಿ ನಮ್ಮ ಊರು ಹರಿಹರ ತಂಪಾಗಿದೆ.

ಎನಗಿಂತ ಕಿರಿಯರಿಲ್ಲ
ರಘುನಂದನ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಳೆ
  • ನೀರಿನ ಮುಂದೆ ನಾವ್ಯಾರು?
  • ಮಲೆನಾಡಿನ ಬ್ಯಾಸಿಗಿ ದಿನಚರಿ......!
  • ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
  • ಅಂಬರಕ್ಕೆ ಹಾರಿತಯ್ಯೋ!!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’
  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
  • ಮನಹ್ಪಠಲ
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 5:21pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator