ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಕನ್ನಡಕ್ಕಿಂದು ಬೇಕಾಗಿರುವುದು...
'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ!
ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮನಸ್ಸಿನಲ್ಲಿದ್ದದ್ದನ್ನೇ endorse ಮಾಡುವ ಹಾಗೆ ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಮೂಡಿಬಂದ ಲೇಖನದಲ್ಲಿ ಲೇಖಕರೊಬ್ಬರು ಬರೆದದ್ದು.
ಇಂದು ಕನ್ನಡಕ್ಕೆ "ಹೋರಾಟ" ಬೇಕಾಗಿದೆ ಎಂದು ಹೇಳುವವರು 'ರಾಜಕೀಯ' ಪ್ರೇರಿತರೆ... ಅಥವಾ ಕನ್ನಡವನ್ನು ಮೂಲವಾಗಿಸಿಟ್ಟುಕೊಂಡು ಒಂದಲ್ಲ ಒಂದು ರೀತಿಯ ಸ್ವಾರ್ಥವನ್ನು ಬಯಸುವವರು ಎಂದು ಹೇಳಿದರೆ ತಪ್ಪಾಗದು. ಕನ್ನಡ ಬಳಸದ, ಕನ್ನಡ ಪುಸ್ತಕಗಳನ್ನೋದದ, ಕನ್ನಡ ಪತ್ರಿಕೆಗಳನ್ನೋದದ ಹಲವರು 'ಕನ್ನಡಿಗರು' ಹೋರಾಟ ನಡೆಸಲು ಮಾತ್ರ 'ನಾ ಮುಂದು ತಾ ಮುಂದು' ಅನ್ನುತ್ತಾ ಇರೋದು ವಿಡಂಬನೆಯಲ್ವೆ?
ಲೇಖನದಿಂದ:
"What Kannadigas lack is the reading habit vis-a-vis other communities, be it a newspaper or any other form of literature. "
"More than a fighting spirit, what needs to be improved upon are reading habits, study of literature, and recognition to latent literary talents so that this get its due space in the comity of Kannada society."
"Even this crisis is showcased in terms of the Kannada movie world, and, unfortunately, it is the movie buffs who decide the pro-Kannada movements."
"For, the development or otherwise of a language depends upon the growth of literature. But unfortunately, in Karnataka, it is the movie field which rules the roost."
ನೀವೇನು ಹೇಳ್ತೀರಿ? ![]()

- hpn ರವರ ಬ್ಲಾಗ್
- Login or register to post comments
- 1443 hits
- Email this blog





RSS:
ಪ್ರತಿಕ್ರಿಯೆಗಳು
activism ಕುರಿತು
ಲೇಖನದಲ್ಲಿನ ಅಭಿಪ್ರಾಯವು ನನ್ನ ಅಭಿಪ್ರಾಯವೂ ಕೂಡ.ಎಷ್ಟೋ ಜನ ಬೀದಿ ಬದಿಗಳಲ್ಲಿ ಮಾರುವ sidney sheldon, dan brown ಪುಸ್ತಕಗಳನ್ನು ಕೊಳ್ಳುತ್ತಾರೆ .(ಅವುಗಳನ್ನು ಓದುತ್ತರೋ ಇಲ್ಲವೋ ಅದು ಬೇರೆ ವಿಚಾರ) ಆದ್ರೆ ಕನ್ನಡ ಲೇಖಕರ ಪುಸ್ತಕಗಳ ಬಗ್ಗೆ ಇರೋ ಅಸಡ್ಡೆ ನನಗೆ ಸ್ವಲ್ಪ ಅಚ್ಚರಿನೇ ಮೂಡಿಸುತ್ತೆ. ಈ ಮಾತು ಕನ್ನಡಕ್ಕೆ ಮಾತ್ರ ಸೀಮಿತವಾಗದೇ ಎಲ್ಲ ಪ್ರಾಂತೀಯ ಭಾಷೆಗಳಿಗೂ ಅನ್ವಯಿಸುತ್ತದೆ.
ಕನ್ನಡ ಪುಸ್ತಕಗಳು
ನಿಜ. ಕನ್ನಡ ಪುಸ್ತಕಗಳಿಗೆ ಬಹುಶಃ better marketing ಹಾಗೂ publicityಯ ಅವಶ್ಯಕತೆ ಇದೆ. ಜನರ ಮನದಲ್ಲಿ ನಿಲ್ಲುವುದು ಅವರಿವರು ಮಾತನಾಡಿಕೊಳ್ಳುತ್ತಿರುವುದು, ಬೇರೊಬ್ಬರು ಕೊಂಡು ತರುತ್ತಿರುವ ವಸ್ತುಗಳ ಬಗ್ಗೆ.
ಕನ್ನಡ ಟಿ ವಿ ಚಾನಲ್ಲುಗಳಲ್ಲಿ ಈ ರೀತಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ (ನಾನು ಹೆಚ್ಚಾಗಿ ಟಿ ವಿ ನೋಡಲ್ಲ)... ಸಿನಿಮಾಗಳ ಪರಿಚಯ ಜನರಿಗೆ ನೀಡಿದಂತೆ ಪುಸ್ತಕಗಳ ಬಗ್ಗೆಯೂ ನೀಡಬಹುದು. ಕನ್ನಡ ಪುಸ್ತಕಗಳನ್ನು ಕೊಳ್ಳೋದು, ಅದನ್ನು ಓದೋದು popular cultureನಲ್ಲಿ (ಇಂಗ್ಲಿಷಿನಲ್ಲಾದಂತೆ) ಅಡಕವಾದ್ರೆ ಸಾಕು, ಕನ್ನಡದ ಸಾಹಿತ್ಯ ಎಷ್ಟೋ ಬೆಳವಣಿಗೆಯಾಗುತ್ತೆ, ಅದರೊಂದಿಗೆ ಕನ್ನಡ ಬಳಕೆಯೂ ಹೆಚ್ಚತ್ತೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಕನ್ನಡಕ್ಕಿಂದು ಬೇಕಾಗಿರುವುದು....
ವ್ಯಕ್ತ ಪಡಿಸಿರುವ ನಿಲುವು ಸರಿಯಾಗಿಯೇ ಇದೆ. ಪತ್ರಿಕೆಗಳು, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳಸ ಬೇಕಿದೆ. ನನ್ನ ಸಂಬಂಧಿಕರೊಬ್ಬರಿಗೆ ನಿಮ್ಮ ಆದಾಯದ ಎಷ್ಟು ಭಾಗ ಪುಸ್ತಕಗಳಿಗೆ ಖರ್ಚು ಮಾಡುತ್ತೀರೆಂದು ಪ್ರಶ್ನಿಸಿದರೆ ಅವರಿಗೇಕೋ ಇರುಸು ಮುರುಸಾಯಿತು. ಅಲ್ಲಾ ಸ್ವಾಮಿ ನಿಮ್ಮ ಸ್ಥಳದಲ್ಲಿ ನಿಮ್ಮ ಆಯ್ಕೆಯ ಪುಸ್ತಕಗಳು ಲಭ್ಯವಿಲ್ಲವೆನ್ನಿ, ನೀವು ಬೇರೆ ಊರಿಗೆ ಓದಾಗ ತರಬಹುದಲ್ಲವೆ?
ವಾಸ್ತವದಲ್ಲಿ ಕನ್ನಡ ಪುಸ್ತಕ ಮಳಿಗೆಗಳು ಹಲವು ಪಟ್ಟಣಗಳಲ್ಲಿ ಇಲ್ಲ. ಈ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ ನ ಕೆಲವರೊಂದಿಗೆ ಚರ್ಚಿಸಿದೆ. ಅದು ಬೀಜ ವೃಕ್ಷ ನ್ಯಾಯದಂತಾಗಿದೆ. ಕನ್ನಡ ಪುಸ್ತಕಗಳು ಕೊಳ್ಳಲು ಮಾರಾಟಗಾರರು ಬೇಕು, ಮಾರಟಾಗಾರರು ಮುಂದೆ ಬರಬೇಕೆಂದರೆ ಕನ್ನಡ ಪುಸ್ತಕ ಕೊಳ್ಳುವವರಿರ ಬೇಕು. ಇಷ್ಟೆಲ್ಲ ಕನ್ನಡ ಉತ್ಸವ ಮಾಡುವಲ್ಲಿ ಹಣ ಚೆಲ್ಲುವ ಕೆಲವರಾದರೂ ಈ ಬಗೆಗೆ ಯೋಚಿಸುವಂತಾಗಲಿ.
ಕನ್ನಡದ ಹಲವು ಸಮಸ್ಯೆಗಳ ಬಗೆಗೆ ಚರ್ಚಿಸುವರರಲ್ಲಿ ಪಿ ವಿ ನಾರಾಯಣ ಪ್ರಮುಖರು. ಅವರು `ಕನ್ನಡ ರಾಷ್ಟ್ರೀಯತೆ`ಯ ಪರಿಕಲ್ಪನೆಯನ್ನೂ ಗಂಭೀರವಾಗಿಯೇ ಪ್ರತಿಪಾದಿಸುತ್ತಿರವವರಲ್ಲಿ ಪ್ರಮುಖರು. ಅವರ ಲೇಖನ `ಭಾರತಕ್ಕೊಂದು `ದ್ವಿಪೌರ` ನೀತಿ` ಒಂದು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಇದು ಭಾಷಾ ವಲಸೆಗಳ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳೆಡೆ ನಮ್ಮ ಗಮನ ಸೆಳೆಯುತ್ತದೆ. ಆಸಕ್ತರು ಲೇಖನವನ್ನು ಓದಬಹುದು.
http://www.prajavani.net/dec072004/870120041207.php
ನಿಮ್ಮ ಮಾತನ್ನ ನಾನೂ ಒಪ್ಪುತ್ತೇನೆ !
ಇದು ನೂರಕ್ಕೆ ನೂರರಷ್ಟು ಸತ್ಯ. ಇಂಥದ್ದೇ ಅನುಭವ ನನಗೂ ಆಗಿದೆ. ಎಷ್ಟೋ ಜನ ಕನ್ನಡದವರೆಂದು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ ಆದರೆ ಕನ್ನಡ ಓದಲೂ ಸಹ ಬರುವುದಿಲ್ಲ ಎನ್ನುವುದು ವಿಪರ್ಯಾಸ !
ಧನ್ಯವಾದಗಳೊಂದಿಗೆ ಅರವಿಂದ http://www.belaku.net