ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಇಪ್ಪತ್ತೈದರ ಬೇಸರ
ಬಾಲ್ಯದಲ್ಲಿ ಹುಟ್ಟು ಹಬ್ಬ ಹತ್ತಿರ ಬರುತ್ತಲೇ ಸಂಭ್ರಮ, ಹೆಮ್ಮೆ, ಸಡಗರ. ಚಾಕಲೇಟ್ ಹಂಚುವ ಆಸೆ. ಉಡುಗೊರೆ ಪಡೆಯುವ ಮಹದಾಸೆ.
ಅದು ಹೇಗೋ ವರ್ಷಗಳುರುಳಿದಂತೆ ಹುಟ್ಟು ಹಬ್ಬ ಹತ್ತಿರವಾಗುತ್ತಲೇ ಮನಸ್ಸಿನೊಳಗೇ ಇಷ್ಟೊಂದು ವಯಸ್ಸಾಯಿತಲ್ಲ ಎಂಬ ಚಿಂತೆ ಹಾಗೂ ಚಿಂತನೆಗಳ ಸುರಿಮಳೆಯಾಗುತ್ತದೆ, ಮನದಲ್ಲಿ ಬೇಸರ ಮನೆಮಾಡುತ್ತದೆ. ಹಿಂದಿದ್ದ ಸಡಗರ ಅಡಗಿಬಿಡುತ್ತದೆ. ಚಾಕಲೇಟ್ ಹಂಚುವಾಸೆ ಇರಲಿ, ಹುಟ್ಟಿದ ದಿನವನ್ನು ನೆನಪಿನಲ್ಲಿಟ್ಟುಕೊಂಡು ಕಾಯುವ ನಿರೀಕ್ಷೆಯೂ ಇಲ್ಲದಾಗುತ್ತದೆ.
ಇತ್ತೀಚೆಗೆ ಇಪ್ಪತ್ತೈದು ವರ್ಷಗಳು ತುಂಬಿತು ಎಂಬ ಬೇಸರ - ಹುಟ್ಟು ಹಬ್ಬದ ಶುಭಾಶಯ ಹೇಳಿದವರೆಡೆಗೆ ಕಾಣಿಸಿಕೊಳ್ಳುವ ಇಲ್ಲದ ಮುಗುಳ್ನಗೆ. ಉಡುಗೊರೆ ನೀಡುವಷ್ಟು ನೆನಪಿಟ್ಟುಕೊಂಡವರಿಗೆ ಏನಾದರೂ ಹೇಳಬೇಕೆಂದು ಹೊರಟಾಗ ಮಾತೇ ಹೊರಡದ ಅನುಭವ. ಅರೆ, ಇಷ್ಟೊಂದು ವರ್ಷ ಈ ಜಗತ್ತಿನಲ್ಲಿದ್ದೆನಾ ಎಂದು ಅಚ್ಚರಿಯಾಗುವ ಕೆಲವು ಘಳಿಗೆಗಳು. ಇವೆಲ್ಲದರ ನಡುವೆ - ದಿನಗಳುರುಳುತ್ತಿವೆ.

- hpn ರವರ ಬ್ಲಾಗ್
- Login or register to post comments
- 515 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಇಪ್ಪತ್ತೈದರ ಬೇಸರ
ಹರಿಪ್ರಸಾದರೆ,
ಇಪ್ಪತ್ತೈದರ ಹುಟ್ತುಹಬ್ಬದ ದಿನಕ್ಕೆ ನನ್ನ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
ಇಪ್ಪತ್ತೈದೇ ಆಗಲಿ, ಎಪ್ಪತ್ತೈದೇ ಆಗಲಿ, ಖಂಡಿತ ಬೇಸರಿಸುವ ಮಾತಲ್ಲ ಬಿಡಿ. ದಿನಗಳು ಉರುಳಿಯೇ ಉರುಳುತ್ತವೆ. ಜೀವನೋತ್ಸಾಹ ಮುಖ್ಯವಷ್ಟೇ. ಅಚ್ಚರಿ ಇರಲಿ. ಬೇಸರ ಬೇಡ.
-ಹಂಸಾನಂದಿ
ಉ: ಇಪ್ಪತ್ತೈದರ ಬೇಸರ
ಹುಟ್ಟು ಹಬ್ಬ ಹೋದ ತಿಂಗಳಿತ್ತು - ನವೆಂಬರ್ ೧೮ರಂದು. ಅದಾದ ನಂತರ ಒಂದು ದಿನ ಕುಳಿತು ಬರೆದದ್ದು.
ಇವತ್ತು ಪೋಸ್ಟ್ ಮಾಡುವ ಮುನ್ನ ಒಮ್ಮೆ ಓದಿ ನನಗೂ ತೀರ ಪೆಸಿಮಿಸ್ಟಿಕ್ ಆಯಿತು ಎಂದನಿಸಿತು

ಆದರೂ ಪೋಸ್ಟ್ ಮಾಡಿದೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಇಪ್ಪತ್ತೈದರ ಬೇಸರ
ನಿಮಗಿಂತ ಹತ್ತು ದಿನ ಮೊದಲು ನನ್ನ ತಂದೆಯವರ 78ನೇ ಹುಟ್ಟುಹಬ್ಬ. ‘ರಾಶಿ ಬಟ್ಟೆಯಿದೆ. ಪುನಃ ಹೊಸ ಬಟ್ಟೆ ತಂದಿರಲ್ಲಾ....’ಎಂದು ನಮ್ಮನ್ನು ಬೈದು,ಕೇಕು ತಂದುದಕ್ಕೆ ಸಿಟ್ಟಿನಲ್ಲಿ ಒಂದು ರೌಂಡು ಯಕ್ಷಗಾನ ಕುಣಿದು,ಮತ್ತೆ ಮೊಮ್ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಕಟ್ ಮಾಡಿದರು. ಅವರ ಉತ್ಸಾಹವೇ ಅವರ ಆರೋಗ್ಯದ ರಹಸ್ಯ.ಮನೆಯಲ್ಲಿ ಬೈಕ್,ಸ್ಕೂಟರ್,ಕಾರ್(ಡ್ರೈವರ್ ಸಹಿತ)ಇದ್ದರೂ ಸೈಕಲ್ನಲ್ಲೇ ಸುತ್ತುವರು.ನಮ್ಮನ್ನು,ಸರಕಾರವನ್ನು ಬೈಯುವುದು ಬಿಟ್ಟರೆ ಬೇರಾವುದೇ ಖಾಯಿಲೆ ಅವರಿಗೆ ಇಲ್ಲ.ಇಪ್ಪತ್ತೈದೇ ಆಗಲಿ ಎಪ್ಪತ್ತೈದೇ ಆಗಲಿ.. ..ಹಂಸಾನಂದಿಯವರ ಮಾತು ಸತ್ಯ.
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು(ತಡವಾಗಿ).
ಉ: ಇಪ್ಪತ್ತೈದರ ಬೇಸರ
ಅಣ್ಣ...
ನಿನ್ನ ಬರಹ ನೋಡಿ, ಇನ್ನೂ ಇಪ್ಪತಯ್ದನ್ನು ಮುಟ್ಟಲಿರುವ ನಮ್ಮ ಪಾಡೇನು?
ಇಗೋ ಒಂದು ಬರಹ..
ಈ ಇಪ್ಪತಯ್ದದು.. ಸರಿಯಿಲ್ಲ..!!
ಆದ್ರು ನಿಂಗೆ ಇಪ್ಪತಯ್ದು ತುಂಬಿದಕ್ಕೆ ಹಾರೈಕೆಗಳು... ಬೇಗ ಜೋಡಿಯಾಗಿ, ಸಂಸಾರವೇರಲಿ!
ಉ: ಇಪ್ಪತ್ತೈದರ ಬೇಸರ
ನಿಮಗೆ ಇಪ್ಪತ್ತೈದು ಎಂದು ತಿಳಿದು ಹೆಮ್ಮೆಯಾಯಿತು . ನಾನು ಅಂದುಕೊಂಡದ್ದಕ್ಕಿಂತಲೂ ತುಂಬಾ ಕಡಿಮೆ .ನಿಮ್ಮಿಂದ ಕನ್ನಡ ಜಗತ್ತು ತುಂಬಾ ನಿರೀಕ್ಷೆ ಇಟ್ಟುಕೊಳ್ಳಬಹುದು.ನೀವು ಅಂದುಕೊಂಡದ್ದನ್ನೆಲ್ಲಾ ಸಾಧಿಸುವ ಶಕ್ತಿ ಬರಲಿ ಎನ್ನುವುದೇ ನನ್ನ ಹಾರೈಕೆ ;ಅದು ಕನ್ನಡಿಗರಿಗೆ ಆಗುವ ಲಾಭವಲ್ಲವೆ? ನಿಮಗೆ ನನ್ನ ಮನಸ್ಸು ತುಂಬಿದ ಶುಭಾಶಯಗಳು .
ಉ: ಇಪ್ಪತ್ತೈದರ ಬೇಸರ
ಹರಿ ಜೊತೆಗಿನ ಮೊದಲ ಮಾತುಕತೆಯಲ್ಲಿ ಹರಿ ನನಗೆ ಹೀಗೆ ಹೇಳಿದ್ದು ಇನ್ನೂ ನೆನಪಿದೆ "ಓ ನೀನು ನಮ್ಮ ಬ್ಯಾಚೇ"
ನಮ್ಮ ೨೦೦೪ ಹೊರಬಂದ ಬ್ಯಾಚಲ್ಲಿ ಬಲು ವಿಚಿತ್ರದ ಮಂದಿಯೇ ಇದ್ದಾರೇನೋ!