ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಕಥೆ ಬರೆದದ್ದು ಹೀಗಿತ್ತು

July 7, 2008 - 1:26am — hpn

(ಸುಮ್ಮನೆ ಒಂದು ಪ್ರಯೋಗ. Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ)

ದಿನ: ಭಾನುವಾರ.

ಆಗಲೇ ಬೆಳಿಗ್ಗೆ! ಬೇಗ ಏಳೋಣೆಂದುಕೊಂಡದ್ದು. ಕರೆಂಟು ಹೋಗಿದೆಯಲ್ಲ! ಮತ್ತೆ ಮಲಗಿರುವೆ. "ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತೀಯ, ಸ್ವಲ್ಪ ಹೊತ್ತು ಇನ್ನೂ ಮಲಕ್ಕೋ ಹೋಗು. ಕರೆಂಟು ಬೇರೆ ಹೋಗಿದೆ!" ಎಂದರು ಅಮ್ಮ. ಅಥವ ಕನಸು ಕಾಣುತ್ತಿದ್ದೇನೆಯೆ?

ಅಪ್ಪ ಹಾಕಿಸಿರುವ ತಾರಸಿಯ ಬಣ್ಣ ಕಣ್ಣಿಗೆ ಕಾಣುತ್ತಿದೆ. ಕಣ್ಣು ತೆರೆದಿರುವೆ. ಆದರೆ ಅದನ್ನು ನೋಡಿಯೂ ನಾನು ನೋಡುತ್ತಿಲ್ಲ.
ಯಾವ ದಿನ ಇವತ್ತು? ಏನೇನು ಮಾಡಬೇಕು ಅಂದುಕೊಂಡಿದ್ದೆ?
ಫ್ಯಾನು ತಿರುಗುತ್ತಿಲ್ಲ. ಕರೆಂಟು ಹೋಗಿದೆ.

~.~

ಏನೋ ಡಿಫರೆಂಟು ಈ ದಿನ, ಇವತ್ತು ತಿಂಡಿ ತಿಂದು ಬಂದು ತಕ್ಷಣ ಪುಸ್ತಕ ಹಿಡಿದು ಕುಳಿತಿರುವೆ. ಕಣ್ಣ ಮುಂದೆ ಟೈಪಿಸಿದಂತೆ ಪಟಪಟನೆ ಗೋಚರವಾಗುವ, ಮರೆಯಾಗುವ, ಬದಲಾಗುವ ಅಕ್ಷರಗಳ ಕಂಪ್ಯೂಟರ್ ಸ್ಕ್ರೀನ್ ಇಲ್ಲ. ಬದಲಿಗೆ ಅಕ್ಷರಗಳು ನಿಂತಲ್ಲೇ ಗಟ್ಟಿಯಾಗಿ ನಿಂತಿವೆ. ಪುಸ್ತಕದ ವಾಸನೆ ಪುಸ್ತಕ ಓದುತ್ತಿರುವೆನೆಂಬುದನ್ನು ನೆನಪಿಸಿದೆ. ಸಣ್ಣಗೆ ಕಣ್ಣೆಳೆದುಕೊಂಡು ಹೋಗುತ್ತಿದೆ. ಆದರೂ ಕಥೆಯ ಹಂದರ ಆಗಾಗ ಎಚ್ಚರಿಸುತ್ತಿದೆ.

ಹೊರಗಡೆ ಸ್ವಲ್ಪ ದೈತ್ಯಾಕಾರದವರು ಒಬ್ಬರು ಇನ್ನೂ ವಾಕಿಂಗ್ ಮಾಡುತ್ತಿದ್ದಾರೆ. ಅವರ ನಾಯಿ ಅವರಿಗೆ ದಾರಿ ತೋರಿಸುತ್ತಿರುವಂತಿದೆ. ಅತ್ತ ಮೈನಾ ಹಕ್ಕಿ ಇನ್ನೂ ಬೆಳಗಾಗುತ್ತಿದೆ ಎಂಬಂತೆಯೇ ಕೂಗುತ್ತಿದೆ. ಎಲ್ಲೋ ಕೋಗಿಲೆಯೂ ಕೂಗಿದೆ. ಬೀಸುತ್ತಿರುವ ಗಾಳಿಗೆ ಎದುರಿಗಿರುವ ಹೊಂಗೆ ಮರದ ಎಲೆಗಳು ಪಟಪಟನೆ ಹೊಡೆದುಕೊಳ್ಳುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಗಮನ ಮತ್ತೆ ಕಥೆಯೆಡೆಗೆ.

~.~

ಹೊರಗೆ ಬಿಸಿಲೇರಿದ್ದು ನಾನು ಕುಳಿತಿರುವಲ್ಲಿಗೆ ಕಿಟಕಿಯಿಂದ ಬಂದ ಕಿರಣಗಳು ಧೂಳಿಲ್ಲದ ಧೂಳನ್ನು ತನ್ನೊಳಗೆ ಮಾತ್ರ ಹಿಡಿದಿಟ್ಟು ತೋರಿ ಕೆಲಸಮಯ ನಾನೋದುತ್ತಿದ್ದ ಕಥೆಯನ್ನು ಮರೆಸಿ ನನ್ನ ಮನಸ್ಸನ್ನು ಹಿಡಿದಿಟ್ಟು ಆದದ್ದು ಕಸಿವಿಸಿಯೆ? ವಿಸ್ಮಯವೆ? ತಿಳಿಯಲಿಲ್ಲ. ಕಥೆ ಮುಂದುವರೆದಿದೆ. ಇದು ಬಹಳ ಚೆನ್ನಾಗಿದೆ. ಓ ಎಷ್ಟು ಚೆನ್ನಾಗಿ ಬರೆದಿದ್ದಾರೆ. ಈ ಕಥೆ ಹೀಗಾಗುತ್ತೆ ಅಂತ ಖಂಡಿತ guess ಮಾಡಿರಲಿಲ್ಲ.

~.~

ಅಲ್ಲೆಲ್ಲೋ ಲೈಟ್ ಹತ್ತಿತು. ಕರೆಂಟು ಬಂದಿದೆ. ಕಂಪ್ಯೂಟರ್ ಆನ್ ಮಾಡಬೇಕು. ಪುಸ್ತಕ ಬದಿಗಿಡೋಣ, ಬೂಟ್ ಆಗಿತ್ತಿದೆ. ಎಷ್ಟು ಇ-ಮೇಯ್ಲ್ ಬಂದಿದೆಯೋ, ಯಾರು ಯಾರು ಮೆಸೇಜ್ ಹಾಕಿದಾರೋ, ಇವತ್ತು ಏನು ಚರ್ಚೆ ಮಾಡ್ತಿದಾರೆ? ಸುದ್ದಿ ಬೇರೆ ಓದಲಿಲ್ಲ!
ಇವತ್ತು ಅದೆಲ್ಲ ಬೇಡ, ಆಮೇಲೆ ನೋಡಿಕೊಂಡರಾಯಿತು. ಇವತ್ತು ಒಂದು ಕಥೆ ಬರೆಯೋಣ. ಬೆಳಗ್ಗಿನಿಂದ ಓದಿದ್ದ ಕಥೆಯ ಗುಂಗು ಹೋದಂತಿಲ್ಲ, ಅದಕ್ಕೇ. ಅಥವ ಹೋಗಿರಬೇಕು. ಕಥೆ ಬರೆಯೋಣಂತೆ, ಅದಕ್ಕೇನು?
'ಕ್ರಿಕೆಟ್ ಮ್ಯಾಚ್ ಇದೆಯಲ್ಲ ಇವತ್ತು'. ಹೋ, ಏನಾಯ್ತು ನೋಡಬೇಕು!
ನ್ಯೂಸ್ ಪೇಪರ್ ಆಮೇಲೆ ಕೆಳಗೆ ಹೋಗಿ ತರಬೇಕು. ಗೂಗಲ್ ನ್ಯೂಸ್! cricinfo!
ಅರೆ, ಇದೇನಿದು ಸುದ್ದಿ? ಓಹೋ! ನೋಡಬೇಕು ಎಷ್ಟು ನಿಜ ಹೇಳ್ತಾ ಇದಾರೆ ಅಂತ. hmm...
ಅರೆ ನಾಲ್ಕೂವರೆ ಆಗಿಹೋಯ್ತು ಆಗಲೇ!

ಏನ್ ಮಾಡೋಕ್ ಹೊರಟಿದ್ದೆ?

ಕಥೆ ಬರೆಯೋಣಾಂತ ಹೊರಟಿದ್ದೆನಲ್ವ? ಯಾವ ಎಡಿಟರ್ ಬಳಸೋದು? ಓಹ್ Celtx. ಇದು screenplay ಬರೆಯೋ software ಅಲ್ವ? ಇದರಲ್ಲಿ ಕನ್ನಡ ಸರಿಯಾಗಿ ಬರುತ್ತಿಲ್ಲ ಅಂದಿದ್ರು ಸುದರ್ಶನ್. ನೋಡೋಣ ಒಂದ್ನಿಮಿಷ.
ಹೌದಲ್ವ, ಸರಿಯಾಗಿ ಬರ್ತಾ ಇಲ್ಲ. ನಾನು ಬರೆದಿಟ್ಟಿದ್ದ screenplay ಎಲ್ಲಿ?
ಓಹ್ ಇಲ್ಲಿದೆ. ಕಥೆ ಚೆನ್ನಾಗಿಲ್ಲ. ನಿಜವಾಗ್ಲೂ ಚೆನ್ನಾಗಿಲ್ಲ. ಇಲ್ಲ, ಚೆಂದ ಮಾಡಬಹುದು ಅನ್ಸತ್ತೆ. ಛೆ, ಸುಮಾರು ಹೊತ್ತಾಯ್ತು, ಈಗ ಬೇಡ.

ಏನ್ ಮಾಡೋಕ್ ಹೊರಟಿದ್ದೆ?

ಕ್ರಿಕೆಟ್ ಸ್ಕೋರು!
ಓಹ್ ಭಾರತದವರು ಸೋಲ್ತಿರೋ ಹಾಗಿದೆ! ಸಂಪದದಲ್ಲಿ ಏನು ನಡೀತಿದೆ? ಓಹ್, ಫೆಡರರ್ ಬಗ್ಗೆ ಶಿವು ಬರೆದಿದ್ದಾನೆ. ಸೋತನಾ ಫೆಡರರ್? ಇಲ್ಲ, ಸೋಲೋ ತರಾ ಇದಾನೆ. ಏನೆಲ್ಲ ಹೈಪ್ ಮಾಡಿದ್ರು! ಸೋಬರಾಜ್ ಗೆ ಮತ್ತೊಂದು ಮದುವೆಯಂತೆ. ಹೆ ಹೆ. ಪರ್ವಾಗಿಲ್ಲ ಇವ!
ಇದ್ಯಾವುದೋ ಬಾಲಿವುಡ್ ಸಿನಿಮಾ ಅಂತೆ! ಓಹ್, ಇದು ಗೊತ್ತು. ಇದರ ಹಾಡು ಕೇಳಿದ್ದೆ, ಚೆನ್ನಾಗಿದ್ವು. ಆದರೆ ಇಷ್ಟೆಲ್ಲಾ ಇದರ ಬಗ್ಗೆ ಇವರು ಬರೆಯೋದ್ಯಾಕೆ?
ಏನು, ಸಲ್ಮಾನ್ ಪಪ್ಪು ಅಲ್ವ? ಕಟ್ಕೊಂಡ್ ನನಗೇನು! ಯಡ್ಯೂರಪ್ಪ ಮತ್ತಷ್ಟು ಜನಾನ ಸೇರಿಸಿಕೊಳ್ತಿದಾರಂತೆ ಮಿನಿಷ್ಟ್ರೀಲಿ. ಸರಿಹೋಯ್ತು.

ಏನ್ ಮಾಡೋಕ್ ಹೊರಟಿದ್ದೆ ನಾನು?

ಅರೆ, ಕಥೆ ಬರೆಯೋಣಾಂತ ಹೊರಟಿದ್ದಲ್ವಾ? ಬಿಡು ಲೇಟಾಗಿದೆ. ಮತ್ತೊಂದ್ ಸಾರಿ ಬರೆಯೋಣಂತೆ!

  • ಕಥೆ
  • ಪ್ರಯೋಗ
~.~
  • hpn ರವರ ಬ್ಲಾಗ್
  • Login or register to post comments
  • 368 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 7, 2008 - 5:24pm — anivaasi

ಉ: ಕಥೆ ಬರೆದದ್ದು ಹೀಗಿತ್ತು

anivaasi's picture

ನಿಜವೋ ಅಲ್ಲವೋ ಮುಖ್ಯವೇ ಅಲ್ಲ... ಅದು ತೋರಿಸುವ ಮನಸ್ಥಿತಿ ತುಂಬಾ ಕುತೂಹಲಕಾರಿಯಾಗಿದೆ. ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. ಈ ಫಾರ್ಮಾಟ್ ತುಂಬಾ ಇಷ್ಟವಾಯಿತು ಕೂಡ.

ಹೌದರಿ, ಕನ್ನಡ celtxನಲ್ಲಿ ಆಗಲ್ಲ... ಬೇರೇನಾದರೂ ಮಾಡಬೇಕು... ಯೋಚಿಸ್ತಿದ್ದೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 9:33am — hpn

ಉ: ಕಥೆ ಬರೆದದ್ದು ಹೀಗಿತ್ತು

hpn's picture

Celtx ಕರ್ತೃ (ಅಥವ ಕತೃ?) ನನಗೆ ಪರಿಚಯ. ಅವರಿಗೊಂದು ಮೇಯ್ಲ್ ಹಾಕಿ ನೋಡ್ತೇನೆ. ಮುಂಚೆ ಎಲ್ಲ ಸರಿ ಇತ್ತು. ಹೊಸ ಆವೃತ್ತಿ ಬಂತಲ್ಲ ಇತ್ತೀಚೆಗೆ, ಅದರಲ್ಲಿ ಹದಗೆಟ್ಟಿದೆ!

ಲೂಯಿ ಬ್ಯುನೆಲ್ ನಿರ್ದೇಶಿಸಿರುವ ಚಿತ್ರವೊಂದರ ಕಾಮೆಂಟರಿ ನೋಡುತ್ತಿದ್ದೆ. ನಿರೂಪಣೆ ಒಂಥರಾ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದರು. ನಾನೂ ನೋಡೋಣ, ಈ ರೀತಿ ಬರೆಯಬಹುದೋ ಎಂದು ಹೊರಟವನು ಒಂದಷ್ಟು ಬರೆದೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 7:26pm — basavarajdengi

ಉ: ಕಥೆ ಬರೆದದ್ದು ಹೀಗಿತ್ತು

basavarajdengi's picture

@Disclaimer: ಇಲ್ಲಿ ಬರೆದದ್ದೆಲ್ಲ ನಿಜವಿರಬೇಕಿಲ್ಲ
--ನಿಮ್ಮ ಪಾಲಿಗೆ ಗೊತ್ತಿಲ್ಲ. ಆದ್ರೆ ನಾನಂತೂ ಹೀಗೆ ಮಾಡೋದು. ಬರೀಬೇಕು ಬರೀಬೇಕು ಅಂತ ಅಂದುಕೊಂಡಿದ್ದೆ ಆಯ್ತು. ಕಳೆದ ನಾಲ್ಕಾರು ವರ್ಷಗಳಲ್ಲಿ ಬರ್ದದ್ದು ೨-೩ ಅಸ್ಟೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 9:35am — hpn

ಉ: ಕಥೆ ಬರೆದದ್ದು ಹೀಗಿತ್ತು

hpn's picture

ಅರ್ಥವೇ ಅಗ್ಲಿಲ್ವಲ್ರಿ! ಅಥವ ನನಗೇ ಅರ್ಥವಾಗ್ಲಿಲ್ವೇನೊ. ನಿಮ್ಮ ಪ್ರತಿಕ್ರಿಯೆ ಎರಡು ಮೂರು ಸಾರಿ ಓದಿದೆ... ಉಹುಂ. ಏನೂ ಅರ್ಥವಾಗಲಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 10:08pm — Chamaraj

ಉ: ಕಥೆ ಬರೆದದ್ದು ಹೀಗಿತ್ತು

Chamaraj's picture

ತುಂಬಾ ಚೆನ್ನಾಗಿ ಬರೆದಿದ್ದೀರಿ ಹರಿ.

ಬರೆಯಬೇಕು ಅನ್ನೋದನ್ನೇ ಚೆನ್ನಾಗಿ ಬರೆದುಬಿಟ್ಟಿದ್ದೀರಿ. ಇದು ಕಥೆ ಅಲ್ಲ ಅನ್ನೋರಾರು? ತೇಲುವ ವಿಚಾರಗಳನ್ನು ಅಕ್ಷರಗಳನ್ನಾಗಿಸುವುದು ಸುಲಭವಲ್ಲ. ಆದರೆ, ತೇಲುತ್ತಿದ್ದುದೆಲ್ಲ ಅಕ್ಷರಗಳಾಗಿವೆ. ಒಪ್ಪವಾದ ಅನುಭವ ಕಥನವಾಗಿದೆ. ನಿಜಕ್ಕೂ ಚೆನ್ನಾಗಿದೆ.

ಒತ್ತಡದಲ್ಲಿ ಬರೆಯುವುದೇ ನಿಜವಾದ ಬರಹ. ಆರಾಮವಾಗಿ ಕೂತರೆ ಓದಬಹುದು ಮಾತ್ರ. ಆದರೆ, ಬರೆಯುವುದು ನಿಜಕ್ಕೂ ಕಡು ಕಷ್ಟ. ನನ್ನ ಹೆಚ್ಚಿನ ಬರವಣಿಗೆಗಳು, ವರದಿಗಳು, ಲೇಖನಗಳು, ಕವಿತೆಗಳು ಕೂಡ ಡೆಡ್‌ ಲೈನ್‌ ಒತ್ತಡದಲ್ಲೇ ಬರೆದವು.

ನಿಮ್ಮ ’ಕಥೆ’ ಓದಿ ಅವೆಲ್ಲ ಸುಮ್ಮನೇ ನೆನಪಾದವು.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 9:47am — hpn

ಉ: ಕಥೆ ಬರೆದದ್ದು ಹೀಗಿತ್ತು

hpn's picture

ಥ್ಯಾಂಕ್ಯೂ.

ಒತ್ತಡದಲ್ಲಿ ಬರೆಯುವುದೇ ನಿಜವಾದ ಬರಹ. ಆರಾಮವಾಗಿ ಕೂತರೆ ಓದಬಹುದು ಮಾತ್ರ. ಆದರೆ, ಬರೆಯುವುದು ನಿಜಕ್ಕೂ ಕಡು ಕಷ್ಟ. ನನ್ನ ಹೆಚ್ಚಿನ ಬರವಣಿಗೆಗಳು, ವರದಿಗಳು, ಲೇಖನಗಳು, ಕವಿತೆಗಳು ಕೂಡ ಡೆಡ್‌ ಲೈನ್‌ ಒತ್ತಡದಲ್ಲೇ ಬರೆದವು.

ತೀರ ಒತ್ತಡದಲ್ಲಿ ಬರೆಯೋದೂ ಬಹುಶಃ ಕಷ್ಟವಾಗಬಹುದು. ತೀರ pressure ಆಗಿಬಿಟ್ಟರೆ ನಮ್ಮ ನ್ಯೂಸ್ ಚ್ಯಾನಲ್ಲುಗಳು literally "ಬ್ರೇಕ್" ಮಾಡುವ ಸುದ್ದಿಗಳಂತಾಗಿಬಿಡಬಹುದು ಅನ್ಸತ್ತೆ. ಸ್ವಲ್ಪ ಮನಸ್ಸಿಗೆ ನಾವೇ ತಂದುಕೊಂಡ ಒತ್ತಡ ಹಾಗೂ ಹಾಕಿಕೊಂಡ ಡೆಡ್ಲೈನ್ ಚೌಕಟ್ಟು ಕೆಲಸ ಮಾಡಬಹುದೇನೊ?

ಬಹುಶಃ ಆ ವೇಗಕ್ಕೆ ಒಗ್ಗಿಕೊಂಡಿರುವ ನಿಮಗೆ (ಹಾಗೂ ಇನ್ನು ಹಲವರು ಪತ್ರಿಕೆಯವರಿಗೆ) ಹೆಚ್ಚಿನ ಒತ್ತಡ ಇದ್ದರೂ ಚೆಂದವಾಗಿ ಬರೆಯಲು ಸಾಧ್ಯವಾಗುತ್ತಿರಬಹುದು, ಒತ್ತಡದಲ್ಲಿ ಕೆಲಸ ಮಾಡಿ ಇರುವ ಅಭ್ಯಾಸದಿಂದ. (ಸಾಫ್ಟ್ವೇರ್ ಜಗತ್ತಿನಲ್ಲೂ ಹೀಗಾಗುತ್ತದೆ. ಸಿಕ್ಕಾಪಟ್ಟೆ pressure ಇದ್ದಾಗಲೂ ಪಟಪಟನೆ ಕೋಡ್ ಮಾಡಲೇಬೇಕು. ಹಲವರು ಈ ಸಮಯದಲ್ಲೂ ಚೆನ್ನಾಗಿ ಕೋಡ್ ಮಾಡ್ತಾರೆ. ಕೆಲವರಿಗೆ ಬರೆದ ಕೋಡ್ ಇಂತಹ ಸಮಯ ಚೆನ್ನಾಗಿ ಬರೋದು ಡೌಟು. ಅಂಥವರಲ್ಲಿ ನಾನೂ ಒಬ್ಬ! - ಆದರೆ ಅದು ಮಾಡಬೇಕಿರುವ ಕೆಲಸ ಮಾಡುವಷ್ಟಕ್ಕೆ ಅದು ರೆಡಿಯಾಗಿರುತ್ತದೆ. perfect ಆಗಿರೋದಿಲ್ಲ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 12:13pm — Chamaraj

ಉ: ಕಥೆ ಬರೆದದ್ದು ಹೀಗಿತ್ತು

Chamaraj's picture

ಒತ್ತಡದಲ್ಲಿ ಬರೆದರೆ ಚೆನ್ನಾಗಿ ಬರೆಯುವುದು ಆಗದು ಎಂಬ ಭಾವನೆ ನನಗೂ ಇತ್ತು. ಆದರೆ, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಹೋದಂತೆ ಕ್ರಮೇಣ ಆ ಭಾವನೆ ಹೊರಟುಹೋಯಿತು. ಆರಾಮವಾಗಿ ಕೂತು ಬರೆಯಲು ಯತ್ನಿಸಿ ನೋಡಿದ್ದೇನೆ. ಆದರೆ, ಅಂದುಕೊಂಡ ರೀತಿ ಬರೆಯಲು ಆಗಿಲ್ಲ. ಸ್ವಯಂ ಒತ್ತಡವೋ, ಬಾಹ್ಯ ಒತ್ತಡವೋ ಇರಲೇಬೇಕಾಗುತ್ತದೆ. ಇಲ್ಲದಿದ್ದರೆ ಬರಹ ಹೊರಬರುವುದು ಕಷ್ಟ.

ಮುದ್ರಣ ಮಾಧ್ಯಮದಲ್ಲಿದ್ದಾಗ ಸಂಜೆಯಷ್ಟೇ ಹೆಚ್ಚು ಒತ್ತಡವಿರುತ್ತಿತ್ತು. ಆದರೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕರ್ತವ್ಯದ ಮೇಲಿದ್ದ ಪ್ರತಿಕ್ಷಣವೂ ಒತ್ತಡವೇ. ಒತ್ತಡ ಅತಿಯಾಗಿ, ಆಗಿ ಕೊನೆಗೆ ಒಂದು ನಿರ್ಧಾರ ಮಾಡಿದೆ: ಒತ್ತಡವನ್ನು ಸಂತಸದಿಂದ ಅನುಭವಿಸುವುದು. ಅದನ್ನು ಕ್ರಿಯಾತ್ಮಕವಾಗಿ ಬಳಸುವುದು. ಮೊದಮೊದಲು ಕಷ್ಟವನಿಸಿದರೂ ಕ್ರಮೇಣ ಅದು ರೂಢಿಯಾಯಿತು. ಬರವಣಿಗೆಗೆ ವೇಗ ಹಾಗೂ ತೀವ್ರತೆಗಳೆರಡೂ ದಕ್ಕಿದವು.

ಬಹುಶಃ ಇದು ಎಲ್ಲರಿಗೂ ಸಾಧ್ಯ ಅಂತ ಅಂದುಕೊಂಡಿದ್ದೇನೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದಿನ ಸುದ್ದಿ...!
  • ಮಳೆಯ ಹನಿಗಳು
  • ಮಳೆಯ ಹನಿಗಳು
  • ಕೊನೆಗೂ ಗೆದ್ದರು!
  • ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:17pm
  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 97 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator