ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ನಾಡಿಗರು ಯಾರು?

July 19, 2007 - 12:19am — hpn

ರಶೀದ್ ತಮ್ಮ ಲೇಖನದಲ್ಲಿ ಐದು ವರ್ಷಗಳ ಹಿಂದೆ ಸುಮತೀಂದ್ರ ನಾಡಿಗರ ಜೊತೆ ಸಂಭಾಷಣೆ ನಡೆಸಿದುದರ ನಿಮಿಷಗಳೆಂದು ಹೀಗೆ ಬರೆದಿದ್ದಾರೆ:

ರಶೀದ್: ‘ನಾಡಿಗ ಅಂತ ಹೆಸರು ಹೇಗೆ ಬಂತು’ ಅಂತ ಕೇಳಿದೆ.

ಸುಮತೀಂದ್ರ ನಾಡಿಗ್: ‘ನಾವು ಮೂಲದಲ್ಲಿ ತೆಲುಗರು ಹಾಗಾಗಿ ಈ ನಾಡಿಗರು ನಮ್ಮನ್ನು ನಾಡಿಗರು ಅಂತ ಕರೆದರು.ತೆಲುಗಿನಿಂದ ಬಂದ ಎಲ್ಲರನ್ನೂ ಕನ್ನಡಿಗರು ನಾಡಿಗರು ಎಂದು ಕರೆದರು.ಬ್ರಾಹ್ಮಣ ಸಾಬ ಶೂದ್ರ ಎಲ್ಲರಲ್ಲೂ ನಾಡಿಗರಿದ್ದಾರೆ’ ಎಂದರು.

(ರಶೀದ್ ರವರ ಬ್ಲಾಗಿನಿಂದ)

ಇದು ನಿಜವೋ ಸುಳ್ಳೋ ಎಂಬ ವಿಷಯ ಖಾತರಿಪಡಿಸಿಕೊಳ್ಳಲು ಅತಿಶೀಘ್ರವಾಗಿ ನನ್ನನ್ನು ಹಲವರು ಸಂಪರ್ಕಿಸಿದ್ದುದು ಗಾಬರಿಯೂ, ಅಚ್ಚರಿಯೂ ತಂದಿತು. ಆ ಲೇಖನದಲ್ಲಿ "ನಾಡಿಗರು" ಹೆಸರಿನ ಮೂಲವಲ್ಲದೆ ತಲೆ ಕೆರೆದುಕೊಳ್ಳುವ, ತಲೆ ಕೊರೆಯುವ ಹಲವು ವಿಷಯಗಳಿವೆ, ಸರ್ಕ್ಯಾಸಮ್ ಇದೆ. ಅವುಗಳ ಕಡೆಯೂ ಓದುಗರ ಗಮನ ಹೋಗುವುದೆಂದು wish ಮಾಡಬಹುದಷ್ಟೆ.

ಹೆಸರಿನ ಸುತ್ತ

ಸುಮತೀಂದ್ರ ನಾಡಿಗರ ಪರಿಚಯ ನನಗಿಲ್ಲ. ಸಾಹಿತ್ಯದ ಪರಿಚಯವಿರುವ ಹಲವರು ನನ್ನ ಹೆಸರು ಕೇಳಿ "ಸುಮತೀಂದ್ರ ನಾಡಿಗರ ಪರಿಚಯವಿದೆಯೇ, ನಿಮ್ಮ ಸಂಬಂಧಿಕರೋ ಅವರು?" ಎಂದು ಪ್ರಶ್ನಿಸಿದಾಗಲೆಲ್ಲ ನನ್ನ ಉತ್ತರ "ಪರಿಚಯವಿಲ್ಲ, ಗೊತ್ತಿಲ್ಲ" ಎಂಬುದೇ. ನಮ್ಮ ತಂದೆಯ ಹೆಸರಿನಲ್ಲಿದ್ದ ನಾಡಿಗ್ ಎಂಬ ಹೆಸರನ್ನು ನಾನೂ ಇಟ್ಟುಕೊಂಡಿದ್ದೇನೆ. ಈ ಹೆಸರಿನ ಹಿನ್ನೆಲೆ ಖಂಡಿತವಾಗಿಯೂ ಗೊತ್ತಿಲ್ಲ. ಹಿನ್ನೆಲೆ ಏನಾದರೇನು, ಹೆಸರು ನೆನಪಿನಲ್ಲುಳಿಯುವಂತೆ, ಮುಂದಿನ ಸಾರಿ ಫೋನಿನ ಅಡ್ರೆಸ್ ಬುಕ್ಕಿನಲ್ಲಿ ಹುಡುಕುತ್ತಿರುವಾಗ "ನೀನ್ಯಾವ ಹರಿ ಪ್ರಸಾದ್? ನನಗೆ ನಾಲ್ಕೈದು ಜನ ಹರಿ ಪ್ರಸಾದರು ಗೊತ್ತು" ಎಂಬುದು ಕೇಳಿಬರದಂತೆ ಈ ಸರ್ನೇಮ್ ಸಹಾಯ ಮಾಡುತ್ತಿದೆ.

ಈ ಹೆಸರ ಬಗ್ಗೆ ಅಲ್ಲಿಲ್ಲಿ ಕೇಳಿದ್ದಷ್ಟೇ ನನಗೂ (ಬಹುಶಃ ಸುಮತೀಂದ್ರ ನಾಡಿಗರಿಗೂ) ಗೊತ್ತಿರುವುದು ಎಂಬ ವಿಷಯವನ್ನು ಬಿಟ್ಟರೆ ರಶೀಧರು ಬರೆದ ಈ ವಿಷಯದ ಸತ್ಯಾಸತ್ಯತೆಯ ಕುರಿತು ಆಸಕ್ತಿಯನ್ನು ದಯವಿಟ್ಟು ರಶೀಧರ ಹತ್ತಿರವೋ, ಅದನ್ನು ಹೇಳಿದರೆನ್ನಲಾದ ಸುಮತೀಂದ್ರರ ಬಳಿಯೋ ಆಸಕ್ತರು ತೋಡಿಕೊಂಡಲ್ಲಿ ಅವರು ಬರೆದ ಹಿನ್ನೆಲೆಯಲ್ಲಿನದೇ ಹೆಚ್ಚಿನ ಮಾಹಿತಿ ಸಿಗಬಹುದು.

ಒಟ್ಟಾರೆ ಲೇಖನ ಓದಿದ ಮೇಲೆ ನನಗೆ ಸುಮತೀಂದ್ರ ನಾಡಿಗರು ನಿಜವಾಗಿಯೂ ಹೀಗೆ ಹೇಳಿದ್ದರೆ ಅದು ಅವರ opinion ಆಯಿತು. ಅವರು ಯಾಕೆ ಹಾಗೆ ಹೇಳಿದರೋ, ಕಾಂಟೆಕ್ಸ್ಟ್ ಏನಿತ್ತೋ ಏನೂ ಗೊತ್ತಿಲ್ಲದೆ ಮಾತನಾಡುವ ಹಾಗಿಲ್ಲ - ಇದು ಸೆನ್ಸಿಟಿವ್ ವಿಷಯ. ಸುಮತೀಂದ್ರರ ಜೊತೆಗಿನ ಆ ಸಂಭಾಷಣೆಯನ್ನು ರಶೀದ್ ಹೊರಗೆಡವಲು ಅನುಸರಿಸಿರುವ ಚತುರ ವಿಧಾನ ನನಗಂತೂ ಇಷ್ಟವಾಯ್ತು ಎಂದು ಹೇಳೋಕಾಗೊಲ್ಲ.

ಆದರೆ ಪರಿಚಯವಿರುವ ರಶೀಧರ ಹತ್ತಿರ ನಾನು ತಮಾಷೆಯಿಂದಲೋ, ಸ್ನೇಹದಿಂದಲೋ ಮಾತನಾಡುವಾಗಲೂ ಬಹಳ ಹುಷಾರಾಗಿ ಇರಬೇಕೆಂಬುದು ಖಾತ್ರಿಯಾಯ್ತು. ಯಾರಿಗ್ಗೊತ್ತು? ಮುಂದೊಂದು ದಿನ ಇನ್ನೊಬ್ಬ ನಾಡಿಗನಿಂದಲೂ ರಶೀಧರು ತಮ್ಮ ಬ್ಲಾಗಿನಲ್ಲಿ ಏನೇನೋ ಹೇಳಿಸಿಬಿಟ್ಟಾರು. Eye-wink

  • ಮೈಸೂರು ಪೋಸ್ಟ್
  • ರಶೀದ್
  • ಸುಮತೀಂದ್ರ ನಾಡಿಗ್
~.~
  • hpn ರವರ ಬ್ಲಾಗ್
  • Login or register to post comments
  • 601 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 19, 2007 - 11:51am — mahesha

ಉ: ನಾಡಿಗರು ಯಾರು?

mahesha's picture

ನನಗೆ ಗೊತ್ತಿರುವ 'ನಾಡಿಗ'ರಲ್ಲಿ ಇರುವವರೆಲ್ಲ "ಮಾಧ್ವ"ರು. ನನ್ನ ಕಂಸಿನ್ ಒಬ್ಬ 'ನಾಡಿಗ'

ನಾವು "ಮಾಧ್ವ"ರೆಲ್ಲ ಅಪ್ಟಟ ಕನ್ನಡಿಗರು ಎಂದು ನಂಬಿದ್ದೇವೆ.!

ಬಸವಣ್ಣನವರು "ತೆಲುಗು ಬ್ರಾಹ್ಮಣ" ಎಂದುದು ತಪ್ಪು "ಅವರು ಕನ್ನಡದ ಕಮ್ಮೆ ಬ್ರಾಹ್ಮಣರು" ಎಂದು ಚಿಮೂ ಬರೆದಿದ್ದನ್ನು ಪ್ರಜಾವಾಣಿಯಲ್ಲಿ ಓದಿದ ನೆನೆಪು. ಇಲ್ಲೇ ಸಂಪದದಲ್ಲಿ ಒಂದೆಡೆ ಅದನ್ನು ಬರೆದಿದೆ.

ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:13pm — ಶ್ಯಾಮ ಕಶ್ಯಪ

ಉ: ನಾಡಿಗರು ಯಾರು?

ಶ್ಯಾಮ ಕಶ್ಯಪ's picture

ನಾಡಿಗರು ಬಹಳ ಸೀರಿಯಸ್ ಆದ ಪ್ರಶ್ನೆ ಎತ್ತಿದ್ದಾರೆ. ಒಬ್ಬರ ಜೊತೆ ಮಾತಾಡುವಾಗಲೂ, ಅವರು ಏನು ಹೇಳಿದರೂ ಅದನ್ನು ಬರೆಯುವಾಗ ತಮಗೆ ರುಚಿಸುವಂತೆ ತಿರುಚಿ, ಬೇಡದಿರುವುದನ್ನು underplay ಮಾಡುವುದು ರಶೀದರ ಈ ಪೋಸ್ಟಿನಲ್ಲಿ ಎದ್ದು ಕಾಣುತ್ತದೆ. ಇದು ಅವರ ಸೃಜನಶೀಲತೆಯ ಪರಿಮಿತಿಯಲ್ಲಿಯೇ ಇರಬಹುದು ಆದರೆ ಇವರೊಡನೆ ಮಾತಾಡಿದವರ false representation ಆಗಲಿಕ್ಕಿಲ್ಲವೇ?
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 2:13pm — hamsanandi

ಉ: ನಾಡಿಗರು ಯಾರು?

hamsanandi's picture

ತೆಲುಗು ಮೂಲದ ಜನರಲ್ಲಿ( ನನಗೆ ಗೊತ್ತಿರುವಂತೆ ದಕ್ಷಿಣ ಕರ್ನಾಟಕದಲ್ಲಿ) ಮುಲುಕುನಾಡು, ಬಡಗನಾಡು ಮೊದಲಾದ ಪಂಗಡಗಳಿವೆಯಲ್ಲ - ಅದರಿಂದ ಬಂತೇ ಈ ನಾಡಿಗ ಎಂಬ ಹೆಸರು?

ಕೆಲವು ಮಾಧ್ವರು (ದೇಶಸ್ತ್ಥರೆಂದೂ ಕರೆಯುತ್ತಾರೆ) ಮರಾಠಿ ಮಾತಾಡುವುದನ್ನು ಕೇಳಿದ್ದೇನೆ. ಅದು ಅವರು ಮಹಾರಾಷ್ಟ್ರದಲ್ಲಿ ಇದ್ದಿರುವ ಪರಿಣಾಮವೋ ಏನೋ ತಿಳಿಯದು.
ಆದರೆ ಮಾಧ್ವರೆಲ್ಲ ಕನ್ನಡಿಗರೇ ಎಂಬ ಭಾವನೆಯಂತೂ ಇದೆ ಅಂತ ಕಾಣುತ್ತೆ. ನಾನು ಮದರಾಸಿನಲ್ಲಿದ್ದಾಗ ನನ್ನ ನೆರೆಯವರೊಬ್ಬರು ನಾನು ಮಾಧ್ವನಲ್ಲದಿರುವಾಗ, ಕನ್ನಡ ಹೇಗೆ ಮಾತಾಡುತ್ತಿದ್ದೇನೆ ಎಂಬ ಪ್ರಶ್ನೆ ಮಾಡಿದ್ದರು!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 3:05pm — ಶ್ಯಾಮ ಕಶ್ಯಪ

ಉ: ನಾಡಿಗರು ಯಾರು?

ಶ್ಯಾಮ ಕಶ್ಯಪ's picture

ನನಗನ್ನಿಸುವ ಮಟ್ಟಿಗೆ ಇಲ್ಲಿ HPN ಮಾತಾಡುತ್ತಿರುವುದು "ನಾಡಿಗ" ಹೆಸರಿನ ಮೂಲದ ಬಗ್ಗೆ ಅಲ್ಲ. ರಶೀದರ ಬರವಣಿಗೆಯ ಕುರಿತು. HPN ಬೇಕಿದ್ದರೆ clarify ಮಾಡಲಿ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 20, 2007 - 11:43pm — mahesha

ಉ: ನಾಡಿಗರು ಯಾರು?

mahesha's picture

ಹಂಸಾನಂದಿಯವರೇ

ಬಡಗನಾಡು ಇವರು ಕನ್ನಡದೋರು. ಪಾಪ ಹಿಂಗೆ ಅವರನ್ನ ತೆಲುಗರು ಅಂದ್ರೆ ಬೇಜಾರ್‍ ಮಾಡಿಕೊಂಡಿದ್ರು ಒಬ್ರು.
http://en.wikipedia.org/wiki/Badaganadu

ಮೂಲಕ ನಾಡುಗಳಲ್ಲಿ ಕೆಲವರ ಮನೆಮಾತು ತೆಲುಗು, ಕೆಲವರ ಕನ್ನಡ. ಈ ಮೂಲಕ ದೇಸ ಈಗಿನ ಮಹಾರಾಷ್ಟ್ರದಲ್ಲಿದೆ. ಮೂಲಕ ಅಂದ್ರೆ ಮೂಲಂಗಿ. ಅದಕ್ಕೆ ಅವರನ್ನು ಮೂಲಂಗಿನಾಡೋರು ಅನ್ನಬಹುದು( ಮುಲುಕುಗಳು ಮನ್ನಿಸಿರಿ ).

ಇಲ್ಲಿ "ನಾಡಿಗ" ಇದು ತೆಲುಗ ಒರೆ ಅನ್ನೋದೇ ಐಬು. "ಇಗ" ಬರೋದು ಬರೀ ಕನ್ನಡದಲ್ಲಿ ಎಂದು ನನ್ನ ಅರಿವು. ಹಾಗೆ "ಹೆಬ್ಬಾರ್‍" ಇದು ಕನ್ನಡದ್ದೇ ಅಲ್ವಾ?!! Smiling

ಹರಿ ಮತ್ತು ಕಶ್ಯಪರಿಗೆ ತೊಂದರೆ ಆಗಿದ್ದರೆ ಮನ್ನಿಸಿರಿ!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ಪುರದ ಪಾಪಿಗಳು
  • ಪುಟ್ಟಿಯ ಜೊತೆ ಸಂಭಾಷಣೆ
  • ನಗೆ ಗವನ
  • ನನ್ನ ಕಾವ್ಯ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 167 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator