ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರೀತಿಯ ಕನಸಿನಲ್ಲಿ

ನೋಡಲಿಲ್ಲನೆಂದೆನ್ನಬೇಡ ಗೆಳೆಯ
ನನ್ನ ನೀ ನೋಡಿರುವೆ
ನಿನ್ನ ಮನದ ಕನ್ನಡಿಯಲ್ಲಿ

ಕೇಳಲಿಲ್ಲನೆಂದೆನ್ನಬೇಡ ಗೆಳೆಯ
ನನ್ನ ನೀ ಕೇಳಿರುವೆ
ನಿನ್ನ ಮನದ ಇನಿದನಿಯಲ್ಲಿ

ಪ್ರೀತಿಗೆ ಎಲ್ಲೆ ಬೇಡ
ನಾ ಮೊದಲು ನೀ ಮೊದಲೆಂಬ
ಗೋಜಲು ಬೇಡ

ಕನಸು ಕದ್ದಿರಲು ನಾನು
ಇತ್ತಿರುವೆ ಮನಸ ನಾನು
ನಿನಗೆ ನಾನು ನನಗೆ ನೀನು

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪ್ರೀತಿಯ ಕನಸಿನಲ್ಲಿ

ಅರವಿಂದ್'s picture

ಇಂಚರ

ನಿಮ್ಮ ಕವನಕ್ಕೆ ಪ್ರತಿ ಕವನವನ್ನು ಹಾಕಲು ಪ್ರಯತ್ನಿಸುತ್ತಿದ್ದೇನೆ, ನೋಡೋಣ ಹೇಗೆ ಮೂಡುತ್ತದೆ ಎಂದು ಈ ಕೀಲಿಮಣೆಯ ಮೂಸೆಯಲ್ಲಿ

ಜೇನಾಗಿ ಹೋದೆಯಾ.....
ನನ್ನವಳೆ ಜೇನಾಗಿ ಹೋದೆಯಾ....
ಜಾನು ಎಂದು ಕರೆದಾಗ ನಾ
ನೀ ಜೇನಾಗಿ ಹೋದೆಯಾ...

ಹೋಗುವ ಮುಂಚೆ ಮರೆತೆ ನನ್ನನೇ
ನೂಕಿ ಹೋಗಿರುವೆ ಜೇಡರ ಬಲೆಯೊಳಗೆ
ಸೆಣಸಾಡುತಿರುವೆ ಇನ್ನೂ ಬರಲಾರದೆ ಹೊರಗೆ,
ಇರಲಾರದೆ ಒಳಗೆ,

ಜೇನಾಗಿ ಹೋದೆಯಾ.......
ಮನದಿನಿಯೆ ಜೇನಾಗಿ ಹೋದೆಯಾ.....
ಕಾದಿರುವುದು ಸಾಕಿನ್ನು ಒಳಗೆ,
ಇರಲಾರೆ ಇನ್ನೊಂದು ಗಳಿಗೆ,
ಹೋದೆ ನೀ ಮರೆತು ನನ್ನಯ ಬೇಗೆ,
ಹೇಳಲಿ ಹೇಳು ಈ ಸಂಕಟ ಯಾರು ಯಾರಿಗೆ ?

ಇರಲಾರದೆ ಒಂದಿಷ್ಟು ನಗೆ ನನ್ನವಳೆ
ಬಿಡಿಸು ಬಾ, ನಾನಿರುವೇ ಈಗಲೂ ನೀ ಹೆಣೆದ ಜೇಡರಬಲೆಯೊಳಗೆ

:)

ಅರವಿಂದ್