Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ishwar.shastri ರವರ ಬ್ಲಾಗ್

ಭಾಷಾಂತರದ ಅವಾಂತರ

November 18, 2007 - 7:34pm — ishwar.shastri

(ಆಯುರ್ವೇದ ಸಂಬಂಧಿತ ಭಾಷಾಂತರಗಳ ಕುರಿತು ಬರೆದ ಲೇಖನ)
ಮೈಸೂರು ವಿಶ್ವವಿದ್ಯಾನಿಲಯ ವೈದ್ಯವಿಶ್ವಕೋಶ ಸಮಿತಿಗೆ ಡಾ. ಎಂ. ಜಿ ಆರ್. ಅರಸರು ಸದಸ್ಯರಾಗಿ ನೇಮಕಗೊಂಡಿದ್ದರಬಗ್ಗೆ, ಅಥವಾ ಡಾ.ಜಯಪ್ರಕಾಶನಾರಾಯಣರವರ ನೇತ್ರತ್ವದಲ್ಲಿ ಆಯುರ್ವೇದ ಶ್ಲೋಕಗಳನ್ನು ಐದು ವಿದೇಶಿ ಭಾಷೆಗಳಿಗೆ ಭಾಷಾಂತರಿಸುವ ಅಪೂರ್ವಯೋಜನೆಗಳಿಗೆ ಸಂಬಂಧ ಪಟ್ಟಂತೆ ಈಗಾಗಲೇ ಸಾಕಷ್ಟು ಅಭಿನಂದನೆಗಳ ಸುರಿಮಳೆಯಾಗುತ್ತಿರಬಹುದು. ಆದರೆ ನಾನು ಸಧ್ಯಕ್ಕೆ ಅಭಿನಂದಿಸಲಾರೆ! ಅಭಿನೆಂದನೆಯನ್ನು ಕಾಯ್ದಿಟ್ಟಿದ್ದೇನೆ!!

ನಿಮಗೆ ಒಂದು ಸ್ವಂತ ಅನುಭವವನ್ನು ಹಾಗೂ ಒಂದು ಜೋಕನ್ನು ಹೇಳುತ್ತೇನೆ;-

ಜೋಕು ;- ಮೂವರು ಮಿತ್ರರು ಸೇರಿ ಚಾಮುಂಡಿ ಬೆಟ್ಟಕ್ಕೆ ಸೈಕಲ್ಲಮೇಲೆ ಹೊರಟಿದ್ದರಂತೆ. ವಯಸ್ಸಿನ ಹುಮ್ಮಸು. ಎಲ್ಲೂ ಸೈಕಲ್ಮೇಲಿಂದ ಇಳಿಯದೇ ಚಾಮುಂಡಿ ಗುಡಿಯಬಾಗಿಲವರೆಗೂ ಸೈಕಲ್ತುಳಿಯುವ ಪ್ರತಿಜ್ಞೆಮಾಡಿದರು. ಒಬ್ಬನು ಸೀಟಿನಮೇಲೆ ಇನ್ನೊಬ್ಬನು ಕ್ಯಾರಿಯಾರ್ಮೇಲೆ ಕುಳಿತಿದ್ದರೆ ಮಗದೊಬ್ಬ ಮುಂದಿನಬಾರ್ಮೇಲೆ ಕುಳಿತಿದ್ದ. ಸೀಟಿನಮೇಲೆ ಕುಳಿತು ಪೆಡೆಲ್ ತುಳಿಯುವಾತನಿಗೆ ಕ್ಯಾರಿಯರ್ವಾಲಾನೂ ಸಾಥನೀಡುತ್ತಿದ್ದು ಕಷ್ಟಪಟು ಗುರಿಸಾದಿಸಿದ ಸುಖದಲ್ಲಿ ಇಬ್ಬರೂ ತನ್ನ ಪರಿಶ್ರಮದಿಂದಲೇ ಬೆಟ್ಟ ಏರಲು ಸಾಧ್ಯವಾಯಿತೆಂದು ಜಗಳ ಶುರು ಹಚ್ಚಿಕೊಂಡರು.

ಮೂರನೆಯವನಿಗೆ ಬಹಳ ಬೇಸರವಾಯಿತು. ತನ್ನ ಪ್ರಯತ್ನಕ್ಕೆ ಇವರು ಬೆಲೆಯನ್ನೇ ಕೊಡುತ್ತಿಲ್ಲವಲ್ಲಾ ಎಂದು ತನ್ನ ಅಳಿಲನ್ನೂ ತೋಡಿಕೊಂಡ. ಆತಮಾಡಿದ ಸಹಾಯ ಬಹಳ ಅಗಾಧ ಹಾಗೂ ವಿಶಿಷ್ಟವಾದದ್ದಾಗಿತ್ತು. ಉಳಿದಿಬ್ಬರೂ ಶ್ರಮಪಟ್ಟು ಪೆಡಲ್ತುಳಿಯುತ್ತಿರುವಾಗ ಈತ ಸೈಕಲ್ ಹಿಂದಕ್ಕೆ ಹೋಗದರುವಂತೆ ಸಹಾಯಮಾಡಲು ಬ್ರೆಕ್ಕ್ ಹಿಡಿಯುತ್ತಿದ್ದ!!

ಅನುಭವ;-

ಒಮ್ಮೆ ನಾನು ಸೈಕಲ್ಮೇಲೆ ಏರಲು ಪ್ರಯತ್ನಿಸುತ್ತಿದ್ದೆ.ಹತ್ತುವ ಸಮಯದಲ್ಲಿ ಬ್ಯಾಲೆನ್ಸ್ ಸ್ವಲ್ಪ ಏರು ಪೇರು ಆಯಿತು.ಬೀಳದಿರಲೆಂದು ಪ್ರಯತ್ನಿಸುತ್ತಿದ್ದೆ.ಅದು ಸಾದ್ಯವಿಲ್ಲವೆಂಬುದು ಅರಿವಿಗೆಬಂದಿತು. ನಾನು ಸುಲಭವಾಗಿ ನೆಲಕ್ಕೆ ಇಳಿಯುತ್ತಿದ್ದೆ. ಅಷ್ಟರಲ್ಲಿ ಒಬ್ಬ ಪುಣ್ಯಾತ್ಮ ಸಹಾಯಹಸ್ತನೀಡಿ ಸೈಕಲ್ನ್ನು ಬಿಗಿಯಾಗಿ ಹಿಡಿದು ಕೊಂಡ. ಸೈಕಲ್ ಅವನ ಕೈಯಲ್ಲಿ ಭದ್ರವಾಗಿ ಉಳಿಯಿತು. ನಾನು ಕಾಲುವೆಗೆ ಉರುಳಿದೆ!! ಗಮನಿಸಿ ;- ಈ ಎರಡೂ ಸಂದರ್ಭಗಳಲ್ಲೂ ಆಪದ್ಭಾದವನೇ ಅಪಾಯಕಾರಿಯಾದ.

ಡಾ. ಎಂ.ಜಿ, ಆರ್. ಅರಸರ ಹಾಗೂ ಡಾ. ಜಯಪ್ರಕಾಶನಾರಾಯಣರವರ ಪ್ರಯತ್ನದ ಪರಿಣಾಮ ಒಳಿತನ್ನು ಮಾಡುತ್ತದೆ ಎಂದು ನನಗೇನೂ ಅನ್ನಿಸುವುದಿಲ್ಲ.

ವೈಜ್ಞಾನಿಕ ಪರಿಭಾಷೆಗಳನ್ನು ಭಾಷಾತರಿಸುವುದನ್ನು ನಾನು ದ್ವೇಷಿಸುತ್ತೇನೆ. ಕನ್ನಡದ ಭಕ್ತರು ಆಕ್ಸಿಜನ್ಗೆ ಪ್ರಾಣವಾಯು, ಕಾರ್ಬನ್ ಡಯಾಕ್ಶೈಡ್ಗೆ ಅಂಗಾರಾಮ್ಲ ವಾಯು ಇತ್ಯಾದಿ ಭಾಷಾಂತರಿಸಿದ್ದರಿಂದಲೇ ನಮ್ಮ ಮಕ್ಕಳನ್ನು ಅವರ ಭವಿಷ್ಯದ ಹಿತದೃಷ್ಠಿಯಿಂದ ಆಂಗ್ಲಮಾಧ್ಯಮಕ್ಕೆ ಡೊನೇಷನ್ ಸುರಿದು ಸೇರಿಸುವ ಅನಿವಾರ್ಯ ಪ್ರಮೇಯ ಬಂದಿರುವುದು. ಈ ಬಗ್ಗೆ ವೈದ್ಯವಾರ್ತೆಯಲ್ಲಿ ಹಿಂದೊಮ್ಮೆ ನನ್ನ ಲೇಖನವೂ ಪ್ರಕಟವಾಗಿತ್ತು. ಆಯುರ್ವೇದದ ಅವನತಿಗೆ ಹಾಗೂ ಅಸಡ್ಡೆಗಳಿಗೆ ಅಡ್ನಾಡಿ ಭಾಷಾತರಕಾರು ವಾತ ಪಿತ್ತ ಕಫಗಳಿಗೆ ವಿಂಡ್, ಬೈಲ್, ಪ್ಲಮ್ ಇತ್ಯಾದಿ ಭಾಷಾಂತರಿಸಿದ್ದೇ ಕಾರಣ. ಡಾ. ಜಯಪ್ರಕಾಶನಾರಾಯಣರ ಪ್ರಯತ್ನ ಹಾಗೂ ನಿಮ್ಮ ಪ್ರೋತ್ಸಾಹ ಇದೇ ದಿPನಿಲ್ಲಿ ಸಾಗಿದರೆ ಅಪಾಯ ಖಂಡಿತ.

ಭಾಷೆಯಮೇಲೆ ಪ್ರಭುತ್ವವಿರುವಾತನಿಗೆ ಶಾಸ್ತ್ರಜ್ಞಾನವಿಲ್ಲ. ಶಾಸ್ತ್ರಕೋವಿದನಿಗೆ ಭಾಷೆಯಮೇಲೆ ಹಿಡಿತವಿಲ್ಲ. ಶಿವಾಜಿಯ ಕಾಲಚಲ್ಲಿ ಔರಂಗಜೇಬನ ಆಟ ನಡೇಯಲಿಲ್ಲಎಂಬುದಕ್ಕೆ-at the leg of the shivaaji ouranga jebs play could not walk ಎಂದು ಭಾಷಾಂತರಿಸಿದರೆ ಏನಾಗುತ್ತದೆ?

ಈ ಕೆಳಗಿನದು ವಿಕಿಪೀಡಿಯಾ ಎಂಬ ವಿಶ್ವಕೋಶದ ತುಣುಕು. ಈಗಷ್ಟೆ ಇದನ್ನು ನನ್ನ ಕಂಪ್ಯೂಟರಿಗೆ ಇಂಟರ್ನೆಟ್ನಿಂದ ಇಳಿಸಿಕೊಂಡಿದ್ದೇನೆ.

Ayurvedic tastes
Ayurveda holds that the tastes of foods or herbs have specific physiological effects. Those tastes that transform after digestion (Vipaka) are more powerful.

Sweet - Madhura

Sweet foods nourish, cool, moisten, oil, and increase weight

Sour - Amla

Sour foods warm, oil, and increase weight

Salty - Lavan

Salty foods warm, dissolve, stimulate, soften, oil, and increase weight

Bitter - Katu

Bitter foods cool, dry, purify and decrease weight

Pungent - Tikta

Pungent foods warm, dry, stimulate, and decrease weight

Astringent - Kasaya

Astringent foods cool, dry, reduce stickiness

ಪರಿಶೀಲಿಸಿನೋಡಿ. ಷಡ್ರಸದ Bitter – Katu *** Pungent – Tikta ಇವೆರಡೂ ಸರಿಯಾಗೆವೆಯೇ? ಯಾವುದು ತಿಕ್ತ? ಯಾವುದು ಕಟು? ಇವೆರಡೂ ಅದಲು ಬದಲಾಗಿದೆ ಎಂದು ಅನ್ನಿಸುತ್ತಿಲ್ಲಾವೆ? ಇಡೀ ಜಗತ್ತು ಈ ವಿಕಿಪಿಡಿಯಾವನ್ನು ನಂಬುತ್ತದೆ ಎಂದ ಮೇಲೆ ಅಪಾಯ ಎಲ್ಲಿದೆ ಎಂಬುದು ನಿಮಗೆ ಅರ್ಥವಾಗುತ್ತಿರಬಹುದು.

ಮೈಯೆಲ್ಲಾ ಖಾರತುಂಬಿಕೋಡ ಮೆಣಸು ಹಿಪ್ಪಲಿ ಶುಂಠಿಯನ್ನು ತಿಕ್ತವೆನ್ನಬೇಕಾ? - ಅಥವಾ ಮೈಯೆಲ್ಲಾ ಕಹಿತುಂಬಿಕೊಂಡಿರುವ ಚಂದನ ಬೇವು ಅಮೃತಬಳ್ಳಿ ಕಹಿಪಟೊಲವನ್ನು ತಿಕ್ತವೆಂದು ಕರೆಯಬೇಕಾ?

ಸ್ವಯಂವೈದ್ಯ(self medication) ಮಾಡಿಕೊಳ್ಳುತ್ತಿರುವ ರೋಗಿಯೊಬ್ಬ ಒಂದೊಮ್ಮೆ ವಾಗ್ಭಟನ " ಕಷಾಯ ತಿಕ್ತ ಮಧುರಾಃ ಪಿತ್ತಂ-(ಘ್ನಂತಿ=ನಾಶಮಾಡುತ್ತದೆ) ಎಂಬವಾಕ್ಯವನ್ನು ತಿಳಿದಿದ್ದು, ವಿಕಿಪೀಡಿಯಾ ಓದಿ- ಪಿತ್ತಕ್ಕೆ ಖಾರ ಪದಾರ್ಥಗಳನ್ನು ತಿನ್ನತೊಡಗಿದರೆ - ರೋಗಿಯ ಪರಿಸ್ಥಿತಿ ಏನಾಗಬಹುದು. ಅದೇರೀತಿ ಯಲ್ಲಿ ಕಟುರಸಕ್ಕೆ ಖಾರದ ಬದಲು ಕಹಿಯೆಂದು ಭಾವಿಸಿ ಆಹಾರ ಔಷಧಗಳನ್ನು ಸೇವಿಸುತ್ತಿದ್ದರೆ ರೋಗ ಗುಣವಾಗಬಹುದೋ? ಅಥವಾ ಉಲ್ಭಣವಾಗಬಹುದೊ ಭಗವಾನ್ ಧನ್ವಂತರಿಗೆ ಗೊತ್ತು.

ನಿಮ್ಮ ಮಾಹಿತಿಗೆ ಇದೀಗ ನಡೆದ ತಾಜಾ ತಾಜಾ ಭಾಷಾಂತರದ ಆವಾಂತರ- ’ನನ್ನ ಇಂಗ್ಲೀಷ ಮೀಡಿಯಮ್ ಮಗ ತನ್ನ ತಾಯಿಗೆ ಇಡ್ಲಿಮಾಡುವುದರಬಗ್ಗೆ ಇಂಟರನೆಟ್ನಲ್ಲಿರುವ ಮಾಹಿತಿಯನ್ನು ಓದಿ ಹೇಳುತ್ತಿದ್ದ. ಪ್ರಜಾವಾಣಿಯ ಪದಬಂಧವನ್ನು ಸುಲಭವಾಗಿ ತುಂಬುವಸ್ಟರಮಟ್ಟಿಗೆ ಆತ ಕನ್ನಡ ಪಂಡಿತ. ಆದರೂ ಬೊಯಿಲ್ಡ ರೈಸಗೆ ಅರ್ಥವನ್ನು ಬೆಂದ ಅನ್ನ ಎಂದು ತಾಯಿಗೆ ವಿವರಿಸಿದ. ಕುಸುಬಲು ಅಕ್ಕಿಗೆ ಬೋಯಿಲ್ಡರೈಸ ಎನ್ನುತ್ತಾರೆ ಅನ್ನೋದು ಎಂಬುದು ಆತನ ನೆನಪಿಗೆ ಬರಲಿಲ್ಲ .

ಡಾ. ಆಯಪ್ರಕಾಶನಾರಾಯಣರು ಆಯುರ್ವೇದ ಹಾಗೂ ಅಲೋಪತಿ ಎರಡೂ ಶಾಸ್ತ್ರಗಳನ್ನು ಸಮರ್ಥವಾಗಿ ಬಲ್ಲವರು. ಇಂಗ್ಲೀಷ್ ಕರಗತವಾಗಿರಬಹುದು. ಆದರೆ ಫ಼್ರೆಂಚ್ ಜರ್ಮನಿಯ ವಿಷಯದಲ್ಲಿಹೀಗಾಗದು. ಆದಾಗ್ಯೂ ಭಾಷಾಂತರವು ವ್ಯಭಿಚಾರವಾಗದಂತಿರುತ್ತದೆ ಎಂದು ನಂಬುತ್ತೇನೆ. ಅವರ ಸಾಮರ್ಥ್ಯದಲ್ಲಿ ನಂಬಿಕೆ ಇದ್ದರೂ ಅವರ ಯಶಸ್ಸಿನ ಬಗ್ಗೆ ಭಯವೂ ಇದೆ.

ಡಾ. ಎಂ.ಜಿ.ಆರ್. ಅರಸರ ಬಗ್ಗೆ ವಿಶ್ವಾಸವಿದೆ. ಆದರೆ ಈ ವಿಷಯದಲ್ಲಿ ಭರವಸೆ ಕಡಿಮೆ ಇದೆ. ಆತಂಕ ಹೆಚ್ಚಿಗೆ ಇದೆ. ಹೀಗಾಗಿ ಅಭಿನಂದನೆಗಳನ್ನು ಕಾಯ್ದಿರಿಸಿದ್ದೇನೆ.

ಈ ಇಬ್ಬರ ಶೃಮವು ಭಗವಾನ್ ಧನ್ವಂತರಿಗೆ ಮೆಚ್ಚುಗೆಯಾಗಿ ಅವರು ದೇವನ ಕೃಪೆಗೆ ಪಾತ್ರರಾಗಲಿ ಎಂದು ಆಶಿಸುತ್ತೇನೆ

ಜೊತೆಗೆ ಒಂದು ಕೊನೆಹನಿ. ಇದು ಭಾಷಾಂತರದ ಆವಾಂತರಕ್ಕೆ ಸಂಬಂಧ ಪಟ್ಟಿದ್ದು;- ಹಿಂದಿ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸುವ ಪರೀಕ್ಷೆ ನಡೆದಿತ್ತು. ಹೇಗಿದ್ದರೂ ಹಿಂದಿ ಭಾಷೆ ಪರೀಕ್ಷೆಯಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ. ಹೀಗಾಗೆ ಮೇಸ್ಟ್ರು ಸೂಚನೆ ಕೊಟ್ಟಿದ್ದರು. ಗೊತ್ತಿದ್ದ ಪದಗಳನ್ನು ಭಾಷಾಂತರಿಸಿ ತಿಳಿಯಲಾರದ ಪದಗಳನ್ನು ಹಾಗೆಯೇ ಇಡಬಹುದು. ಪ್ರಶ್ನೆ ಹೀಗಿತ್ತು- ಆಗೇ ರಾಮ್ ಪೀಛೆ ಲಕ್ಷ್ಮಣ್ ಬೀಚಮೆ ಸೀತಾ [ ಮುಂದೆ ರಾಮ ಹಿಂದೆ ಲಕ್ಷ್ಮಣ ಮಧ್ಯದಲ್ಲಿ ಸೀತೆ]. ಒಬ್ಬ ಪ್ರಭೃತಿಯ ಭಾಷಾತರವು ಹೀಗೆ ಇತ್ತು.- ಮುಂದೆ ರಾಮ ಹಿಂದೆ ಲಕ್ಷ್ಮಣ ಬೀಚಿನಲ್ಲಿ ಸೀತೆ!

  • ಆಯುರ್ವೇದ
Ornamental seperator
  • ishwar.shastri ರವರ ಬ್ಲಾಗ್
  • Login or register to post comments
  • 241 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀಲು
  • ವಿಕ್ರಾಂತ ಕರ್ನಾಟಕ - ಪತ್ರಿಕೆ ಬಿಡುಗಡೆ ಹಾಗೂ ವೆಬ್ಸೈಟ್ ಉದ್ಘಾಟನಾ ಸಮಾರಂಭ
  • ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?
  • ನಾನು ಶ್ರೀಶ ಕಾರಂತ
  • ಶೇಷಾದ್ರಿವಾಸು ರವರಿಗೆ, ನಮ್ಮ ಕನ್ನಡನಾಡಿನ ಹಾಗೂ ಸಂಪದೀಯರ, ತುಂಬುಹೃದಯದ, ಮನಸ್ಸಿನ, ಹಾರ್ದಿಕ ಶುಭಾಶಯಗಳು !
Syndicate content

ಲೇಖಕರು

ishwar.shastri's picture

ಪೂರ್ಣ ಹೆಸರು
ಈಶ್ವರ ಶಾಸ್ತ್ರಿ ಮೋಟಿನಸರ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator