ಈಗಿನಂತೆ 5 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸಿ.ಅಶ್ವಥ್ - ಮರೆಯಾದ ಮಹಾಚೇತನ.
Jayanth Ramachar's picture
ಜಯಂತ್ ರಾಮಾಚಾರ್
29
Dec
2010
ಲೇಖನ

ಡಿಸೆಂಬರ್ ೨೯, ೨೦೦೯ ಕನ್ನಡ ಕಲಾರಂಗಕ್ಕೊಂದು ಬರಸಿಡಿಲೊಂದು ಎರಗಿದ ದಿನ. ನಾಡಿನ ಜನತೆ ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗ ಬಂದ ಈ ಸುದ್ದಿ ಎಲ್ಲರನ್ನೂ ಶೋಕಸಾಗರದಲ್ಲಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 661
ದೂರದರ್ಶನದ ಆ ದಿನಗಳು ...
bhalle's picture
ಶ್ರೀನಾಥ್ ಭಲ್ಲೆ
08
Feb
2011
ಲೇಖನ

ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ...

ಪ್ರತಿಕ್ರಿಯೆಗಳು: 46
ಹಿಟ್ಸ್ : 1,220
ಸವಿ ಸವಿ ನೆನಪು ಸಾವಿರ ನೆನಪು !
bhalle's picture
ಶ್ರೀನಾಥ್ ಭಲ್ಲೆ
08
Apr
2011
ಲೇಖನ

 

ಹೀಗೇ ಇತ್ತೀಚೆಗೆ ಟಿ.ವಿ.ಯಲ್ಲಿ ಹಾಡು ನೋಡುತ್ತಿದ್ದೆ ... ಸುದೀಪ್ ಅಭಿನಯದ "ಮೈ ಆಟೋಗ್ರಾಫ್" ಚಿತ್ರದ ಈ ಹಾಡು ನನ್ನ ಜೀವನದ ನೆನಪುಗಳನ್ನು ಬಡಿದೂ ಬಡಿದು...

ಪ್ರತಿಕ್ರಿಯೆಗಳು: 32
ಹಿಟ್ಸ್ : 879
ನಿರ್ಧಾರ
Vaishali's picture
Vaishali
29
Jul
2010
ಬ್ಲಾಗ್ ಬರಹ

 ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,123
ಅಲ್ಲಮ
BRS's picture
Dr.B.R.Satyanarayana
23
Apr
2010
ಪುಟ

ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,041
ಕನ್ನಡಿಯಲ್ಲಿ ಕಂಡ ಮುಖ ನನ್ನದಲ್ಲ!
uniquesupri's picture
ಸುಪ್ರೀತ್.ಕೆ.ಎಸ್
18
Nov
2010
ಲೇಖನ

ನಮ್ಮ ದಿನನಿತ್ಯದ ವರ್ತನೆ, ಕ್ರಿಯೆಗಳಲ್ಲಿ; ಅನುಭವಗಳನ್ನು ಗ್ರಹಿಸುವ ವಿಧಾನದಲ್ಲಿ ಬಾಹ್ಯ ಪ್ರಭಾವಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಅವಲೋಕಿಸುವುದು...

ಪ್ರತಿಕ್ರಿಯೆಗಳು: 7
ಹಿಟ್ಸ್ : 855
(ವರ್ಷದ) ಕೊನೆಯ ಕೊಸರು
hamsanandi's picture
ಹಂಸಾನಂದಿ
31
Dec
2007
ಬ್ಲಾಗ್ ಬರಹ

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,445
ಜಪಾನಿನ ಚಕ್ರವರ್ತಿ ನಾಳೆ ಹುಟ್ಟುವನೇ?
benaka's picture
ಬೆನಕ
05
Sep
2006
ಪುಟ
ಗೆಳೆಯರೇ, ಜಪಾನಿನಲ್ಲಿ ಈಗಿನ ರಾಜಕಾರಣ ರಂಗೇರುತ್ತಿದೆ. ಈಗಿನ ಪ್ರಧಾನ ಮಂತ್ರಿ ಜುನ್‍ಇಚಿರೊ ಕೊಇಜುಮಿ ನಂತರದ ಪ್ರಧಾನಿ ಅಭ್ಯರ್ಥಿಯನ್ನು ಆರಿಸಲು ಆಡಳಿತಾರೂಢ ಜಿಮಿಂತೋ [ಸ್ವತಂತ್ರ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,615
ಕಥೆ : ಸೀತೆ
partha1059's picture
ಪಾರ್ಥಸಾರಥಿ
08
Mar
2011
ಲೇಖನ

ನಿದಾನವಾಗಿ ಹಗಲು ಸಂಜೆಯಾಗಿ ಬದಲಾಗುತ್ತಿತ್ತು. ಸುತ್ತಲ ಮರಗಳಲ್ಲಿ ಅಹಾರವನ್ನರಸಿ ದೂರಹೋಗಿದ್ದ ಪಕ್ಷಿಗಳೆಲ್ಲ  ಹಿಂದಿರುಗಿ ಗೂಡಿಗೆ...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,080

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮೀಸಲಾತಿಯ ಆಚೆಗೆ ನೋಡೋಣ

ಮೀಸಲಾತಿಯ ಆಚೆಗೆ ನೋಡೋಣ

ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ ನಮಗೆ ಬದುಕೇ ಇಲ್ಲ ಎಂಬಂತೆ ವಾದಿಸುತ್ತಾರೆ. ಈ ಮೂಲಕ ತಾವು ದಡ್ಡರು ಎಂದು ಒಪ್ಪಿಕೊಳ್ಳುತ್ತಾರೆ. ವಾಸ್ತವದಲ್ಲಿ ನಾವು ಚರ್ಚಿಸಬೇಕಿರುವುದು ಮೀಸಲಾತಿಯ ಬಗೆಗೆ ಅಲ್ಲ. ಮೀಸಲಾತಿಯನ್ನು ಅಗತ್ಯ ಎನ್ನುವಂತೆ ಮಾಡಿರುವ ಇತರ ಅಂಶಗಳ ಬಗ್ಗೆ. ಅನಂತಮೂರ್ತಿಯವರು ತಮ್ಮ ಇತ್ತೀಚಿನ ಲೇಖನ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ಜ್ಞಾನ ಯಜ್ಞದಲ್ಲಿ ಮೀಸಲಾತಿಯ ಅಗತ್ಯವೇ ಇಲ್ಲದಂತೆ ಮಾಡಲು ಸಾಧ್ಯವಿರುವ ಶಿಕ್ಷಣ ವ್ಯವಸ್ಥೆಯೊಂದರ ಬಗ್ಗೆ ಬರೆದಿದ್ದಾರೆ. ಇದು ಅತಿ ಆದರ್ಶದ ಮಾತೇನೂ ಅಲ್ಲ. ತೀರಾ ಇತ್ತೀಚಿನವರೆಗೂ ಇದ್ದ ಈಗ ನಗರಗಳಲ್ಲಿ ಪೂರ್ಣ ಇಲ್ಲದಂತಾಗಿರುವ ವ್ಯವಸ್ಥೆಯೊಂದರ ಪುನರುಜ್ಜೀವನದ ಬಗ್ಗೆ ಅವರು ಹೇಳುತ್ತಿದ್ದಾರೆ. ಮೀಸಲಾತಿಯ ಬೇಕು ಬೇಡಗಳ ಕುರಿತು ಸಂವೇದನಾ ರಹಿತರಾಗಿ ಮಾತನಾಡುವುದಕ್ಕಿಂತ ಈ ಬಗೆಯ ವ್ಯವಸ್ಥೆಯೊಂದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನಾದರೂ ಇಡುವುದು ಸೂಕ್ತ ಎನಿಸುತ್ತದೆ. ಇದಕ್ಕಾಗಿ ಸರಕಾರ ಏನೂ ಮಾಡಬೇಕಿಲ್ಲ. ನಾವು ನಮ್ಮ ಮಕ್ಕಳನ್ನು ಸರಕಾರೀ ಶಾಲೆಗಳಿಗೆ ಕಳುಹಿಸುವ ಮೂಲಕವೇ ಇದನ್ನು ಆರಂಭಿಸಬಹುದು. ಈಗಂತೂ ಸಮುದಾಯವನ್ನು ಶಾಲೆಯ ಆಗು ಹೋಗುಗಳಲ್ಲಿ ಪಾಲುದಾರರನ್ನಾಗಿಸುವುದು ಕಡ್ಡಾಯವೂ ಆಗಿರುವುದರಿಂದ ಹೊಸ ಶಿಕ್ಷಣ ಸಂಸ್ಕೃತಿಯೊಂದನ್ನು ಬೆಳೆಸುವುದು ಖಂಡಿತಾ ಸಾಧ್ಯ ಎಂಬುದು ನನ್ನ ಭಾವನೆ.
No votes yet
3377 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
muralihr's picture
25
May
2006
12:26

ಮತ್ತೊ೦ದು ವಿಷಯಈ IIT/IIM ಗಳೂ ನಮ್ಮ ದೇಶದ ಪ್ರಮುಖ ವಿಜ್ನಾನ ಅಧ್ಯಾಯನ ಕೇ೦ದ್ರವಾಗಿರುವದಿ೦ದಲೇ
ಇಷ್ಟೊ೦ದು ತಿಕ್ಕಾಟ. ಒಮ್ಮೆ ಚೀನಾದ ತತ್ತ್ವ ಜ್ನಾನಿಯೊಬ್ಬ ಹೇಳಿದ ಮಾತು, ಬುದ್ಧಿಗೆ
ಜಾಸ್ತಿ ಪ್ರಧಾನ್ಯ ಕೊಟ್ಟರೆ ತಿಕ್ಕಾಟ ಪ್ರಾರ೦ಭವಾಗುತ್ತದೆ ಎ೦ದು. ನನ್ನ ಒಬ್ಬ ಮಿತ್ರ
ಸುಬ್ಬು ಶಾಸ್ತ್ರಿ IIT ಯಲ್ಲಿ ಓದಿ , ಅಮೇರಿಕಾದ ವಿಶ್ವವಿದ್ಯಾಲವದಲ್ಲಿ phd
ಗಳಿಸಿ ಈಗ ನರ್ಮದ ಮತ್ತು ಇತರೆ ಹೋರಾಟಗಳಲ್ಲಿ ಭಾಗಿಯಾಗಿ ,ನಮ್ಮ ದೇಶದ ಪರಿಸರ ಸ೦ರಕ್ಷಣೆಗಾಗಿ
ಕೆಲಸ ಮಾಡುತ್ತಿದ್ದಾನೆ. ಅವನ ಪ್ರಕಾರ ಈ IIT ಗಳಲ್ಲಿ ಓದುವುದು ಅಷ್ಟು ಪ್ರಯೋಜನಕಾರಿಯಿಲ್ಲಾ,
ಹಾನಿಯೆ ಹೆಚ್ಚೆ೦ದು ಅವನ ಭಾವನೆ. ಅವು ಬಹುಶ: ನಮ್ಮ ಮನಸ್ಸನ್ನು ತೀರಾ ಯಾ೦ತ್ರಿಕ ಹಾಗೂ
ತಾ೦ತ್ರಿಕಗೊಳಿಸುತ್ತದೆ, ಹೃದಯದ ವಿಕಾಸವಾಗುವುದಿಲ್ಲಾ.ಹೃದಯದ ವಿಕಾಸವಾಗದೆ ಮಾನವ ಪ್ರಾಣಿ ಮಾತ್ರ.
ಅದರಿ೦ದಲೇ ಈ IIT/IIM ನವರೂ ಹೆಚ್ಚಾಗಿ ಅಮೇರಿಕಾ ಗೆ ಹೋಗಿ ಅಲ್ಲಿ ತಮ್ಮ ಬುದ್ಧಿಯ ಚಮತ್ಕಾರದಿ೦ದ
ಮು೦ದೆ ಬ೦ದು "ದೊಡ್ದವಾರಾದೆವು" ಎ೦ಬ ಭ್ರಮೆ ಪಡುವುದು.

ಹಾಗು ಈ ಶಿಕ್ಷಣ ಪದ್ಧತಿಯು ವ್ಯಕ್ತಿಯನ್ನು ತನ್ನ ಸಮುದಯದಿ೦ದ ಬೇರೆ ಮಾಡಿ, ಆನನ್ನು ಒ೦ಟಿ ಜೀವಿಯನ್ನಾಗಿ
ಮಾಡುತ್ತದೆ.ಈ ಶಿಕ್ಷಣ ಪದ್ಧತಿಯನ್ನು ಧಿಕ್ಕರಿಸುವುದನ್ನು ಬಿಟ್ಟು ಅದಕ್ಕಾಗಿ ನಾವು ಬಾಯ್ ತೆರೆಯುತ್ತಿರುವುದು
ವಿಷಾದನೀಯ ಹಾಗೂ ಅವಿವೇಕದ ಸ೦ಗತಿ.