ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › jaiguruji ರವರ ಬ್ಲಾಗ್

ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

May 31, 2007 - 3:08pm — jaiguruji

ಮೊನ್ನೆಯ ಘಟನೆ : ನನ್ನ ಮಿತ್ರನೊಬ್ಬನನ್ನು ಒಬ್ಬ ಸರಿಕರಿಗೆ ಪರಿಚಯಿಸುವಾಗ "ನಮ್ಮ ಗ್ರುಪ್ ನಾಗೇ ಇವ್ರು ಬುದ್ಧಿಜೀವಿ, ಸಿಕ್ಕಾಪಟ್ಟಿ ಓದ್ಯಾರ.." ಇತ್ಯಾದಿ ಹೇಳ್ಲಿಕತ್ತಿದ್ದೆ. ಆಗ ತಕ್ಷಣ ನನ್ನ ಮಿತ್ರ ಸ್ವಲ್ಪ ಲಘುವಾಗಿ "ಅಣ್ಣಾ ನಿಂಗ ನನ್ನ ಮ್ಯಾಲೆ ಸಿಟ್ಟಿದ್ರ, ಕಾಲಾನ ಮೆಟ್ಟ ತೊಗೊಂಡ ನಾಕ ಬಾರ್ಸು, ಅದ್ರ ಹಿಂಗ ಬುದ್ಧಿಜೀವಿ ಪದ್ದಿಜೀವಿ ಅಂಥ್ಹೇಳಿ ಬ್ಯಾರೆವ್ರ ಮುಂದ ಅಸಂಹ್ಯ ಮಾಡ್ಬ್ಯಾಡ" ಅಂದ. ನನಗನಿಸುವಂತೆ..ಅವನು ತಾನು ಬುದ್ಧಿಜೀವಿಯಲ್ಲ, ಅಷ್ಟೊಂದು ದೊಡ್ಡವನಲ್ಲ ಎಂಬ ವಿನಯದಿಂದೇನೂ ಆ ಮಾತು ಹೇಳ್ಲಿಲ್ಲ. ಅವನ ಮಾತಿನಲ್ಲಿ ಆ ಪದದ ಬಗ್ಗೆ ಒಂದು ರೀತಿಯ ತಿರಸ್ಕಾರವಿತ್ತು. ಹಾಂಗಂದ್ರ ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ಇನ್ನೊಂದು ಪ್ರಸಂಗ : ಬೆಂಗಳೂರಿನಲ್ಲಿಯೆ ಕಾರ್ಯಕ್ರಮವೊಂದರಲ್ಲಿ ಅತಿಥಿಗಳನ್ನು ಪರಿಚಯಿಸುವಾಗ "ಇವರು ಬುದ್ಧಿಜೀವಿ, ಸಾಹಿತ್ಯೋಪಾಸಕ.." ಇತ್ಯಾದಿ ಹೇಳಿದ್ದಕ್ಕೆ.."ದಯವಿಟ್ಟು ಬುದ್ಧಿಜೀವಿ, ಸುದ್ದಿಜೀವಿ ಕೆಟಗರಿಗೆ ಸೇರಿಸಿಬೇಡಿ ನನ್ನ" ಎಂದು ವಿನಂತಿಸಿಕೊಂಡಿದ್ದರು!

ಈಗ ನನ್ನ ಪ್ರಶ್ರೆ. ಹೀಗೇಕೆ ಶಬ್ದಗಳು ತಮ್ಮ ನಿಜವಾದ ಅರ್ಥವನ್ನು ಕಳೆದುಕೊಂಡು ಅಪಮೌಲ್ಯಗೊಳ್ಳುತ್ತಿವೆ? ನಿನ್ನೆಯ ವಿಕದ ಓದುಗರು ಪ್ರತಿಕ್ರಿಯೆಯಲ್ಲಿಯೂ ಕೂಡ ’ಬುದ್ಧಿಜೀವಿ’ ಎಂಬ ಪದವನ್ನು ಹೀಯಾಳಿಕೆಯ ಶಬ್ದವನ್ನಾಗಿ ಉಪಯೋಗಿಸಿದ್ದರು. ವಿಕ ಮಾತ್ರವಲ್ಲ..ಅನೇಕ ಕಡೆ ನಾನು ಈ ರೀತಿಯ ಪದ ಪ್ರಯೋಗವನ್ನು ನೋಡಿದ್ದೇನೆ. ಬುದ್ದಿಜೀವಿ ಪದವನ್ನು ಸುದ್ದಿಜೀವಿ, ಬುದ್ಧಿಗೇಡಿ ಜೀವಿ ಇತ್ತ್ಯಾದಿ ಹಿಂಜಿದ್ದನ್ನು ನೋಡಿದ್ದೇನೆ. ಇದಕ್ಕೆ ಯಾರು ಕಾರಣ? ಅವುಗಳ ಅಸಾಂದರ್ಬಿಕ ಬಳಕೆಯೇ? ಅಥವಾ ಹೆಚ್ಚು ಹೆಚ್ಚು ಬಳಸಿ ಕ್ಲೀಷೆಯೆನಿಸುತ್ತಿದೆಯೇ?

ಇದೇ ರೀತಿ ಅರ್ಥ ಕಳೆದುಕೊಳ್ಳುತ್ತಿರುವ ಕೆಲವು ಪದಗಳು : ವಿಚಾರವಾದಿ ( now a days rhymes with ವಿಚಾರವ್ಯಾಧಿ), ಕೋಮುವಾದಿ, ಸಂಸ್ಕೃತ, ಸೆಕ್ಯುಲರ್. ಇನ್ನೂ ಕೆಲವು ಇವೆ. ಈಗ ಹೇಳ್ರಿ ಬುದ್ಧಿಜೀವಿ ಅಂತ ಕರದ್ರ ನಿಮ್ಗೂ ಸಿಟ್ಟ ಬರ್ತದೇನು ಮತ್ತ?

  • ಬುದ್ಧಿಜೀವಿ
  • ವಿಚಾರವಾದಿ
  • ವಿಮರ್ಶೆ
~.~
  • jaiguruji ರವರ ಬ್ಲಾಗ್
  • Login or register to post comments
  • 455 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2007 - 3:25pm — prapancha

ಉ: ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

prapancha's picture

ಗುರುಜೀ ಯವರೆ,
ಬರಹ ಚೆನಾಗಿದೆ. ವಿಶೇಷವಾಗಿ ಈ ಬುದ್ದಿಜೀವಿ ಪದಕ್ಕೆ ವಾಕರಿಕೆ ಬರುವ ಹಾಗೆ ಉಪಯೊಗಿಸಿದ್ದೆ ಇದರ ಅಪ ಮೌಲ್ಯಕ್ಕೆ ಕಾರಣ ಎ೦ದನಿಸುತ್ತದೆ. ಈಗ ಸದ್ಯಕ್ಕೆ ಈ ಪದವನ್ನ ಬಹುವಾಗಿ ಉಪೊಯೊಗಿಸಿವವರು ಕೆಲವು ಎಡಪ೦ಥವಾದದ ಜನರು ಹಾಗಾಗಿ ಹೇಗೆ ಪ್ರಸ್ತುತದಲ್ಲಿ ಎಡಪ೦ಥ ವಾದಕ್ಕೆ ಮೌಲ್ಯವಿಲ್ಲವೋ ಹಾಗೆ ಈ ಪದವೂ ಮೌಲ್ಯ ಕಳೆದುಕೊ೦ಡಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 3:39pm — ASHOKKUMAR

ಉ: ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ASHOKKUMAR's picture

ಬುದ್ಧಿಜೀವಿ ಅನ್ನಿಸಿಕೊಂಡೋರ ನಡತೆ, ವರ್ತನೆ ಮತ್ತು ಅವರ ವಿಚಾರಗಳು ಹೀಗೆ ಆಗಲಿಕ್ಕೆ ಕಾರಣ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 7:48pm — ಶಿವ

ಉ: ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?

ಶಿವ's picture

ಬಿಸಿಬಿಸಿ ಚರ್ಚೆಯ ನಂತರ ಗೆಳೆಯನೊಬ್ಬ ನನ್ನನ್ನು ಕಾಂಗ್ರೇಸ್‍ನವ,ಬುದ್ದಿಜೀವಿ ಎಂದೆಲ್ಲಾ ಕರೆಯುತ್ತಾನೆ(ಬಯ್ಯುತ್ತಾನೆ Eye-wink) Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ
  • ಗೆಳೆಯನ ಫ್ರೆಂಡ್ಸ್
  • ನೀವೂ ಕನ್ನಡ ಶಬ್ದಕೋಶ ಓದಿ
  • ಮೂರ್ತಿ ಅನಾವರಣ, ಅಸೂಯೆ ಅನಂತ !
  • ಧಾರವಾಡ ಕನ್ನಡ- ಭಾಗ ೩
Syndicate content

ಲೇಖಕರು

jaiguruji's picture

ಪರಿಚಯ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ನ ಮುಕುತಿ !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator