22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು?

March 16, 2011 - 11:48am
Jayanth Ramachar

ನನಗೆ ತಿರುಪತಿ ಎಂದರೆ, ವೆಂಕಟೇಶ್ವರ ಎಂದರೆ ಪಂಚಪ್ರಾಣ. ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡುತ್ತೇನೆ. ಪ್ರತಿ ವರ್ಷ ಜನವರಿ ೨೬ ರಂದು ಹೋಗುವ ಪರಿಪಾಟಲಿತ್ತು. ಬಾರಿ ಕೆಲವು ಕಾರಣಗಳಿಂದ ಅಂದು ಹೋಗಲಾಗಲಿಲ್ಲ. ನಂತರ ಹೋಗೋಣ ಎಂದುಕೊಳ್ಳುವಷ್ಟರಲ್ಲಿ ಮದುವೆ ಆಯಿತು. ಆಮೇಲೆ ಹೋಗೋಣ ಅನ್ನುವಷ್ಟರಲ್ಲಿ ಬಹಳಷ್ಟು ಮಂದಿ ಮದುವೆ ಆದ ಮೇಲೆ ತಿಂಗಳು ತಿರುಪತಿಗೆ ಹೋಗುವ ಹಾಗಿಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ಸಂಪರ್ಪಕವಾದ ಉತ್ತರ ಯಾರಿಂದಲೂ ಸಿಗುತ್ತಿಲ್ಲ. ಆದರೆ ಹೋಗಬಾರದು ಎಂದು ಮಾತ್ರ ಹೇಳುತ್ತಿದ್ದಾರೆ. ಯಾರಿಗಾದರೂ ಸರಿಯಾದ ಕಾರಣ ತಿಳಿದಿದ್ದರೆ ತಿಳಿಸುವಿರ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by abdul on

ಜಯಂತ್, ಶ್ರೀನಿವಾಸ ದೇವರು ಪದ್ಮಾವತಿಯನ್ನು ಮದುವೆಯಾದ ನಂತರ ಆರು ತಿಂಗಳು ಸುವರ್ಣಮುಖಿ ನದಿ ತೀರದ ಅಗಸ್ತ್ಯಾಶ್ರಮದಲ್ಲಿ ಕಳೆದ ನಂತರ ಹೋಗಿದ್ದಂತೆ ತಿರುಪತಿಗೆ. ನವಿವಾಹಿತರು ಬೆಟ್ಟ ಹತ್ತಬಾರದು ಎನ್ನುವುದು ಲೋಕ ನೀತಿಯಂತೆ.ಹೆಚ್ಚು ದಣಿದರೆ ಗೃಹಸ್ಥಾಶ್ರಮದ ಇತರೆ ಕಾರ್ಯಗಳಿಗೆ ಅಡ್ಡಿ ಬರಬಹುದು ಎನ್ನುವ ಮುನ್ನೆಚ್ಚರಿಕೆ ಇರಬೇಕು.
ಸಾಮಾನ್ಯವಾಗಿ ನವಿವಾಹಿತರು romantic ಸ್ಥಳಗಳಿಗೆ ಹೋಗುತ್ತಾರೆ ಮದುವೆಯಾದ ಹೊಸತರಲ್ಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಅಬ್ದುಲ್ ಅವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.<<ಶ್ರೀನಿವಾಸ ದೇವರು ಪದ್ಮಾವತಿಯನ್ನು ಮದುವೆಯಾದ ನಂತರ ಆರು ತಿಂಗಳು ಸುವರ್ಣಮುಖಿ ನದಿ ತೀರದ ಅಗಸ್ತ್ಯಾಶ್ರಮದಲ್ಲಿ ಕಳೆದ ನಂತರ ಹೋಗಿದ್ದಂತೆ ತಿರುಪತಿಗೆ>> ಈ ಸಂಗತಿ ಹೇಳಿದ್ದರು.ಜೊತೆಗೆ ದೇವರೇ ಮದುವೆಯಾದ ಆರು ತಿಂಗಳು ಬೆಟ್ಟ ಹತ್ತಿರಲಿಲ್ಲ ಹಾಗಾಗಿ ನಾವು ಹತ್ತುವ ಹಾಗಿಲ್ಲ ಎನ್ನುತ್ತಾರೆ.<<ಹೆಚ್ಚು ದಣಿದರೆ ಗೃಹಸ್ಥಾಶ್ರಮದ ಇತರೆ ಕಾರ್ಯಗಳಿಗೆ ಅಡ್ಡಿ ಬರಬಹುದು ಎನ್ನುವ ಮುನ್ನೆಚ್ಚರಿಕೆ ಇರಬೇಕು.>> ಇದರ ಬಗ್ಗೆ ಯಾರೂ ಏನೂ ಹೇಳಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಜಯಂತ್
ಹೋಗಬಹುದು ಯಾವ ಅಡ್ಡಿಯೂ ಇಲ್ಲ. ನನಗೆ ತಿಳಿದಂತೆ ಮದುವೆ ಮುಂಜಿಯಾದ ನಂತರ ಶುಭಕಾರ್ಯ ಗಳನಂತರ ಮನೆದೇವರೆ ವೆಂಕಟೇಶ್ವರನಿದ್ದಲ್ಲಿ ಬೇಕೆಂದೆ ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಮಾಡುತ್ತಾರೆ. ನಮ್ಮ ಅತ್ತೆಯವರಲ್ಲಿ ಕೇಳಿದೆ ಅವರು ನಾವಂತು ಹೋಗುತ್ತೇವೆ , ಹೋಗಬಹುದು ಅಂದರು.
- ಹೋಗಿಬನ್ನಿ

(ಸೂಚನೆ: ಹೆಂಡತಿ ಗರ್ಭಿಣಿಯಾಗಿದ್ದಾಗ ಕರೆದೊಯ್ಯುವಂತಿಲ್ಲ ಅಂದರು ನಮ್ಮ ಅತ್ತೆಯವರು , :-) ನಿಮಗೆ ಸದ್ಯಕ್ಕೆ ಆ ಸಂದರ್ಪವಿಲ್ಲ ಅಂದುಕೋಳ್ತೀನಿ )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಪಾರ್ಥಸಾರಥಿಯವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನೇನೋ ಹೋಗಲು ಸಿದ್ಧ ಆದರೆ ಹಿರಿಯರ ಮಾತು ಮೀರುವ ಹಾಗಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಜಯಂತ್,
ತಿರುಪತಿಯಲ್ಲಿಯೇ ಮದುವೆಯಾಗುವವರು, ಮದುವೆಯಾದ ನಂತರ ತಿಮ್ಮಪ್ಪನ ದರ್ಶನ ಮಾಡದೇ ಕೆಳಗಿಳಿಯುತ್ತಾರೆಯೇ?
ಸುಮ್ಮನೇ ಪ್ರಶ್ನೆ ಬಂತು ಮನಸ್ಸಿನಲ್ಲಿ.

ನಾನಂತೂ ನನ್ನ ಮದುವೆಯಾಗಿ ಇಪ್ಪತ್ತೆರಡು ವರುಷ ಆಗುತ್ತಿದೆಯಾದರೂ, ಅತ್ತ ತಲೆ ಹಾಕಿಲ್ಲ.
ಅಲ್ಲದೇ, ನನ್ನ ಮದುವೆಗೆ ಮೊದಲೂ ನಾನತ್ತ ಹೋಗಿಲ್ಲ.

ಸದ್ಯಕ್ಕೆ ಆ ಯೋಚನೆಯೂ ಇಲ್ಲ.
-ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

<<ತಿರುಪತಿಯಲ್ಲಿಯೇ ಮದುವೆಯಾಗುವವರು, ಮದುವೆಯಾದ ನಂತರ ತಿಮ್ಮಪ್ಪನ ದರ್ಶನ ಮಾಡದೇ ಕೆಳಗಿಳಿಯುತ್ತಾರೆಯೇ?>>ನನಗೂ ಇದೇ ಪ್ರಶ್ನೆ ಮೂಡಿ ಕೇಳಿದ್ದಕ್ಕೆ ಅದೆಲ್ಲ ತಲೆಹರಟೆ ಮಾಡಬೇಡ ಎಂದು ಉಪದೇಶಿಸಿದರು. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mpneerkaje on

ನನ್ನ ಪ್ರಕಾರ ಇವೆಲ್ಲ ಮೂಢನಂಬಿಕೆಗಳೇ. ನಿಮಗೆ ಅದು ಸರಿ ಎನಿಸಿದರೆ ಆಚರಿಸಬಹುದು. ಇಲ್ಲ ಎಂದೆನಿಸಿದರೆ ಅದನ್ನು ಪಾಲಿಸಬೇಕಾಗಿಲ್ಲ. ಆದರೆ ಇಲ್ಲಿ ಒಂದು ವಿಷಯ. ನೀವು ಇದನ್ನು ಪಾಲಿಸದೇ ಇರುವುದರಿಂದ ನಿಮ್ಮ ಹಿತೈಷಿಗಳಿಗೆ ಬೇಜಾರಾಗುವುದಾರೆ ಅವರ ಮೇಲಿನ ಪ್ರೀತಿಗಾದರೂ ಆಚರಿಸಿ. ಯಾವುದೇ ತಪ್ಪಿಲ್ಲ. ಒಳ್ಳೆಯದೇ ಆಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ನಿಜ ನೀರ್ಕಾಜೆ ಅವರೇ ಅವರಿಗೋಸ್ಕರ ಹೋಗದೇ ಸುಮ್ಮನಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

<<ಅದಕ್ಕೆ ಕಾರಣ ಕೇಳಿದರೆ ಸಂಪರ್ಪಕವಾದ ಉತ್ತರ ಯಾರಿಂದಲೂ ಸಿಗುತ್ತಿಲ್ಲ. ಆದರೆ ಹೋಗಬಾರದು ಎಂದು ಮಾತ್ರ ಹೇಳುತ್ತಿದ್ದಾರೆ.>>
ತಮ್ಮ ಅಪ್ಪ ಮತ್ತು ಅಮ್ಮ ಏನನ್ನುತ್ತಾರೆಯೇ, ಹಾಗೆಯೇ ಮಾಡಿ.
ನೂರು ಜನರನ್ನು ಕೇಳಲು ಹೋಗ್ಬೇಡಿ.
-ಆಸು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಹೆಗ್ಡೆ ಅವರೇ ಅಪ್ಪ ಅಮ್ಮ ಕೂಡ ಹೋಗಬಾರದು ಎಂದಿದ್ದಾರೆ. <<ನೂರು ಜನರನ್ನು ಕೇಳಲು ಹೋಗ್ಬೇಡಿ.>>ಯಾರನ್ನೂ ಕೇಳುತ್ತಿರಲಿಲ್ಲ. ಆದರೆ ಸರಿಯಾದ ಮಾಹಿತಿ ಯಾರಿಂದಲಾದರೂ ಸಿಗಬಹುದೇನೋ ಎಂದು ಕೇಳಿದೆ ಅಷ್ಟೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅನನ್ಯ on

ಕೆಲವು ಹಿರಿಯರು ಸ್ವಾನುಭವದಿಂದ (?) ಹೇಳುತ್ತಾರೆ, "ತಿಮ್ಮಪ್ಪನ ದರ್ಶನ ಮಾಡಬೇಕೆಂದು ಮನಸ್ಸಿನಲ್ಲಿ ಆಸೆಯಿಟ್ಟುಕೊಂಡಿದ್ದರೆ, ಆತನೇ ತನಗೆ ಬೇಕಾದಾಗ ಈ ರೀತಿ ಆಸೆ ಇಟ್ಟುಕೊಂಡವರನ್ನು ಪವಾಡಸದೃಶ್ಯವಾಗಿ ಕರೆದುಕೊಳ್ಳುತ್ತಾನೆ" ಎಂದು! ಹಾಗಿದ್ದರೆ ಅಲ್ಲಿಯವರೆಗೂ ನಿಶ್ಚಿಂತೆಯಿಂದಿರಬಹುದೇನೋ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಅದೂ ಸರಿ ಅನನ್ಯ ಅವರೇ. ನನಗೂ ಸುಮಾರು ಸಲ ಹೀಗೆ ಹೇಳಿದ್ದಾರೆ. ತಿರುಪತಿಗೆ ನಾವಂದುಕೊಂಡಾಗ ಹೋಗಲು ಆಗಲ್ಲ.ಆತನೇ ಕರೆಸಿಕೊಳ್ಳಬೇಕು ಎಂದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

ಜಯಂತ್ ಮದುವೆಯಾದ ಮೇಲೆ ಎಷ್ಟು ದಿನ ತಿರುಪತಿಗೆ ಹೋಗಬಾರದು? ಈ ಪ್ರಶ್ನೆಗೆ ಉತ್ತರ ನನಗೆ ತಿಳಿದಿಲ್ಲ, ಇಂತದೊಂದು ಆಚಾರ ಇದೆ ಎನ್ನುವುದೇ ಇವತ್ತೇ ಗೊತ್ತಾಗಿದ್ದು, ಆದರೆ ತಿರುಪತಿಗೆ ಹೋಗುವುದಾದರೆ ಇದು ಸರಿಯಾದ ಸಮಯ. ನಾನು ಕಳೆದವಾರವಷ್ಟೇ ಹೋಗಿದ್ದೆ, ತಿರುಪತಿಯಲ್ಲಿ ಈಗ ಜನಜಂಗುಳಿ ಸಲ್ಪ ಕಡಿಮೆ ಇದೆ. ಕಳೆದವರುಷ ೩೦೦ ರುಪಾಯಿಯ ಶೀಘ್ರದರ್ಶನದಲ್ಲಿ ದೇವರದರ್ಶನಕ್ಕೆ ೩ ಘಂಟೆ ಸರತಿಯಲ್ಲಿ ನಿಂತಿದ್ದೆವು , ಆದರೆ ಈ ಬಾರಿ TTD ಯವರ ವೆಬ್ಸೈಟ್ ನಲ್ಲಿ ಬರೇ ೫೦ ರುಪಾಯೀಯ ಟಿಕೆಟ್ ನಲ್ಲಿ ೨ ಘಂಟೆಯಲ್ಲೇ ನಾವು ದೇವಸ್ಥಾನದ ಎಲ್ಲಾ ಕಾರ್ಯ ಮುಗಿಸಿ ಹೊರ ಬಂದೆವು.

ನಿಮ್ಮ
ಕಾಮತ್ ಕುಂಬ್ಳೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ನಿಜ ಕುಂಬ್ಳೆ ಅವರೇ ಈಗ ಪರೀಕ್ಷಾ ಸಮಯವಾದ್ದರಿಂದ ಜನಜಂಗುಳಿ ಅಷ್ಟಾಗಿ ಇರುವುದಿಲ್ಲ. ದರ್ಶನಕ್ಕೆ ಇದು ಸೂಕ್ತ ಸಮಯ. ಆದರೆ ಏನು ಮಾಡುವುದು :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಹಿಂದಿನಿಂದಲೂ ತಿರುಪತಿಗೆ ಹೋದವರೆಲ್ಲರೂ ಸಾಮಾನ್ಯವಾಗಿ ತಲೆ ಮುಡಿ ಕೊಡುವುದು ಪದ್ದತಿ, ಹಾಗಾಗಿ ಮದುವೆಯಾದ ತಕ್ಷಣ ತಿರುಪತಿಗೆ ಹೋದರೆ ಮುಡಿ ಕೊಡುವುದು ಸರಿ ಕಾಣುವುದಿಲ್ಲ ಇದನ್ನು ಗಮನದಲ್ಲಿ ಇಟ್ಟುಕೊಂಡು, ಮದುವೆಯಾದ ತಕ್ಷಣ ತಿರುಪತಿಗೆ ಬೇಡ ಎಂಬ ಪದ್ದತಿ ಮೂಡಿರಬಹುದು ಆದರೆ ಈಗ ಹಾಗಿಲ್ಲವಲ್ಲ. ಮುಡಿ ಕೊಡುವವರು ಕೊಡದಿದ್ದವರು ಎಲ್ಲರೂ ಹೋಗುತ್ತಾರೆ. ಆದ್ದರಿಂದ ದೇವರ ದರ್ಶನಕ್ಕೆ ಯವಾಗಲಾದರೆ ಏನಂತೆ ? ಅಂತೆಯೆ ಹಿರಿಯರ ನುಡಿ ದೈವೀಕ ನುಡಿತಾನೆ, ಆಮೇಲೆ ಹೋದರೂ ತಾನೆ ಏನು ಅಲ್ಲವೆ. ಇದು ನನ್ನ ಅನಿಸಿಕೆ. ತಮ್ಮ ವಿಶ್ವಾಸಿ ರಾಮಮೋಹನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

<<ಅಂತೆಯೆ ಹಿರಿಯರ ನುಡಿ ದೈವೀಕ ನುಡಿತಾನೆ,>>ಅದಕ್ಕೆ ಆಮೇಲೆ ಹೋಗೋಣ ಎಂದು ನಿರ್ಧರಿಸಿದ್ದೇನೆ ರಾಮ್ ಮೋಹನ್ ಅವರೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ನವ ದಂಪತಿಗಳು ನವ ಉಲ್ಲಾಸದಲಿ ತಿರುಪತಿಯಲ್ಲಿ ಜನಜಂಗುಳಿ ಮರೆತು ಚೆಲ್ಲುಚೆಲ್ಲಾಗಿ ಆಡದಿರಲಿ ಎಂಬ ಉದ್ದೇಶದಿಂದ ಈ ರೀತಿ ಹೇಳಿಕೆ ಇದೆ ಎಂದು ನನಗೆ ಯಾರೋ ಹೇಳಿದ್ದು ನೆನಪಾಯ್ತು ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಈ ಹೇಳಿಕೆ ಮೊದಲ ಬಾರಿ ಕೇಳಿದ್ದು ಭಲ್ಲೆ ಅವರೇ...ಸರಿಯಾಗಿ ಯೋಚಿಸಿದರೆ ಇದ್ದರೂ ಇರಬಹುದು ಅನಿಸುತ್ತೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.