ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ನಾ ನಡೆದ ಹಾದಿಯಲಿ - ಮಗುವಿಗೊಂದು ಸಂದೇಶ
ನಾ ನಡೆದ ಹಾದಿಯಲಿ …..
ನಾ ನಡೆದ ಹಾದಿಯಲಿ
ನೀ ನಡೆಯಬೇಕೆಂದು
ಕಟ್ಟಳೆಯನು ನಿನಗೆ
ವಿಧಿಸುವುದು ಇಲ್ಲ ಮಗು
ಇದು ನಿನ್ನ ಹಾಡು
ಇದು ನಿನ್ನ ಬದುಕು
ನಿನ್ನ ಬದುಕಿನ ಅರ್ಥವನು
ನೀನೆ ಹುಡುಕು
ನಾ ತೊರಬಹುದು
ಹಾದಿಯನ್ನು ನಿನಗೆ
ನಾ ನಡೆ ಯಲಾದೀತೇ
ನಿನ್ನೊಡನೆ ಕಡೆಯ ವರೆಗೆ
ನನ್ನ ದಾರಿ ನಿನ್ನ ದಾರಿ
ಒಂದೆಯಾಗಬೇಕಿಲ್ಲ
ನನ್ನ ಗುರಿ ನಿನ್ನ ಗುರಿ
ಒಂದೇ ಇರಲು ಬೇಕಿಲ್ಲ
ನಡೆ ನಿನ್ನ ದಾರಿಯಲಿ
ಗುರಿ ಒಂದನಿಡಿದು
ಆ ಗುರಿಯೇ ಕಾವುದು ನಿನ್ನ
ಬರುವ ಕಷ್ಟಗಳ ಬಡಿದು
ಗುರಿ ಮುಟ್ಟೋವರೆಗೂ
ಗರಿ gedara dirali ಮನಸು
ಈ ಜಗದ ವಿಕಾರಗಳಿಗೆ
ಸೋಲೇ ನಾನೆಂದೆಣಿಸು
ನಿನ್ನ ಮನಸು ಹೂನಂತಿರಲಿ
ಮಾತುಗಳು ಮುತ್ತಾಗಿರಲಿ
ಅಳುವವರ ಕಣ್ಣೀರನೋರೆಸುವ
ಕೈಗಳವು ನಿನ್ನಾವಾಗಿರಲಿ
ನಾ ಸಿಲುಕಿ ಕೊಂದಿಹೆನು
ಆಸೆಗಳ ಬಲೆಯೊಳಗೆ
ನೀನಾದರೂ ಬದುಕು
ಇದರಿಂದ ಆಚೆಗೆ
ಇದೇ ನನ್ನ ಹರಕೆ
ನಿನ್ನ ಜೀವನಕೆ
ನಿನಗೆ ಇದೆ ಮುಗ್ದ ಮನಸು
ಜೊತೆಗೆ, ಜಗ ವ ಗೆಲ್ಲುವ ಹುಮ್ಮಸ್ಸು
—- ಜಯಪ್ರಕಾಶ್ ನೇವಾರ ಶಿವಕವಿ

- jp.nevara ರವರ ಬ್ಲಾಗ್
- Login or register to post comments
- 450 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: