ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ಗೆಳತಿ
ಗೆಳತಿ
ಗೆಳತಿ ನಿನ್ನದೇ ಮುಖ..
ಮರೆತೇ ಹೊಗಿತ್ತು
ಅ೦ತರಾಳದಲಿ ಸೆರಿಕೊ೦ಡು
ಅಲೆ ಎಬ್ಬಿಸದೆ ಮಲಗಿತ್ತು.
ತುಟಿಯ೦ಚಿನಲಿ
ಅರಳಿದ ಆ ನಗೆ
ಸಹಜವಾಗಿಯೇ ಇತ್ತು
ನಿನ್ನದೇ ಆದ ಆ ಮುಖವನು
ಮರೆ ಮಾಚುವ ತವಕದಲಿತ್ತು
ಬದುಕು ಸಹಜವಾದುದು
ಅದಕೇಕೆ ಬಣ್ಣ ಬಳಿಯಬೇಕು
ಇದ್ದದೆಲ್ಲವನು ಇದ್ದ ಹಾಗೆ
ಹೇಳಲಾಗದ ಯಾತನೆ ಯಾಕೆ ಬೇಕು?
ಹೌದು!
ಅ೦ದೊ೦ದು ದಿನ ಸ೦ಜೆಯಲ್ಲಿ
ಕೆ೦ಪೇರಿತ್ತು ಸುತ್ತಮುತ್ತಲಲ್ಲಿ
ಭೂತಾಯಿ ನಾಚಿ ನೀರಾಗಿ
ಮಧುವಣಗಿತ್ತಿಯ೦ತಾಗಿ
ಮರೆಯುತ್ತಿರುವ ಸಮಯದಲ್ಲಿ
ಹಕ್ಕಿಗಳ ಹಿ೦ಡು, ಮರಳುತ್ತಿತ್ತು ಗೂಡಿಗೆ,
ಮಕ್ಕಳ ಪಾಲನೆಗೆ
ತುಸು ಅಕ್ಕಿ ಹೊತ್ತುಕೊ೦ಡು,
ಹಾಡುತ್ತ, ಕುಣಿಯುತ್ತ…
ಚಿತ್ತಾರ ಬರೆಯುತ್ತ..
ಅ೦ಬರದಲ್ಲಿ…
ಬೆಳಕು ಮುರಿಯಿತು
ಕತ್ತಲಾವರಿಸಿತು
ತಾರೆಗಳ ಹಿ೦ಡು ಧುಮ್ಮಿಕ್ಕಿ ಬ೦ತು
ಅ೦ಗಳಕೆ ಆಡಲು,
ತಿ೦ಗಳ ಚ೦ದ್ರಮನ ಜೊತೆಗೆ,
ನೀರವತೆಯು ತು೦ಬಿತ್ತು
ಸುತ್ತಲೂ, ಎತ್ತೆತ್ತಲೂ…
ನನ್ನ ಜೊತೆ ನೀನು
ನಿನ್ನ ಜೊತೆ ನಾನು
ಊರ ಹೊರಗಿನ ಕೆರಯ ಅ೦ಗಳದಲ್ಲಿ
ಮೌನ ಮುರಿಯಲು ಇಲ್ಲ
ಮಾತನಾಡಲು ಇಲ್ಲ
ನನ್ನೆಡೆಗೊ೦ದು ನೇಟ ಬೀರಿ,
ತುಸು ನಕ್ಕು, ಅತ್ತು,
ನೀನೊರಟೆ ಹಿಡಿದು ಊರ ದಾರಿ,
ನಾ ಕಾರಣ ಕೇಳುವ ಮೊದಲೇ…
ನಾ ಕಾದೆ, ಅದೇ ಜಾಗದಲಿ
ಮತೇ ನೀ ಬರುವೆ ಎ೦ಬೊ೦ದು ಆಸೆಯಲಿ
ನಮ್ಮ ಕನಸಿನ ಪ್ರೇಮಸೌಧದ ನೆನಪಿನಲಿ
ಸುದ್ದಿ ಇರಲಿಲ್ಲ, ಸುಳುವು ಸಿಗಲಿಲ್ಲ…
ಆದರೇ!
ಒಮ್ಮಿ೦ದೊಮ್ಮೆಲೇ…
ಹೇಗೋ ತಿಳಿಯಿತು
ನೀ ಬಹುದೂರ ಹೊದದ್ದು
ಸ೦ಪ್ರದಾಯದೊಳೆಯಲ್ಲಿ
ತೇಲಿ, ಆ ದಡವ ಸೇರಿದ್ದು
ಅರ್ಥವಾಯಿತು ನಿನ್ನ ಆ
ನಗು ತು೦ಬಿದಳುವು,
ಅಳುತು೦ಬಿದ ನಗುವು
ಮತ್ತೇನ ಮಾಡುವುದು
ಹೊತ್ತು ಮೀರಿ ಹೋಗಿತ್ತು
ದಾರಿ ಅಲ್ಲಿ ಕವಲಾಗಿತ್ತು.
ಬದುಕಲ್ಲವೇ ಇದು!
ಬದುಕ ಬೇಕಾಯ್ತು ನೋಡು
ಮನಸೊ೦ದು ಕಡೆ,
ಒಡಲೊ೦ದು ಕಡೆ,
ಹೇಗೋ ಸ೦ಭಾಳಿಸಿದೆ ಕೊನೆಗೆ,
ತ೦ದು ಮನಸನು ತಹಬದಿಗೆ.
ಗ೦ಡಸಲ್ಲವೇ ನಾನು!
ಅಳುತ ಕೂರುವುದು ಸರಿಯೇ?
ನಕ್ಕೆ! ನಕ್ಕೇ !!
ದಿನ ಹೋಗಿ ಅದೇ ಜಾಗದಲಿ!
ನಿನ್ನ ನೆನಪುಗಳನೆಲ್ಲ
ಅಳಿಸಿ ಹಾಕುವ ನೆವದಲ್ಲಿ.
ಹೋಗಲಿ!
ಹಳೆಯ ಹಾಡನು
ಮರೆವೆ ನಾನು
ಹೇಗಿರುವೆ ಮದುವೆಯಾಗಿ?
ಮೂರು ಮಕ್ಕಳ ತಾಯಾಗಿ?
ನೆನಪಿದ್ದರೆ ನಿನಗೆ, ನಮ್ಮ ಆ ಕ್ಷಣಗಳನು
ಮರೆತು ಬಿಡೆ೦ದು ಬೆಡುವೆನು
ಒಲವ ಬದಿಗಿಟ್ಟು
ಸ್ನೇಹದ ಗಿಡವ ನೆಟ್ಟು
ಬೆಳೆಸೋಣ, ಬದುಕೋಣ..
ಕವಲೊಡೆದ ದಾರಿಯಲಿ
ಒಬ್ಬರಿಗೊಬ್ಬರು ನೆರವಾಗುತಲಿ
ಈ ಬಾಳ ಸವೆಸೋಣ….
- ಜಯಪ್ರಕಶ್ ನೇವಾರ ಶಿವಕವಿ

- jp.nevara ರವರ ಬ್ಲಾಗ್
- Login or register to post comments
- 243 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: