~
ನಾವಾಡುವ ನುಡಿ.....
ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |
ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ
ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |
ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.
ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.
ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.
ಹೂವಾಗಿ ಅರಳುವ ಮುನ್ನ
ಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು
ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು
ದಾರದಲಿ ಪೋಣಿಸಿ, ಹಾರವನು ಮಾಡಿಸಿ
ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ.
ಇವು ದುಂಡು ಮಲ್ಲಿಗೆ ಮೊಗ್ಗುಗಳು
ದುಂಡು ಮೊಗದ ಚಲುವೆ ಅವಳು
ಹುಣ್ಣಿಮೆಯಲಿ ಅರಳಿದ ಚೆಂದಿರನ
ಕಾಂತಿಯನು ಕಂಗಳಲಿ ತುಂಬಿಕೊಂಡವಳು.
ಗೆಳತಿ ಬಂದಿರುವಳು ಬಿಸಿಲ ದಿನಗಳಲಿ
ತಂಗಾಳಿ ಸುಳಿಯುತಿರಲಿಲ್ಲ ಆಗ ದಾರಿಯಲಿ
ಒಡೆದ ಕನ್ನಡಿಯನ್ಹೋಲುತಿದ್ದವು ಮನಸುಗಳು
ಅರಳದಲೆ ಬಾಡಿ ಹೊಗಿದ್ದವು ಕನಸುಗಳು
ಒಡೆದ ಮನಸುಗಳನ್ನು ಬೆಸೆದು ಒಂದಾಗಿಸಿ
ಹರಿದ ವೀಣೆಯ ಕಟ್ಟಿ ನುಡಿಯನ್ನು ಹೊಮ್ಮಿಸಿ
ಬಿಸಿಲ ಬೇಗೆಯನು ಮಳೆತರಿಸಿ ಆರಿಸಿ
ನಗುವ ತಂದವಳವಳು ನನ್ನ ಮನದರಸಿ
ಕಡಲ ತಡಿಯ ಮಳಲ ಮೇಲೆ ಕೈ ಯಿಂದ
ಬಾಳ ಕವನವ ಬರೆದು, ಹಾಡಿ ಎದೆಯಿಂದ
ಅಬ್ಬರಿಸಿ ಬಂದಂತ ಅಲೆಗಳನು ತಡೆದು
ಬೆಳಗಿಸಿದಳು ಬದುಕ ಹೆದರಿಕೆಯ ತೊರೆದು
- ಜಯಪ್ರಕಾಶ ನೇ ಶಿವಕವಿ

- jp.nevara ರವರ ಬ್ಲಾಗ್
- Login or register to post comments
- 453 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೂವಾಗಿ ಅರಳುವ ಮುನ್ನ
nivu barediruva sakashtu kavitegalalli odirodu ondu adu tumba channagi mudi bandide........
ಉ: ಹೂವಾಗಿ ಅರಳುವ ಮುನ್ನ
ಕಂಗ್ಲಿಷ್ ಬೇಡ, ಕನ್ನಡ ಲಿಪಿ ಬಳಸಿ ಬರೆಯಿರಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa