ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › jp.nevara ರವರ ಬ್ಲಾಗ್

ನಾವಾಡುವ ನುಡಿ.....

ನನಗೆ ಎಲ್ಲ ಗೊತ್ತಿದೆ ಎಂಬ ಹಮ್ಮು-ಬಿಮ್ಮುಗಳಿಲ್ಲ ಕಾರಣ ಇಷ್ಟೆ,
ಎಲ್ಲ ಬಲ್ಲವರಿಲ್ಲ, ಬಲ್ಲಿದರು ಬಹಳಿಲ್ಲ |

ಬಲ್ಲಿದರಿದ್ದು ಬಲವಿಲ್ಲ| ಲೋಕಕ್ರೆ

ಸಾಹಿತ್ಯವೆಲ್ಲರಿಗಲ್ಲ - ಸರ್ವಜ್ಞ |

ನನಗೆ ಗೊತ್ತಿರೊದನ್ನ ಕವನಗಳ ರೂಪದಲ್ಲಿ ಬರೆಯೋದು ಮಾತ್ರ ನನಗೆ ಗೊತ್ತು.
ಕವನಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತೇನೆಯೆ ಹೊರತು, ಎಲ್ಲರೂ ಓದಲೆಂದಲ್ಲ.
ಯಾರಾದ್ರೂ ಓದಿದರೆ, ಓದಿ ಕವನದ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡಿದರೆ ಖಂಡಿತಾ ಸಂತೋಷವಾಗುತ್ತೆ.
ಕೋಗಿಲೆ ಹೇಗೆ ಎಲ್ಲ ಕೇಳಲಿ ಎಂದು ಹಾಡುವುದಿಲ್ಲವೋ, ಅಂತೆಯೆ ನಾನೂ ಸಹ ಎಲ್ಲ ಓದಲಿ ಎಂದು ಕವನ ಬರೆಯುವುದಿಲ್ಲ. ಅದು ನನಗೆ
ನನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಇರುವ ಒಂದು ಅನಿವಾರ್ಯ ದಾರಿ ಮಾತ್ರ. ಬರೆದ ಕವನಗಳೆಲ್ಲವನ್ನು ಎಲ್ಲ ಮೆಚ್ಚಿಕೊಳ್ಳಲಿ ಎಂದೂ
ಸಹ ನೆನೆಸುವುದಿಲ್ಲ. ಒಂದು ಕವನ ಇಷ್ಟವಾಗಳು ಎಷ್ಟು ಕಾರಣಗಳಿರುತ್ತವೆಯೋ ಅಷ್ಟೇ ಕಾರಣಗಳು ಇಷ್ಟವಾಗದಿರಲೂ ಇರಬಹುದು,
ಅದಕ್ಕೂ ಹೆಚ್ಚೂ ಸಹ ಇರಬಹುದು.

ಅದೇನೆ ಇರಲಿ ಕವನ ನಾಲ್ಕು ಜನಕ್ಕೆ ನೆಚ್ಚಿದರೆ, ನಾಲ್ಕು ಚಿಂತನೆಗಳಿಗೆ ದಾರಿ ಹಾಕಿಕೊಟ್ಟರೆ, ನಾಲ್ಕು ಜನ ಅದರ ಬಗ್ಗೆ
ಮಾತನಾಡಿದರೆ, ಅದರ ಇರುವಿಕೆಗೆ ಒಂದು ಸಾರ್ಥಕತೆಯಂಬುದಂತೂ ಬಂದೇ ಬರುತ್ತದೆ.

ಇಂಥಾ ಸಾರ್ಥಕತೆ ಎಂಬುದು ನನ್ನ ಕವನಗಳಿಗೆ ದೊರಕಲಿ ಎಂದು ಆಶಿಸುತ್ತಾ....
ನಿಮ್ಮವ,
ಜಯಪ್ರಕಾಶ ನೇವಾರ ಶಿವಕವಿ.

ಹಕ್ಕಿಯ ಲೋಕದ ಮಕ್ಕಳೆ

July 23, 2007 - 5:19pm — jp.nevara

ಹಕ್ಕಿಯ ಲೋಕದ ಮಕ್ಕಳೆ
ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ?
ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ
ಬಿಕ್ಕಿ-ಬಿಕ್ಕಿ ಅಳುವುದು ಏಕೆ?

ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ
ಕಣ್ಣಾ ಎದುರೀಗೆ ಕಡವಿದ್ದ ನೆನೆದೀರಾ
ಅಣ್ಣ-ಅಕ್ಕರನು ನಿಮ್ಮ ಕಣ್ಣೆದುರೀಗೆ
ಹರಣವಾ ಮಾಡಿದ್ದ ನೆನೆದೀರೇನು?

ಉಂಡು ಆಡಿದ್ದ ನಿಮ್ಮ ಪ್ರೀತಿಯ ಮರವ
ತುಂಡು ಗೋಲಿಂದ ಕಡಿದಿದ್ದಾ ನೆನೆದೀರಾ
ದುಂಡೀಯ ಹಾಗಿದ್ದ ಆ ದೊಡ್ಡ ಮರವನ್ನು
ಕೆಂಡಾವ ಮಾಡಿದ್ದ ನೆನೆದೀರೇನು?

ಸೃಷ್ಠಿಕರ್ತನು ಅವನು ಎಲ್ಲವನು ಕೊಟ್ಟಾರು, ಕೆಟ್ಟ
ದೃಷ್ಠಿಬಿದ್ದೀತು ಮನುಜನದು
ಕಷ್ಟ ಎಂಬುದು ಬರುವೂದು ಎನ್ನಾದೆ, ತನ್ನ
ಇಷ್ಟ ಬಂದಂಗೆ ಬಳಸಿದನು

ಹಸಿರಿದ್ದ ಈ ತಿರೆಯ ಹಾಳು ಮಾಡಿದನು
ಉಸಿರಲ್ಲಿ ವಿಷವ ತುಂಬಿದನು
ಹೆಸರು ಹೆಸರೆಂಬ ಹೆಸರೀನ ಆಸೆಗೆ
ಕೆಸರಲ್ಲಿ ಸಿಕ್ಕೀದ ಮೀನಾದನು

ಕೆಡುವುದು ಮನುಜ ಒಬ್ಬಾನೆ ಅಲ್ಲ
ಎಡವುದೂ ಮಾತ್ರಾ ಒಬ್ಬಾನೆ
ಅಡಿಗಡಿಗೂ ತಪ್ಪನ್ನು ಮಾಡುತ್ತ ಕೊನೆಗೆ
ಕೆಡಿಸಿದ ಜಗದ ಚೆಲುವನ್ನು

ಬೋಳಾದ ಮರಗಳನು ಕಂಡು ಕೊರಗುವಿರೇನು?
ಹಾಳಾದ ಭುವಿಯನ್ನು ಕಂಡರಿತು
ಏಳಿಗೆ ಹೇಗೆ ಎಂಬುದು ಅರಿಯಾದೆ
ಬಾಳೀನ ಚಿಂತೆಯಲಿ ಮುಳುಗಿಹಿರೇನು?

- ಜಯಪ್ರಕಾಶ ನೇ ಶಿವಕವಿ

  • ಕನ್ನಡ ಕವಿತೆ
~.~
  • jp.nevara ರವರ ಬ್ಲಾಗ್
  • Login or register to post comments
  • 230 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂಟಿ ಹಕ್ಕಿ ಹಾಡು...
  • ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು
  • ಎಲೆ ಮರಗಳೇ ಕೇಳಿ
  • ಯಾವುದ ಓದಲಿ? ಯಾವುದ ಕೇಳಲಿ?
  • ಹಕ್ಕಿಯ ಹಾಡಿಗೆ
Syndicate content

ಲೇಖಕರು

jp.nevara's picture

ಪೂರ್ಣ ಹೆಸರು
ಜಯಪ್ರಕಾಶ ನೇವಾರ ಶಿವಕವಿ

ಪರಿಚಯ

ನನ್ನ ಹೆಸರು ಜಯಪ್ರಕಾಶ ನೇವಾರ ಶಿವಕವಿ, ಊರು ಬಳ್ಳಾರಿ ಜಿಲ್ಲೆಯಲ್ಲಿರುವ ಉಜ್ಜೈನಿ ಗ್ರಾಮ, ವಾಸ ಬೆಂಗಳೂರೆಂಬ ಬೆಂದಕಾಳೂರು, ಝೈಲೋಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅನ್ನೊ ಸಂಸ್ಥೆಯಲ್ಲಿ ತಂತ್ರಾಂಷ ತಂತ್ರಜ್ಞನಾಗಿ ಕೆಲಸ, ಕವನ ಬರೆಯುವ ಮತ್ತು ಅನುವಾದಮಾಡುವುದು ನನ್ನ ಹವ್ಯಾಸ, ನನ್ನ ಜಿಮೈಲ್ ವಿಳಾಸ. jp.nevara@gmail.com
ಇದಿಷ್ಟು ನನ್ನ ಸ್ವ ಪುರಾಣ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator