ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

kalpana ರವರ ಬ್ಲಾಗ್

ಈ ಬದುಕಿನ ಗುರಿ

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್ಷಣವನ್ನೂ ತನಗೆ ಅತಿ ಹೆಚ್ಚು ಸಂತಸ ಕೊಡುವ ಕ್ರಿಯೆಯಲ್ಲೇ ಕಳೆದ ಅನ್ನಬಹುದು. ಈ ಮಾತು ಎಷ್ಟು ಜನರು ಹೇಳಲು ಸಾಧ್ಯ?  ಮುಂದೆ ಓದಿ »

ವಿಶ್ವಮಾನವರ್ಯಾರು?

ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದಲ್ಲೇ ರಾಷ್ಟ್ರಗೀತೆ ಇರಬೇಕು ಎನ್ನುತ್ತಾರೆ. ಇವ್ರೆ ಭಾರತದಲ್ಲಿ ಭಾರತೀಯತೆ ಇಲ್ಲ ಎಂದು ಹಲುಬುತ್ತಾರೆ.  ಮುಂದೆ ಓದಿ »

ವಾರಾಂತ್ಯದ ಸಾಧನೆ

ಕಪಾಟು

ಈ ಪುಸ್ತಕದ ಕಪಾಟು ಮಾಡಲು ಹಿಡಿಸಿದ ಸಮಯ ಕೇವಲ ಎರಡು ತಾಸು. ಏಕೆಂದರೆ ಮರದ ಹಲಗೆಗಳು ರೆಡಿಮೇಡ್ ಬಂದಿದ್ದವು. ಅವನ್ನು ಸರಿಯಾಗಿ ಸ್ಕ್ರೂ ಮಾಡಿ ಜೋಡಿಸುವುದಷ್ಟೆ ನನ್ನ ಕೆಲಸ. ಆದರೂ ಏನೋ ದೊಡ್ಡ ಸಾಧನೆ ಮಾಡಿದ ಅನುಭವ :-)

ಪಾಪ!

ಇದು ಬೇಕಿತ್ತೆ?

ಹೂವಿನ ಭಾರಕ್ಕೆ ಕುಸಿದಿರುವ ಸ್ವಾಮಿಗಳು! ವರ್ತೂರು ಕಾಲೇಜಿನ ಶಿಷ್ಯರು ಗುರುವಂದನೆ ಮಾಡಿದ ರೀತಿಯಿದಂತೆ. ಬೇರೆ ಯಾವದೇ ರೀತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲವೆ? 

ಚಿತ್ರ ಕೃಪೆ - ಡೆಕ್ಕನ್ ಹೆರಾಲ್ಡ್ ಪತ್ರಿಕೆ

Syndicate content