Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ನನ್ನ ಲೋಕದಲ್ಲಿ ತುಸು ಹೊತ್ತು ವಿಹರಿಸಿ.

ತಂದೆಯ ದಿನ

June 19, 2007 - 12:36am — kalpana

ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂದಿರು ಔಷಧಿ ತರಲು ನಡೆದರು. ಹೀಗಾಗಿ ನನ್ನ ತಂದೆಯ ಕೊನೆಯುಸಿರು ನೋಡಿದ್ದು ನಾನು ಮತ್ತು ನನ್ನ ತಾಯಿ ಇಬ್ಬರೇ. ನನ್ನ ತಾಯಿ ಅವರ ಬಾಯೊಳಗೆ ಸುರಿದ ಗಂಗಾಜಲ ನೊರೆ ನೊರೆಯಾಗಿ ಆಚೆ ಇಳಿದಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನನ್ನು ಚಟ್ಟಕ್ಕೆ ಬಿಗಿದು, ಅವರ ಬಾಯಿಗೆ ಅಕ್ಕಿಕಾಳು ಹಾಕಿದ್ದು, ನಮ್ಮ ಗೋಳಾಟ, ಅಸಹಾಯಕತೆಯನ್ನು ಕುತೂಹಲದಿಂದ ನೋಡಲು ಅಪರಿಚಿತರು ಮನೆಯ ಮುಂದೆ ನೆರೆದದ್ದು, ಇವೆಲ್ಲಾ ಎಂದೂ ಮರೆಯದ ದೃಶ್ಯಗಳು. ಆ ಒಂದು ರಾತ್ರಿ ನಮ್ಮ ಪರಿವಾರದ ಎಲ್ಲರ ಮೇಲೂ ಒಂದೊಂದು ರೀತಿಯ ಪರಿಣಾಮ ಬೀರಿತು.

ಆರು ವರುಷದ ಮಗುವಿಗೆ ಇದರಿಂದ ಮಾನಸಿಕವಾಗಿ ಹೆಚ್ಚೇನೂ ಬದಲಾಗಬಾರದಲ್ಲವೇ? ಏಕೆಂದರೆ, ಮಗುವಿಗೆ ಏನು ತಿಳಿದೀತು ಎಂದೆನಿಸುತ್ತಲ್ಲವೇ? ಆದರೆ, ನನಗೇ ಆಶ್ಚರ್ಯವಾಗುವಂತೆ ಆ ಘಟನೆ ನನ್ನನ್ನು ಬದುಕಿನಲ್ಲಿ ರೂಪಿಸಿದೆ. ಆ ದಿನಗಳಲ್ಲಿ ಎಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿದ್ದಂತೆ ಭಾಸವಾಗುತ್ತಿತ್ತು ಮತ್ತು ಆ ನೋಟವನ್ನು ನಾನು ದ್ವೇಷಿಸುವಂತೆ ಮಾಡುತ್ತಿತ್ತು. ಈಗಲೂ ಸಹ ನನಗೆ ಯಾರದೇ ಸಹಾನುಭೂತಿ ಅಥವಾ ಕರುಣೆ ರುಚಿಸುವುದಿಲ್ಲ. ಹತ್ತಿರದವರ ಮುಂದೆಯೂ ನನ್ನ ದುರ್ಬಲತೆಯನ್ನು ತೆರೆದಿಡಲು ಹೆದರುತ್ತೇನೆ, ಏಕೆಂದರೆ, ಅದರಿಂದ ಅವರಲ್ಲಿ ಹುಟ್ಟುವ ಅನುಕಂಪ ನನಗೆ ಸೇರುವುದಿಲ್ಲ.

ಹಾಗೆಯೇ, ನನಗೆ ಸದಾ ನನ್ನ ಕಾಲಬುಡದಿಂದ ಬೇರು ಕಿತ್ತ ಅನುಭವ ಕಾಡುತ್ತದೆ. ಒಂದು ರೀತಿಯ "ಇನ್ಸ್ಟೆಬಿಲಿಟಿ". ನಾಳೆಯಲ್ಲಿ ನಂಬಿಕೆ ಕಮ್ಮಿ. ಯಾವಾಗಾದರೂ ಏನಾದರೂ ಕೆಟ್ಟದ್ದು ಆಗಬಹುದೆಂಬ ಹೆದರಿಕೆ. ಇದು ಒಂದು ತರಹ ಮನೆಯರಲ್ಲಿ ಅಪನಂಬಿಕೆ, ಮಕ್ಕಳ ಸುರಕ್ಷತೆಯ ವಿಷಯದಲ್ಲಿ ವಿಪರೀತ ಕಾಳಜಿ, ಹೀಗೆ ವಿವಿಧ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ.

ಇವೆಲ್ಲಾ ಬಹಳಷ್ಟು ಜನರಿಗೆ ಇರುವ ಗುಣಗಳೇ. "ಅಯ್ಯೋ, ಅವರು ಹಾಗೇ ಸ್ವಲ್ಪ..." ಅಂತ ಹೇಳಿ ಬಿಟ್ಟುಬಿಡುತ್ತೇವೆ. ಆದರೆ, ಮನುಷ್ಯನ ಪ್ರತಿ "ಬಿಹೇವಿಯರ್" ಹಿಂದೆ ಚಿಕ್ಕಂದಿನಲ್ಲಿ ನಡೆದ ಘಟನೆಯ ಪ್ರಭಾವ ಅಡಗಿರುತ್ತದೆ ಎಂದು ನನಗನ್ನಿಸಲು ಶುರುವಾಗಿದೆ. ಇವೆಲ್ಲಾ ಈಗೇಕೆ? ಹೂಂ, ತಂದೆಯ ದಿನ ನಿನ್ನೆ ಇತ್ತಲ್ಲ? ಆಗಲೇ ಈ ವಿಚಾರಧಾರೆ ಶುರುವಾದದ್ದು. ಬಹುಶ: ನನ್ನ ೬ ವರ್ಷದ ಮಗನ ಮುಗ್ಧ ಕಂಗಳಲ್ಲಿ ಯಾವುದೇ ರೀತಿಯ "ಇನ್ಸ್ಟೆಬಿಲಿಟಿ" ನಾನು ನೋಡಲು ಬಯಸುವುದಿಲ್ಲವಾದ್ದರಿಂದ.

Ornamental seperator
  • kalpana ರವರ ಬ್ಲಾಗ್
  • Login or register to post comments
  • 499 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 7 ಮದುವೆ ಅನುಭವ
  • ಪಾತ್ರೆಯ ಕನಸು
  • ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
  • ತಾಯಿಯೇ ದೇವರು..
  • ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator