ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kalpana ರವರ ಬ್ಲಾಗ್

ಕಲ್ಪನಾಲೋಕ

ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಸ್ವಾಗತ, ಸುಸ್ವಾಗತ...

ಅನಿಸುತಿದೆ ಯಾಕೋ ಇಂದು...

August 28, 2007 - 11:18pm — kalpana

ಬೆಂಗಳೂರಿನಿಂದ ರಜೆ ಮುಗಿಸಿ ಹಿಂತಿರುಗಿ ಸುಮಾರು ವಾರವಾಯ್ತು. ಮನೆಯಲ್ಲಿ ತೆರೆದಿರುವ ಸೂಟುಕೇಸು ನೋಡುತ್ತಾ ಏನೋ ಒಂಥರ ಡಿಪ್ರೆಶನ್. ಅಯ್ಯೋ, ಹೋಗಿಬಂದಿದ್ದು ಆಗೇ ಹೋಯ್ತೇ ಎಂಬ ವ್ಯಥೆ. ಅಲ್ಲಿಯವರೊಡನೆ ಬೆರೆತು ಕಳೆದ ಕ್ಷಣಗಳ ನೆನಪು. ಹೀಗೆ ಬಾಧೆ ಪಡುವ ಬದಲು ಯಾಕೆ ಸುಮ್ಮನೆ ವಾಪಸ್ಸು ಹೋಗಿಬಿಡಬಾರದು? ಏನಿದೆ ಈ ಸುಡುಗಾಡು ನೆಲದಲ್ಲಿ ಅಂತಹ ಮೋಡಿ?

ಬೆಂಗಳೂರಿನಲ್ಲಿರುವ ಬಂಧುಗಳು ಅಲ್ಲಿನ ಕಟ್ಟುಪಾಡುಗಳ ಜೊತೆ ಸೆಣಸುತ್ತಾ ಹಾಗೆಯೇ ಅಲ್ಲಿನ ಜೀವನಕ್ಕೆ ಒಗ್ಗಿಕೊಂಡೂ ಇದ್ದಾರೆ. ಪರದೇಶಕ್ಕೆ ಕೋಟಿ ರೂಪಾಯಿ ಕೊಟ್ಟರೂ ಬರಲಾರೆ ಎನ್ನುವ ಅಭಿಮತ. ಅದು ಸರಿ, ಬೆಂಗಳೂರಿನಲ್ಲಿ ಈಗ ದುಡ್ಡು ಕೊಟ್ಟರೆ ಸಿಗದಿರುವ ಸೌಲಭ್ಯ ಯಾವುದು? ಹಾಗಿದ್ದಲ್ಲಿ, ನಾನ್ಯಾಕೆ ಅಲ್ಲಿಗೆ ಹೋಗಲಾರೆ? ಟ್ರಾಫಿಕ್ಕು, ಪೊಲ್ಲ್ಯುಶನ್ನು, ಅದೂ, ಇದೂ, ಕುಂಟು ನೆಪಗಳು. ಹೀಗೆ ನಾನೊಬ್ಬಳೇ ಅಲ್ಲ, ಇಲ್ಲಿ ನನ್ನಂತೆ ನೂರಾರು ತ್ರಿಶಂಕು ಸ್ಥಿತಿಯಲ್ಲಿರುವ ಪರದೇಶಿಗಳು. ಇಲ್ಲಿ ಕೆಲಸದವರು ಸಿಗೊಲ್ಲ, ತುಂಬಾ ಚಳಿ ದೇಶ, ಒಂಟಿತನ ಕಾಡುತ್ತೆ ಅಂತ ಗೊಣಗುತ್ತಲೇ ಇರುತ್ತಾರೆ. ಹಾಗಾದರೆ ಮುಚ್ಕೊಂಡು ವಾಪಸ್ಸು ಹೋಗಿ ಎಂದೊಡನೆಯೇ, ಇಲ್ಲ ಜಪ್ಪಯ್ಯ ಹೋಗಲಾರೆ ಎಂಬ ಉತ್ತರ!

ಅಮೇರಿಕಕ್ಕೆ ಬಂದವರಾದರೂ ನೋಡಿ, ಇಲ್ಲಿನ ಬದುಕಿನಲ್ಲಿ ಸುಳಿವೇ ಸಿಗದಂತೆ ಸೇರಿ ಹೋಗುತ್ತಾರಾ? ಇಲ್ಲವೇ ಇಲ್ಲ. ಆ ಕೂಟ, ಈ ಸಂಸ್ಥೆ, ಅಂತ ಭಾರತೀಯವಾಗಿ ಎನೇ ಕಂಡ್ರೂ ಅದಕ್ಕೆ ತಗಲ್ಹಾಕ್ಕೋತಾರೆ. ಸರಿ, ಅಲ್ಲಿ ಭಾರತೀಯ ಅಡುಗೆ, ಸಂಸ್ಕೃತಿ ಅಂತ ಹೇಳ್ಕೊಂಡು ಮಕ್ಕಳನ್ನು ಭಾರತೀಯರ ತರ ಬೆಳೆಸೋದಕ್ಕೆ ಪ್ರಯತ್ನಪಡ್ತಾರೆ!!! ಹಾಗಾದ್ರೆ, ಭಾರತವನ್ನು ತೊರೆದು ಬಂದಿದ್ದು ಯಾಕೆ?

ಮತ್ತೆ ಇಲ್ಲಿಂದ ಬೆಂಗಳೂರಿಗೆ ವಾಪಸ್ಸು ಹೋದವರ ಕತೆ ಕೇಳಿ. ಅಲ್ಲೇ ಒಂದು ಎನ್.ಆರ್.ಐ. ಕಾಲೋನಿ ಮಾಡ್ಕೊಂಡು, ಅಲ್ಲಿನ ಲೋಕಲ್ ಜನಕ್ಕೂ ನಮಗೂ ಸಂಬಂಧವೇ ಬೇಡ ಅನ್ನೋ ರೀತಿ ಬದುಕೋದಿಕ್ಕೆ ಶುರು ಮಾಡ್ತಾರೆ! ಅವರ ಮಕ್ಕಳೂ ಸಹ ಹೋಗೋದು ಇಂಟರ್ನ್ಯಾಷನಲ್ ಸ್ಕೂಲ್ಗೆನೇ. ಅಲ್ಲಿ ಸ್ಕೂಲ್ನಲ್ಲಿ, ರಾಕ್ ಮ್ಯುಸಿಕ್ಕು, ಫ್ರೆಂಚ್ ಲೆಸನ್ನ್ಸು ಅಂತ ಫಾರಿನ್ ನಂಟು ಇಟ್ಕೋತಾರೆ. ಹಾಗಾದ್ರೆ, ಅಲ್ ಹೋಗಿದ್ ಯಾಕೆ?

ಯಾಕೋ ಹೇಳ್ತೀನಿ ಕೇಳಿ, ಈ ಜೆಟ್ ಲ್ಯಾಗ್ ಒಬ್ಬೊಬ್ಬರಿಗೆ ಒಂಥರ affect ಮಾಡುತ್ತೆ. ನನ್ನ ಕೈಯಲ್ಲಿ ಹೀಗೆಲ್ಲಾ ಬರೆಸುತ್ತಿದೆ Smiling ಮೇಬಿ ನಾನು ಇದೆಲ್ಲಾ ರಗಳೆ ಬದಿಗಿಟ್ಟು, ಹುರಿಗಾಳು ಮೆಲ್ಲುತ್ತಾ, ಊರಿಂದ ತಂದ ಹೊಸ ಸಿ.ಡಿ. ಕೇಳುತ್ತಾ, ಸೂಟುಕೇಸು ಖಾಲಿ ಮಾಡೋದೇ ಒಳ್ಳೇದು ಅನ್ಸತ್ತೆ.

  • ಅನಿಸಿಕೆ
  • ಯೋಚನೆ
~.~
  • kalpana ರವರ ಬ್ಲಾಗ್
  • Login or register to post comments
  • 449 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2007 - 11:37pm — ಸಂಗನಗೌಡ

ಉ: ಅನಿಸುತಿದೆ ಯಾಕೋ ಇಂದು...

ಸಂಗನಗೌಡ's picture

ನೀವು ಕೊನೆಗೆ ತೆಗೆದುಕೊಂಡ ಡಿಸೀಜನ್ನೇ ಕರೆಕ್ಟು.... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏನಾಗಿದೆ ಉತ್ತರ ಭಾರತೀಯರಿಗೆ...
  • ಮು೦ಗಾರು ಮಳೆ -- ಅನಿಸುತಿದೆ ಯಾಕೋ ಇ೦ದು...
  • ಮನಸಲ್ಲಿ ಬರುತ್ತೆ ಯೋಚನೆ
  • ಒಂದು ಕಹಿ ಅನುಭವ
  • ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator