ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › Kamalakar ರವರ ಬ್ಲಾಗ್

ಭಾಷೆಗೆ ಸಾಹಿತ್ಯೇತರ ಕೊಡುಗೆ

August 20, 2006 - 7:20am — Kamalakar

ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ್ಲ ನೆನಪಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಯ ಅಚ್ಚುಗಳನ್ನು ಮೊದಲಿಗೆ ತಯಾರಿಸಿದ, ಟೈಪರೈಟರಿನಲ್ಲಿ ಕನ್ನಡ ಅಳವಡಿಸಿದ, ಗಣಕಕ್ಕಾಗಿ ಕನ್ನಡ ತಂತ್ರಾಂಶಗಳನ್ನು ಹುಟ್ಟುಹಾಕಿದ, ಬಗೆಬಗೆಯ ಅಕ್ಷರ ಶೈಲಿಗಳನ್ನು ತಯಾರಿಸಿದ ಹಲವು ತಂತ್ರಜ್ನರನ್ನು ಭಾಷಾಬೆಳವಣಿಗೆಯ ದೃಷ್ಟಿಯಿಂದ ನೆನಪಿಸಿಕೊಳ್ಳುವುದು ಕಡಿಮೆ. ಹಲವು ಬರಹಗಾರರು, ತಂತಮ್ಮ ವಲಯಗಳಲ್ಲಿ ಬರೆದ ಪುಸ್ತಕಗಳು ಆಯಾ ವಲಯಗಳಲ್ಲಿ ನಮ್ಮ ಭಾಷೆ ಶ್ರೀಮಂತವಾಗುವಂತೇ ಮಾಡಿದ್ದಾರೆ. ಉದಾ: ಜಿ. ಟಿ. ನಾರಾಯಣ ರಾವ್ ವಿಜ್ನಾನ ಕುರಿತಾದ ಎಷ್ಟೆಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ಎಚ್ಚೆಸ್ಕೆ ಅರ್ಥಶಾಸ್ತ್ರದ ಕುರಿತು ಬಹಳ ಬರೆದಿದ್ದಾರೆ. ಹೀಗೆ ಬರೆಯುತ್ತ ಇವರುಗಳು ಕನ್ನಡದಲ್ಲಿ ಆಯಾ ಕ್ಷೇತ್ರದ ಪರಿಭಾಷೆಗಳು ತಯಾರಾಗುವಂತೇ ಮಾಡಿದ್ದಾರೆ. ಹೀಗೆ ಬಹಳ ಜನರಿದ್ದಾರೆ. ಕನ್ನಡ ಭಾಷೆ ಆಧುನಿಕ ಜ್ನಾನವಲಯಗಳಲ್ಲಿ ತನ್ನದೇ ಶಬ್ದಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ತಂತ್ರಾಂಶಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ಆ ದಿಕ್ಕಿನಲ್ಲಿ ಕೆಲಸ ಮಾಡಿದವರನ್ನು ನಾವು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯದು.

~.~
  • Kamalakar ರವರ ಬ್ಲಾಗ್
  • Login or register to post comments
  • 1009 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2006 - 4:33pm — ismail

ಜಿಟಿಎನ್ ಮತ್ತು ವಿಜ್ಞಾನ ಬರೆಹ

ismail's picture

ತಾವು ಗುರುತಿಸಿರುವಂತೆ ಭಾಷೆ ಎಂದರೆ ಸಾಹಿತ್ಯ. ಅದರಲ್ಲೂ ಕಥೆ, ಕವನ, ಕಾದಂಬರಿ ಮತ್ತು ಅವುಗಳ ವಿಮರ್ಶೆ ಮಾತ್ರ ಸಾಹಿತ್ಯ ಎಂಬ ಸ್ಥಿತಿ ನಮ್ಮದು. ಜಿ.ಟಿ. ನಾರಾಯಣರಾವ್  ಅವರ ನೋಡೋಣ ಬಾ ನಕ್ಷತ್ರ ಪುಸ್ತಕ ನನಗೆ ಹಾಗೆಯೆ ನನ್ನ ಓರಗೆಯ ಅನೇಕರಲ್ಲಿ ಖಗೋಳವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿದೆ. ಅವರ ಐನ್ ಸ್ಟೀನ್ ಜೀವನ ಚರಿತ್ರೆಯನ್ನು ನಾನು ಕನ್ನಡವನ್ನು ಸರಾಗವಾಗಿ ಓದಲಾಗದ ನನ್ನ ತಂದೆಗೆ ಓದಿ ಹೇಳಿದ್ದೆ. ಹೀಗೆ ಓದಿ ಹೇಳಿದ ದಿನಗಳಲ್ಲಿ ನಾನಿನ್ನೂ ಹೈಸ್ಕೂಲ್ ಸೇರಿದ್ದನಷ್ಟೆ. ಅದರಲ್ಲಿದ್ದ ಅನೇಕ ವಿಷಯಗಳು ನನಗೆ ಅರ್ಥವಾಗಿರಲಿಲ್ಲ. ಮುಂದೆ ನನಗಾಗಿಯೇ ಈ ಪುಸ್ತಕವನ್ನು ಓದಿಕೊಳ್ಳಲು ತೀರ್ಮಾನಿಸಿದಾಗ ಅದರ ಹೊಸ ಆವೃತ್ತಿ ಹೊರಬಂದಿತ್ತು. ಅದು ಮತ್ತಷ್ಟು ವಿಸ್ತೃತವಾಗಿತ್ತು. ಮಾತ್ರವಲ್ಲ ಇಂಗ್ಲಿಷ್ ನಲ್ಲಿ ಪ್ರಕಟವಾಗಿರುವ ಐನ್ ಸ್ಟೀನ್ ಪುಸ್ತಕಗಳಿಗೆ ಸಮಾನವಾದ ಗುಣಮಟ್ಟವನ್ನೂ ಹೊಂದಿತ್ತು. ನಾರಾಯಣರಾಯರ ಕೃತಿಗಳಲ್ಲಿ ನಾನು ಬಹಳ ಮುಖ್ಯ ಎಂದು ಭಾವಿಸುವುದು ಅವರ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜೀವನ ಚರಿತ್ರೆ.  ಕನ್ನಡದಲ್ಲಿಯೇ ರಚಿತವಾದ ವಿಜ್ಞಾನಿಯೊಬ್ಬರ ಮೊದಲ ಜೀವನ ಚರಿತ್ರೆ ಇದು ಎಂದು ನನ್ನ ಭಾವನೆ. ಇದಕ್ಕಾಗಿ ನಾರಾಯಣರಾಯರು ಅಮೆರಿಕ ಪ್ರವಾಸ ಮಾಡಿ ಚಂದ್ರ ಅವರನ್ನು ಭೇಟಿಯಾಗಿದ್ದಾರೆ. ಸಪ್ತಸಾಗರದಾಚೆಯೆಲ್ಲೋ ಕೃತಿಯಲ್ಲಿ ಈ ಕುರಿತ ವಿವರಗಳಿವೆ.

ನಾರಾಯಣರಾಯರ ಶೈಲಿಯ ಕುರಿತ ಹಲವು ಆಕ್ಷೇಪಗಳಿವೆ. ಸಂಸ್ಕೃತ ಭೂಯಿಷ್ಟ ಭಾಷೆ ಎಂಬುದು ಮುಖ್ಯ ಆಕ್ಷೇಪ. ಇದು ಕೆಲಮಟ್ಟಿಗೆ ನಿಜ ಎಂದು ಮೇಲ್ನೋಟಕ್ಕೆ ಭಾಸವಾದರೂ ನಾರಾಯಣರಾಯರ ಬರೆಹದ ಪ್ರೇರಣೆಗಳನ್ನು ನೊಡಿದರೆ ನಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ನಾರಾಯಣರಾಯರ ವಿಜ್ಞಾನ ವಿಷಯಗಳನ್ನು ಬರೆಯುವಾಗ ಬರೆಹ ನಿಖರವಾಗಿರಬೇಕು ಎಂದು ಭಾವಿಸುತ್ತಾರೆ. ಅವರ ನಿಖರತೆಯ ಹುಡುಕಾಟ ಸಂಸ್ಕೃತಭೂಯಿಷ್ಟವಾದ ಒಂದು ಭಾಷೆಯಲ್ಲಿ ಕೊನೊಗೊಳ್ಳುತ್ತದೆ. ಈ ನಿಖರತೆ ಇಲ್ಲದೆ ಹೋದರೆ ಅದು ವಿಜ್ಞಾನ ಬರೆಹವೇ ಆಗುವುದಿಲ್ಲ.

ನಾರಾಯಣರಾಯರು ಈಗಲೂ ಹಳೆಯ ಉತ್ಸಾಹದಿಂದಲೆ ಕಾರ್ಯನಿರತರಾಗಿದ್ದಾರೆ. ತಮ್ಮ ಹಳೆಯ ಪುಸ್ತಕಗಳ ಪರಿಷ್ಕೃತ ಆವೃತ್ತಿಗಳನ್ನು ತರುವುದರ ಜತೆಗೆ ಹೊಸ ಪುಸ್ತಕಗಳ ರೂಪುರೇಷೆಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಅಂದರ ಹಾಗೆ ನಾರಾಯಣರಾಯರು ಸಂಗೀತದ ಬಗ್ಗೆಯೂ ಬಹಳ ಚೆನ್ನಾಗಿ ಬರೆಯಬಲ್ಲರು. ಅವರ ಶ್ರುತಗಾನ ಎಲ್ಲಾದರೂ ಸಿಕ್ಕರೆ ಓದಿ ನೋಡಿ.

ಇಸ್ಮಾಯಿಲ್ 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ
  • ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೨
  • ಕನ್ನಡ ಕಲಿಯುವದು ಕಷ್ಟವೇ?
  • ಕನ್ನಡದ ಚರ್ಚೆ
  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
Syndicate content

ಲೇಖಕರು

Kamalakar's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 97 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator