ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › kanda ರವರ ಬ್ಲಾಗ್

ಕಡಲತೀರ

December 6, 2005 - 1:00pm — kanda

ಭೋರ್ಗರೆಯುವ ಕಡಲು ಸಿಡಿಲಬ್ಬರದ ಮಳೆ
ಮನದಲ್ಲೋಂದು ಸಣ್ಣ ಆಸೆ
ತಡೆಯಲು ಸಾಧ್ಯವಿಲ್ಲ ನನ್ನನ್ನು ಈ ಸಣ್ಣಪುಟ್ಟ
ಕಡಲು, ಹೆಮ್ಮಳೆ, ಸುಂಟರಗಾಳಿಗಳಿಂದ
ಇಂದೇ ಈಗಲೇ ಕಡಲ ತೀರಕ್ಕೆ ಹೋಗುವ ಆಸೆ

ಈಗ್ಯಾಕೆ ಕಡಲ ತೀರ ಎಂದರು ದೊಡ್ಡವರು
"ಹುಚ್ಚು" ಹಿಡಿದಿದೆ ಎಂದರು ಹೆತ್ತವರು
"ಇವರ ಮುಖಾಂತರ ಭುವಿಗೆ ಬಂದವನು ನಾನು, ಇವರಿಂದ ಅಲ್ಲ"
ಎಂದು ಹೊರಟೇ ಬಿಟ್ಟೆನು ನಾನು

ಮನೆಯಿಂದ ಕಾಲು ಹೊರಗೆ ಇಟ್ಟೊಡನೆ ಕಣ್ಕೊರೆದ ಮಿಂಚು
ಬೇರೆಯವರೆಲ್ಲ ಎದೆ ನಡುಗಿಸುವ ಗುಡುಗು
ಪ್ರಕೃತಿಯು ನನಗೆ ತೋರಿದ ಅದ್ದೂರಿಯ ಸ್ವಾಗತ ನೋಡಿ
ಮನದೊಳಗೆ ಉಲ್ಲಾಸದ ನಗು

ಯಾಕೋ ಮಳೆಯಲ್ಲಿ ನೆನೆಸಿಕೊಳ್ಳುತ್ತಿದ್ದೀಯ ಎಂದು ಕೇಳಿದರು ನೋಡಿದವರು
ಮಳೆರಾಯನೇ ನನಗೆ ಅಭಿಶೇಕ ಮಾಡುತ್ತಿದ್ದಾನೆ ಎಂಬುದ ನೋಡದವರು ಅವರು

ತಿಳಿಯಾಯಿತು ಮಳೆಯು ಜೋರಾಯಿತು ಬಿಸಿಲು ಹೆಚ್ಚಾಯಿತು ಶಾಖ
ತಲೆಯತ್ತಿ ಸೂರ್ಯನಿಗೆ ಕಣ್ಬಿಟ್ಟೊಡನೆ
ಮೋಡವೇ ಸರಿಯಿತು, ನೆರಳಾಯಿತೆನಗೆ

ಕಡಲ ತೀರದಲಿ ಎತ್ತರದ ಕಪ್ಪು ಬಂಡೆಯ ತುತ್ತ ತುದಿಯಲಿ
ನಿಂತೆನು ನಾನು ಅಟಲ ವಿಶ್ವಾಸದಲಿ
ಏನಾಯಿತೋ ಏನೋ ಉಕ್ಕೇರಿತು ಸಮುದ್ರ
ಅಲೆಗಳಾ ಇವು ಮತ್ತೇರಿದ ಆನೆಗಳ ಸಾಲು

ಅಯ್ಯಯ್ಯೊ ಎಂದು ಹಿಂದೋಡಿದರು ಸಾಮಾನ್ಯರು
ಇದೆಂತಾ ದೈತ್ಯತೆರೆ ಹಿಂದೆ ಬಾರೋ "ಅವಿವೇಕಿ"
ಕೂಗಿ ಕರೆದರು ನನ್ನನ್ನು ಯಾರೋ

"ಅಪ್ಪಳಿಸಿತು ತೆರೆ ಬಂಡೆಗೆ; ನುಗ್ಗಿತು ನೀರು ನನ್ನೆಡೆಗೆ"

ನೋಡುನೋಡುತ್ತಿದ್ದಂತೆಯೆ ಇಳಿಯಿತು ಅದರ ರಭಸ
ನಿಧಾನವಾಗಿ ಬಂದು ಮಾಡಿತು ನನ್ನ ಕಾಲ್ಗಳಿಗೆ ಸ್ಪರ್ಷ

ತುಂಬಿ ಬಂದಿತು ನನ್ನ ಹೃದಯ
ನುಡಿಸಿತು ನನ್ನ ಮನದ ಧ್ವನಿಯ
ಹರಸಿಯೇ ಬಿಟ್ಟೆನು ನಾನು
ಹೋಗಿಬಾ ಸಮುದ್ರ ರಾಜ "ಒಳ್ಳೆಯದಾಗಲಿ ನಿನಗೆ"

-ಕಂದ (ರವೀಶ್)

  • ಕಾವ್ಯ ಮತ್ತು ಕವನ
~.~
  • kanda ರವರ ಬ್ಲಾಗ್
  • Login or register to post comments
  • 810 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 6, 2005 - 6:03pm — muralihr

ಯಾವ ಊರು

muralihr's picture

ನಿಮ್ಮದು ಯಾವ ಊರು ??
ನಿಮ್ಮ ಪದ್ಯ ಓದಿದ ತಕ್ಷಣ ನಿಮ್ಮ ಜೊತೆ ಕಡಲಿಗೆ ಬರುವ ಆಸೆಯಾಯಿತು.
ಮುರಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ಮೂಗಿನ ನೇರಕ್ಕೆ
  • ಕುಂದಾಪುರದ ಕಡಲು
  • ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ
  • ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
  • ನಾನು ಉತ್ತಮ ಪುರುಷ
Syndicate content

ಲೇಖಕರು

kanda's picture

ಪರಿಚಯ

I am one of those thousands who are worried about kannada's situation in karnataka. Intrusted in poetry,literature,drama,films,stories and many more.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 7:22pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 134 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator