ಇದು ಪದ್ಯವಲ್ಲ
ಎಲ್ಲರೂ ನಿದ್ದೆ ಮಾಡುತ್ತಿದ್ದಾರೆ;
ಕೆಲವರು ಗೊರಕೆ ಹೊಡೆದರೆ,
ಕೆಲವರು ನಿಶ್ಯಬ್ದವಾಗಿ ಮಲಗಿದ್ದಾರೆ;
ಇನ್ನು ಹಲವರು ಎಚ್ಚರವಿದ್ರೂ ಕಣ್ಮುಚ್ಚಿದ್ದಾರೆ......
ನನಗೇಕೋ ನಿದ್ದೆ ಬರುತ್ತಿಲ್ಲ
ಬಸ್ಸು ಒಮ್ಮೆಲೇ ಗುಂಡಿಗೆ ಸಿಕ್ಕಿ ದಗ್ಗನೆ ಮೇಲೆ ಬಂದಾಗ
ನನ್ನೆದುರಿನವ ಕೂಗಿದನು ಆಗ
"ಬಸ್ಸಿನಾಗ ಜೀವ ಇರೋ ಮನುಷ್ಯರಿರೋದು; ಹೆಣಗಳಲ್ಲ"
ಚಾಲಕ ನಿಧಾನವಾಗಿ ಹೇಗೆ ಆ ಗುಂಡಿಯಿಂದ ಪಾರುಮಾಡಿದ ಎಂಬುದು
ಅವನಿಗೇನು ಗೊತ್ತು ಪಾಪ ಅವನು "ನಿದ್ದೆ ಮಾಡುತ್ತಿದ್ದ".
ಸಣ್ಣ ಪುಟ್ಟ ಗುಂಡಿಗಳಿಗೆ ಯಾರು ಅಲುಗಾಡುವುದೇ ಇಲ್ಲ
ದೊಡ್ಡ ಗುಂಡಿ ಬಂದ್ರೆ ಮಗ್ಗುಲಾಗಿ ಮಲಗಿದರೆಲ್ಲ;
ಈ ಹೆಣಗಳಿಗೂ ಜೀವವಿದೆ. ಆದರೆ ಮತಿಲ್ಲ ಕಥೆಯಿಲ್ಲ;
"ಹೆಣಗಳಿಗೂ ಜೀವಭಯ......" ಒಮ್ಮೆಲೆ ಕೂಗಿದರು ಎಲ್ಲ
ಒಬ್ಬ ಚಾಲಕನಿಗೆ ಬೈದ್ರೆ ಇನ್ನೊಬ್ಬ ರಸ್ತೆಗೆ
ಮತ್ತೊಬ್ಬ ರಾಜಕಾರಣಿಗೆ ಬೈದ್ರೆ, ಮಗದೊಬ್ಬ ಭಾರತ ದೇಶಕ್ಕೆ;
"೪೫ ಡಿಗ್ರೀ ವಾಲಿ ನಿಂತಿತ್ತು ಬಸ್ಸು.
ನೋಡುನೋಡುತ್ತಿದ್ದಂತೆ ಉರುಳಿ ಕಣಿವೆಗೆ ಬಿತ್ತು ಬಸ್ಸು"
ಸಣ್ಣಗುಂಡಿಗಳು ಬಂದಾಗಲೇ ಎಚ್ಚೆತ್ತಿದ್ದರೆ
ಸಣ್ಣ ಗುಂಡಿಗಳು ಬಂದಾಗಲೆ ಬೈದಿದ್ರೆ
ಸಣ್ಣಗುಂಡಿ ಆದಾಗಲೇ ಸರಿಪಡಿಸಿದ್ದರೆ
ಬರುತ್ತಿತ್ತಾ ಈ ಸಾವಿನ ಗುಂಡಿ
ಸಣ್ಣ ಗುಂಡಿಗಳೇ ಮುಂದೆ ದೊಡ್ಡ ಗುಂಡಿಗಳಾಗೋದು
ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳಗೋದು
ಸಣ್ಣ ತಪ್ಪಾದಾಗ ತೆಪ್ಪಗಿರಬೇಡಿ.
ಮುಂದೆ ಅದೇ ತಪ್ಪು ದೊಡ್ಡದಾದರೆ ಗೋಳಾಡಬೇಡಿ.
-ರವೀಶ್

- kanda ರವರ ಬ್ಲಾಗ್
- Login or register to post comments
- 1043 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಹೌದು ಪದ್ಯವಲ್ಲ
ಹೌದು ಪದ್ಯವಲ್ಲ. ಸರ್ವಕಾಲಿಕ ಎಚ್ಚರಿಕೆ. ಹಿಂದೆಂದಿಗಿಂತಲೂ ಪ್ರಸ್ತುತವಾಗಿರುವ ಎಚ್ಚರಿಕೆ. ಧನ್ಯವಾದಗಳು ರವೀಶ್, ಏಕೆಂದರೆ, ಈ ರೀತಿ ಬುದ್ದಿವಾದ ಹೇಳುವವರು ಇಲ್ಲದಿದ್ದಾಗ, ನಾವು ತಪ್ಪುಗಳನ್ನು ಜಾಸ್ತಿ ಮಾಡುತ್ತೇವೆ. ನೀವು ಈ ಎಚ್ಚರಿಕೆಯನ್ನು ಅಂತರ್ಜಾಲದಲ್ಲಿ ಹಾಕಿ, ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದೀರ.
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.
ಕನ್ನಡಿ
ತುಂಬಾ ಚೆನ್ನಾಗಿ ನಿರೂಪಿಸಿದ್ದೀರ, ರವೀಶರೇ.
ಮೇಲ್ನೋಟಕ್ಕೆ ಬಸ್ ಪ್ರಯಾಣ, ಡ್ರೈವರ್ ಬಗ್ಗೆ ಬೈದಾಟಗಳಿದ್ದರೂ, ಜೀವನ ಮರ್ಮವನ್ನು ಕನ್ನಡಿಯಲ್ಲಿ ತೋರಿಸಿದ್ದೀರ. ಅಧ್ಯಾತ್ಮದ ಛಾಪಿದೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net