Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › kannadiga_1956 ರವರ ಬ್ಲಾಗ್

ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?

December 4, 2006 - 10:47pm — kannadiga_1956

ಸಂಪದಕ್ಕೆ ಇಂದು ಲಾಗ್ ಮಾಡಿದಾಗ ನುಡಿಮುತ್ತುಗಳ sectionಅಲ್ಲಿ ಹೀಗೆ ಬರೆದಿತ್ತು..

"ಪ್ರಶ್ಣೆ ಮಾಡುವುದನ್ನು ನಿಲ್ಲಿಸದಿರುವುದು ಬಹಳ ಮುಖ್ಯ" - ಆಲ್ಬರ್ಟ್ ಐನ್ಸ್ತಟೈನ್.

ಸ್ವಲ್ಪ ದೈರ್ಯ ಮಾಡಿ ಈ ಪ್ರಶ್ಣೆ ಕೇಳುತ್ತಿದ್ದೇನೆ.. ನೀವೆಲ್ಲಾ ನನ್ನ ಮೇಲೆ ಧಾಳಿ ಹೇಳುವ ಮುನ್ನ ನನ್ನ ಒಂದು ಮಾತು "ನಾನು ರಾಜ್ ಅಭಿಮಾನಿ, ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು".. ಒಬ್ಬ ನಟನಾಗಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಕನ್ನಡದ ಕೆಲವು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.. ಇದೆಲ್ಲಾ OK. ಆದ್ರೆ ಅವರು ಅಥವ ಅವರ ಕುತುಂಬದವರು ಒಂದು ರೀತಿಯ Monopolism ಸ್ರುಷ್ಟಿ ಮಾಡಿದ್ರು..

ಅವರಿಂದ ಅನಂತ್-ನಾಗ್ ಗೆ ಬಹಳಶ್ಟು ಅವಕಾಶಗಳು ತಪ್ಪು ಹೋದವು ಅಂತ ಕೇಳಿದ್ದೇನೆ.. ವಿಷ್ಣುವಿನ ವಿರುದ್ದವೂ ಬಹಳಷ್ಟು ಹಣಾಹಣಿ ನೆಡೆದು, ವಿಷ್ಣು ಕನ್ನಡ ಚಿತ್ರರಂಗ ತ್ಯಜಿಸುವ ನಿರ್ದಾರ ಕೈಗೊಂಡಾಗ, ಅವರ ನಡುವೆ ರಾಜಿ ಆಯಿತು ಅಂತಲೂ ಕೇಳಿದ್ದೇನೆ.. ಇವೆಲ್ಲಾ ಎಷ್ಟು ನಿಜವೋ ನನಗೆ ತಿಳಿಯದು. ಆದರೆ ಒಂದಂತೂ ನಿಜ.. ಅವರ ಮಕ್ಕಳು ಮಾಡಿದ ಅನೇಕ ಡಬ್ಬ ಚಿತ್ರಗಳು, ಒಳ್ಳೊಳ್ಳೆ ಚಿತ್ರಮಾಂದಿರಗಳಲ್ಲಿ ಜನ ಬರದಿದ್ದರೂ ೫೦ ದಿನ, ೧೦೦ ದಿನ ಹೀಗೆ ಒಡಿಸಿದ್ದನ್ನ ಕಣ್ಣಾರೆ ನೋಡಿದ್ದೇನೆ..ಇದರಿಂದ ಒಳ್ಳೆ ಚಿತ್ರಗಳ್ಗೆ ಅವಕಾಶ ತಪ್ಪಿಹೋಗಲ್ವೆ ? ಈಗ ಕನ್ನಡ ಚಿತ್ರರಂಗದಲ್ಲಿ ಇರುವ ಬಹಳಷ್ಟು ಜನ Dr-ರಾಜ್ ಸಂಬಂದಿಗಳೇ .. ಇದರಿಂದ ಬೇರೆ ನಿಜವಾದ talentsಗೆ ಅವಕಾಶ ತಪ್ಪಿ ಹೊಗ್ತಿದೆ ಅಂತ ಯಾರಿಗೂ ಅನ್ಸೊಲ್ವೆ ?

ರಾಜ್ ಬಹಳಷ್ಟು ಒಳ್ಳೆ ಕೆಲಸ ಮಾಡಿರಬಹುದು. ಆದ್ರೆ, ಕನ್ನಡ ಯಾವುದೇ ವ್ಯಕ್ತಿ ಅಥವ ವ್ಯಕ್ತಿತ್ವಕ್ಕಿಂತ ದೊಡ್ದದು... ಯಾರೂ ಅದನ್ನ Hijack ಮಾಡೊಕ್ಕೆ ಬಿಡ್ಬಾರ್ದು..

Ornamental seperator
  • kannadiga_1956 ರವರ ಬ್ಲಾಗ್
  • Login or register to post comments
  • 727 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 21, 2006 - 5:08pm — manju mysooru

Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀ

manju mysooru's picture

ಉತ್ತಮ ವಿಶ್ಲೇಷಣೆ.

ಅಣ್ಣಾವ್ರ ಬಗ್ಗೆ ಎಷ್ಟು ಅಭಿಮಾನ ಇದ್ರೂ ಸ್ವಲ್ಪ ಬೇಸರ ಇದೆ - ತಮ್ಮ ವ್ಯವಹಾರಿಕ ನಿರ್ಧಾರಗಳನ್ನು ಬೇರೆಯವರಿಗೆ ಬಿಟ್ಟಿದ್ದು.

ಸುಮಾರು ೪-೫ ತಿಂಗಳ ಹಿಂದೆ ವಿಜಯಕರ್ನಾಟಕ ದಲ್ಲಿ ವಿಷ್ಣುವರ್ಧನ್ ಬಗ್ಗೆ ಉತ್ತಮ ಲೇಖನ ಇತ್ತು. ಅವರಿಗೆ ಕೊಟ್ಟ ಕಿರುಕುಳ ( ಅಣ್ಣಾವ್ರ (ದುರ್) ಅಭಿಮಾನದ ಹೆಸರಲ್ಲಿ), ಅವರ ಮದುವೆ, ತಂದೆ ಸತ್ತಾಗ, ಬೆಂಗಳೂರಲ್ಲಿ ಮನೆ ಮಾಡಿ ನೆಲೆಸುವಾಗ ಕೊಟ್ಟ ಕಿರುಕುಳ ನಿಜಕ್ಕೂ ಕರುಳು ಹಿಂಡುವ ಸಂಗತಿಗಳು.

  • Login or register to post comments
  • link
  • Email this ಪ್ರತಿಕ್ರಿಯೆ
December 22, 2006 - 5:06pm — venkatesh

Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?

venkatesh's picture

ಕನ್ನಡ ರಂಗದ ಈ ಸ್ಥಿತಿಗೆ ಅನ್ನಬಹುದೇನೋ ! ರಾಜ್ ಒಬ್ಬ ವರ ನಟ ಇದ್ದರು ನಿಜ. ಮುಂದೆ ಯಾರೂ ಅವರ ಜಾಗವನ್ನು ಸ್ವಲ್ಪ ಮಟ್ಟಿಗಾದರೂ ತುಂಬುವ ಸಾಧ್ಯತೆಗಳು ಇದ್ದೇ ಇವೆ !

ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅಪಾರ. ಇದರಲ್ಲಿ ಬೇರೆ ಮಾತಿಲ್ಲ ! ಆದರೆ ಅವರು ಆಲದ ಮರದ ರೀತಿಯಲ್ಲಿ ಬೆಳೆದು, ಬೇರೆಯವರಿಗೆ ಇನ್ನೂ ಸೊಂಪಾಗಿ ಬೆಳೆಯಲು ಅವಕಾಶಮಾಡಿಕೊಡಬಹುದಾಗಿತ್ತೇನೊ ! ಅವರ ಜೊತೆಗೆ ನಿಟಿಸಿದ 'ಚಿಲ್ಲೆರೆ ನಟಿಯರೂ' ಒಂದೇ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದನ್ನು ನಾವು ಕಾಣುತ್ತೇವೆ !

ಇನ್ನು ರಾಜ್ ಮನಸ್ಸು ಮಾಡಿದ್ದರೆ ಏನೇನೋ ಮಾಡಬಹುದಿತ್ತು ! ತಮಿಳು ನಟರಿಗೆ ಹೋಲಿಸಿದರೆ ರಾಜ್ ಕುಮಾರ್ ಕೊಡುಗೆ ಏನು ? ಎಂದು ತಲೆ ಕೆರೆದುಕೊಳ್ಳಬೇಕಾಗುತ್ತೆ !
'ರಾಜ್ ರವರ ಅಭಿಮಾನಿ'ಗಳಲ್ಲಿ ಒಬ್ಬನಾದ ನನಗೆ ಬಹಳ ಬೇಸರ ತರುವ ವಿಷಯ ಇದು !

ಉದಾ: ಕನ್ನಡ ರಂಗ ಮಂಚದ ಪ್ರಾಕಾರಗಳು,ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ವಸತಿಗೃಹಗಳು, ಅವರಹೆಸರಿನಲ್ಲಿ ಪ್ರಶಸ್ತಿಗಳು,ಇತ್ಯಾದಿಗಳನ್ನು ಅವರು ಮಾಡಿದ್ದಾರೆಯೇ ?

ರಾಜ್ ರವರ ವ್ಯಕ್ತಿತ್ವ ಮೇರು ಶ್ರೇಣಿಯಲ್ಲಿ ಇದ್ದದ್ದರಿಂದ ಇಂತಹ ಕಾರ್ಯಗಳು ಅವರಿಗೆ ನೀರುಕುಡಿದಂತೆ ಆಗಿತ್ತು. ಅದರ ಸದುಪಯೋಗ ಅವರು ಮಾಡಲಿಲ್ಲ.

ಇನ್ನೂ ಒಂದನ್ನು ಅವರು ಸುಲಭವಾಗಿ ಮಾಡಬಹುದಿತ್ತು. ಒಂದೇ ಒಂದು ನಮ್ಮದೇ ಆದ ಕನ್ನಡದ 'ಟೀವಿ ಛಾನಲ್' ಮಾಡುವುದು ಅವರು ಮನಸ್ಸು ಮಾಡಿದ್ದಿದ್ದರೆ ದೊಡ್ದದೇನೂ ಆಗಿರಲಿಲ್ಲ! ಜಯಲಲಿತ ನೋಡಿ- ಇಂದಿಗೂ ಸುದ್ದಿಯಲ್ಲಿ ಇರುವುದು ಅವರು ತಮಿಳರಿಗೆ ಮಾಡಿದ ಸುಕಾರ್ಯಗಳಿಂದ !

ಉದಯ ಟೀವಿ- ತಮಿಳರ ಛಾನಲ್, ಇ-ಟೀವಿ ಕೂಡ ನಮ್ಮದೆಂದು ನಾವು ಹೇಳಬೇಕು ಅಷ್ಟೆ !

ರಾಜ್ ಬಗ್ಗೆ ಒಂದು 'ಕಹಿಮಾತು' ಇಲ್ಲಿ ಬೇಸರದಿಂದ ಹೇಳಲು ಬಯಸುತ್ತೇನೆ. ಅವರ ಮಕ್ಕಳನ್ನು ನಟಿಸಲು ಪ್ರಚೋದನೆ ಮಾಡಬಾರದಾಗಿತ್ತು. ರಾಜ್ ಹೆಸರಿನಲ್ಲಿ ಅವರ ಮಕ್ಕಳು ಎಷ್ಟುದಿನತಾನೇ ನಟಿಸಬಹುದು ? ನಟನೆ, ಒಳ್ಳೆಯ ಶಾರೀರ, 'ಸ್ವಂತ ವರ್ಚಸ್ಸು', ಮೇಲಾಗಿ 'ಚಂದದ ಮುಖ', ಮತ್ತು ಸರಿಯಾದ 'ನಟನಾಕೌಶಲ್ಯಗಳು' ಮಾತ್ರ ಜನರ ಮನಸ್ಸನ್ನು ಸೂರೆಗೊಳ್ಳಲು ಸಾಧ್ಯ ! ರಾಜ್ ನೆನೆಪು ತಿಳಿಯಾದಂತೆ ಅವರ ಕುಟುಂಬದ ಜನರೂ ನೆನಪಿನಿಂದ ಜಾರುವ, ಉದುರುವ ಸಾಧ್ಯತೆ/ ಅಪಾಯ ಹೆಚ್ಚು ದೂರ ಇಲ್ಲ ಅಲ್ಲವೇ ? ನಿಜ ಹೇಳಿ ?

ವೆಂ-

  • Login or register to post comments
  • link
  • Email this ಪ್ರತಿಕ್ರಿಯೆ
March 7, 2007 - 8:23pm — smurthygr

Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀ

smurthygr's picture

ರಾಜ್‌ಕುಮಾರ್‍ ಅವರ ಅಭಿಮಾನಿ ನಾನು ಎಂದು ಹೇಳಿಕೊಂಡು ಅವರ ಬಗ್ಗೆ ಕಹಿ ಕಾರುವುದು ಬಹಳ ಜನರ ಒಂದು ಫ್ಯಾಶನ್ ಆಗಿರುವಂತಿದೆ.  ಅವರ ಹೆಸರಿನಲ್ಲಿ ಅವರ ಮಕ್ಕಳ ನಟನಾ ಸಾಮರ್ಥ್ಯ, ಕುಟುಂಬದ ವ್ಯವಹಾರಗಳ ಬಗ್ಗೆ ಟೀಕೆ ಎಲ್ಲಾ ಬೇಕೆ?  ಅವರು ಎನೂ ಮಾಡಿಲ್ಲ ಎನ್ನುವವರು, ಅವರು ಏನಾದರೂ ಮಾಡಿದ್ದರೆ ಇವರಿಗೆ ಯಾಕೆ ಬೇಕು ರಾಜಕೀಯ ಅಂತ ಹೇಳುವಂತಹವರೇ.  ತಮಿಳು ನಟರೊಂದಿಗೆ ಹೋಲಿಕೆ ಯಾಕೆ?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು
  • ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"
  • ಡಾ. 'ರಾಜ್' ಅಮರರಾದರು !
  • ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !
  • '೧೮ ಎಪ್ರಿಲ್ ೨೦೦೬' ರ ನನ್ನ ಓದು
Syndicate content

ಲೇಖಕರು

kannadiga_1956's picture

ಪೂರ್ಣ ಹೆಸರು
Kannadiga

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator