ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › keerthi2kiran ರವರ ಬ್ಲಾಗ್

ನಾಯಿಯನ್ನು ಹಿಂಬಾಲಿಸಿದ ಕತೆ

July 1, 2008 - 9:42pm — keerthi2kiran
ಮುಳ್ಳಯ್ಯನ ಗಿರಿ ದೇವಸ್ಥಾನ

ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿ ಸೆಮಿಸ್ಟರಿನಲ್ಲಿ ಒಮ್ಮೆ ಒಂದು ಪ್ರವಾಸ ಹೋಗುವುದು ವಾಡಿಕೆಯಾಗಿತ್ತು. ಆದರೆ ೨-೩ ದಿನ ಪ್ರವಾಸ ಹೋದರೆ ಪ್ರಯಾಣ, ಆಹಾರ, ಉಳಿದುಕೊಳ್ಳಲು ಆಗುವ ಖರ್ಚೆಷ್ಟು! ಆಗಲೇ ಹೊಳೆದದ್ದು ಟ್ರೆಕಿಂಗ್ ಜಾಗಗಳನ್ನು ನೋಡುವ ಒಂದು ಅಗ್ಗವಾದ ವಿಧಾನ ಎಂದು. 7ನೇ ಸೆಮಿಸ್ಟರ್ ನಲ್ಲಿರಬೇಕಾದರೆ (೨೦೦೫ ಸೆಪ್ಟೆಂಬರ್) ನಾವು ಹೊರಟಿದ್ದು ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ ನೋಡಲು.
ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ೧೦ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನ ಗಿರಿ ಬಟ್ಟದ ಕೆಳಗಿನವರೆಗೆ (ಊರಿನ ಹೆಸರು ನೆನಪಿಲ್ಲ. ಕೈಕಂಭ ಎಂತಲೋ ಏನೋ ಇತ್ತು) ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೮ ಕಿ.ಮೀ. ನಡೆದು ಮುಳ್ಳಯ್ಯನ ಗಿರಿಗೆ ಹೋದೆವು. ದಾರಿಯಲ್ಲಿ ಒಂದೇ ಸಮನೆ ಮಳೆ, ಮಂಜು. ೫ ಅಡಿಗಿಂತ ಮುಂದೆ ಏನೂ ಕಾಣುತ್ತಿರಲಿಲ್ಲ. ಜೊತೆಗೆ ಜೋರಾಗಿ ಗಾಳಿ ಬೇರೆ. ಹಾಗೂ ಹೀಗೂ ಮುಳ್ಳಯ್ಯನ ಗಿರಿ ತಲುಪಿದೆವು. ಮುಳ್ಳಯ್ಯನ ಗಿರಿಯಲ್ಲಿ ಒಂದು ಸುಂದರ ದೇವಾಲಯ ಇದೆ. ದೇವರ ದರ್ಶನ ಮಾಡಿ ಅರ್ಚಕರ ಮನೆಯಲ್ಲೇ ಕಾಫಿ ಕುಡಿದೆವು. ತೆಗೆದುಕೊಂಡು ಹೋಗಿದ್ದ ಬ್ರೆಡ್ ತಿಂದು ಜೊತೆಗೇ ಮನೆಯ ಬಳಿ ಇದ್ದ ನಾಯಿಗೆ ಸ್ವಲ್ಪ ಬ್ರೆಡ್ ಹಾಕಿದೆವು. ನಾಯಿ ಬಹಳ ಖುಶಿಯಾಗಿ ಬಾಲ ಆಡಿಸುತ್ತಾ ಹಾಕಿದ್ದ ಬ್ರೆಡ್ಡನ್ನು ತಿಂದಿತು.



ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಾವು ಬಾಬಾ ಬುಡನ್ ಗಿರಿಯ ಕಡೆ ಹೊರಟೆವು. ಅರ್ಚಕರು ದೇವಸ್ಥಾನದ ಎಡಬದಿಯಲ್ಲಿ ಬಾಬಾ ಬುಡನ್ ಗಿರಿಗೆ ಕಾಲುದಾರಿ ಇದೆ. ಅದರಲ್ಲೇ ಹೋಗಿ ಎಂದರು. ಸರಿ ಎಂದು ಹೊರಟರೆ, ಮನೆಯ ಬಳಿಯಿದ್ದ ನಾಯಿ ನಮ್ಮ ಹಿಂದೆಯೇ ಬರತೊಡಗಿತು. ಮುಂದೆ ಹೋದರೆ ಸರಿಯಾದ ದಾರಿಯೇ ಇಲ್ಲ. ಹಿಂದೊಮ್ಮೆ ಕಾಲುದಾರಿ ಇದ್ದ ಕುರುಹು ಇತ್ತಷ್ಟೇ. ಆಮೇಲೆ ತಿಳಿದದ್ದು ಆ ದಾರಿಯಲ್ಲಿ ಯಾರೂ ಓಡಾಡುವುದೇ ಇಲ್ಲ, ಹಾಗಾಗಿ ದಾರಿಯಲ್ಲಿ ಹುಲ್ಲು ಬೆಳೆದು ದಾರಿ ಮುಚ್ಚಿಹೋಗಿದೆ ಎಂದು.


ದಾರಿಯಲ್ಲಿ ವಿಪರೀತ ಮಂಜು. ಮೋಡಗಳ ಒಳಗೇ ಸಾಗುತ್ತಿದ್ದೆವು ಅನಿಸುತ್ತೆ. ಮುಂದಿನ ಬೆಟ್ಟಗಳೂ ಕಾಣುತ್ತಿಲ್ಲ. ಹಿಂದೆ ಮುಳ್ಳಯ್ಯನ ಗಿರಿಯೂ ಕಾಣುತ್ತಿಲ್ಲ. ಇಷ್ಟೆಲ್ಲದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಅಲ್ಪ ಸ್ವಲ್ಪ ಕಾಣುತ್ತಿದ್ದ ದಾರಿ ಕವಲೊಡೆಯಿತು. ಎಡಗಡೆ ಒಂದು ದಾರಿ, ಬಲಗಡೆ ಒಂದು ದಾರಿ. ಆಗ ನನ್ನ ಸ್ನೇಹಿತ ಎನೋ ಕಂಡುಹಿಡಿದಂತೆ ಹೇಳಿದ "ಮಗಾ, ನಾವು ಕಳೆದುಹೋಗಿದೀವಿ". ಯಾವ ಕಡೆ ಹೋಗುವುದೆಂದು ತೋಚದೆ ಕೊನೆಗೆ ಬಲಗಡೆ ದಾರಿಯಲ್ಲಿ ಹೊರಟೆವು. ಆದರೆ ಅಷ್ಟು ಹೊತ್ತು ನಮ್ಮ ಜೊತೆ ಬರುತ್ತಿದ್ದ ನಾಯಿ ಅಲ್ಲೇ ನಿಂತುಬಿಟ್ಟಿತು. ನಾಯಿಯನ್ನು ಅಲ್ಲೇ ಬಿಟ್ಟು ಅಗಾಧ ಮಂಜಿನಲ್ಲಿ ಸ್ವಲ್ಪ ಮುಂದೆ ಹೋಗಿ ನೋಡಿದರೆ, ದೊಡ್ಡ ಪ್ರಪಾತ. ಇನ್ನೊಂದು ಹೆಜ್ಜೆ ಕಾಲಿಟ್ಟಿದ್ದರೆ, ಡೈರೆಕ್ಟಾಗಿ ಭಗವಂತನ ಪಾದ.
ಈಗ ಏನು ಮಾಡುವುದು? ಬಂದ ದಾರಿಯಲ್ಲೇ ಹಿಂದೆ ಹೋಗೋಣವೇ? ಇನ್ನೊಂದು ದಾರಿಯಲ್ಲಿ ಮುಂದೆ ಹೋದರೆ ಮತ್ತೆಲ್ಲೋ ಕಳೆದು ಹೋದರೆ? ಎಂದು ಯೋಚಿಸುತ್ತಾ ಹಿಂದೆ ಬಂದರೆ ಅಲ್ಲೇ ಇದ್ದ ನಾಯಿ ಎಡಗಡೆ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗಿ ನಿಂತುಕೊಂಡಿತು. ಅದು ನಿಂತುಕೊಂಡ ಭಂಗಿ "ನನಗೆ ದಾರಿ ಗೊತ್ತಿದೆ. Follow me" ಎಂಬಂತಿತ್ತು. ಸರಿ ಆ ದಾರಿಯಲ್ಲೂ ಸ್ವಲ್ಪ ಮುಂದೆ ಹೋಗಿ ನೋಡೇಬಿಡೋಣ ಎಂದು ಹೊರಟರೆ ನಾವು ಮುಂದೆ ಹೋದಂತೆಲ್ಲಾ ನಮ್ಮ ನಾಯಿ ನಮಗಿಂತ ಸ್ವಲ್ಪ ಮುಂದೆ ಹೋಗಿ ನಿಲ್ಲುತ್ತಿತ್ತು. ಆಗ ನಾವು ನಿರ್ಧರಿಸಿಬಿಟ್ಟೆವು. ನಾಯಿಗೆ ದಾರಿ ಸರಿಯಾಗಿ ಗೊತ್ತಿದೆ. ನಾವು ಅದನ್ನು ಹಿಂಬಾಲಿಸಬೇಕಷ್ಟೇ ಎಂದು. ನಂತರ ಒಂದೂವರೆ ಗಂಟೆ ಎಲ್ಲೂ ನಿಲ್ಲದೆ ನಾಯಿಯ ಹಿಂದೆ ಓಡಿದೆವು. ನಾವು ಸ್ವಲ್ಪ ನಿಧಾನ ಮಾಡಿದರೆ, ನಾಯಿ ಮುಂದೆ ಹೋಗಿ ಎತ್ತರದ ಸ್ಥಳದಲ್ಲಿ ನಿಂತು ಕಾಯುತ್ತಿತ್ತು. ಇನ್ನೂ ನಿಧಾನ ಮಾಡಿದರೆ ಹಿಂದೆ ಬಂದು ಬೊಗಳುತ್ತಿತ್ತು. ಹೀಗೇ ತುಂಬಾ ಹೊತ್ತು ಓಡಿ ಓಡಿ ಸುಸ್ತಾಗಿ ಏದುಸಿರು ಬಿಡುತ್ತಾ ನಿಂತಿದ್ದಾಗ ದೂರದಲ್ಲೆಲ್ಲೋ ವಾಹನದ ಹಾರ್ನ್ ಶಬ್ದ ಕೇಳಿಸಿತು. ಆಮೇಲೆ ಮತ್ತೆ ಹತ್ತು ನಿಮಿಷ ನಾಯಿಯ ಹಿಂದೆ ಓಡಿದ ಮೇಲೆ ಕಾಣಿಸಿದ ದೃಶ್ಯ ನೋಡಿ ಎಲ್ಲರಿಗೂ ಖುಷಿಯೋ ಖುಷಿ. ನಮ್ಮ ಮುಂದೆ ಇದ್ದದ್ದು ಬಾಬಾ ಬುಡನ್ ಗಿರಿ - ೬ ಕಿ. ಮೀ. ಎಂಬ ಫಲಕ ಮತ್ತು ಡಾಂಬರು ರಸ್ತೆ.


ನಾಯಿಯಂತೂ "ನನ್ನ ಕೆಲಸ ಮುಗೀತು ನೀವೇನಾದ್ರೂ ಮಾಡ್ಕೊಳಿ" ಅಂತ ಅಲ್ಲೇ ಮಲಗಿಬಿಟ್ಟಿತು. ಅದರ ಬೆನ್ನು ಸವರಿ ಅದಕ್ಕೆ ಸ್ವಲ್ಪ ಬ್ರೆಡ್ ಹಾಕಿ, ನಾವೂ ಸ್ವಲ್ಪ ಹೊತ್ತು ವಿರಮಿಸಿದೆವು. ಆಮೇಲೆ ಬಾಬಾ ಬುಡನ್ ಗಿರಿ ಹೋಗುವುದೇನೂ ಕಷ್ಟ ಆಗಲಿಲ್ಲ. ನಾಯಿಯೂ ನಮ್ಮ ಜೊತೆಗೇ ಬಂದು ನಾವು ಬಾಬಾ ಬುಡನ್ ಗಿರಿಯಲ್ಲಿದ್ದಷ್ಟು ಹೊತ್ತು ನಮ್ಮ ಬಳಿಯೇ ಇತ್ತು. ರಾತ್ರಿ ಬಾಬಾ ಬುಡನ್ ಗಿರಿಯಲ್ಲಿದ್ದು ಮುಂದೆ ಹತ್ತಿರದ ಜಲಪಾತ ನೋಡಿ, ಬಾಬಾ ಪೀಠ, ದತ್ತ ಪೀಠ ಎಲ್ಲ ನೋಡಿ ವಾಪಸ್ ಬೆಂಗಳೂರಿಗೆ ಬಸ್ ನಲ್ಲಿ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು. ನಮ್ಮ ಬಸ್ಸು ಕಣ್ಮರೆಯಾಗುವವರೆಗೂ ನಾಯಿ ಬಸ್ಸಿನತ್ತಲೇ ನೋಡುತ್ತಿತ್ತು.
ಮನೆಗೆ ಬಂದು ಅಮ್ಮನಿಗೆ ನಡೆದ ಕಥೆಯನ್ನು ಹೇಳಿದರೆ "ದತ್ತಾತ್ರೇಯನೇ ನಾಯಿ ರೂಪದಲ್ಲಿ ಬಂದು ನಿಮ್ಮನ್ನು ಕಾಯ್ದಿರಬೇಕು" ಎಂದರು. ನಾನು "ಇರಬಹುದು" ಎಂದಷ್ಟೇ ಹೇಳಿ ಇನ್ನು ಸ್ವಲ್ಪ ಹೊತ್ತು ಅಲ್ಲಿದ್ದರೆ ನಮ್ಮಮ್ಮನಿಗೆ ನಾವು ಪಟ್ಟ ಪಾಡು ನೆನಪಿಗೆ ಬಂದು ಬೈಸಿಕೊಳ್ಳಬೇಕಾಗುತ್ತದೆ ಎಂದು ಅಲ್ಲಿಂದ ಮಾಯವಾದೆ.

  • ಟ್ರೆಕಿಂಗ್
  • ಪ್ರವಾಸ ಕಥನ
  • ಬಾಬಾ ಬುಡನ್ ಗಿರಿ
  • ಮುಳ್ಳಯ್ಯನ ಗಿರಿ
~.~
  • keerthi2kiran ರವರ ಬ್ಲಾಗ್
  • Login or register to post comments
  • 526 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 1, 2008 - 10:01pm — lgnandan

ಉ: ನಾಯಿಯನ್ನು ಹಿಂಬಾಲಿಸಿದ ಕತೆ

lgnandan's picture

ಮುಳ್ಳಯ್ಯನಗಿರಿ ನನ್ನ ನೆಚ್ಚಿನ ತಾಣಗಳಲ್ಲಿ ಒಂದು. ನನ್ನ ಪ್ರೊಫ಼್ಯೆಲ್ ಫೋಟೋ ಅಲ್ಲಿನದೆ. ನಿಮ್ಮ ನಾಯಿಯ ವಿಚಾರ ಕೇಳಿ ಅಶ್ಚರ್ಯವಾಯಿತು. ದೇವರೇ ನಿಮಗೆ ದಾರಿ ತೋರಿಸಿರಬೇಕು.

- ನಂದನ್

ನಮ್ಮ ತಾಣ - http://www.satyakagyann.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 10:24pm — kalpana

ಉ: ನಾಯಿಯನ್ನು ಹಿಂಬಾಲಿಸಿದ ಕತೆ

kalpana's picture

ಪ್ರವಾಸ ಕಥೆ ರೋಚಕವಾಗಿದೆ! ಆ ನಾಯಿ ಆಪತ್ಬಾಂಧವನಂತೆ ಬಂದಿದ್ದು ನಿಜಕ್ಕೂ ಆಶ್ಚರ್ಯ. ಹೀಗೆ ಬರೀತಾ ಇರಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 10:11am — sumanajois

ಉ: ನಾಯಿಯನ್ನು ಹಿಂಬಾಲಿಸಿದ ಕತೆ

sumanajois's picture

ಅಬ್ಬಾ... ಅಂತೂ ಇಂತೂ ಹಿಮಾಲಯದಿಂದ ಚಿಕ್ಕಮಗಳೂರಿಗೆ ಬಂತು ಸವಾರಿ... ಟ್ರೆಕ್ಕಿಂಗ್ ಬಿಟ್ಟು ಬೇರೆ ಏನು ಮಾಡಲ್ವಾ ತಾವು?
ಪ್ರವಾಸ ಕಥನಗಳು ಅಂತ ಸಂಪದದಲ್ಲಿ ಹೊಸ ಕಾಲಮ್ ಶುರು ಮಾಡ್ಬೇಕು ನಿಂಗೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 10:15am — anil.ramesh

ಉ: ನಾಯಿಯನ್ನು ಹಿಂಬಾಲಿಸಿದ ಕತೆ

anil.ramesh's picture

ತು೦ಬಾ ಅದ್ಭುತವಾಗಿದೆ ನಿಮ್ಮ ಪ್ರವಾಸ ಕಥನ (travelogue). ನಿಜವಾಗಿಯೂ ಆ ನಾಯಿಯೇ ದೇವರ ರೂಪದಲ್ಲಿ ಬ೦ದು ನಿಮಗೆ ದಾರಿ ತೋರಿಸಿದೆ...

ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 10:53am — honnung

ಉ: ನಾಯಿಯನ್ನು ಹಿಂಬಾಲಿಸಿದ ಕತೆ

honnung's picture

ನನ್ನ ತಮ್ಮ ಅಲ್ಲಿ ಹೋಗಿ ನನಗೆ ಫೋಟೋ ತೋರಿಸಿದ್ದ. ತುಂಬ ಚೆನ್ನಾಗಿದೆ ಆ ಪ್ರದೇಶ. ಅದಕ್ಕೆ ನನಗೂ ಅಲ್ಲಿ ಒಮ್ಮೆ ಹೋಗಬೇಕು ಅಂಬ ಅಸೆ. ವರುಷದ ಯಾವ ದಿನಗಳಲ್ಲಿ ಹೋದರೆ ಚೆನ್ನಾಗಿರುತ್ತೆ? ಬೇಸಿಗೆಯಲ್ಲಿ ಹೋದರೆ ಮಳೆ, ಮಂಜು ಇಲ್ಲದೆ ಸರಾಗವಾಗಿ ಟ್ರೆಕ್ಕಿಂಗ್ ಮಾಡಬಹುದು ಎನ್ನಿಸುತ್ತೆ.

ಇದೆ ರೀತಿ ಪ್ರಾಣಿಗಳನ್ನು ದಾರಿ ತೋರಲು ಬಳಸಿರುವ ಬಗ್ಗೆ ತೇಜಸ್ವಿಯವರ ಅನುವಾದಿತ ಕಾದಂಬರಿ 'ಪ್ಯಾಪಿಲಾನ್' ಯಲ್ಲಿ ಇದೆ. ಅದರಲ್ಲಿ ಹಂದಿಯನ್ನು ಬಳಸಿರುವ ಬಗ್ಗೆ ಸ್ವಲ್ಪ ನೆನಪುಂಟು.
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 11:29am — girish.rajanal

ಉ: ನಾಯಿಯನ್ನು ಹಿಂಬಾಲಿಸಿದ ಕತೆ

girish.rajanal's picture

ಸಖತ್ತಾಗಿದೆ ರೀ ನಿಮ್ಮ ಟ್ರೆಕ್ಕಿಂಗ್ ಪುರಾಣ..ನನಗೂ ಟ್ರೆಕ್ಕಿಂಗ್ ಅಂದ್ರೆ ಪಂಚಪ್ರಾಣ..ನಾನೂ ಕೂಡ ನಮ್ಮರಿನ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ಮಾಡಿದ್ದೀನಿ.
ಆದರೆ ನಮ್ಮ ಊರಿನ ಬೆಟ್ಟಗಳು ಪೂರ್ತಿ ಬೋಳು. ಹೇಳಿಕೇಳಿ ಬಯಲುಸೀಮೆ. ಬರೀ ಕಳ್ಳಿಗಿಡ, ಡಬಗೊಳ್ಳಿ ಗಿಡ..ಇಂತಹದೇ ಇರುತ್ತೆ. ನೀರಿ ನಿಡಿ ಬೆಎಕಂದ್ರ ಬಾಳ ತ್ರಾಸು ಪಡಬೇಕಾಗುತ್ತ. ಒಂತರ ಮರಭೂಮಿ ಅನುಭವ...Eye-wink

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 1:29pm — keerthi2kiran

ಉ: ನಾಯಿಯನ್ನು ಹಿಂಬಾಲಿಸಿದ ಕತೆ

keerthi2kiran's picture

ಆ ತರ ಟ್ರೆಕಿಂಗ್ ಕೂಡ ಇದೆ ಗುರು. ಮರುಭೂಮಿನಲ್ಲೂ ಟ್ರೆಕಿಂಗ್ ಮಾಡ್ತಾರೆ. ಸಮುದ್ರದ ದಂಡೆನಲ್ಲೂ ಮಾಡ್ತಾರೆ. ನಾವೂ ಒಂದ್ ಸಲಿ ಹೊನ್ನಾವರದಿಂದ ಕುಮಟಾಗೆ ಸಮುದ್ರದ ದಡದಲ್ಲೇ ನಡಕೊಂಡು ಹೋಗಿದ್ವಿ. ಬಹಳ ತ್ರಾಸಾಗಿತ್ತು. ದಾರೀನಲ್ಲಿ ಉಸ್ಸಪ್ಪಾ ಅಂತ ಕೂತಿದ್ರೆ ತಲೆ ಮೇಲೆ ಹದ್ದುಗಳು ಹಾರ್ತಾ ಇದ್ವು. ಬೇಡ ಫಜೀತಿ. Smiling
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 1:04pm — Jayalaxmi.Patil

ಉ: ನಾಯಿಯನ್ನು ಹಿಂಬಾಲಿಸಿದ ಕತೆ

Jayalaxmi.Patil's picture

ವ್ಹಾಹ್! so sweet. ನಿಜಕ್ಕು ನಿಮ್ಮ ಅನುಭವ ಓದಿ ರೋಮಾಂಚನವಾಯ್ತು. ಅದು ಹ್ಯಾಗ್ರಿ ನಿಮಗೆ ಆ ನಾಯಿನ ಅಲ್ಲೆ ಬಿಟ್ಟು ಬರೋಕೆ ಮನಸಾಯ್ತು..? ಟ್ರೆಕ್ಕಿಂಗ್ ಕುರಿತು ಅಂದರೆ ಅದಕ್ಕೆ ಬೇಕಾಗುವ ಸಿದ್ಧತೆ, ವಾತಾವರಣ, ಅನುಭವಗಳ ಬಗ್ಗೆ ನಿಮ್ಮ ಬರಹಗಳ ನಿರೀಕ್ಷೆ ಇಟ್ಟುಕೊಳ್ಳಬಹುದೆ?
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 1:23pm — keerthi2kiran

ಉ: ನಾಯಿಯನ್ನು ಹಿಂಬಾಲಿಸಿದ ಕತೆ

keerthi2kiran's picture

ನೀವು ನಾಳೆ ಹೋದ್ರೆ ದಾರಿ ತೋರಿಸಕ್ಕೆ ಬೇಕಲ್ಲ... Eye-wink
ಟ್ರೆಕಿಂಗ್ ಬಗ್ಗೆ ವಿಷಯ ಒಟ್ಟುಗೂಡಿಸಿ ಸಮಯ ಸಿಕ್ಕಾಗ ಬರೀತೀನಿ.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 1:44pm — mahesha

ಉ: ನಾಯಿಯನ್ನು ಹಿಂಬಾಲಿಸಿದ ಕತೆ

mahesha's picture

ಸತ್ತಾಟ ಚನ್ನಾಗಿ ನಡೆಯಲಿ...

ಚನ್ನಾಗಿದೆ..!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 2:53pm — shashi.lol

ಉ: ನಾಯಿಯನ್ನು ಹಿಂಬಾಲಿಸಿದ ಕತೆ

shashi.lol's picture

anna

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 6:36pm — yuvapremi

ಉ: ನಾಯಿಯನ್ನು ಹಿಂಬಾಲಿಸಿದ ಕತೆ

yuvapremi's picture

ಅದ್ಭುತವಾಗಿದೆ ನಿಮ್ಮ ಪ್ರವಾಸ ಕಥನ..! ಬಹುಶಃ ಅದೇ ನಾಯಿಯನ್ನ ಮನೆಗೆ ಕರೆತಂದು ನಮ್ಮ ಬೆಂಗಳೊರಿನಲ್ಲಿ ಟೊರಿಂಗ್ ಗೈಡ್ ಮಾಡಬಹುದು ಅಲ್ವೆ ?

ಎಲ್ಲೊ ಓದಿದ ನೆನಪು, ಒಂದು ಕೋತಿ 200 ಕುರಿಗಳನ್ನ ತಾನೊಬ್ಬನೆ ಮೇಯಿಸುತ್ತದಂತೆ. ಪ್ರಾಣಿಗಳು ಹೀಗೆ ಮನುಷ್ಯನ ಕೆಲಸಗಳನ್ನ ಹೆಚ್ಚು ಮಾಡ್ತಾ ಇದ್ರೆ ಮುಂದೊಂದು ದಿನ ನಮ್ಮ IT/BPO ನಲ್ಲಿ ಕೆಲಸಕ್ಕೆ ಇಟ್ಟುಕೊಂಡರು ಆರ್ಸ್ಚರ್ಯ ಇಲ್ಲ. Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 7:29pm — cmariejoseph

ಉ: ನಾಯಿಯನ್ನು ಹಿಂಬಾಲಿಸಿದ ಕತೆ

cmariejoseph's picture

ಸಕ್ಕತ್ ನಿರೂಪಣೆ ಕಣ್ರೀ, ಕೀರ್ತಿ ಟು ಕಿರಣ್

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 9:40pm — shashi.lol

ಉ: ನಾಯಿಯನ್ನು ಹಿಂಬಾಲಿಸಿದ ಕತೆ

shashi.lol's picture

ಸ್ವಲ್ಪನೂ ಕರುಣೆ ಇಲ್ದೆ ನಾಯಿ ನ ಅಲ್ಲೆ ಬಿಟ್ ಬಂದಿದೀರಲ್ರಿ . PETA ನಿಮ್ಗೆ ಸ್ವಲ್ಪನೂ ಕರುಣೇ ಇಲ್ಲ ಅಂತ ನಿಮ್ ಮೇಲೆ case ಹಾಕ್ಬೋದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 10:51am — kadakolla05

ಉ: ನಾಯಿಯನ್ನು ಹಿಂಬಾಲಿಸಿದ ಕತೆ

kadakolla05's picture

ನಾಯಿ ಹಿಂಬಾಲಿಸಿದ ನಿಮ್ಮ ಕಥೆ ತುಂಬಾ ಚನ್ನಾಗಿದೆ. ನಾನು 2ನೇ ತರಗತಿಯಲ್ಲಿದ್ದಾಗ ಓದಿದ ಗೌಡರ ನಾಯಿ ಕಥೆಯನ್ನು ನೆನಪಿಗೆ ತಂದಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 12, 2008 - 11:50am — keerthi2kiran

ಉ: ನಾಯಿಯನ್ನು ಹಿಂಬಾಲಿಸಿದ ಕತೆ

keerthi2kiran's picture

Smiling
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾತೋಪಂಥ್ ಸರೋವರ
  • ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ
  • ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
  • ಕರುಣಾಳು ಬಾ ಬೆಳಕೆ
  • ರಾಮೇಶ್ವರಕ್ಕೆ ಹೋದ್ರೂ
Syndicate content

ಲೇಖಕರು

keerthi2kiran's picture

ಪೂರ್ಣ ಹೆಸರು
ಕೀರ್ತಿ ಕಿರಣ್ ಎಂ

ಪರಿಚಯ

ಬೆಂಗಳೂರಿನಲ್ಲಿರುವ ಅ(ಲ್ಪ)ಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಕೋಡಿಗನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಕರ್ನಾಟಕ ಮತ್ತು ಹಿಮಾಲಯದಲ್ಲಿ ಕೆಲವು ಟ್ರೆಕಿಂಗುಗಳನ್ನು ಮಾಡಿದ್ದೇನೆ. ಕಾದಂಬರಿಗಳನ್ನು ಓದುವುದು ಇನ್ನೊಂದು ಹವ್ಯಾಸ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 145 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator