ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › keerthi2kiran ರವರ ಬ್ಲಾಗ್

ಏನನ್ನು ನಂಬಲಿ?

September 29, 2008 - 2:39pm — keerthi2kiran

ಅಬ್ಬಾ!!! ಕಳೆದ ಒಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು. ಎಷ್ಟೊಂದು ಚರ್ಚೆ. ಪ್ರಪಂಚ ಇನ್ನೇನು ಅಂತ್ಯ ಕಾಣಲಿದೆ ಅನ್ನುವಷ್ಟು...
ಯಾವುದೇ ಬ್ಲಾಗ್ ಸೈಟ್ ಆಗಲಿ, ಟಿವಿ ಚಾನೆಲ್ ಆಗಲಿ... ಎಲ್ಲರೂ ಪ್ರಸಕ್ತ ವಿಷಯಗಳ ಬಗ್ಗೆ ಕೊರೆಯುವವರೇ. ಪ್ರತಿಯೊಬ್ಬರದೂ ಅವರದೇ ಆವೃತ್ತಿ.

ಪತ್ರಿಕೆಗಳು, ವಾಹಿನಿಗಳು ಕ್ರೈಸ್ತರ ಮೇಲೆ ನಡೆದ ಧಾಳಿಗಳ ಬಗ್ಗೆ ಕಿರಿಚಾಡುತ್ತಿದ್ದರೆ, ಬ್ಲಾಗಿಗರ ಪ್ರಕಾರ ಅದು ಯಾರೋ ಚಿಲ್ಲರೆ ಕಳ್ಳನ ಕೆಲಸ. ಅದಕ್ಕೂ ಬಜರಂಗದಳಕೂ ಯಾವ ಸಂಬಂಧವೂ ಇಲ್ಲ. ಪತ್ರಿಕೆಗಳು ಬರೀತಿರೋದೆಲ್ಲ ಸುಳ್ಳು. ಯಾಕಂದ್ರೆ ಪತ್ರಿಕೆಗಳಿಗೆ ದುಡ್ಡು ಕೊಡುತ್ತಿರುವುದು ಚರ್ಚುಗಳೇ.
ಕ್ರೈಸ್ತರು ಶಾಂತಿಪ್ರಿಯರು ಸಹೃದಯಿಗಳು ಅನ್ನೋರು ಒಂದು ಕಡೆಯಾದರೆ, ಚರ್ಚುಗಳದ್ದು ರಕ್ತಸಿಕ್ತ ಇತಿಹಾಸ ಅನ್ನೋ ಲೇಖನಗಳೂ ದಂಡಿಯಾಗಿವೆ (ಅದೂ ಸಾಕ್ಷಿಗಳ ಸಮೇತ).
ಮೊನ್ನೆ ಈಮೈಲ್ ನಲ್ಲಿ ೧೦೦ ಸ್ಲೈಡ್ ಗಳಿಗೂ ಹೆಚ್ಚಿನ death of hinduism ಅನ್ನೋ pdf ಬಂತು. ಅದರಲ್ಲಿ ಸಾಕ್ಷಿಗಳ ಸಮೇತ ಮತಾಂತರದ ಬಗ್ಗೆ ಬರೆದಿದ್ರು. ಆ ಸಾಕ್ಷಿಗಳಲ್ಲಿ ಎಷ್ಟು ನಿಜ ಎಷ್ಟು ಸುಳ್ಳು? ಯಾರಿಗೆ ಗೊತ್ತು? ಇದೇ ರೀತಿ ಇಸ್ಲಾಂ, ಕ್ರೈಸ್ತ ಮತಗಳೂ ಅನೇಕ ಪುಸ್ತಕಗಳನ್ನ ಹೊರತರ್ತಿವೆ.
ಕೆಲವು ಕ್ರೈಸ್ತ ಶಾಲೆಗಳಲ್ಲಿ ಕುಂಕುಮ, ಬಳೆಗಳು ನಿಶಿದ್ಧ ಇದು ಹಿಂದೂ ವಿರೋಧಿ ಅನ್ನೋರು ಒಂದು ಕಡೆಯಾದರೆ ಎಷ್ಟೋ ಕ್ರೈಸ್ತಶಾಲೆಗಳಲ್ಲಿ ಅಂತಹ ಸ್ಥಿತಿಯೇ ಇಲ್ಲ ಅನ್ನೋ ಸಂಗತಿ ಸುಳ್ಳಲ್ಲ.
ಇವೆಲ್ಲದರ ನಡುವೆ ದೆಹಲಿಯಲ್ಲಿ ೧೫ ದಿನಗಳ ಅಂತರದಲ್ಲೇ ೨ ಸ್ಫೋಟಗಳು... ಇಂಡಿಯನ್ ಮುಜಾಹಿದೀನ್ ಸ್ಫೋಟ ಮಾಡಿದ್ದು ಅಂತ ಒಬ್ಬರು ಹೇಳಿದ್ರೆ ಇದು ಹಿಂದೂ ಸಂಘಟನೆಗಳೇ ಮಾಡಿರಬಹುದೇನೋ ಅನ್ನೋರೇನೂ ಕಡಿಮೆ ಇಲ್ಲ. ಎಷ್ಟೋ ಮುಸ್ಲಿಮರು ಇಂಡಿಯನ್ ಮುಜಾಹಿದೀನ್ ಹೆಸರಿನ ಸಂಘಟನೆ ಇಲ್ವೇ ಇಲ್ಲ ಇದು ಹಿಂದೂಗಳ ಕೆಲಸಾನೇ ಅಂತ್ಲೂ ಹೇಳ್ತಿದಾರೆ. ಇದಕ್ಕೆ ತುಪ್ಪ ಸುರಿಯುವಂತೆ ಪ್ರಮೋದ್ ಮುತಾಲಿಕ್ ಹಿಂದೂಗಳ ಆತ್ಮಹತ್ಯಾ ದಳ ಕಟ್ಟುವುದಾಗಿ ಹೇಳಿದ್ದಾರೆ.
ಪೋಲೀಸರು ಹಾಗೂ ಹೀಗೂ ಕೆಲವು ಉಗ್ರರನ್ನ ಸೆರೆ ಹಿಡಿದ್ರು. ಭಯೋತ್ಪಾದಕರನ್ನು ಹಿಡಿಯುವಾಗ ಹುತಾತ್ಮರಾದ ಇನ್ಸ್ ಪೆಕ್ಟರ್ ಉಗ್ರರ ಗುಂಡಿಗೆ ಬಲಿಯಾದರು ಅಂತ ಒಂದು ಪತ್ರಿಕೆ ಹೇಳಿದ್ರೆ ಇನ್ನೊಂದು ಪತ್ರಿಕೆಯ ಪ್ರಕಾರ ಅವರು ಸತ್ತಿದ್ದು ಪೋಲೀಸರ ಗುಂಡಿನಿಂದಲೇ.
ಹೋದ ತಿಂಗಳೆಲ್ಲಾ ಕಾಶ್ಮೀರದ ಬಗ್ಗೆ ಚರ್ಚೆ ನಡೀತಿತ್ತು. ಕಾಶ್ಮೀರದ ಜನರಿಗೆ ಏನು ಬೇಕು ಪಾಕಿಸ್ತಾನವೇ, ಭಾರತವೇ ಅಥವಾ ಸ್ವಾತಂತ್ರ್ಯವೇ? ಹತ್ತಾರು ವಾಹಿನಿಗಳಲ್ಲಿ ನೂರಾರು ಚರ್ಚೆಗಳು. ಜನರು ಕೂಡ ಬರೆದಿದ್ದೇ ಬರೆದಿದ್ದು... ಫಲಿತಾಂಶ ಮಾತ್ರ ಸೊನ್ನೆ.
ಒಬ್ಬರ ಹೇಳಿಕೆ ಇನ್ನೊಬ್ಬರಿಗೆ ಪಥ್ಯವಾಗೋದೇ ಇಲ್ಲ. ಯಾರೂ ಇನ್ನೊಬ್ಬರ ಹೇಳಿಕೆಯ ಬಗ್ಗೆ ಯೋಚನೆ ಮಾಡೋದೂ ಇಲ್ಲ.
ಸಂಪದದಲ್ಲೇ ಪ್ರತಿಯೊಂದು ಲೇಖನಗಳಲ್ಲೂ ಉತ್ತರಿಸಲಾಗದ ನೂರಾರು ಪ್ರಶ್ನೆಗಳು.
ಯಾರನ್ನು ನಂಬಬೇಕು? ಸತ್ಯ ಏನು?

~.~
  • keerthi2kiran ರವರ ಬ್ಲಾಗ್
  • Login or register to post comments
  • 259 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 29, 2008 - 3:20pm — madhava_hs

ಉ: ಏನನ್ನು ನಂಬಲಿ?

madhava_hs's picture

>>"ಮೊನ್ನೆ ಈಮೈಲ್ ನಲ್ಲಿ ೧೦೦ ಸ್ಲೈಡ್ ಗಳಿಗೂ ಹೆಚ್ಚಿನ death of hinduism ಅನ್ನೋ pdf ಬಂತು..ಆ ಸಾಕ್ಷಿಗಳಲ್ಲಿ ಎಷ್ಟು ನಿಜ ಎಷ್ಟು ಸುಳ್ಳು? ಯಾರಿಗೆ ಗೊತ್ತು?"

ಹೌದು ಯಾರೋ ಕೂಲಂಕುಷವಾಗಿ ಎಲ್ಲ ವಿಷಯ್ಗಳನ್ನೂ ಬರೆದಿದ್ದಾರೆ. ಮತ್ತು ಮುಖ್ಯವಾದ ವಿಷಯಗಳ ಜೊತೆಯಲ್ಲಿ ಆ ಲೇಖನ ಪ್ರಕಟವಾಗಿರುವ ಕೆಲವು ಲಿಂಕ್ ಗಳನ್ನು ನೀಡಿದ್ದಾರೆ. ಮುಂದೆ ಆಗಬಹುದಾದ ಅನಾಹುತಗಳು, ಪರಿಣಾಮಗಳು ಘೋರವಾಗಿವೆ ಎಂದು ವಿವರಿಸಲಾಗಿದೆ.

ಕಳೆದೆರಡುವಾರಗಳ ಪ್ರತಾಪ ಸಿಂಹರ ಲೇಖನಗಳನ್ನೋದಿದಿರಾ?

>>"ಹೋದ ತಿಂಗಳೆಲ್ಲಾ ಕಾಶ್ಮೀರದ ಬಗ್ಗೆ ಚರ್ಚೆ ನಡೀತಿತ್ತು. ಕಾಶ್ಮೀರದ ಜನರಿಗೆ ಏನು ಬೇಕು ಪಾಕಿಸ್ತಾನವೇ, ಭಾರತವೇ ಅಥವಾ ಸ್ವಾತಂತ್ರ್ಯವೇ? ಹತ್ತಾರು ವಾಹಿನಿಗಳಲ್ಲಿ ನೂರಾರು ಚರ್ಚೆಗಳು. ಜನರು ಕೂಡ ಬರೆದಿದ್ದೇ ಬರೆದಿದ್ದು... ಫಲಿತಾಂಶ ಮಾತ್ರ ಸೊನ್ನೆ."

ಇನ್ನು.."one winter replaces the other" ಅನ್ನುವಂತೆ ಇನ್ನು ಕೆಲವುದಿನಗಳಲ್ಲಿ ಇನ್ಯಾವುದೋ ಮಹತ್ವ(?)ದ ಘಟನೆ ನಡೆದರೆ ಮೀಡಿಯಾಗಳೆಲ್ಲಾ ಮೋಡಿಗೆ ಬಿದ್ದು ಅಲ್ಲಿಗೆ ಗುಳೇ ಹೊರಡುತ್ತವೆ. ಹಳೆಯ ವಿಚಾರಗಳು ಮರೆತೇ ಹೋಗುತ್ತವೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 3:39pm — keerthi2kiran

ಉ: ಏನನ್ನು ನಂಬಲಿ?

keerthi2kiran's picture

>>ಇನ್ನು.."one winter replaces the other" ಅನ್ನುವಂತೆ ಇನ್ನು ಕೆಲವುದಿನಗಳಲ್ಲಿ ಇನ್ಯಾವುದೋ ಮಹತ್ವ(?)ದ ಘಟನೆ ನಡೆದರೆ ಮೀಡಿಯಾಗಳೆಲ್ಲಾ ಮೋಡಿಗೆ ಬಿದ್ದು ಅಲ್ಲಿಗೆ ಗುಳೇ ಹೊರಡುತ್ತವೆ. ಹಳೆಯ ವಿಚಾರಗಳು ಮರೆತೇ ಹೋಗುತ್ತವೆ.
ನಾವೂ ಇದಕ್ಕೆ ಹೊರತಲ್ಲ. Sad
ಕೀರ್ತಿ ಕಿರಣ್ ಎಂ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ
  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಕಳಚಿಬೀಳುವ ಮುಖವಾಡ
  • ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ
Syndicate content

ಲೇಖಕರು

keerthi2kiran's picture

ಪೂರ್ಣ ಹೆಸರು
ಕೀರ್ತಿ ಕಿರಣ್ ಎಂ

ಪರಿಚಯ

ಬೆಂಗಳೂರಿನಲ್ಲಿರುವ ಅ(ಲ್ಪ)ಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಕೋಡಿಗನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಕರ್ನಾಟಕ ಮತ್ತು ಹಿಮಾಲಯದಲ್ಲಿ ಕೆಲವು ಟ್ರೆಕಿಂಗುಗಳನ್ನು ಮಾಡಿದ್ದೇನೆ. ಕಾದಂಬರಿಗಳನ್ನು ಓದುವುದು ಇನ್ನೊಂದು ಹವ್ಯಾಸ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಂಸನಾದ
  • ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
  • ಆಕಾಶದ ಮೋಡದಲ್ಲಿ
  • ಬರಿದಾದ ಭಾವನೆಗಳು
  • ಬರಿದಾದ ಭಾವನೆಗಳು
  • ಕಸ್ತೂರಿ ರಂಗನ್ ಸಂದರ್ಶನ
  • ಸ್ಯಾರಿ....ಸ್ಯಾಲರಿ (ಶಾಯರಿ )
  • ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
  • ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
  • nanna kiru parichaya
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಹಂಸನಾದ
    January 9, 2009 - 4:27am
  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 182 ಅತಿಥಿಗಳು ಆನ್ಲೈನ್ ಇರುವರು.


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator