ಕೃಷ್ಣಮೊರ್ತಿ ಅಜ್ಜಹಳ್ಳಿ
ಕವನ,ಹನಿ ಕವನ,ನಗೆ ಹನಿ ,ಹಾಸ್ಯ,ಚುಟುಕಗಳು,ಗಾದೆಗಳು,ನುಡಿಮುತ್ತುಗಳು ಇತ್ಯಾದಿ
ಅನುಭವ ವಾಣಿ
*ಕರ್ತವ್ಯ*
ಪ್ರತಿಯೊಬ್ಬನೂ ತನ್ನ ಮನೆಯಂಗಳವನ್ನು ಗುಡಿಸಿದರೆ ಇಡೀ ಊರೇ ಸ್ವಚ್ಛವಾಗುತ್ತದೆ.
*ಕೃತಜ್ಞತೆ*
ದೋಷವಿರುವ ಗಂಡನನ್ನು/ಹೆಂಡತಿಯನ್ನು ತನಗೆ ದೊರಕಿಸಿದ ಬಗೆಗೆ ಹೆಂಗಸು/ಗಂಡಸು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು.ಏಕೆಂದರೆ ದೋಷ ಇಲ್ಲದಿರುವ ಗಂಡನು/ಹೆಂಡತಿ ಭಾರೀ ಗಂಡಾಂತರ ಕಾರಿಯಾಗಿರುತ್ತಾರೆ.
*ಗಂಡ*
ಸುಖದ ಬೆನ್ನು ಹತ್ತಿ ತನ್ನ ಸ್ವಾತಂತ್ರವನ್ನು ಕಳೆದುಕೊಂಡ ಮನುಷ್ಯನಿಗೆ ಗಂಡನೆನ್ನುತ್ತಾರೆ.
*ಗಂಡಸು*
ಗಂಡಸು ಭಾರೀ ವಿಚಿತ್ರಪ್ರಾಣಿ ಹೋಟೇಲಿಗೆ ಹೋದಾಗ ಅಲ್ಲಿ ಅವನು ಮನೆಯ ಊಟ ಬಯಸುತ್ತಾನೆ ಮನೆಯಲ್ಲಿ ಇದ್ದಾಗ ಹೋಟಲ್ ಸೇವೆ ಆಪೇಕ್ಷಿಸುತ್ತಾನೆ.
*ಗೃಹಿಣಿ*
ಗೃಹಿಣಿ ಎಂದರೆ ಮನೆಯ ವಸ್ತುಗಳನ್ನು ಓರಣದಿಂದ ಇಡುವವಳಲ್ಲ.ಮನೆಯವರನ್ನು ಓರಣವಾಗಿ ಮಾಡುವವಳು.
-ಸಂಗ್ರಹ ಕೃಷ್ಣಮೊರ್ತಿಅಜ್ಜಹಳ್ಳಿ

- krishnamurthy bmsce ರವರ ಬ್ಲಾಗ್
- Login or register to post comments
- 596 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅನುಬವ ವಾಣಿ
ಛೆ! ಅನುಬವ ಅಲ್ರೀ, "ಅನುಭವ".
ನಿಮ್ಮ ಬ್ಲಾಗ್ ಪೋಸ್ಟುಗಳಲ್ಲಿ ಉದ್ದಕ್ಕೂ ತಪ್ಪು ತಪ್ಪು ಬರೆಯುತ್ತಿದ್ದೀರಿ. ನಿನ್ನೆ "ಕನ್ನಡ" "ಕನ್ನದ" ವಾಗಿತ್ತು. ಬರೆಯೋದರ ಜೊತೆಗೆ ಒಂದ್ ಸ್ವಲ್ಪ ಗಮನ ಇಟ್ಟು ಬರೀರಿ! ದಪ್ಪ ಕಾಣುವ ಶೀರ್ಷಿಕೇಲೆ ಹೀಗೆ ತಪ್ಪು ಕಾಣಿಸದಿದ್ದರೆ ಹೇಗೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"