ಕೃಷ್ಣಮೊರ್ತಿ ಅಜ್ಜಹಳ್ಳಿ
ಕವನ,ಹನಿ ಕವನ,ನಗೆ ಹನಿ ,ಹಾಸ್ಯ,ಚುಟುಕಗಳು,ಗಾದೆಗಳು,ನುಡಿಮುತ್ತುಗಳು ಇತ್ಯಾದಿ
ಚುಟುಕಗಳು
*ಪರಿಣಾಮ*
ಇಳಿದದ್ದೇ ತಪ್ಪಾಯಿತು
ಪ್ರಿಯೆ ನಿನ್ನ ಪ್ರೀತಿಯ
ಹೊಳೆಯಲ್ಲಿ
ನಿತ್ಯ ಬೇಯುತ್ತಿದ್ದೇನೆ
ಈಗ ವಿರಹದ ಉರಿಯಲ್ಲಿ.
*ಐಕ್ಯ(ಲೀನ)*
ಅವಳ ಎದೆ (ಗೂಡಲ್ಲಿ)ಮೇಲೆ
ನಾನು ಬಂಗಾರದ
ತುಂಡು
ಈ ಬಾಹುಗಳ ನಡುವೆ
ಅವಳು ಬಾಳೆಯ
ದಿಂಡು
ಒಲವಲ್ಲಿ ನಾವು ಐಕ್ಯಗೊಂಡು.
*ಅಶಾಶ್ವತ*
ದಿನಬಿಡದೆ ದೇವರ ಸ್ಮರಿಸಿದ
ಕನಕ,ಪುರಂದರರಿಲ್ಲ,ಅಕ್ಕ,ಬಸವರಿಲ್ಲ
ಗುರುರಾಜ,ಘಂಟಸಾಲರಿಲ್ಲ
ಗುಡಿ,ಚರ್ಚು,ಮಸೀದಿ,ಕಟ್ಟಿಸಿದ
ರಾಜ,ಪಾದ್ರಿ,ಮಹಮದೀಯರಿಲ್ಲ
ಎಂದಮೇಲೆ ಅಲ್ಪರಾದ ನಾವು
ಅಶಾಶ್ವತರಲ್ಲವೇ.
ಕೃಷ್ಣಮೊರ್ತಿಅಜ್ಜಹಳ್ಳಿ

- krishnamurthy bmsce ರವರ ಬ್ಲಾಗ್
- Login or register to post comments
- 275 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: