ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.
ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ ಮೂಡದಂತೆ ಹೆದರಿಕೆ ಮೂಡಿಸಿರಬೇಕು. ಆಗ ಪುರಾಣಗಳು ಕೇವಲ ಕಥೆಗಳಂತೆ ಕಾಣುತ್ತಿತ್ತು. ನಾನು ಬೆಳೆದಂತೆ ಮಹಾಭಾರತ, ರಾಮಾಯಾಣದ ಕಥೆಗಳೆಲ್ಲವೂ ಒಂದಾನೊಂದು ಕಾಲದಲ್ಲಿ ನಡದ ನಿಜ ಘಟನೆಗಳೆಂದು ತಿಳಿಯಿತು. ಮತ್ತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದವು. ನಮ್ಮ ಸಮಾಜವಿಜ್ಞಾನ ಪುಸ್ತಕದಲ್ಲಿ ತಿಳಿಸುವಂತೆ ವೇದದ ಕಾಲದಲ್ಲಿ ಮಹಿಳೆಯರಿಗೆ ಅತ್ತ್ಯುತ್ತಮ ಸ್ಥಾನ ದೊರಕ್ಕಿತ್ತು ಎಂದು ತಿಳಿದು ಬರುತ್ತದೆ. ಆದರೆ ತ್ರೇತಾ ಮತ್ತು ದ್ವಾಪರಾ ಯುಗದಲ್ಲಿನ ನಾಯಿಕೆಯರ ಪಾಡು ಹೇಗಿತ್ತು? ಸೀತೆ, ದ್ರೌಪದಿ, ಕುಂತಿ, ಊರ್ಮಿಳೆ ಇವರೆಲ್ಲಾ ಅನುಭವಿಸಿದ ಪಾಡು ನೋಡಿದರೆ ಅಯ್ಯೋ ಎನಿಸುತ್ತದೆ. ಸೀತೆಯನ್ನು ಕಾಡಿಗಟ್ಟುವಾಗ ಯಾರು ಈ ಬಗ್ಗೆ ಚಕಾರವೆತ್ತುವುದಿಲ್ಲ. ವಿಚಿತ್ರವಲ್ಲವೇ? ಯಾವನೋ ಒಬ್ಬನ ಮಾತಿಗೆ ಬೆಲೆಕೊಟ್ಟು ರಾಮ ತನ್ನ ಪ್ರಿಯ ಪತ್ನಿಯನ್ನು ಕಾಡಿಗಟ್ಟುವುದೇ? ಹೋಗಲಿ, ಆಕೆಯ ವಾಸ್ತವ್ಯದ ಬಗ್ಗೆ ಏನಾದರೂ ಮಾಡಬಹುದಿತ್ತಲ್ಲವೇ! ಲಕ್ಶ್ಮಿಯ ಅವತಾರವೆಂದು ತಿಳಿಯುವ ಸೀತೆಗೇ ಈ ತರದ ಕಷ್ಟ ಬರಬೇಕಾದರೆ ಉಳಿದ ಮಹಿಳೆಯರ ಪಾಡು ಏನಾಗಿರಬಹುದು?
ಮತ್ತೆ ದ್ವಾಪರದ ನಾಯಿಕೆ ದ್ರೌಪದಿ, ತುಂಬಿದ ಸಭೆಯಲ್ಲಿ ದುಶ್ಶಾಸನನು ಆಕೆಯ ಸೀರೆಯನ್ನೆಳೆವಾಗ, ಕ್ರಿಷ್ಣೆಯ ೫ ಬಲಶಾಲಿ ಪತಿಗಳು ಏನು ಮಾಡುತ್ತಿದ್ದರು! ಧರ್ಮರಾಯ ಎಂದು ಹೆಸರು ಪಡೆದಿರುವ ಯುಧಿಷ್ಟರನಿಗೆ ತಾನು ಸೋತ ಬಳಿಕ ತನ್ನ ಪತ್ನಿಯನ್ನು ಪಣವಿಡುವ ಹಕ್ಕಿತ್ತೇ? ಅಸ್ಥಾನದಲ್ಲಿದ್ದ ಭೀಷ್ಮನು ಈ ಎಲ್ಲಾ ತಮಾಷೆಯನ್ನು ತಡೆಯಬಹುದಿತ್ತಲ್ಲವೇ?
ವಿಚಿತ್ರವೆಂದರೆ ಗಂಗೇಯನು ದುರ್ಯೋಧನನ ಉಪ್ಪಿನ ಋಣದಲ್ಲಿ ಬಿದ್ದಿದುರಿಂದ ಮೌನವಾಗಿದ್ದಾನಂತೆ! ದ್ರತರಾಷ್ಟ್ರನಂತೂ ಮೊದಲೇ ಕುರುಡ, ಈಗಂತೂ ಪುತ್ರ ವ್ಯಾಮೋಹದಿಂದ ನ್ಯಾಯದ ಕಣ್ಣನ್ನು ಕಳಕೊಂಡಿದ್ದಾನೆ.
ದೇವಾಂಶ ಸಂಭೂತರೆಂದು ತಿಳಿಯುವ ರಾಮ ಕೄಷ್ಣರ ಕಾಲದಲ್ಲಿ ನಡೆದಿದೆಯೆಂದ ಮೇಲೆ ಕಲಿಯುಗದ ಮಹಿಳೆಯ ಪಾಡು ಏನಾಗಿರಬಹುದು? ನಾಯಿಪಾಡು ಎಂದೇ ಹೇಳಬಹುದು. ಆದರೂ ಈಗೀಗ ಮಹಿಳೆಯರು ಎಚ್ಚೆತ್ತುತ್ತಿದ್ದಾರೆ. ತಮ್ಮ ಸ್ಥಾನ ಮಾನಕ್ಕಾಗಿ ಹೋರಾಡುತ್ತಿದ್ದಾರೆ. ನಾನಂತೂ ಆಶಾವಾದಿ, ಖಂಡಿತ ಹತ್ತಿಪ್ಪತ್ತು ವರ್ಷಗಳ ಬಳಿಕ ಮಹಿಳೆಯರಿಗೆ ಅವರಿಗೆ ತಕ್ಕುದಾದ ಸ್ಥಾನ ದೊರಕೀತು!

- ksnayak ರವರ ಬ್ಲಾಗ್
- Login or register to post comments
- 445 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.
"ನಾನಂತೂ ಆಶಾವಾದಿ, ಖಂಡಿತ ಹತ್ತಿಪ್ಪತ್ತು ವರ್ಷಗಳ ಬಳಿಕ ಮಹಿಳೆಯರಿಗೆ ಅವರಿಗೆ ತಕ್ಕುದಾದ ಸ್ಥಾನ ದೊರಕೀತು!"
--- ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದ ತಸ್ ಲೀಮಾ ನಸ್ರೀನ್ ಎಂಬವಳ ಪಾಡು ಕೇಳಿದ್ದೀರಲ್ಲ !
ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.
ನಮಸ್ಕಾರ ಆರಮನವರಿಗೆ,
ನೀವೇ ನನ್ನ ಮಾತನ್ನು ಸಾಧಿಸಲು ಸಹಾಯ ಮಾಡಿದ್ದಿರಿ! ನನ್ನ ಮೊದಲ ಬ್ಲಾಗ್ ಗೆ ಪ್ರತಿಕ್ರಿಯೆ ಕೊಟ್ಟು! ನಾನಂತೂ ಇದಕ್ಕೆ ಯಾವ ಪ್ರತಿಕ್ರಿಯೆಯ ನಿರೀಕ್ಶ್ಕೆ ಮಾಡಿರಿರಲಿಲ್ಲ. ಆದರೂ ೨ ಪ್ರತಿಕ್ರಿಯೆಯು ನನ್ನಲ್ಲ್ಲಿ ಸ್ಪೂರ್ತಿಯನ್ನು ಹುಟ್ಟಿಸಿದೆ ಹಾಗು ಆಶಾವಾದ ಎಂಬ ನಂಬಿಕೆಗೆ ಬಲ ಕೊಟ್ಟಿದೆ.
ನೀವು ತಸ್ಲೀಮಾ ಪ್ರಕರಣವನ್ನು ಇನ್ನೊಂದು ದ್ರಷ್ಟಿ ಕೋಣದಿಂದ ನೋಡಿಲ್ಲವೆಂದು ಕಾಣುತ್ತದೆ. ಈ ಘಟಣೆ ಮಾರನೇ ದಿನ ಎಲ್ಲಾ ಪತ್ರಿಕೆಯ ಮುಖ ಪುಟದಲ್ಲಿ ಕಾಣಿಸಿತು. ಮಹಿಳೆಯ ಬಗ್ಗೆ ನಡೆದ ಒಂದು ಸಣ್ಣ ಘಟನೆ ಎಂದು ಪರಿಗಣಿಸದೆ ಪತ್ರಕರ್ತರು ಹಾಗು ಪತ್ರಿಕೆಗಳು ಇದನ್ನು ಮುಖ್ಯ ಸಂಗತಿ ಎಂದೇ ತಿಳಿದು ಖಂಡಿಸಿದವು. ಅಲ್ಲದೆ, ತಸ್ಲೀಮಾನವರ ರಕ್ಷಣೆ ನಿಂತವರು ಯಾರು? ಅಲ್ಲಿದ್ದ ಪುರುಷ ಪತ್ರಕರ್ತರಲ್ಲವೇ? ದ್ರೌಪದಿಯ ಸೀರೆಯನ್ನೇಳೆವಾಗ ಅಲ್ಲಿದ್ದ ಮಹಾರಥಿಗಳೆಲ್ಲಾ ಅವಳ ಸಹಾಯಕ್ಕೆ ಬಂದರೇ?
ತಸ್ಲೀಮಾ ಬಗ್ಗೆ ಹೇಳಬೇಕೆಂದರೆ ಅವರು ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲದ ಮುಸ್ಲಿಮ್ ಜನಾಂಗಕ್ಕೆ ಸೇರಿದವರಾದರೂ ಧೈರ್ಯದಿಂದ ತಮಗೆ ಅನಿಸಿದನ್ನು ಬರೆದು ಪ್ರಕಟಿಸುವ ಎದೆಗಾರಿಕೆಯನ್ನು ತೋರಿಸುವವರು. ಇಂತವರು ಎಲ್ಲಾ ಮಹಿಳೆಯರಿಗೆ ಮಾದರಿಯಲ್ಲವೇ?
ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.
ದ್ರೌಪದಿ ಐದು ಪತಿಗಳನ್ನು ಮದುವೆ ಮಾಡಿಕೊಳ್ಳಬಹುದಿತ್ತು. ಕೃಷ್ಣಾ ರುಕ್ಮಿಣಿಯನ್ನು ಕದ್ದು ಒಯ್ಯ ಬಹುದಿತ್ತು. ಅರ್ಜುನ ಸ೦ನ್ಯಾಸದ ನ೦ತರವೂ ಕದ್ದು ಸುಭದ್ರ ವಿವಾಹ ವಾಗಬಹುದಿತ್ತು.
ಅ೦ದರೆ ಆಗ ಗ೦ಡು ಹೆಣ್ಣಿನ ಸ೦ಗಮಕ್ಕೆ ವೀರತ್ತ್ವದ ಆವಶ್ಯಕತೆಯಿತ್ತು.
ಅಲ್ಲಿ ಬರುವ ಪಾತ್ರಗಳಲ್ಲಿ ಆತ್ಮ ಶಕ್ತಿಯಿತ್ತು.
ಈಗ ಗ೦ಡು ಹೆಣ್ಣಿನ ಸ೦ಗಮಕ್ಕೆ ಕಾಲವೂ ಇಲ್ಲಾ .. ಅವಕಾಶ ಮಾತ್ರವಿದೆ.
ಎಲ್ಲಾ ಅವಸರದಲ್ಲಿ ಜಾರಿ ಹೋಗ್ತಾರೆ.
ಉ: ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.
ನಮಸ್ತೆ ಮುರಲಿಹರ್!,
ಎಲ್ಲಿದ್ದಿರಿ ಮಹಾರಯರೇ ನೀವು? ಆಗ ಬರುವ ಪಾತ್ರಗಳಿಗೆ ಹೇಗೆ ಆತ್ಮ ಶಕ್ತಿಯಿತ್ತೋ ಈಗಲು ಹಾಗೆಯೇ ಇದೆ. ಆದರೆ ಅದರ ಅರಿವಿಲ್ಲವಷ್ಟೇ! ಈಗಲೂ ೫ ಅಲ್ಲ ೧೦ ಮದುವೆ ಮಾಡಿಕೊಳ್ಳುತ್ತಾರೆ, ಆದರೆ ಅದನ್ನು ನಿಭಾಯಿಸುವ ಶಕ್ತಿಯಿಲ್ಲವಷ್ಟೇ! ಎದ್ದೇಳಿರಿ,ಎಚ್ಚರಗೊಳ್ಳಿರಿ, ಈಗಲೂ ಸನ್ಯಾಸಿಗಳು ಮದುವೆಯಾಗುವುದಿಲ್ಲವಾ? ಕೃಷ್ಣನಂತೆ ಪ್ರೇಮಿಗಳು ತಮ್ಮ ಪ್ರೇಯಸಿಯರನ್ನು ಕದ್ದು ಒಯ್ಯುತ್ತಾರೆ, ಆದರೆ ಕಲಿಯುಗದ ರಾವಣ, ದುರ್ಯೋಧನ, ಧುಶ್ಯಾಸನರು ಅವರನ್ನು ನೆಮ್ಮದಿಯಾಗಿಗಿರಲು ಬಿಡುವುದಿಲ್ಲ. ಕಾಲವೇನು ಬದಲಾಗಿಲ್ಲ ಹೆಸರು ಮಾತ್ರ ಬದಲಾಗಿದೆಯಷ್ಟೇ!
ಶೀಲಾ