ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › KumaSwamy Kadakolla ರವರ ಬ್ಲಾಗ್

** ಬಂತು ಬಂತು ಚುನಾವಣೆ **

April 16, 2008 - 1:43pm — KumaSwamy Kadakolla

** ಬಂತು ಬಂತು ಚುನಾವಣೆ **

ಬಂತು ಬಂತು ನೋಡು ಚುನಾವಣೆ
ಮಿಂಡ ಪುಂಡ ಪೋಕರಿಗಳ ಚಲಾವಣೆ
ತುಂಬಿ ತುಳಿಕಿದ್ದರು ಊರಲ್ಲಿ ಬವಣೆ
ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ

ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ
ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು
ತಿಂದು ಅಂಡೆಲೆದು ಕಾಲ ಕಳೆಯುವ
ಮೈಗಳ್ಳನಿಗೂ ಹೆಂಡದ ತೀರ್ಥ ಬಂತು

ಕಂಡ ಕಂಡ ಅಬಲೆ ಹೆಣ್ಣುಗಳ ಸೆರಗಲ್ಲಿ
ಇಣುಕಿದ ಲಜ್ಜೆಗೆಟ್ಟ ಕಚ್ಚೆ ಅರುಕರು
ಚುನಾವಣೆಯ ಸ್ಪರ್ಧೆಯಲಿ ಸೆಣಸಲು
ಸಜ್ಜಾಗಿ ಬರುವರು ನೋಟು ಕೊಟ್ಟು ಓಟುಕೇಳಲು

ಬಿದ್ದುಹೋಗಿರುವ ಗುಡಿ ಗೋಪುರಗಳು
ಉದ್ದಾರಮಾಡುವ ಹೆಡ್ಡರ ಮಾತುಗಳಿಗೆದ್ದು
ಆಪಕ್ಷ ಈಪಕ್ಷ ನೂರಾರು ಪಕ್ಷಗಳಗೆ
ಪಕ್ಷಾಂತರ ಗೊಳ್ಳುವ ಅವಾಂತದಲಿ ಸಿಲುಕುವವು

ಮಲಗಿ ಮರೆಯಾಗಿದ್ದ ತಮ್ಮೊಳಗಿನ
ವೈಮನಸ್ಸು ಪಾರ್ಟಿಗಳ ಪ್ರೇರಣೆಗೆ
ಹೊಸ ಚೇತನ ಪಡೆದು ಚಿಗಿಯುವವು
ಮನಸ್ಸುಗಳ ನಡುವಿನ ಸೇತುವೆ ಮುರಿದು ಬೀಳುವವು

ಬೀದಿದೀಪಗಳಿಲ್ಲದೆ ಕತ್ತಲಲ್ಲಿ ಮರುಗಿದ್ದ
ಬೀದಿಕಂಬಗಳು ಮೂರು ದಿವಾದರು
ದೀಪದಲಿ ಬೀಗುತ್ತ ಬೆಳಗಿ ಮೆರೆಯುವವು
ಹರಡಿದ ಹೊನಲಿನಲಿ ಪಕ್ಷರಾಜಕಿಯ ನಡೆಯುವುದು

ಮೂಲೆಗುಂಪಾದ ದೀನ ಬಡಬಗ್ಗರಿಗೆ
ನೂರು ಬರವಸೆಗಳ ಸುಳ್ಳು ಆಸ್ವಾಸನೆಗಳು
ನಾವು ಅವರಂತಲ್ಲ ಲಂಚ ಹಗರಣ ನಮ್ಮಲ್ಲಿಲ್ಲ
ಒಮ್ಮೆ ಓಟುಕೊಟ್ಟು ನೋಡಿ ಎಂದೇಳುವರು

ಎಂದೂ ನಮ್ಮಕಡೆ ಮೂಸದ, ಹೆಣ್ಣು ಹೆಂಡ ಪಿಪಾಯಿಗಳು
ಶಂಡತನದಿ ಬಂದು ಕೈಯ ಕಾಲು ಹಿಡಿವರು
ಅಪ್ಪ ಅವ್ವ ಅಣ್ಣ ತಮ್ಮ ನೀವೆಲ್ಲ ನಮ್ಮವರು
ಎಂದು ಬೊಬ್ಬೆ ಇಟ್ಟು ಅರಚಿ ಕಿರುಚುವರು

ಊರಲ್ಲಿ ನೀರಿಲ್ಲದಿದ್ದರು ಹೆಂಡ ಸಾರಾಯಿ
ಬ್ರಾಂದಿಯ ಹೊಳೆ ಹರಿದು ಬರುವುದು
ಬಸ್ಸುಗಳೇ ಕಾಣದ ಊರದಾರಿಗಳಲ್ಲಿ ಮೂರುದಿನ
ಜೀಪು ಕಾರು ಗಾಡಿಗಳದೇ ಕಾರುಬಾರು

  • ನನ್ನ ಕವನ
~.~
  • KumaSwamy Kadakolla ರವರ ಬ್ಲಾಗ್
  • Login or register to post comments
  • 365 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 16, 2008 - 10:53pm — thewiseant

ಉ: ** ಬಂತು ಬಂತು ಚುನಾವಣೆ **

thewiseant's picture

ನಿಮ್ಮ ಕವನ ಚೆನ್ನಾಗಿದೆ. ಬಹಳ ಹಿಂದೆ ಬೇಂದ್ರೆಯವರ ಶ್ರಾವಣ ಬಂತು ಕವನದ ಧಾಟಿಯಲ್ಲಿ ಇದೇ ರೀತಿಯ ಒಂದು ಅಣಕು ಕವಿತೆಯನ್ನು ಓದಿದ್ದೆ. ಪ್ರಜಾಪ್ರಭುತ್ವ ನಮಗೆ ಅನಿವಾರ್ಯ. ಕಪಟ, ಮೋಸ ವಂಚನೆ, ಸ್ವಾರ್ಥ ಇವೆಲ್ಲಾ ಸಮಾಜದ ಎಲ್ಲಾ ರಂಗಗಳಲ್ಲೂ ಇದ್ದದ್ದೇ. ಆದರೆ ರಾಜಕಿಯದಲ್ಲಿ ಇದು ಅತಿಯಾಗಿದೆ. ಪ್ರತಿಯೊಬ್ಬರೂ (ನಾನೂ ನೀವು ಎಲ್ಲಾ ಸೇರಿ) ಈ ಅನಿಷ್ಟವನ್ನು ತೊಡೆಯಲು ನಮ್ಮ ಶಕ್ತಿಯಿದ್ದಷ್ಟು ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬರಲಿರುವ ಚುನಾವಣೆಗಳಲ್ಲಿ ಉತ್ತಮ ಅಭ್ಯರ್ಥಿ ದೊರೆಯದಿದ್ದ ಪಕ್ಷದಲ್ಲಿ ಕಡಿಮೆ ಬ್ರಷ್ಟರಿಗೆ ಓಟು ಹಾಕೋಣ. ಪ್ರಜಾಪ್ರಭುತ್ವದಲ್ಲಿ ಮತದಾರರಿಗಿರುವ ಹಕ್ಕನ್ನು ವಿವೇಕಯುತವಾಗಿ ಉಪಯೋಗಿಸೋಣ. ನಿಮ್ಮ ಈ ಕವಿತೆ ಓದುಗರಲ್ಲಿ ವಿಚಾರಶೀಲತೆಯನ್ನು ಬೆಳಸಲಿ.

ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 9:43am — kadakolla05

ಉ: ** ಬಂತು ಬಂತು ಚುನಾವಣೆ **

kadakolla05's picture

ನಿಮ್ಮಅನಿಸಿಕೆಗೆ ತುಂಬಾ ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರಾವಣ ಬಂತು
  • ಬಂತು ನೋಡಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ
  • ಜನಪದ ಲೆಕ್ಕ
  • ಇಳೆಗಿಳಿದ ಮುಂಗಾರಿನ ಮೊದಲ ಮಳೆ
  • ಹಳೇ ಗಾದೆಗಳು :
Syndicate content

ಲೇಖಕರು

KumaSwamy Kadakolla's picture

ಪೂರ್ಣ ಹೆಸರು
ಕುಮಾರಸ್ವಾಮಿ ಕಡಾಕೊಳ್ಳ

ಪರಿಚಯ

I am Kumar Swamy from Kadakolla in bellary dist. I completed my Engg Padhavi(Graduation).I am very much interested in interacting with kannada people.I came to Knew about Sampada by my Geleya (friend).I like karnatika Sangeeta, Kannda Pustaka Like Mukajji Kanasu,durgastamana,Jalagara,
Nakutanthi And So.on... I am very much interest about making a friends.my hobby is collecting and reading books,listening Bhavageete,Sangeeta etc..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 125 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator