ಶ್ರೀನಿವಾಸ ಕಲ್ಯಾಣ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.
ಶ್ರೀನಿವಾಸ ಕಲ್ಯಾಣ ನಡೆಸುವುದು ಸಂತೋಷದ ವಿಚಾರವೇ. ಅನ್ನಮಯ್ಯರ ಕೀರ್ತನೆಗಳ ಜೊತೆಗೆ ಪುರಂಧರ/ಕನಕ ದಾಸರು ರಚಿಸಿರುವ ಕನ್ನಡ ಹಾಡುಗಳನ್ನೂ ಹಾಡಿಸಬಹುದಲ್ಲವೇ?

- madhava_hs ರವರ ಬ್ಲಾಗ್
- Login or register to post comments
- 359 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಶ್ರೀನಿವಾಸ ಕಲ್ಯಾಣ
ಈ ಹಿಂದೆ ಸಂಪದದಲ್ಲಿ ನಾನು ಹಾಸನದಲ್ಲಿ ನೋಡಿ ಆನಂದಿಸಿದ ಶ್ರೀನಿವಾಸ ಕಲ್ಯಾಣ ವೇದಿಕಾ ಪ್ರದರ್ಶನದ ಬಗ್ಗೆ ಬರೆದಿದ್ದೆ. ಒಂದು ಫೋಟೋವನ್ನು ಕೂಡ ಹಾಕಿದ್ದೆ. ಆಸಕ್ತರು ನೋಡಬಹುದು. ಈ ಪ್ರದರ್ಶನದ ಕಾಲದಲ್ಲಿ ಕನ್ನಡದ ದಾಸರ ಪದಗಳೇ ಹೆಚ್ಚಾಗಿದ್ದು, ಸಂದರ್ಭಕ್ಕೆ ತಕ್ಕಂತ ಕೀರ್ತನೆಗಳನ್ನು ಅಳವಡಿಸಿ ಸುಶ್ರಾವ್ಯವಾಗಿ ಹಾಡಿ ನೋಡುಗರನ್ನು ರಂಜಿಸಿದರು. ಪ್ರದರ್ಶನ ಕಾಲದಲ್ಲಿ ತಿಳಿದು ಬಂದೆದ್ದಂದರೆ ಯಾವ ರಾಜ್ಯದಲ್ಲಿ ಪ್ರದರ್ಶನ ನಡೆಯುತ್ತದೋ, ಆ ರಾಜ್ಯದ ಭಾಷೆಯ ದಾಸರ ಪದಗಳನ್ನೇ ಪ್ರದರ್ಶನದಲ್ಲಿ ಅಳವಡಿಸಲಾಗಿರುತ್ತದೆ ಎಂಬುದು. ಎಂತಹ ಉದಾತ್ತ ಮನೋಭಾವ ಅಲ್ಲವೇ?
ಉ: ಶ್ರೀನಿವಾಸ ಕಲ್ಯಾಣ
ನಿಮಗೆ ಸಿಗಬಹುದಾದ ಉತ್ತರಗಳು. ನನಗಂತು ಇವುಗಳಲ್ಲಿ ಕೆಲವನ್ನು ಕೇಳೀ ಕೇಳೀ ಸಾಕಾಗಿದೆ.
೧. ಸಂಗೀತಕ್ಕೆ ಭಾಷೆಯ ಹಂಗಿಲ್ಲ.
೨. ಭಕ್ತಿ ಮುಖ್ಯ, ಭಾಷೆ ಯಾವ್ದಾದ್ರೇನು.
೩. ಭಾಷೆಯನ್ನು ಮೀರಿದ ಸಂಗೀತವನ್ನ ಗೌರವಿಸಪ್ಪಾ.
೪. ಕೇಳೋ ಹಾಗಿದ್ರೆ ಕೇಳು, ಇಲ್ಲಾ ಎದ್ಹೋಗು, ತಲೆಯೆಲ್ಲ ಹರಟಬೇಡ.
ಭಕ್ತಿಯ ಉತ್ಕಟೆಯಲ್ಲಿ ಸಾಂಸ್ಕೃತಿಕವಾಗಿ ಹಾಗು ಸಾಮಾಜಿಕವಾಗಿ ಸಾಧಿಸಬೇಕಾದ ಎಷ್ಟೋ ಅಂಶಗಳು ಮೂಲೆಗೆ ಸರಿಸುತ್ತಿದ್ದೇವೆ (*).
೧ ಹೊಯ್ಸಳ, ಚಾಲುಕ್ಯ ಶೈಲಿಯ ಶಿಲ್ಪಕಲೆಯನ್ನು ತಂಜಾವೂರಿನ ಶೈಲಿಯು, ಭಕ್ತಿಯ ಮುಸುಕು ಹಾಕಿಕೊಂಡು ಕರ್ನಾಟಕದ ದೇವಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು.
೨. ಪುರಂದರರ/ಕನಕದಾಸರ/ವಿಜಯದಾಸರ/ಕರ್ನಾಟಕದ ದಾಸರ ಬದಲಾಗಿ ಅನ್ನಮಯ್ಯರ ಕೀರ್ತನೆಗಳನ್ನು(**) ಹಾಡುವುದು ಒಂದು ಕಡೆಯಾದರೆ, ಸಂಗೀತ ಕಚೇರಿಗೆ ಹೋದರೆ ಬರೀ ತೆಲಗು ಗೀತೆಗಳನ್ನೇ ಹಾಡಿಸೀ ಹಾಡಿಸೀ, ಕೇಳಿಸೀ ಕೇಳಿಸೀ, ಭಕ್ತಿಯ ಹೆಸರಿನಲ್ಲಿ ಕರ್ನಾಟಕ ಶಾಸ್ತೀಯ ಸಂಗೀತವೆಂದರೆ, ತೆಲಗು ಹಾಡುಗಳೆನ್ನುವಂತೆ ಮಾಡುವುದು.
೩. ಇದರಿಂದ ಬೇಸತ್ತು, ಕನ್ನಡಿಗರು ಶಾಸ್ತ್ರೀಯ ಸಂಗೀತದ ಕವಲೊಡೆದಂತಿರುವ ಸುಗಮಸಂಗೀತದೆಡೆಗೆ ಹೆಚ್ಚು ಒಲವು ತೋರಿದರೆ, "ಕನ್ನಡಿಗರಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಕಡಿಮೆ" ಎಂದುಕೊಳ್ಳುವುದು.
೪. ಇವಷ್ಟೇ ಆಲ್ಲದೆ, ಚರ್ಚುಗಳಲ್ಲಿ ಕನ್ನಡದ ಹಾಡುಗಳಿಗೆ ಬದಲಾಗಿ, ಭಕ್ತಿಯ ಹೆಸರಿನಲ್ಲಿ ಇಂಗ್ಲೀಷ್/ತಮಿಳು/ಮಲಯಾಳಂ ಪ್ರಾರ್ಥನೆಗಳನ್ನು ಹಾಡಿಸುವುದು.
೫. ಸಾಯಿಬಾಬಾ ಮಂದಿರಗಳಲ್ಲಿ ಹಿಂದಿ ಭಜನೆಗಳನ್ನು ಏರ್ಪಡಿಸುವುದು. ಆ ಹಿಂದಿ ಭಜನೆಗಳನ್ನೂ ಕನ್ನಡದವರಲ್ಲದ ಗಾಯಕರುಗಳಿಂದ ಹಾಡಿಸುವುದು.
ಇಂತಹ ವಿಷಯಗಳು "ಆಸ್ತಿಕ, ನಾಸ್ತಿಕ" ಹಿನ್ನೆಲೆಯಲ್ಲಿಯೇ ಚರ್ಚೆಗೈಯಲ್ಪಡುವುದರಿಂದ, ಅದಕ್ಕೆ ಹೆಚ್ಚಿನ ಜನರ ಬೆಂಬಲವೂ ಇಲ್ಲದೆ ಹೋಗುತ್ತದೆ. "ಒಟ್ನಲ್ಲಿ ಕನ್ನಡತನ ಬೇಡ, ಆದರೆ ತಮ್ಮವರ ಹಾಗು ತಮ್ಮ ದೇವರುಗಳ ಸೇಫ್ಟಿ, ಆ ದೇವರುಗಳ ಮೇಲೆ ಕನ್ನಡದವರ ಭಕ್ತಿ, ದುಡ್ಡು ಎಲ್ಲ ಬೇಕು"
ಇಂತಹವುಗಳನ್ನು ಅನಕೃ ಅವರು ವಿರೋಧಿಸಿದ್ದರ ಬಗ್ಗೆ ಬರಹ.ಕಾಮಿನಲ್ಲಿ ಒಳ್ಳೆಯ ಬರಹವಿದೆ.
* - ಇಲ್ಲಿ ಭಕ್ತಿಮಾರ್ಗಿಗಳನ್ನು ನಾನು ಅಣಕವಾಡುತ್ತಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಕರ್ನಾಟಕದ ಸಂಸ್ಕೃತಿಯ ಮೇಲೆ ಭಕ್ತಿಯ ಹೆಸರಿನಲ್ಲಿ ಹಿಂಬಾಗಿಲಿನಿಂದ ಆಗುತ್ತಿರುವ ಹೇರಿಕೆಯನ್ನು ಪ್ರಸ್ತಾಪಿಸಿದ್ದೇನಷ್ಟೇ.
** - ಇಲ್ಲಿ ಅನ್ನಮಯ್ಯರ ಪ್ರಸ್ತಾಪ ಸಾಂದರ್ಭಿಕವಷ್ಟೇ. ಕರ್ನಾಟಕದ ದಾಸರಿಗೆ ಎಷ್ಟು ಗೌರವ ಸಲ್ಲುತ್ತದೆಯೋ ಬೇರೆಯವರಿಗೂ ಅಷ್ಟೇ ಗೌರವ ಸಲ್ಲುತ್ತದೆ. ಆದ್ದರಿಂದ ಇದನ್ನು ಭಾಷೆ/ಭಕ್ತಿ ಮಾರ್ಗವನ್ನು ವಿರೋಧಿಸುವ ಕಾಮೆಂಟ್ ಎಂದು ಭಾವಿಸಬೇಡಿ.
ಉ: ಶ್ರೀನಿವಾಸ ಕಲ್ಯಾಣ
ಸುನಿಲ್ ಅವರ ಟಿಪ್ಪಣಿಗೆ ಒಂದು ಮರು ಟಿಪ್ಪಣಿ ಹಾಕಬೇಕೆನಿಸಿತು. ನನಗೆ ಸರಿಯಾಗಿ quote ಮಾರ್ಕ್ ಹಾಕಲು ಆಗದೆ, ಹಾಗೇ ಅವರ ಟಿಪ್ಪಣಿಯಿಂದಲೇ ಸ್ವಲ್ಪ ಕತ್ತರಿಸಿ ಅಂಟಿಸುತ್ತಿದ್ದೇನೆ
>>>
>>> ೧. ಸಂಗೀತಕ್ಕೆ ಭಾಷೆಯ ಹಂಗಿಲ್ಲ.
>>>
ಇದು ಕೆಲವರಿಗೆ ನಿಜವಿರಬಹುದು. ಎಲ್ಲರಿಗೂ ಇಲ್ಲದಿರಬಹುದು. ಇದು ಅವರು ಬೆಳೆದು ಬಂದ ವಾತಾವರಣ, ಸಂಗೀತದಲ್ಲಿರುವ ಹಿನ್ನಲೆ, ಮೊದಲಾದುವುಗಳಿಂದ ನಿರ್ಧರಿತವಾಗುತ್ತೆ. ಮತ್ತೆ, ಇದೊಂದು ಬೆಳೆಸಿಕೊಳ್ಳಬಹುದಾದ ಆಸಕ್ತಿ. ಉದಾಹರಣೆಗೆ, ಭಾಷೆಯೂ. ಪದಗಳೂ ಇರದ ವಾದ್ಯ ಸಂಗೀತವನ್ನೂ ನಾವು ಇಷ್ಟಪಡಬಹುದಲ್ಲವೇ? ಹಾಗೆ. ಒಟ್ಟಿನಲ್ಲಿ, ಎಲ್ಲರಿಗೂ ಒಂದೇ ಮಾರು ಹಾಕಲು ಆಗದು ( One size does not fit all - ನ ಕನ್ನಡ ಭಾವಾನುವಾದ ಹೇಗಿದೆ
? )
>>>
>>> ೨. ಭಕ್ತಿ ಮುಖ್ಯ, ಭಾಷೆ ಯಾವ್ದಾದ್ರೇನು.
>>>
ಮುಕ್ಕಾಲು ಪಾಲು ಭಕ್ತಿಯೇ ಹೆಚ್ಚಾಗಿದ್ದವರಿಗೆ, ಅಲ್ಲಿ ಹಾಡುವ ಅಗತ್ಯವೂ ಇರದು
ಬಹುಶಃ ಮಂತ್ರ ಪಠನೆಯೋ, ಧ್ಯಾನವೋ ಯಾವುದಾದರೂ ಸಾಕಾಗಬಹುದು!
>>>
>>> ೩. ಭಾಷೆಯನ್ನು ಮೀರಿದ ಸಂಗೀತವನ್ನ ಗೌರವಿಸಪ್ಪಾ.
>>>
ನಿಜವಾಗಿ ಹಾಡುವವರ quality ಅದಕ್ಕೆ ತಕ್ಕದಾಗಿದ್ದರೆ, ಗೌರವಿಸೋಣ - ಆದರೆ, ಅದು ಎಲ್ಲಾ ಸಮಯದಲ್ಲೂ ಎಲ್ಲಿರುತ್ತೆ?
>>>
>>> ೪. ಕೇಳೋ ಹಾಗಿದ್ರೆ ಕೇಳು, ಇಲ್ಲಾ ಎದ್ಹೋಗು, ತಲೆಯೆಲ್ಲ ಹರಟಬೇಡ.
>>>
ಹ್ಹ ಹ್ಹ - ಇಂತ ಅಸಂಬದ್ಧವಾಗಿ ಯಾರಾದ್ರು ಹೇಳಿದ್ರೆ ಅವರ ಮಾತನ್ನು ಲೆಕ್ಕಕ್ಕಿಟ್ಕೋಬೇಡಿ!
>>>
>>> ೨. ಪುರಂದರರ/ಕನಕದಾಸರ/ವಿಜಯದಾಸರ/ಕರ್ನಾಟಕದ ದಾಸರ ಬದಲಾಗಿ ಅನ್ನಮಯ್ಯರ ಕೀರ್ತನೆಗಳನ್ನು(**) ಹಾಡುವುದು ಒಂದು ಕಡೆಯಾದರೆ, >>> ಸಂಗೀತ ಕಚೇರಿಗೆ ಹೋದರೆ ಬರೀ ತೆಲಗು ಗೀತೆಗಳನ್ನೇ ಹಾಡಿಸೀ ಹಾಡಿಸೀ, ಕೇಳಿಸೀ ಕೇಳಿಸೀ, ಭಕ್ತಿಯ ಹೆಸರಿನಲ್ಲಿ ಕರ್ನಾಟಕ ಶಾಸ್ತೀಯ
>>> ಸಂಗೀತವೆಂದರೆ, ತೆಲಗು ಹಾಡುಗಳೆನ್ನುವಂತೆ ಮಾಡುವುದು.
>>>
ಇದಕ್ಕೆ ಒಂದು ಮುಕ್ಯ ಕಾರಣವೇನೆಂದರೆ ಹರಿದಾಸರ ಮೂಲ ಮಟ್ಟುಗಳು ಮಾಯವಾಗಿರುವುದು. ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ ಹಾಗೇ ಸುಮಾರಾದ ಮಟ್ಟುಗಳನ್ನು ಹಾಕಿದರೆ, ಆ ರಚನೆಗಳು ತೂಕವಾಗಿರುವುದಿಲ್ಲ ಎನ್ನುವುದು ನಿಜ. ಅಂತಹ ತೂಕವಾದ ಮಟ್ಟುಗಳನ್ನು ಹಾಕುವುದು ದೊಡ್ಡ ಕೆಲಸವೇ - ಅದನ್ನು ಹಲವಾರು ಸಂಗೀತಗಾರರು ಮಾಡಿಯೂ ಇದ್ದಾರೆ (ಅವರಲ್ಲಿ ಕೆಲವರು ಕನ್ನಡದವರೂ ಅಲ್ಲ ಅನ್ನೋದನ್ನ ಮರೆಯೋದು ಬೇಡ). ಆದರೆ ಇದೇ ತೊಂದರೆ ಅನ್ನಮಯ್ಯ, ರಾಮದಾಸ ಮೊದಲಾದವರ ತೆಲುಗು ರಚನೆಗಳಿಗೂ ಇದೆ.
ಈಗ ಹೆಚ್ಚಿನ ರಚನೆಗಳು ತೆಲುಗಿನಲ್ಲಿರುವುದಕ್ಕೆ ಚಾರಿತ್ರಿಕ ಕಾರಣಗಳಿವೆ - ಅದೇ ರೀತಿ ೧೮ನೇ ಶತಮಾನದಲ್ಲಿ ಬಹಳಷ್ಟು ಸಂಗೀತ ರಚನೆಗಳು ಕನ್ನಡದಲ್ಲಿದ್ದು, ಅವು ಕನ್ನಡನಾಡಿನ ಹೊರಗೂ ಪ್ರಚಾರದಲ್ಲಿದ್ದವು ಎಂದು ಹೇಳಲು ಗಟ್ಟಿ ಆಧಾರಗಳಿವೆ.
ಇನ್ನು ಕರ್ನಾಟಕ ಸಂಗೀತದಲ್ಲಿ ಭಕ್ತಿಪ್ರಧಾನವಾದ ರಚನೆ ಹೆಚ್ಚಾದರೂ - ಹೆಚ್ಚಿನ ರಸಿಕರು ಅದರಲ್ಲಿರುವ ಸಂಗೀತ ರಸವನ್ನು ಸವಿಯುವುದಕ್ಕೆ ಹೋಗುತ್ತಾರೆ ಎನ್ನುವುದು ನನ್ನ ಅನಿಸಿಕೆ. ಏಕೆಂದರೆ, ಕೆಲವು ರಚನೆಗಳ ಸಾಹಿತ್ಯವಂತೂ ತೀರಾ insignificant ಅನ್ನೋ ರೀತಿಯಲ್ಲಿರುತ್ತೆ. ಮನೋಧರ್ಮ ಸಂಗೀತದಲ್ಲಂತೂ ಸಾಹಿತ್ಯದ ಅಂಶ ಕಡಿಮೆಯೇ.
ಮನೋಧರ್ಮ ಸಂಗೀತದಲ್ಲಿ ಕನ್ನಡ ಸಂಗೀತಗಾರರು ಒಂದು ವಿಧದಲ್ಲಿ ಬದಲಾಗಬಹುದು - ಪಲ್ಲವಿ ಹಾಡುವಾಗ, ಸಾಹಿತ್ಯ ಗೌಣವಾದರೂ, ಏನಾದರೂ ಪದಗಳು ಇದ್ದೇ ಇರುತ್ತವೆ. ಅಂತಹ ಕಡೆಯಲ್ಲಿ, ಕನ್ನಡದ ಸಾಲುಗಳನ್ನು ಉಪಯೋಗಿಸಿಕೊಂಡೇ ಹಾಡಬಹುದು. ಕೆಲವರು ಅದನ್ನು ಮಾಡುತ್ತಲೂ ಇದ್ದಾರೆ. ಆದರೆ ಇನ್ನೂ ಹೆಚ್ಚಿಗೆ ಮಾಡಬಹುದು , ಮಾಡಬೇಕು.
>>>
>>>೩. ಇದರಿಂದ ಬೇಸತ್ತು, ಕನ್ನಡಿಗರು ಶಾಸ್ತ್ರೀಯ ಸಂಗೀತದ ಕವಲೊಡೆದಂತಿರುವ ಸುಗಮಸಂಗೀತದೆಡೆಗೆ ಹೆಚ್ಚು ಒಲವು ತೋರಿದರೆ, "ಕನ್ನಡಿಗರಗೆ >>>ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಕಡಿಮೆ" ಎಂದುಕೊಳ್ಳುವುದು.
>>>
ಕನ್ನಡಿಗರಿಗೆ ಶಾಸ್ತ್ರೀಯ ಸಂಗೀತದಲ್ಲಿ ಇರಬೇಕಾದಷ್ಟು ಆಸಕ್ತಿ ಕಾಣುತ್ತಿಲ್ಲ ಅನ್ನುವುದು ಬಹಳ ಬೇಸರದ ಸತ್ಯ. ಉದಾಹರಣೆಗೆ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗಂತೂ, ಇಡಿ ಕಾಲೇಜಿನಲ್ಲಿ ಒಂದರಿ ಹಾಕಿ ಸೋಸಿದರೂ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತರು ಸಿಗುತ್ತಿದ್ದುದ್ದು ಕೈಬೆರಳೆಣಿಕೆಯಷ್ಟೇ. ಈಗ ಪರಿಸ್ಥಿತಿ ಬದಲಾಗಿದ್ದರೆ, ನಾನು ನನ್ನ ಅಭಿಪ್ರಾಯ ಬದಲಿಸಿಕೊಳ್ಳಲಿ ತಯಾರು.
ಸುಗಮ ಸಂಗೀತವೂ ಚೆನ್ನ - ಆದರೆ ಅದರಲ್ಲಿರುವಷ್ಟು ಸಾಹಿತ್ಯಕ್ಕೆ ಪ್ರಾಮುಖ್ಯತೆ ಶಾಸ್ತ್ರೀಯ ಸಂಗೀತದಲ್ಲಿಲ್ಲ.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಶ್ರೀನಿವಾಸ ಕಲ್ಯಾಣ
ಹಂಸಾನಂದಿಗಳೇ,
"ಇದಕ್ಕೆ ಒಂದು ಮುಕ್ಯ ಕಾರಣವೇನೆಂದರೆ ಹರಿದಾಸರ ಮೂಲ ಮಟ್ಟುಗಳು ಮಾಯವಾಗಿರುವುದು. ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ ಹಾಗೇ ಸುಮಾರಾದ ಮಟ್ಟುಗಳನ್ನು ಹಾಕಿದರೆ, ಆ ರಚನೆಗಳು ತೂಕವಾಗಿರುವುದಿಲ್ಲ ಎನ್ನುವುದು ನಿಜ. ಅಂತಹ ತೂಕವಾದ ಮಟ್ಟುಗಳನ್ನು ಹಾಕುವುದು ದೊಡ್ಡ ಕೆಲಸವೇ - ಅದನ್ನು ಹಲವಾರು ಸಂಗೀತಗಾರರು ಮಾಡಿಯೂ ಇದ್ದಾರೆ (ಅವರಲ್ಲಿ ಕೆಲವರು ಕನ್ನಡದವರೂ ಅಲ್ಲ ಅನ್ನೋದನ್ನ ಮರೆಯೋದು ಬೇಡ). ಆದರೆ ಇದೇ ತೊಂದರೆ ಅನ್ನಮಯ್ಯ, ರಾಮದಾಸ ಮೊದಲಾದವರ ತೆಲುಗು ರಚನೆಗಳಿಗೂ ಇದೆ."
ದಯವಿಟ್ಟು ಮಟ್ಟು ಅಂದ್ರೆ ಏನು? ತೂಕವಾದ ಮಟ್ಟು ಅಂದ್ರೆ ಏನು? ಯಾವ ಸಂಗೀತಗಾರರು ಹೇಗೆ ಮಾಡಿದ್ದಾರೆ? ಇದನ್ನು ಉದಾಹರಣೆ ಸಮೇತ ವಿವರಿಸುತ್ತೀರ? ಒಂದು ಪ್ರತ್ಯೇಕ ಬ್ಲಾಗ್ ಲೇಖನವಾದರೂ ಸರಿ, ದಯವಿಟ್ಟು ಹಾಕಿ. ತೆಲುಗು, ತಮಿಳು ಕೃತಿಗಳನ್ನೇ ಹೆಚ್ಚಾಗಿ ನಾನೂ ಕನಾಟಕ ಸಂಗೀತ ಕಛೇರಿಗಳಲ್ಲಿ ಕೇಳುವುದು, ಮತ್ತು ಸಂಗೀತ ಗುರುಗಳೂ ಹೇಳಿಕೊಡುವುದು.
ಉ: ಶ್ರೀನಿವಾಸ ಕಲ್ಯಾಣ
ಸಂಗೀತಕ್ಕೆ ಭಾಷೆಯ ಹಂಗಿಲ್ಲ ನಿಜ. ಆದರೆ ಹಾಡಿನ ಭಾಷೆಯೇ ಅರ್ಥವಾಗದಿದ್ದ ಮೇಲೆ ಏನು ಪ್ರಯೋಜನ? ಭಾಷೆಯ ಹಂಗಿಲ್ಲ ಎಂದಮೇಲೆ ಸಾಹಿತ್ಯ ಏಕೆ ಬೇಕು? ಕೇವಲ ಆಲಾಪನೆಯಲ್ಲೇ ಸ.ರಿ..ಗ.ಮ.ಪ...ಎಂದು ಮುಗಿಸಬಹುದಲ್ಲ?
ನನಗೆ ’ಕೃಷ್ಣಾ ನೀ ಬೇಗನೇ ಬಾರೋ..’ ಕೇಳಿದಾಗ ಅದನ್ನು ಅರ್ಥೈಸಿಕೊಳ್ಳುವುದರ ಮೂಲಕ ಸಿಗುವ ಭಕ್ತಿ ಇದೆಯಲ್ಲ ಅದು ’ನಗುಮೋಮು..’ ಇಂದ ಸಿಗುವುದಿಲ್ಲ. ಏಕೆಂದರೆ ಅರ್ಥವೇ ಆಗುವುದಿಲ್ಲ. ಅದೇ ಹಾಡನ್ನು ಹಾಡಬೇಕೆಂದರೆ ಕನ್ನಡಕ್ಕೆ ತರ್ಜಮೆ ಮಾಡಿ ಹಾಡಬಹುದಲ್ಲ.