ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಇತ್ತೀಚೆಗೆ ನಾನು ದೇವುಡು ನರಸಿಂಹ ಶಾಸ್ತ್ರಿಯವರು ಬರೆದ ಕೊನೆಯ ಗ್ರಂಥವಾದ ’ಮಹಾ ದರ್ಶನ’ ವನ್ನು ಓದಿದೆ. ದೇವುಡು ರವರ ’ಮಹಾ ಕ್ಷತ್ರಿಯ’ ಕೃತಿಗೆ ೧೯೬೨ ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ’ಮಹಾ ಬ್ರಾಹ್ಮಣ’ ಅವರ ಇನ್ನೊಂದು ಗ್ರಂಥ. ಇವರ ಕೃತಿಗಳಬಗ್ಗೆ ಬಹಳವಾಗಿ ಕೇಳಿದ್ದ ಹಾಗು ಓದಿದ್ದ ನನಗೆ ಯಾವುದಾದರೂ ಕಾದಂಬರಿಗಳನ್ನು ಓದಬೇಕೆಂದು ಬಹಳದಿನದಿಂದ ಅನ್ನಿಸಿತ್ತು.
’ಮಹಾ ದರ್ಶನ’ ಮಹರ್ಷಿ ಯಾಜ್ಞವಲ್ಕ್ಯರ ಜೀವನ ಚರಿತ್ರೆ. ಆ ಕೃತಿಯನ್ನು ಓದುತ್ತಾ ಹೋದಂತೆ ಯಾವುದೋ ಮಾಯಾಲೋಕದೊಳಗೆ ಪಯಣಿಸಿದ ದಿವ್ಯ ಅನುಭವ. ಪ್ರತಿಯೊಂದು ಘಟನೆಯನ್ನೂ ಕಣ್ಣಿಗೆ ಕಟ್ಟುವಂತೆ ಅವರು ವಿವರಿಸುವ ರೀತಿ, ತರ್ಕಬಧ್ದವಾದ ಉಪದೇಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಪ್ರಕೃತಿ ಮನುಷ್ಯನ ಸಂಬಂಧವನ್ನು ಅವರು ಎಳೆ ಎಳೆಯಾಗಿ ವರ್ಣಿಸಿದ್ದಾರಾದರೂ ನಮ್ಮಂಥ ಸಾಮಾನ್ಯರಿಗೆ ಇಂತಹ ಬಹಳ ಕ್ಲಿಷ್ಟ ಸೂಕ್ಷ್ಮಗಳು ಅರ್ಥವಾಗುವುದೇ ಇಲ್ಲ. ಬಹುಶಃ ಅಂಥಹ ಮೇಧಾವಿ ದೇವುಡು ರಂಥವರಿಗೆ ಮಾತ್ರ ಇಂತಹ ರಹಸ್ಯಗಳು ಕಲ್ಪನೆಗೂ ಸಿಕ್ಕಿ ವರ್ಣಿಸಲು ಸಾಧ್ಯವಾಗಿರುವುದು ಎಂದೆನಿಸುತ್ತದೆ.
ಕೆಲವು ಉದಾಹರಣೆಗಳನ್ನೇ ನೋಡಿ. "ಪಾತ್ರೆಯ ಹೊರಗೆ ತೊಳೆಯುವುದು ಮಸಿ ಹೋಗಿಸಲಿಕ್ಕೆ, ಒಳಗೆ ತೊಳೆಯುವುದು ಮುಸುರೆ ಹೋಗಿಸಲಿಕ್ಕೆ, ಶರೀರಕ್ಕೂ ಬಹಳಷ್ಟು ಇದೇ ತರ್ಕ ಅನ್ವಯ" ಇಂತಹ ಸಂಭಾಷಣೆಗಳು ಮಗು ಯಾಜ್ಞವಲ್ಕ್ಯ ಮತ್ತು ಅವನ ತಾಯಿಯ ನಡುವೆ ನಡೆಯುವಂಥವು. ಇನ್ನೊಂದು ಸನ್ನಿವೇಶದಲ್ಲಿ ಯಾಜ್ಞವಲ್ಕ್ಯ ಒಂದು ವರ್ಷದ ಕಾಲ ಒಂದು ವ್ರತಾಚರಣೆಯಲ್ಲಿರುತ್ತಾನೆ. ಈ ಅವಧಿಯಲ್ಲಿ ಕೇವಲ ಒಂದು ಹೊತ್ತಿನ ಆಹಾರ ಅದೂ ಮಿತಾಹಾರದಲ್ಲಿರುತ್ತಾನೆ. ’ಇದು ಹೇಗೆ ಸಾಧ್ಯ ಎಂದು ಅವನ ಪತ್ನಿ ಪ್ರಶ್ನಿಸಿದಾಗ ಅವನು ಉತ್ತರಿಸುವ ರೀತಿ ನಿಜಕ್ಕೂ ಅತ್ಯದ್ಭುತ. ಅಗ್ನಿದೇವತೆಗಳ ಕಲ್ಪನೆ ಮತ್ತು ಮನುಷ್ಯರು ಕೇವಲ ನಿಮಿತ್ತ ಮಾತ್ರ ಎಂದು ಒಂದು ಸನ್ನಿವೇಶದ ಮೂಲಕ ಹೇಳಿದ್ದಾರೆ.
ಈ ಕಾದಂಬರಿಯ ಬಗ್ಗೆ ಅಥವಾ ದೇವುಡುರವರ ಇನ್ಯಾವುದಾದರೂ ಕಾದಂಬರಿಯ ಬಗ್ಗೆ ಅಥವಾ ದೇವುಡು ರವರ ಬಗೆಗೆ ಓದುಗರು ವಿಚಾರಗಳನ್ನು ಹಂಚಿಕೊಳ್ಳಬಹುದು.

- madhava_hs ರವರ ಬ್ಲಾಗ್
- Login or register to post comments
- 483 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಮಾಧವ, ದೇವುಡು ಅವರ ಕೃತಿಗಳ ಬಗ್ಗೆ ತುಂಬಾ ಕೇಳಿರುವೆ. ಡಿ.ಎಲ್.ಐನಲ್ಲಿ ದೇವುಡು ಅವರ ಮಹಾಬ್ರಾಹ್ಮಣ ಕೃತಿ ಇತ್ತು. ಅದನ್ನು ಡೌನ್ಲೋಡ್ ಮಾಡಿಟ್ಟಿದ್ದೆ. ಆದರೆ ಓದಿಗೆ ಹಚ್ಚಿರಲಿಲ್ಲ. ನಿಮ್ಮ ಬರಹವನ್ನೋದಿದ ಮೇಲೆ ಆ ಓದನ್ನು ಮುಂದುವರಿಸುವ ಹಂಬಲ ಮೂಡುತ್ತಿದ್ದೆ. ಸದ್ಯಕ್ಕೆ ರತ್ನಾಕರವರ್ಣಿಯ "ಭರತೇಶ ವೈಭವ" ಎಂಬ ಕಾವ್ಯ ಓದುತ್ತಿದ್ದೇನೆ. ಅದನ್ನು ಓದಿ ಮುಗಿಸಿದ ತಕ್ಷಣ ದೇವುಡು ಅವರ ಒಂದು ಪುಸ್ತಕವನ್ನು ಓದಬೇಕು.
ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಸುನಿಲರೆ,
ನಾನು ಭರತೇಶವೈಭವ ಓದಿದ್ದು ನನ್ನ ಶಾಲಾದಿನಗಳಲ್ಲಿ! ಅದರಲ್ಲಿಯ ಛಂದಸ್ಸು/ಗಣ ಗಳನ್ನು ಗುರುತಿಸಲು ಸಂತಸವಾಗುತ್ತಿತ್ತು. ನನಗಿನ್ನೂ ನೆನಪಿರುವುದೆಂದರೆ:
ತನ್ನ ಅಧಿಕಾರಿಗಳಿಗೆ ತನ್ನ ಶಕ್ತಿಯ ಅರಿವು ಮೂಡಿಸಲು ನಾಟಕವಾಡುವ ಭರತ, ತನ್ನ ಕಿರುಬೆರಳು ಮಡಚಿಕೊಂಡುಬಿಟ್ಟಿದೆಯೆಂದು ಸೋಗುಹಾಕಿ, ಅದಕ್ಕೆ ಸರಪಳಿಯನ್ನು ಕಟ್ಟಿ ಅವರೆಲ್ಲರಿಂದ ಎಳೆಸುತ್ತಾನೆ!
ಆ ಪದ್ಯಭಾಗ ಮರೆತುಹೋಗಿದೆ; ನಿಮಲ್ಲಿದ್ದರೆ ಹಂಚಿಕೊಳ್ಳಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಸುನಿಲರೆ,
ನಾನು ಭರತೇಶವೈಭವ ಓದಿದ್ದು ನನ್ನ ಶಾಲಾದಿನಗಳಲ್ಲಿ! ಅದರಲ್ಲಿಯ ಛಂದಸ್ಸು/ಗಣ ಗಳನ್ನು ಗುರುತಿಸಲು ಸಂತಸವಾಗುತ್ತಿತ್ತು. ನನಗಿನ್ನೂ ನೆನಪಿರುವುದೆಂದರೆ:
ತನ್ನ ಅಧಿಕಾರಿಗಳಿಗೆ ತನ್ನ ಶಕ್ತಿಯ ಅರಿವು ಮೂಡಿಸಲು ನಾಟಕವಾಡುವ ಭರತ, ತನ್ನ ಕಿರುಬೆರಳು ಮಡಚಿಕೊಂಡುಬಿಟ್ಟಿದೆಯೆಂದು ಸೋಗುಹಾಕಿ, ಅದಕ್ಕೆ ಸರಪಳಿಯನ್ನು ಕಟ್ಟಿ ಅವರೆಲ್ಲರಿಂದ ಎಳೆಸುತ್ತಾನೆ!
ಆ ಪದ್ಯಭಾಗ ಮರೆತುಹೋಗಿದೆ; ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಬೆನಕ, ನೀವು ಊಹಿಸಬಹುದಾದ ಹಾಗೆ, ನಾನು ಭರತೇಶ ವೈಭವವನ್ನು ಓದಲು ನೆಗಳ್ಚಿರುವುದು ಕಳೆದ ಕೆಲವು ದಿನಗಳಿಂದಷ್ಟೇ. ಈ "ಸರಪಳಿ-ಪ್ರಕರಣ" ಇನ್ನೂ ಸಿಕ್ಕಿಲ್ಲ. ಅಳವಾಗಿಯೂ(ಖಂಡಿತವಾಗಿಯೂ) ಈ ಸನ್ನಿವೇಶ ಬಂದಾಗ ಎಲ್ಲರೊಡನೆ ಹಂಚಿಕೊಳ್ಳುವೆ. ನನ್ನಲ್ಲಿ ಇದರ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದಿರಿ. ಹಾಂ!! ಒಂದು ಮಾತು, ಈ ಪುಸ್ತಕವನ್ನು ಡಿ.ಎಲ.ಐನಿಂದ ನೇರವಾಗಿ ಓದಬೇಕೆಂದಿದ್ದರೆ ಇಲ್ಲಿ ಎಡತಾಗಿ. ನಾನು ಈ ಪುಸ್ತಕವನ್ನು ಕೊಂಡುದಲ್ಲದೆ, ೧೯ ಭಾಗಗಳಾಗಿ ವಿಂಗಡಿಸಿ ಡೌನ್ಲೋಡ್ ಕೂಡ ಮಾಡಿಟ್ಟಿದ್ದೇನೆ. ಬೇಕಿದ್ದರೆ ಹೇಳಿ ಎಲ್ಲಿಯಾದರೂ ಹೋಸ್ಟ್ ಮಾಡೋಣಂತೆ.
ಉ: ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ
ಬೆನಕರೆ, ನೀವು ಪ್ರಸ್ತಾಪಿಸಿದ್ದ "ಸರಪಳಿ-ಪ್ರಕರಣ" ಸಿಕ್ತು. ಇದು ಬರುವುದು "ಕಟಕ ವಿನೋದ" ಎಂಬ ಸಂಧಿಯಲ್ಲಿ. ಇದರ ಬಗ್ಗೆ ವಿವರವಾಗಿ ಬರೆಯುವ ಹಂಬಲವಿದೆ. ಎದುರು ನೋಡುತ್ತಿರಿ.