ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › madhava_hs ರವರ ಬ್ಲಾಗ್

ಭಾಷೆ ಮತ್ತು ನದಿ

July 16, 2008 - 11:56am — madhava_hs

ಹಿಂದೆ ನದಿ ಪಾತ್ರದಲ್ಲಿ ಜನ ವಾಸಿಸುತ್ತಿದ್ದರು. ಅವರದೇ ಒಂದು ಜನಾಂಗವಾಗುತ್ತಿತ್ತು. ಅವರ ಸಮೂಹ ನಡವಳಿಕೆಗಳು ಕ್ರಮೇಣ ನಾಗರೀಕತೆಗಳಾಗಿ ಸಮಾಜ, ಸಹಕಾರ, ನೀತಿ ಸಂಹಿತೆಗಳು ಆಚಾರಕ್ಕೆ ಬಂದವು ಅಂದುಕೊಳ್ಳೋಣ. ಮಾನವ ಮೊದಮೊದಲು ಎರಡು ಕಲ್ಲನ್ನು ಕುಟ್ಟಿ ಬೆಂಕಿ ಹುಟ್ಟಿಸಿ ನಂತರ ಆಹಾರ ತಯಾರಿಸಲು ಕಲಿತ. ಅದು ಶಿಲಾಯುಗವಾಯ್ತು. ನಾಗರೀಕತೆ ಬೆಳೆಯುತ್ತಾ ಹೋದಂತೆ ಸುಧಾರಣೆಗಳಾಗುತ್ತಾ ಹೋದವು. ಹಾಗೆಯೇ ಮಾನವ ಪ್ರಬುದ್ಧವಾಗುತ್ತಾ ಹೋದ. ಎಲ್ಲೋ ಒಂದು ಕಡೆ ಬೆಟ್ಟದ ಕೊರಕಲಿನಲ್ಲಿ ಹುಟ್ಟಿದ ನದಿಯೂ ಹಾಗೆಯೇ. ಹಲವಾರು ಕಾಡು ಮೇಡು, ಊರು ಕೇರಿ ಬದಿಯಲ್ಲಿ ಹರಿದು ಹತ್ತು ಹಲವು ಮಂದಿಗೆ ನೀರುಣಿಸಿ ಕೆಲವು ಕಡೆ ಪ್ರಶಾಂತವಾಗಿ ಹರಿಯುತ್ತಾ ಕೆಲವು ಕಡೆ ಜಲಪಾತವಾಗಿ ಧುಮುಕುತ್ತಾ ತನಗೆ ದಾರಿ ಸಿಕ್ಕ ಕಡೆ ಸ್ವಾಭಾವಿಕವಾಗಿ ಹರಿಯುತ್ತಾ ಸಮುದ್ರವನ್ನು ಸೇರುತ್ತಾಳೆ. ಹುಟ್ಟಿದ ಮಗುವನ್ನೇ ತೆಗೆದುಕೊಳ್ಳಿ ಮೊದ ಮೊದಲು ಕೈ ಕಣ್ಣು ಸನ್ನೆಯಲ್ಲಿ ತನ್ನದೇ ಆದ ತೊದಲು ನುಡಿಯಲ್ಲಿ ಹೇಳಬೇಕಾದ್ದನ್ನು ಹೇಳುತ್ತಿರುತ್ತದೆ. ಕಾಲಕ್ರಮೇಣ ಅದಕ್ಕೆ ಅವರಿವರು ಮಾತನಾಡುವ ಶಬ್ದಗಳು ಕಿವಿಗೆ ಬಿದ್ದು ಯಾವ ಶಾಲೆಗೆ ಹೋಗುವ ಮೊದಲೇ ಸಲೀಸಾಗಿ ಒಂದು ಭಾಷೆಯನ್ನು ಕಲಿತು ಬಿಟ್ಟಿರುತ್ತದೆ. ಭಾಷೆಯನ್ನೂ ಇದೇ ರೀತಿ ಬೆಳೆದು ಬಂದಿತು ಎನ್ನೋಣವೇ?. ಮೊದಲು ಕೆಲವೇ ಮಂದಿ ಒಂದಷ್ಟು ಪದಗಳನ್ನು ಹುಟ್ಟಿಹಾಕುತ್ತಾರೆ. ಪದಗಳನ್ನು ಕೂಡಿಸುವ ನಿಯಮಗಳನ್ನು ಸೃಷ್ಟಿಸುತ್ತಾರೆ. ಕ್ರಮೇಣ ಅವರ ಸಂಖ್ಯೆ ವೃದ್ಧಿಸುತ್ತದೆ. ಜನರು ಭಾವನೆಗಳು, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಆಗಲೇ ಇರುವ ಪದಗಳು ಸಾಲದಾಗಿ ಕೆಲವು ಹೊಸ ಪದಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಭಾಷೆಯೂ ನದಿಯಂತೆ ಕಾಲಕ್ರಮೇಣ ಹಲವು ಭಾಷೆಯ ಪದಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಹತ್ತು ಹಲವು ಮಾರ್ಪಾಡನ್ನು ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಹೋಗುತ್ತದೆ. ಆದ್ದರಿಂದ ಒಂದು ಭಾಷೆಯನ್ನು ಅದರ ಮೂಲವನ್ನು ಹುಡುಕಿ ಅಲ್ಲಿದ್ದಷ್ಟೇ ಪದಗಳು ನಮಗೆ ಸಾಕು ಎನ್ನುವುದು ಎಷ್ಟು ಸರಿ? ಇದು ಒಂದು ನದಿಯು ಹುಟ್ಟುವ ತಾಣದಲ್ಲಿ ಅಣೆಕಟ್ಟು ಕಟ್ಟಿ ಅಲ್ಲಿಗೇ ನೀರನ್ನು ನಿಲ್ಲಿಸುವಷ್ಟು ಮೂರ್ಖ ತನವಾದೀತು. ಆ ನದಿ ಹರಿಯಲೇಬೇಕು. ಅದು ನಿಯಮ. ಒಂದಲ್ಲಾ ಒಂದು ದಿನ ಕಟ್ಟಿದ ಕಟ್ಟೆಯನ್ನು ಮೀರಿ ಹರಿದು ಸಮುದ್ರ ಸೇರಲೇಬೇಕು. ನಮ್ಮ ಕನ್ನಡದಲ್ಲಿ ಇಂದಿಗೂ ಎಷ್ಟೋ ವಸ್ತುಗಳಿಗೆ ಸ್ವಂತ ಭಾಷೆಯ ಪದಗಳಿಲ್ಲ. ಹೃದಯ, ವರ್ತುಲ, ಜನಾಂಗ ಇತ್ಯಾದಿ ಪದಗಳು ನಮ್ಮ ಭಾಷೆಯವಲ್ಲ. ಅದನ್ನು ಬಳಸಲೇ ಬೇಡಿ. ಅದು ಅಪರಾಧ. ಒಂದು ವೇಳೆ ಬಳಸಲೇಬೇಕೆಂದಿದ್ದರೆ ಅವುಗಳನ್ನು ಕೈಸನ್ನೆ ಮಾಡಿ ತೋರಿಸಿ ಅಥವಾ ಚಿತ್ರ ಬಿಡಿಸಿ ತೋರಿಸಿ ಎಂದಂತಾದೀತು. ಆದ್ದರಿಂದ ಜನರಿಗೆ ಯಾವ ಪದಗಳು ಅನುಕೂಲವೆನಿಸುತ್ತದೋ ಅವರವರಿಗೆ ಬಿಟ್ಟು ಬಿಡುವುದು ಒಳ್ಳೆಯದು. ಅದು ಬಿಟ್ಟು ಆಡುವ ಭಾಷೆಗೂ ನಿಯಮ ಕಟ್ಟಳೆಗಳನ್ನು ತಂದರೆ ಹರಿಯುವ ನೀರಿಗೆ ಅಡ್ಡಕಟ್ಟಿದಂತಾದೀತು.

  • ಚಿಂತನೆ
~.~
  • madhava_hs ರವರ ಬ್ಲಾಗ್
  • Login or register to post comments
  • 234 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 16, 2008 - 1:23pm — girish.rajanal

ಉ: ಭಾಷೆ ಮತ್ತು ನದಿ

girish.rajanal's picture

ಹೃದಯ=ಗುಂಡಿಗೆ,, ವರ್ತುಲ=ಸುತ್ತು, ಜನಾಂಗ=ಪೈಕಿ
ನೀ ಯಾರ್‍ ಪೈಕಿ ಅದೀಪಾ ಸಾಯಬss? ಅಂದ್ರೆ ನೀನು ಯಾರ ಮನೆಯವನು....
ನೀ ಯಾರ್‍ ಪೈಕಿ ಅದೀಪಾ ಸಾಯಬss? ಅಂದ್ರೆ ನೀನು ಯಾವ ಜನಾಂಗದವನು.....
ಕನ್ನೆದಲ್ಲೂ ಒಂದು ಪದಕ್ಕೆ ಹಲವು ಅರ್ಥಗಳಿವೆ..
ಹಂಗ ಇಂಗ್ಲೀಶಲ್ಲಿ rush ಅನ್ನೂ ಪದಕ್ಕೆ ಕನ್ನಡದಲ್ಲಿ ಅರ್ಥ ಹೇಳ್ರಿ ನೋಡುನು....

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 1:24pm — girish.rajanal

ಉ: ಭಾಷೆ ಮತ್ತು ನದಿ

girish.rajanal's picture

ಮೇಲಿನ ನನ್ನಡದಲ್ಲೂ ಪದವನ್ನು ತಿದ್ದಿಕೊಂಡು ಓದುವುದು...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 1:24pm — girish.rajanal

ಉ: ಭಾಷೆ ಮತ್ತು ನದಿ

girish.rajanal's picture

ಮೇಲಿನ ಕನ್ನಡದಲ್ಲೂ ಪದವನ್ನು ತಿದ್ದಿಕೊಂಡು ಓದುವುದು...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 1:46pm — madhava_hs

ಉ: ಭಾಷೆ ಮತ್ತು ನದಿ

madhava_hs's picture

ಪ್ರತಿಕ್ರಿಯೆಗೆ ನನ್ನಿ ಗಿರೀಶರೆ,
’ಗುಂಡಿಗೆ’ ಪದವನ್ನು ಧೈರ್ಯ ಕ್ಕೆ ಪರ್ಯಾಯಕ್ಕೆ ಉಪಯೋಗಿಸುವುದನ್ನು ಕೇಳಿದ್ದೀನಷ್ಟೆ. ’ಹೃದಯದ ಭಾವನೆಗಳು’, ’ಹೃದಯ ಚಿಕಿತ್ಸೆ’ ಇವುಗಳನ್ನು ಕೇಳಿದ್ದೇನೆ..ಇದನ್ನು ’ಗುಂಡಿಗೆ ಭಾವನೆಗಳು’, ’ಗುಂಡಿಗೆ ಚಿಕಿತ್ಸೆ’ ಎಂದು ಕೇಳಿಲ್ಲ. ಇದು ತಪ್ಪಿಲ್ಲದೆಯೂ ಇರಬಹುದು. ನನ್ನ ಅಭಿಮತ ಇಷ್ಟೆ. ’ಗುಂಡಿಗೆ ಭಾವನೆಗಳು’ ಅನ್ನುವವರು ಹಾಗೇ ಬಳಸಲಿ. ’ಹೃದಯದ ಭಾವನೆಗಳು’ ಅನ್ನುವರು ಅದೇ ರೀತಿ ಬಳಸಲಿ. ನಮಗೆ ಅರ್ಥವಾದರೆ ಸಾಕು !! ಇನ್ನು ’ಪೈಕಿ’-ಜನಾಂಗ ಕ್ಕೆ ಸಮಾನಾರ್ಥಕ ಅರ್ಥವನ್ನು ಕೊಡುವುದಿಲ್ಲ ಇಂದು ನನ್ನ ಅನಿಸಿಕೆ. ಹಾಗೆಯೇ ಬಸ್ಸು, ಕಾರು, ಪಿಜ್ಜಾ, ನ್ಯೂಡಲ್(ಶಾವಿಗೆ) ಈ ಪದಗಳೂ ಅಷ್ಟೆ ಅದೇರೀತಿ ಬಳಸಿದರೆ ಚಂದ. ಈ ಪದಗಳೂ ಬೇರೆ ಭಾಷೆಯಿಂದ ಬಂದವೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 2:54pm — Sunil Jayaprakash

ಉ: ಭಾಷೆ ಮತ್ತು ನದಿ

Sunil Jayaprakash's picture

@ಗಿರೀಶ ರಾಜನಾಳ,
rush->ಬಿರುಸು

@ಮಾಧವ,
ಹೃದಯದ ಭಾವನೆಗಳು - ಹೆಸರೇ ಹೇಳುವ ಹಾಗೆ, ಭಾವುಕರಾದಾಗ ಏನು ಬೇಕಾದರೂ ಇರಬಹುದು. ಆದರೆ "ಹೃದಯದ ಚಿಕಿತ್ಸೆ"ಗೆ ವಿಷಯ ಬಂದಾಗ "ಎದೆ" ಅಂತಲೂ ಹೇಳಬಹುದು. "ಎದೆ" ಎಂದರೆ ಬರೀ ಈಗ ನಾವು ತಿಳಿದುಕೊಂಡ ಹಾಗೆ ಬರೀ ಎಲುಬುಗೂಡಲ್ಲ.
"ಪೈಕಿ - ಜನಾಂಗ"ವೆಂಬ ಅರ್ಥ ಕೊಡಲ್ಲ ಅನ್ನೋದು, ನೀವೇ ಹೇಳುವ ಹಾಗೆ ನಿಮ್ಮ ಅನಿಸಿಕೆ. ಅದು ಸಾರ್ವತ್ರಿಕವಲ್ಲ. ನಮ್ಮ ಮನೆಗಳಲ್ಲಿ,
ಅವನು ಯಾರ ಪೈಕಿ ? ಎಂಬ ಪ್ರಶ್ನೆ ಬಂದರೆ
೧. ಅವನು ಯಾರು, ೨. ಅವನ ಜಾತಿ ಯಾವುದು ೩. ಜಾತಿಯ ಒಳಪಂಗಡ ಯಾವುದು ೪. ಧರ್ಮ ಯಾವುದು ೫. ದೇಶ ಯಾವುದು. ೬. ಯಾವ ಭಾಷೆಯವನು...ಇವೆಲ್ಲವುಗಳಿಗೂ ಉತ್ತರವನ್ನು ಬಯಸುತ್ತದೆ. ಹಾಗಾಗಿ ಪೈಕಿ-ಜನಾಂಗ ಎಂಬುದು ಸರಿಯಾದ ಕನ್ನಡ ಪದ ಅಂತ ನನ್ನನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 4:58pm — madhava_hs

ಉ: ಭಾಷೆ ಮತ್ತು ನದಿ

madhava_hs's picture

rush => ನುಗ್ಗುವಿಕೆ ಆಗಬಹುದೇ?

ಪೈಕಿ => "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಸರಿಯೋ "ಕನ್ನಡಿಗರ ಪೈಕಿ ಭಾಷೆ ಕನ್ನಡ ಸರಿಯೋ?"

ಏನೋ ಗೋಜಲು..

ಹಾಗೆಯೇ ನಿಮ್ಮ ಸ್ನೇಹಿತರಿಬ್ಬರನ್ನು ನೀವು ಒಂದು ಸ್ಠಳದಲ್ಲಿ ನೀವು ಭೇಟಿಯಾಗುತ್ತೀರಿ ಎಂದುಕೊಳ್ಳಿ. "ನಿಮ್ಮಲ್ಲಿ ಯಾರು ಮೊದಲು ಬಂದದ್ದು" ಅಥವಾ "ನಿಮ್ಮ ಪೈಕಿ ಯಾರು ಮೊದಲು ಬಂದದ್ದು" ಎನ್ನ ಬಹುದು. ಹಾಗಾದರೆ "ನಿಮ್ಮ ಜನಾಂಗದಲ್ಲಿ ಯಾರು ಮೊದಲು ಬಂದದ್ದು" ಅನ್ನುವುದು ಸರಿಯೇ? ಪೈಕಿ ಎನ್ನುವುದು ಒಂದು sub-set ಆಗಿ ಹೆಚ್ಚು ಅರ್ಥ ನೀಡಬಲ್ಲದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 11:45pm — Sunil Jayaprakash

ಉ: ಭಾಷೆ ಮತ್ತು ನದಿ

Sunil Jayaprakash's picture

ಅಯ್ಯಪ್ಪಾ, ಮಾಧವ, ನನಗೆ ಹೇಗೆ ಹೇಳಬೇಕೋ ಗೊತ್ತಿಲ್ಲ. ಪದಗಳು ಬೇರೆ ಬೇರೆ ಸನ್ನಿವೇಶದಲ್ಲಿ ಬೇರೆ ಬೇರೆ ಅರ್ಥ ಕೊಡತ್ತೆ, ಅನ್ನೋದು ನಿನಗೆ ಗೊತ್ತಿಲ್ವಾ, ನಾನು ಹೊಸದಾಗಿ ಹೇಳಬೇಕಾ.

ಪೈಕಿ => "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಸರಿಯೋ "ಕನ್ನಡಿಗರ ಪೈಕಿ ಭಾಷೆ ಕನ್ನಡ ಸರಿಯೋ?"

ನೋಡು ಮಾಧವ, ನೀನು, ನಾವು ಬಳಸುವ "ಪೈಕಿ" ಪದವನ್ನು ವಿಮರ್ಶೆ ಮಾಡಬೇಕಿದ್ದರೆ, ಕನ್ನಡದ ನೆಲೆಗಟ್ಟಿನಲ್ಲೆ ಹೇಗೆ ಬಳಸುತ್ತಿದ್ದೇವೋ ಅದರ ಮೂಲಕವೇ ಮಾಡಬೇಕು. "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಅಂತ ಯಾರೂ ಹೇಳೋದೇ ಇಲ್ಲ, ನಾವು ಹೇಳೋದು "ಕನ್ನಡಿಗರ ಭಾಷೆ ಕನ್ನಡ", ಇಲ್ಲಿ ಜನಾಂಗ ಎಂಬ ಪದವನ್ನು ನಾವು ಬಳಸೋದೇ ಇಲ್ಲ. ಹಾಗಾಗಿ, ಜನಾಂಗಕ್ಕೆ ಪೈಕಿ ಎನ್ನಬಹುದು ಅಂದಮಾತ್ರಕ್ಕೆ, ಮಕ್ಕಿಕಾಮಕ್ಕಿ "Find ಜನಾಂಗ and Replace ಪೈಕಿ" ಮಾಡಕ್ಕೆ ಬರಲ್ಲ. ಇನ್ನು, ಸರಿ ತಪ್ಪು ಪ್ರಶ್ನೆಯೇ ಇಲ್ಲ.

ಅಷ್ಟಾಗಿಯೂ, "ಮಹಾರಾಷ್ಟ್ರದವರು ಮರಾಠಿ ಪೈಕಿನವರು", "ಕನ್ನಡಿಗರು ಕರ್ನಾಟಕ ಪೈಕಿನವರು" ಎಂಬುದು ಸರಿಯಾದ ವಾಕ್ಯರಚನೆ.

ಇನ್ನು ಎರಡನೆಯದು,
>> "ನಿಮ್ಮ ಪೈಕಿ ಯಾರು ಮೊದಲು ಬಂದದ್ದು" ಎನ್ನ ಬಹುದು. ಹಾಗಾದರೆ "ನಿಮ್ಮ ಜನಾಂಗದಲ್ಲಿ ಯಾರು ಮೊದಲು ಬಂದದ್ದು"

ನೋಡು, ಮತ್ತೆ ನೀನು, ತಪ್ಪಲ್ಲದಿದ್ದರೂ, ಈ ಚರ್ಚೆಗೆ ಅನ್ವಯಿಸದ ಉದಾಹರಣೆ ಕೊಡ್ತಾ ಇದ್ದೀಯಾ!! ಎಲ್ಲಿ ಕನ್ನಡಿಗರು "ಪೈಕಿ" ಬಳಸುತ್ತಾರೋ ಅಲ್ಲೆಲ್ಲ ಸುಮ್ಸುಮ್ನೆ ಸಂಸ್ಕೃತದ "ಜನಾಂಗ" ಬಳಸಕ್ಕೆ ಆಗಲ್ಲ. ಮಕ್ಕಿಕಾಮಕ್ಕಿ ಟ್ರಾನ್ಸಲೇಟ್ ಮಾಡೋದು ತರವಲ್ಲ. ವಾಕ್ಯದ ಪೂರ್ಣ ರಚನೆ ನೋಡಿ, ಪೈಕಿ = ಜನಾಂಗವೋ, ಕಂಪಾರಿಸನ್ನಿಗೆ ಬಳಸ್ತಾ ಇರೋ ಸೀಮಿತ ಸೆಟ್ಟೋ, ಹೇಳಬಹುದು.

ಎಲ್ಲಿ ಸಂಸ್ಕೃತದ ಜನಾಂಗ ಬಳಸುತ್ತೀವೆಯೋ, ಅಲ್ಲಿ
೧. ಬಹುತೇಕ ವೇಳೆ ಪೈಕಿ ಬಳಸಿ ಸರಿಯಾದ, ಕ್ರಮಬದ್ಧವಾದ ಕನ್ನಡ ವಾಕ್ಯ ರಚನೆ ಮಾಡಬಹುದು. ಇಲ್ಲಾ,
೨. ಜನಾಂಗ ಪದವನ್ನೇ ಬಳಸದೆ ಇದ್ದರೂ ಅರ್ಥಲೋಪವಾಗುವುದಿಲ್ಲ.

ಆದರೆ ಎಲ್ಲಿ "ಪೈಕಿ" ಬಳಸುತ್ತೇವೆಯೋ ಅಲ್ಲೆಲ್ಲೆ ಮಕ್ಕಿಕಾಮಕ್ಕಿ ಸಂಸ್ಕೃತದ "ಜನಾಂಗ" ಬಳಸಕ್ಕೆ ಆಗಲ್ಲ. ಹಾಗಾಗಿ ಕನ್ನಡದ "ಪೈಕಿ" ಪದಕ್ಕೆ ಸಂಸ್ಕೃತದ ಜನಾಂಗಕ್ಕಿಂತ ಹೆಚ್ಚಿನ ವ್ಯಾಪ್ತಿ ಇದೆ ಎನ್ನಬಹುದು. ನಿನ್ನ ಪರಿಭಾಷೆಯಲ್ಲಿ ಹೇಳುವುದಾದರೆ, ಜನಾಂಗ subset, ಪೈಕಿ superset.

ಉದಾ:
೧. ಅವರು ಕನ್ನಡ ಜನಾಂಗದವರು = ಅವರು ಕನ್ನಡ ಪೈಕಿಯವರು / ಅವರದು ಕನ್ನಡದ ಪೈಕಿ. ಸರಿ.
೨.೧ ನಮ್ಮ ಪೈಕಿ ಒಬ್ರು ಡಾಕ್ಟರ್ ಆದ್ರು != ನಮ್ಮ ಜನಾಂಗದಲ್ಲಿ ಒಬ್ರು ಡಾಕ್ಟರ್ ಆದ್ರು. ತಪ್ಪು.
೨.೨ ನಮ್ಮ ಪೈಕಿ ಒಬ್ರು ಡಾಕ್ಟರ್ ಆದ್ರು = ನಮ್ಮ ಕುಟುಂಬದಲ್ಲಿ(ಅಥ್ವಾ, relatives, ಜಾತಿಯಲ್ಲಿ, ನಾಡಿನಲ್ಲಿ, ದೇಶದಲ್ಲಿ) ಒಬ್ರು ಡಾಕ್ಟರ್ ಆದ್ರು. ಸರಿ. ನಮ್ಮ ಪೈಕಿ ಒಬ್ರು ದೇಶದ ಪ್ರಧಾನಮಂತ್ರಿ ಆದ್ರು = ನಮ್ಮ ರಾಜ್ಯದ ಒಬ್ಬರು ಪ್ರಧಾನ ಮಂತ್ರಿ ಆದ್ರು.
೩ ನಿಮ್ಮದು ಯಾವ ಪೈಕಿ = This could mean, "ನಿಮ್ಮದು ಯಾವ ಜಾತಿ", "ಯಾವ ಒಳಪಂಗಡ", "ಯಾವ ರಾಜ್ಯ", "ನಿಮ್ಮ ಮಾತೃಭಾಷೆ ಯಾವುದು" ? ಇದು ಹೆಚ್ಚಾಗಿ ವಧು-ವರಾನ್ವೇಷಣಾ ಕೇಂದ್ರದಲ್ಲಿ ಬಳಕೆಯಾಗತ್ತೆ.

ಸಂಸ್ಕೃತದಲ್ಲಿಯೂ ಈ ರೀತಿಯ ಪದಗಳಿವೆ. "ನಡುವೆ ಅಂತರವಿರಲಿ", "ಅಲ್ಲಿ ಹರಿಯುವುದು ಅಂತರಗಂಗೆ".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 5:08pm — shreekant.mishrikoti

ಉ: ಭಾಷೆ ಮತ್ತು ನದಿ

shreekant.mishrikoti's picture

rush- ನುಗ್ಗು (ಕ್ರಿಯಾಪದ)
ನೂಕುನುಗ್ಗಲು ( ಕ್ರಿಯಾಪದವಲ್ಲದ್ದು ! - ನನಗೆ ವ್ಯಾಕರಣ ಗೊತ್ತಿಲ್ಲ - ಮನ್ನಿಸಿ)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
  • ಉತ್ತರ ದ್ರುವದಿಂ ದಕ್ಷಿಣ ದ್ರುವಕೂ
  • ಭಾಷೆ ಮತ್ತು ಸಾಮಾಜಿಕ ವಾಸ್ತವ
  • ಪತ್ರಿಕೆಗಳು ಮತ್ತು ಭಾಷೆ.
  • ಕನ್ನಡದಲ್ಲಿನ ಒತ್ತಕ್ಷರಗಳು
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...
  • ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator