~
ಅಂತೂ ಇಂತೂ ಜಿಗುಪ್ಸೆ ಬಂತು
ಪೇಪರ್ ನವರು ಮತ್ತೆ ನಮಗೆ ಮೋಸಮಾಡಿದರು. ನೆನ್ನೆ ಈ ಚಿತ್ರ ಚೆನ್ಣಾಗಿದೆ ಎಂದು ನಾವುಗಳು ನಂಬಿಕೊಂಡು ಹೋಗಿದ್ದಾಯ್ತು. ಒಬ್ಬನ ಜೊತೆ ಒಂದು ಹುಡುಗಿಯ ಎಂಗೇಜ್ಮೆಂಟಾಗಿರುತ್ತೆ. ಪ್ರೇಮಸುಳಿಯಲ್ಲಿ ಸಿಕ್ಕಿ ಎಂಗೇಜ್ ಮೆಂಟ್ ಆದವನಿಗೆ ಬಿಸ್ಕಿಟ್ ಹಾಕಿ ತನ್ನಿಷ್ಟ ಬಂದವನ ಜೊತೆ ಮದುವೆಯಾಗುವುದು ಈ ಕತೆಯ ತಿರುಳು. ’ನುವ್ವೇ ಕಾವಾಲಿ’ ಯ ರಿಮೇಕ್ ಚಿತ್ರ ಹಿಂದೆ ಕನ್ನಡದಲ್ಲಿ ಬಂದಿತ್ತಲ್ಲವೇ. ಅದೂ ಇದೇ ಕತೆ. ಏಕೆ ಮತ್ತೊಮ್ಮೆ ಅದೇ ಕತೆ ಮಾಡಿ ನಮ್ಮ ತಲೆತಿಂದರು? ಕೆಲವು ’ಸಿನಿಮೀಯ ದೃಷ್ಯಗಳು’ ಇಂತಿವೆ.
೧. ಹಳ್ಳಿಗೆ ಹೋದ ನಾಯಕ ಏಕಾ ಏಕಿ ಸುಮಾರು ಹತ್ತಿಪ್ಪತ್ತು ಜನರನ್ನು ಅನಾಮತ್ತು ಹೊಡೆದುಬಿಡುತ್ತಾನೆ. ಸುತ್ತಲು ನಿಂತಿದ್ದವರೆಲ್ಲ ಮೂಕ ಪ್ರೇಕ್ಷಕರಾಗಿರುತ್ತಾರೆ.
೨. ಎಂಗೇಜ್ ಮೆಂಟ್ ಆದ ಭೂಪನಿಗೆ ಹುಡುಗಿಯ ಮೇಲೆ ಯಾವುದೇ ಪ್ರೀತಿ ಇತ್ಯಾದಿ ಮಣ್ಣಾಂಗಟ್ಟಿ ಭಾವನೆಗಳಿರುವುದಿಲ್ಲ. ಸ್ನೇಹಿತನಿಗೋಸ್ಕರ ಏನುಬೇಕಾದರು ಬಿಡಬಲ್ಲ.
೩. ನಾಯಕನೊಬ್ಬನೇ ಅದ್ಭುತವಾಗಿ ಹಾಡಬಲ್ಲ.
೪. ಸಾಫ್ಟ್ವೇರೆ ಕಂಪೆನಿಯ ಸರ್ವರ್ ಕ್ರಾಶ್ ಆಗಿದ್ದನ್ನು ಹೊಸದಾಗಿಸೇರಿದ್ದ ನಾಯಕ ಕಮ್ ಗಾಯಕ ರಾತ್ರೋರಾತ್ರಿ ಸರಿಪಡಿಸಿ ಸಿ.ಇ.ಓ ನಿಂದ ಶ್ಲಾಘನೆ ಅನುಭವಿಸುತ್ತಾನೆ.
೫. ಅಪ್ಪ ಮಗ ಒಟ್ಟಿಗೆ ಕುಳಿತು ಗುಂಡು ಹಾಕುತ್ತಾರೆ.
ಎಂಗೇಜ್ಮೆಂಟ್ ಮುರಿದು ಮದುವೆಯಾಗುವುದು ನಮ್ಮ ಕನ್ನಡ ಸಿನಿಮಾ ಸಂಸ್ಖೃತಿಗೆ ಒಗ್ಗುವುದಿಲ್ಲ. ’ಮುಂಗಾರು ಮಳೆ’ ಯಲ್ಲಿ ಕುಟುಂಬದ ಗೌರವಕ್ಕೋಸ್ಕರ ಪ್ರೀತಿ ತ್ಯಾಗಮಾಡಿದ ಗಣೇಶ ಹೇಗೆ ದಿನ ಬೆಳಗಾಗುವುದರಲ್ಲಿ ಹೀರೋ ಆದ ನೋಡಿ.
ನೀವುಗಳು ಅತೀವ ಸಂತೋಶದಿಂದ, ನೆಮ್ಮದಿಯಿಂದ ಇರುವವರಾಗಿದ್ದರೆ ಒಮ್ಮೆ ಬ್ರೇಕ್ ತೆಗೆದುಕೊಳ್ಳಲು ಈ ಚಿತ್ರ ನೋಡಿಬನ್ನಿ.

- madhava_hs ರವರ ಬ್ಲಾಗ್
- Login or register to post comments
- 285 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಅಂತೂ ಇಂತೂ ಜಿಗುಪ್ಸೆ ಬಂತು
ಈ ಸಿನಿಮಾ ಬಗ್ಗೆ ಗೊತ್ತಿಲ್ಲ, ಆದರೆ
ಇದು ಸಾಧ್ಯವಿದೆ. ಮತ್ತು ಈ ರೀತಿಯಷ್ಟೇ ಅಲ್ಲ, ಇದಕ್ಕಿಂತ ಹೆಚ್ಚಿನ ತೊಂದರೆಗಳನ್ನು ತಪ್ಪಿಸಿರುವದನ್ನು ನಾನೇ ನೋಡಿದ್ದೇನೆ.
ಉ: ಅಂತೂ ಇಂತೂ ಜಿಗುಪ್ಸೆ ಬಂತು
ಶಹಭಾಷ್! ದೇವರು ಅಂತಹವರಿಗೆ ಇಂಕ್ರಿಮೆಂಟು ಕೊಟ್ಟು ಒಳ್ಳೇದು ಮಾಡಲಿ.
ಉ: ಅಂತೂ ಇಂತೂ ಜಿಗುಪ್ಸೆ ಬಂತು
ಗುರುಗಳೇ
ಇದು ಇನ್ನೊಂದು ತೆಲುಗು ಚಿತ್ರದ ರಿಮೇಕ್. ಆಡುವಾರಿ ಮಾಟಲಕು ಅರ್ಥಾಲೆ ವೇರುಲೇ ಅನೋದು ಆ ಚಿತ್ರದ ಹೆಸರು. ನನ್ನ ಪ್ರಕಾರ ಜೀವನದಲ್ಲಿ ನಡೆಯೋದನ್ನ ನೋಡೋಕೆ ಜನ ಚಿತ್ರ ಮಂದಿರಕ್ಕೆ ಹೋಗೋದು ಕಡಿಮೇನೆ. ಅದಕ್ಕೆ ಹೀಗೆ. ಮುಂಗಾರುಮಳೆಯಲ್ಲಿ ಅಪ್ಪನ ಮುಂದೆ ಗುಂಡು ತೆಗೆಯೋದು, ಅಮ್ಮನ ಎದುರು ಅಪ್ಪನ್ನ ಬೈಯೋದು ಎಲ್ಲಾ ನೋಡಿದೆವಲ್ಲ. ಅದಕ್ಕಿಲ್ಲದ ವಾಸ್ತವದ ಚೌಕಟ್ಟು ಇದಕ್ಕೆ ಯಾಕೆ.
- ರವಿ
ಉ: ಅಂತೂ ಇಂತೂ ಜಿಗುಪ್ಸೆ ಬಂತು
ಈ ಚಿತ್ರದ ನಾಯಕ ಆದಿತ್ಯ ಬಾಬು "ಆದಿತ್ಯ ಆರ್ಟ್ಸ್" ಎಂಬ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾನೆ...
ಈತ ಆಂಧ್ರದವನು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ:
ಈ ಚಿತ್ರದ ನಾಯಕ ಆದಿತ್ಯ ಬಾಬು "ಆದಿತ್ಯ ಆರ್ಟ್ಸ್" ಎಂಬ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾನೆ...
ಈತ ಮೂಲತಃ ಆಂಧ್ರ ಪ್ರದೇಶದವನು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.