ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಒಳ್ಳೊಳ್ಳೆಯ ಹಾಡುಗಳು ಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ’ಆ ದಿನಗಳು ಚಿತ್ರದ’ ಸಿಹಿ ಗಾಳಿ, ಸಿಹಿ ಗಾಳಿ.....ಒಂದು ಇಂಪಾದ, ಮಧುರವಾದ ಹಾಡು. ಇದಕ್ಕೆ ಸಂಗೀತ ನೀಡಿ ಹಾಡಿರುವವರು ಇಳಯರಾಜ. ೧೩ ವರ್ಷಗಳ ಹಿಂದೆ ’ಶಿವಸೇನೆ’ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶಿಸಿದ್ದರು. ಅವರೇ ಹಾಡಿದೆ ’ಚಿಕ್ಕ ಮಗಳೂರ ಓ ಚಿಕ್ಕಮಲ್ಲಿಗೆ..ಅಕ್ಕರೆಯ ಮಾತು ಬಂದ್ ಹೇಳು ಮೆಲ್ಲಗೇ..’ ಕೂಡ ಉತ್ತಮ ಗೀತೆಯಾಗಿತ್ತು. ಇನ್ನು ಅವರ ಹಳೆಯ ಚಿತ್ರಗಳಾದ ’ಗೀತ’ ಹಾಗು ’ಈ ಬಂಧ ಅನುಬಂಧ (?)(ಅನಿಲ್ ಕಪೂರ್ ನಟಿಸಿರುವ ಚಿತ್ರ) ಗಳಲ್ಲಿಯೂ ಉತ್ತಮ ಗೀತೆಗಳಿವೆ. ಇಷ್ಟು ಒಳ್ಳೆಯ ಹಾಡುಗಳನ್ನು ಕೊಟ್ಟ ಇಳೆಯ ರಾಜ ಇನ್ನು ಮುಂದೆಯೂ ಕೆಲವು ಕನ್ನಡ ಚಿತ್ರಗಳಿಗೆ ಸಂಗೀತ ನೀಡಬಹುದು. ಇಳೆಯರಾಜ ತಮಿಳಿನವರೇ ಇರಬಹುದು. ಆದರೆ ಪ್ರತಿಭೆಗೇಕೆ ಮತ್ಸರ??
ಇನ್ನು ಈ ವಾರ ಬಿಡುಗಡೆಯಾದ ’ಚಂಡ’ ಚಿತ್ರದ ’ನೀ ಚೆಂದನೋ..ನಿನ್ನಾಸೆ ಚೆಂದಾನೊ..’ ಕೂಡ ಚೆನ್ನಾಗಿದೆ. ಯಾರು ಇದರ ಸಂಗೀತ ನಿರ್ದೇಶಕರು?? ಈ ಹಾಡನ್ನು ಹಾಡಿರುವವರು ಕುಮಾರ್ ಶಾನು. ಇವರೇ ಹಿಂದೆ ಹಾಡಿದ ’ದೇವರು ವರವನು ಕೊಟ್ರೆ...’ ಕೂಡ ಬಹಳ ಯಶಸ್ವಿ ಗೀತೆಯಾಗಿತ್ತು.
ಗೆಳೆಯ ಚಿತ್ರದ ’ಈ ಸಂಜೆ ಯಾಕಾಗಿದೇ..’ ಕೂಡ ಬಹಳ ಉತ್ತಮ ಗೀತೆ. ಇದನ್ನು ಹಾಡಿದವರು ಸೋನು ನಿಗಮ್ ಎನ್ನಿಸುತ್ತದೆ.
ಇನ್ನು ಮಿಲನ ಚಿತ್ರದ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.
’ನಿನದೇ ನೆನಪು’ ಚಿತ್ರದ ಒಂದೆರಡು ಹಾಡುಗಳೂ ಸುಶ್ರಾವ್ಯವಾಗಿವೆ.
ಒಟ್ಟಿನಲ್ಲಿ ಕನ್ನಡ ಚಲನ ಚಿತ್ರಗೀತೆ ಪ್ರಿಯರಿಗೆ ಇದು ಸುಗ್ಗಿ ಕಾಲ!!.

- madhava_hs ರವರ ಬ್ಲಾಗ್
- Login or register to post comments
- 449 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಅನಿಲ್ ಕಪೂರ್ ನಟಿಸೋದು - ’ಪಲ್ಲವಿ ಅನುಪಲ್ಲವಿ’ ಯಲ್ಲಿ , ಅದು ಮಣಿರತ್ನಂ ನಿರ್ದೇಶನದ್ದು , ಇಳಯರಾಜ ಸಂಗೀತ - ಹಾಡು - ’ನಗುವ ನಯನ ಮಧುರ ಮೌನ , ಮಿಡಿವ ಹೃದಯ ಇರೆ ಮಾತೇಕೆ ?’
ಬೇರೊಂದು ಕನ್ನಡ ಸಿನೇಮಾದಲ್ಲೂ ಈ ಹಾಡು ಇದ್ದಕ್ಕಿದ್ದ ಹಾಗೇ ಹಾಕಿದ್ದಾರೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಅನಿಲ್ ಕಪೂರ್ ನಟಿಸಿರೋದು - ’ಪಲ್ಲವಿ ಅನುಪಲ್ಲವಿ’ ಯಲ್ಲಿ , ಅದು ಮಣಿರತ್ನಂ ನಿರ್ದೇಶನದ್ದು , ಇಳಯರಾಜ ಸಂಗೀತ - ಹಾಡು - ’ನಗುವ ನಯನ ಮಧುರ ಮೌನ , ಮಿಡಿವ ಹೃದಯ ಇರೆ ಮಾತೇಕೆ ?’
ಬೇರೊಂದು ಕನ್ನಡ ಸಿನೇಮಾದಲ್ಲೂ ಈ ಹಾಡು ಇದ್ದಕ್ಕಿದ್ದ ಹಾಗೇ ಹಾಕಿದ್ದಾರೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಮಾಧವ, ಅರೆರೆ, ಒಳ್ಳೆ ಪಾಯಿಂಟ್ ಎತ್ತಿದ್ರಿ, ನನಗೆ ಈ ಬಗ್ಗೆ ಹೇಳಬೇಕೆನಿಸಿತ್ತು. ಈ ವರ್ಷ ಕನ್ನಡದಲ್ಲಿ ತುಂಬಾ ಒಳ್ಳೆಯ ಹಾಡುಗಳು ರಿಲೀಸ್ ಆಗಿವೆ. ಇದರ ಬಗ್ಗೆ ಹೆಚ್ಚುಬರೆಯಬೇಕು ಮಾಧವ.
ಕೊಕೊ: ಇಳಯರಾಜ ಅವರ ಬಗ್ಗೆ ಮತ್ತಷ್ಟು ಹಂಚಿಕೊಳ್ಳಬೇಕೆನಿಸಿತು. ನೋಡಿ, ಎಷ್ಟೋ ವರ್ಷಗಳ ನಂತರ ಇಳಯರಾಜ ಮರಳಿಬಂದಿದ್ದಾರೆ ಅಂತ ಮಾಧ್ಯಮದವರು ದೊಡ್ಡ ದೊಡ್ಡ ಹೆಡ್ಲೈನ್ಸಿನಲ್ಲಿ ಅಜಂತಾ ಎನ್ನುವ ಸಿನಿಮಾಕ್ಕೆ, ನೀವು ಹೇಳಿದ ಹಾಗೆ, ಪ್ರತಿಭೆಗೆ ಮತ್ಸರ ಸಲ್ಲದು ಅಂತೆಲ್ಲ ಪ್ರಚಾರ ಕೊಟ್ರು. ಆದರೆ ನೀವೇ ಬೇಕಿದ್ದರೆ ಕನ್ನಡಆಡಿಯೋ.ಕಾಂನಿಂದ ಅಜಂತಾ ಚಿತ್ರದ ಹಾಡುಗಳನ್ನು ಕೇಳಿ, ಇಳಯರಾಜರ ಗತ್ತು ಕುಂದಿರುವುದನ್ನು ಗಮನಿಸಬಹುದು. ಒಂದು ಟ್ಯೂನೂ ಕೂಡ ನೆನಪಿನಲ್ಲಿ ಉಳಿಯುವುದಿಲ್ಲ. ಪ್ರತಿಭೆಗೆ ಮತ್ಸರ ಸಲ್ಲದು ಎನ್ನುವುದು ಸುಲಭ, ಆದರೆ ಚೆನ್ನಾಗಿಲ್ಲದಿರುವುದನ್ನು ಎತ್ತಿ ತೋರಿಸುವ ಎದೆಗಾರಿಕೆಯನ್ನು ನಾವು ಕನ್ನಡಿಗರು ರೂಢಿಸಿಕೊಳ್ಳಲೇಬೇಕು, ಏನಂತೀರಾ.
ಯಾವುದಕ್ಕೂ ಅಜಂತಾ ಚಿತ್ರದ ಹಾಡು ಕೇಳಿ.
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಹೌದು. ಇಳಯರಾಜರ ಮೋಡಿ ಮರೆಯಾಗುತ್ತಿದೆ
ಈಗೇನಿದ್ದರೂ ಮನೊ ಮೂರುತಿ ಮತ್ತು ಹರಿಕ್ರಿಶ್ಣರ ಹೊತ್ತು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಹರಿಕಿಸ್ನ ಅವರ 'ಕ್ರಿಸ್ನ' ಸಿನಿಮಾದ 'ಸತ್ಯಭಾಮ ಬಾರಮ್ಮ' ಹಾಡ್ ಕೇಳಿ, ಸಕ್ಕತ್ ರಾಕ್ಕಿಂಗ್ ಹಾಡು. ಲಿರಿಕ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ಸುನೀಲ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಈ ಅಜಂತಾ ಚಿತ್ರ ಯಾವಾಗ ಬಂದಿತ್ತು, ಹೋಯಿತು ಎಂಬುದು ಕೂಡ ನನಗೆ ತಿಳಿಯದು. ಇದರರ್ಥ ಏನೆಂದರೆ, ಉತ್ತಮವಾಗಿಲ್ಲದ ಸರಕಾಗಿದ್ದರೆ ಜನ ಮಾನಸದಲ್ಲಿ ಇರುವುದಿಲ್ಲ. ಒಬ್ಬ ನಿರ್ದೇಶಕ ಕೆಲವು ತೋಪು ಚಿತ್ರಗಳನ್ನು ಕೊಟ್ಟು, ೧ ಹಿಟ್ ಚಿತ್ರವನ್ನು ಕೊಡುವುದು ಸಹಜ. ನಮ್ಮ ಯೋಗರಾಜ ಭಟ್ಟರನ್ನೇ ನೋಡಿ. ಅವರ ತೋಪು ಚಿತ್ರಗವಾದ ’ರಂಗ ಎಸ್.ಎಸ್.ಎಲ್.ಸಿ’ ಯನ್ನೇ ನೆಪವಾಗಿಟ್ಟು ಕೊಂಡು ಅವರನ್ನು ಹೀಯಾಳಿಸಬೇಕೋ, ಅಥವಾ ’ಮುಂಗಾರು ಮಳೆ’ ಯನ್ನು ತರಿಸಿದ್ದಕ್ಕೆ ಅವರನ್ನು ಉತ್ತೇಜಿಸಬೇಕೋ?. ನಾನು ಹೇಳುವುದಿಷ್ಟೇ; ಒಳ್ಳೆಯ ಹಾಡುಗಳಿದ್ದು ನಮಗಿಷ್ಟವಾಗಿದ್ದರೆ ಸಂತೋಷ ಪಡೋಣ, ಹಾಡು ಕೊಟ್ಟವರನ್ನು ಉತ್ತೇಜಿಸೋಣ. ಆದರೆ ನೀವೇ ಹೇಳಿದಂತೆ ಸರಕು ಉತ್ತಮ ವಾಗಿಲ್ಲ ದಿದ್ದರೆ ತಿರಸ್ಕರಿಸೋಣ, ವಿನಾಕಾರಣ ಅವರ ಮುಖಸ್ತುತಿ ಮಾಡುವುದು ಬೇಡ. ’ಅಜಂತಾ’ ವಿಷಯದಲ್ಲಿ ಮಾಧ್ಯಮಗಳು ಇಳಯ ರಾಜರನ್ನು ವಿನಾಕಾರಣ ವೈಭವೀಕರಿಸಿದ್ದರೆ ಅದು ತಪ್ಪೇ!!
ಉ: ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
ನಂಗೆ ಇತ್ತೀಚಿನ ಅಚ್ಚುಮೆಚ್ಚು
.ಸಕ್ಕತ್ತಾಗಿದೆ
ಯುಗ ಸಿನಿಮಾದ "ಕರುನಾಡು ಕಂಡ ಕರಿಯ ಕಣಮ್ಮಿ..... ಇವೆನೇನೆ ನಿಂಗೆ ಒಡೆಯ ಕಣಮ್ಮಿ"
musicindiaonline.com ನಿಂದ ಕೇಳಿ ನಲಿಯಬಹುದು. ತುಂಬ ಹೊಸತನವಿದೆ ಹಾಡಿನಲ್ಲಿ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು